AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಹುಂಡಿಗೆ ಎಷ್ಟು ಹಣ ಹಾಕಬೇಕು? ಇದರಿಂದ ಯಾವ ರೀತಿ ಫಲ ದೊರೆಯುತ್ತೆ

ನಾವು ದೇವಸ್ಥಾನಗಳಿಗೆ ಹೋಗಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸಿ ಬರುವುದು ಕಷ್ಟ ನಿವಾರಣೆ ಮಾಡಿಕೊಳ್ಳಲು ಮಾಡುವ ಪರಿಹಾರವೇ ಆಗಿದೆ. ಕೆಲವರು ಹರಕೆ ಹೇಳಿಕೊಂಡಿದ್ದರೆ ಅಥವಾ ಮನಸ್ಸಿಗೆ ಬಂದಷ್ಟು ಹಣವನ್ನು ದೇವರ ಹುಂಡಿಗೆ ಹಾಕುತ್ತೇವೆ. ಆದರೆ ನಿಜವಾಗಿಯೂ ಎಷ್ಟು ಹಣ ಹಾಕಬೇಕು? ಇದರಿಂದ ಯಾವೆಲ್ಲ ದೋಷಗಳು ಪರಿಹಾರವಾಗುತ್ತದೆ? ಎಂಬುದನ್ನು ತಿಳಿದುಕೊಳ್ಳಿ.

ದೇವರ ಹುಂಡಿಗೆ ಎಷ್ಟು ಹಣ ಹಾಕಬೇಕು? ಇದರಿಂದ ಯಾವ ರೀತಿ ಫಲ ದೊರೆಯುತ್ತೆ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 11, 2024 | 5:31 PM

Share

ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ನಾವು ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ನೀಡುತ್ತದೆ. ಅದರಲ್ಲಿ ನಾವು ದೇವಸ್ಥಾನಗಳಿಗೆ ಹೋಗಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. ಕೆಲವರು ಹರಕೆ ಹೇಳಿಕೊಂಡಿದ್ದರೆ ಅಥವಾ ಮನಸ್ಸಿಗೆ ಬಂದಷ್ಟು ಹಣವನ್ನು ದೇವರ ಹುಂಡಿಗೆ ಹಾಕುತ್ತೇವೆ. ಆದರೆ ನಿಜವಾಗಿಯೂ ಎಷ್ಟು ಹಣ ಹಾಕಬೇಕು? ಯಾವೆಲ್ಲ ದೋಷಗಳು ಪರಿಹಾರವಾಗುತ್ತದೆ? ಇದು ಯಾವ ರೀತಿಯ ಫಲಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಏಕೆಂದರೆ ಕೆಲವೊಂದು ಸಮಸ್ಯೆಗಳ ನಿವಾರಣೆಗೆ ಇಂತಿಷ್ಟು ಹಣವನ್ನು ಅರ್ಪಿಸಬೇಕಾಗುತ್ತದೆ. ಹಾಗಾಗಿ ಎಂತಹ ಕಷ್ಟ ಬಂದಾಗ ಎಷ್ಟು ಹಣವನ್ನು ದೇವರಿಗೆ ನೀಡಬೇಕು? ಅದನ್ನು ಸಂಕಲ್ಪ ಪೂರ್ವಕವಾಗಿ ಹೇಗೆ ಅರ್ಪಿಸಬೇಕು ಎಂದು ತಿಳಿದುಕೊಳ್ಳಿ.

  • ನೀವು ಏಳು ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಿದರೆ ತುಂಬಾ ಒಳ್ಳೆಯದು. ಇದರಿಂದ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತದೆ.
  • ಶತ್ರು ಭಾದೆ ಮತ್ತು ಶನಿ ದೋಷ ದೂರವಾಗಲು 9 ರೂಪಾಯಿಯನ್ನು ದೇವರ ಹುಂಡಿಗೆ ಹಾಕಬೇಕು. ನವರಾತ್ರಿಯಲ್ಲಿ ದಿನಗಳು ಒಂಬತ್ತು. ಹಾಗಾಗಿ ಈ ಸಂಖ್ಯೆಯ ಹಣವನ್ನು ದೇವರ ಹುಂಡಿಗೆ ಹಾಕುವುದರಿಂದ ಶತ್ರುಗಳ ಸಮಸ್ಯೆ ಇದ್ದಲ್ಲಿ ಪರಿಹಾರಗೊಳ್ಳುತ್ತದೆ ಎನ್ನಲಾಗುತ್ತದೆ.
  • 11 ಚಂದ್ರನಿಗೆ ಪ್ರೀಯವಾದ ಸಂಖ್ಯೆ. ಹಾಗಾಗಿ 11 ರೂಪಾಯಿಯನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಮಾನಸಿಕ ಸಮಸ್ಯೆಗಳಿದ್ದಲ್ಲಿ ಬೇಗ ಗುಣಮುಖವಾಗುತ್ತದೆ.
  • ಕುಟುಂಬ ರಕ್ಷಣೆಗೆ ದುರ್ಗಾ ದೇವಿಯ ಆಲಯಕ್ಕೆ ಹೋದಾಗ ಮರೆಯದೇ 12 ರೂಪಾಯಿಗಳನ್ನು ಹುಂಡಿಗೆ ಹಾಕಿ ಬನ್ನಿ ಇದರಿಂದ ಕುಟುಂಬಕ್ಕೆ ಅಮ್ಮನವರ ರಕ್ಷಣೆ ಪ್ರಾಪ್ತಿಯಾಗುತ್ತದೆ.
  • 21 ಮಹಾಗಣಪತಿಯ ಸಂಖ್ಯೆ ಹಾಗಾಗಿ ಗಣೇಶನ ಆಲಯಕ್ಕೆ ಹೋದಾಗ 21 ರೂಪಾಯಿಗಳನ್ನು ಅರ್ಪಿಸಿದರೆ ದೂರಾದೃಷ್ಟ ದೂರವಾಗುತ್ತದೆ. ಪ್ರತಿ ಕೆಲಸದಲ್ಲಿಯೂ ವಿಘ್ನ ಬರುವುದು ದೂರವಾಗಿ ಅದೃಷ್ಟ ಪ್ರಾಪ್ತಿಯಾಗುತ್ತದೆ.
  • ಗುರು ಗ್ರಹದ ದೋಷ ಪರಿಹಾರಕ್ಕೆ 54 ರೂಪಾಯಿಗಳನ್ನು ಹುಂಡಿಗೆ ಹಾಕಿ. ಇದರಿಂದ ಧನ ಲಾಭ ಮತ್ತು ಎಲ್ಲಾ ಕೆಲಸದಲ್ಲಿಯೂ ಜಯ ಪ್ರಾಪ್ತಿಯಾಗುತ್ತದೆ.
  • ಜಾತಕ ದೋಷ ಇದ್ದಲ್ಲಿ ದೇವಸ್ಥಾನಕ್ಕೆ ಹೋದಾಗ 108 ರೊಪಾಯಿಗಳನ್ನು ಹುಂಡಿಗೆ ಹಾಕಿ ಬನ್ನಿ. ಹೀಗೆ ಮಾಡುವುದರಿಂದ ನಿಮ್ಮ ಕೋರಿಕೆಗಳು ಈಡೇರುವುದರ ಜೊತೆಗೆ ದೋಷಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ 108 ಶ್ರೀ ಚಕ್ರದ ಸಂಕೇತವೂ ಮತ್ತು ವಿಶ್ವದ ಮೂಲವೂ ಹೌದು. ದೇಗುಲದಲ್ಲಿ 108 ರೂಪಾಯಿಗಳನ್ನು ಅರ್ಪಿಸಿದರೆ ಸಕಲ ಕೋರಿಕೆಗಳು ಈಡೇರುತ್ತದೆ. ಸಕಲ ಸಿದ್ದಿಗಳು ಪ್ರಾಪ್ತಿಯಾಗುತ್ತದೆ.
  • ಸಪ್ತ ಜನ್ಮಗಳ ಪಾಪಗಳು ದೂರವಾಗಲು 116 ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?