AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಲ್ಲಿಟ್ಟಿದ್ದ ಬೇಡಿಕೆಯನ್ನು ಪೂರೈಸಿದ ಕೃಷ್ಣ, ಗೋವರ್ಧನ ಬೆಟ್ಟಕ್ಕಿದೆ ರಾಮ-ಕೃಷ್ಣನ ಲಿಂಕ್

ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಕಪಿಗಳು ಬಂಡೆ, ಮಹಾ ಪರ್ವತಗಳನ್ನು ಎತ್ತಿ ತಂದು ಪೂರೈಸುತ್ತಿದ್ದರು. ಹನುಮಂತನ ಮಹಾ ಬಲದಿಂದಲೇ ಸೇತುವೆ ಪೂರ್ಣವಾಯಿತು ಎನ್ನಬಹುದು. ಕೊನೆಗೆ ಉಳಿದ ಸ್ವಲ್ಪ ಭಾಗ ಮುಚ್ಚಲು, ಹನುಮಂತನು ಗೋವರ್ಧನ ಗಿರಿಯನ್ನು ಕೀಳಲು ಪ್ರಯತ್ನಿಸಿದ.

ರಾಮನಲ್ಲಿಟ್ಟಿದ್ದ ಬೇಡಿಕೆಯನ್ನು ಪೂರೈಸಿದ ಕೃಷ್ಣ, ಗೋವರ್ಧನ ಬೆಟ್ಟಕ್ಕಿದೆ ರಾಮ-ಕೃಷ್ಣನ ಲಿಂಕ್
ರಾಮನಲ್ಲಿಟ್ಟಿದ್ದ ಬೇಡಿಕೆಯನ್ನು ಪೂರೈಸಿದ ಕೃಷ್ಣ, ಗೋವರ್ಧನ ಬೆಟ್ಟಕ್ಕಿದೆ ರಾಮ-ಕೃಷ್ಣನ ಲಿಂಕ್
TV9 Web
| Edited By: |

Updated on: Jan 01, 2022 | 7:15 AM

Share

ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದಲ್ಲಿ ಶ್ರೀ ರಾಮ, ವಾನರ ಸೇನೆಯಿಂದ ನಿರ್ಮಿಸಿದ ಸೇತುವೆ ವೇಳೆ ನಡೆದ ಘಟನೆಗೂ ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನ ಬೆಟ್ಟ ಎತ್ತಿದ್ದಕ್ಕೂ ಇದೆ ಸಂಬಂಧ. ಹಾಗಾದ್ರೆ ಬನ್ನಿ ರಾಮ ಸೇತುವೆ ಕಟ್ಟಿದ ಸಂದರ್ಭಕ್ಕೂ ಕೃಷ್ಣನು ಬೆಟ್ಟ ಎತ್ತಿದ್ದಕ್ಕೂ ಏನು ಸಂಬಂಧ ಎಂಬುವುದನ್ನು ಇಲ್ಲಿ ತಿಳಿಯಿರಿ.

ಸೀತಾಪಹರಣದ ನಂತರ ರಾಮ ಭಕ್ತ ಹನುಮಂತನು ಸೀತೆಯನ್ನು ಹುಡುಕುತ್ತಿರುವಾಗ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟ ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿದನು. ಬಳಿಕ ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ ಲಂಕಾಪುರಿಯನ್ನು ತನ್ನ ಬಾಲದ ಸಹಾಯದಿಂದ ಬೆಂಕಿಯಿಂದ ಸುಟ್ಟು ಮತ್ತೆ ಸಾಗರವನ್ನು ದಾಟಿ ಶ್ರೀರಾಮನ ಬಳಿ ಬಂದು ಸೀತೆಯನ್ನು ಕಂಡು ಹಿಡಿದ ಶುಭ ಸುದ್ದಿಯನ್ನು ತಿಳಿಸುತ್ತಾನೆ. ಸಂತೋಷಭರಿತನಾದ ಶ್ರೀರಾಮನು ರಾವಣನ ಸೆರೆಯಿಂದ ಸೀತೆಯನ್ನು ಬಿಡಿಸಿ ತರಲು ವಾನರ ಸೈನ್ಯದ ಸಮೇತ ಈಗಿನ ರಾಮೇಶ್ವರದ ಬಳಿಯಿರುವ ಧನುಷ್ಕೋಟಿಯ ಸಮುದ್ರತೀರಕ್ಕೆ ಬರುತ್ತಾನೆ.

ಋಷಿ ಮುನಿಗಳ ಶಾಪ, ವರವಾಯ್ತು ಆಗ ಸಮುದ್ರ ನೋಡಿ ವಾನರ ಸೇನೆ ಜೊತೆ ಹೇಗೆ ಈ ಸಮುದ್ರ ದಾಡುವುದು ಎಂಬ ಚಿಂತೆಯಾಗುತ್ತೆ. ಈ ವೇಳೆ ಇದರಲ್ಲಿ ವಿಶ್ವಕರ್ಮರಿಂದ ಶಾಪ ಪಡೆದ ವಾನರ ಪುತ್ರರಾದ ನಳ – ನೀಲರ ಸಹಕಾರ ಸಮಸ್ಯೆಯನ್ನು ದೂರಾಗಿಸಿತು. ಅವರ ತುಂಟತನದ ಸ್ವಭಾವದಿಂದಾಗಿ, ಅವರು ಹೆಚ್ಚಾಗಿ ಋಷಿಮುನಿಗಳ ವಿಗ್ರಹಗಳನ್ನು ನೀರಿನಲ್ಲಿ ಎಸೆಯುತ್ತಿದ್ದರು. ಪರಿಣಾಮವಾಗಿ, ಈ ಕೋತಿಗಳು ಯಾವುದೇ ವಸ್ತುಗಳನ್ನು ನೀರಿಗೆ ಎಸೆದರೂ ಆ ವಸ್ತು ಮುಳುಗುವುದಿಲ್ಲವೆಂದು ಋಷಿ ಮುನಿಗಳು ನಳ-ನೀಲರಿಗೆ ಶಾಪವಿತ್ತರು. ಅವರಿಗೆ ಋಷಿಮುನಿಗಳು ನೀಡಿದ್ದ ಈ ಶಾಪವೇ ರಾಮ ಸೇತುವೆ ನಿರ್ಮಾಣಕ್ಕೆ ಸಹಕಾರಿಯಾಯಿತು.

ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಕಪಿಗಳು ಬಂಡೆ, ಮಹಾ ಪರ್ವತಗಳನ್ನು ಎತ್ತಿ ತಂದು ಪೂರೈಸುತ್ತಿದ್ದರು. ಹನುಮಂತನ ಮಹಾ ಬಲದಿಂದಲೇ ಸೇತುವೆ ಪೂರ್ಣವಾಯಿತು ಎನ್ನಬಹುದು. ಕೊನೆಗೆ ಉಳಿದ ಸ್ವಲ್ಪ ಭಾಗ ಮುಚ್ಚಲು, ಹನುಮಂತನು ಗೋವರ್ಧನ ಗಿರಿಯನ್ನು ಕೀಳಲು ಪ್ರಯತ್ನಿಸಿದ. ಆದರೆ ಕೀಳಲಾಗಲಿಲ್ಲ. ಆಗ ಆ ಪರ್ವತರಾಜನು, “ನನಗೆ ರಾಮದರ್ಶನ ಮಾಡಿಸುವೆಯಾದರೆ, ರಾಮನ ಚರಣದಿಂದ ನನ್ನನ್ನು ತುಳಿಸುವೆಯಾದರೆ ನಾನು ನಿನ್ನೊಡನೆ ಬರುವೆ” ಎಂದ. ಹನುಮಂತ ಅದಕ್ಕೊಪ್ಪಿ ಪರ್ವತವೆತ್ತಿ ತರಲು, ಕಪಿಗಳು ಬೇರೆ ಪರ್ವತ ತಂದು ಉಳಿದ ಭಾಗ ಮುಚ್ಚಿಬಿಟ್ಟಿದ್ದರು. ಆಗ ಮಾರುತಿ ನಿರುಪಾಯನಾಗಿ ಕ್ಷಮೆ ಕೇಳಿದ. ಆಗ ಗೋವರ್ಧನನು ರಾಮನಿಗೆ ನನ್ನನ್ನು ಕಾಲಿನಿಂದ ತುಳಿಯಲು ಸಾಧ್ಯವಾಗದಿದ್ದರೆ, ಕೈಹಿಡಿದು ನನ್ನನ್ನು ಎತ್ತಿ ಜಗತ್ತಿಗೆ ಪರಿಚಯ ಮಾಡಿಸಲಿ. ಒಂದೋ ನಾನು ಅವನಿಂದ ತುಳಿಯಲ್ಪಡಬೇಕು ಅಥವಾ ಎತ್ತಲ್ಪಡಬೇಕು ಎಂದ. ಹನುಮಂತ ಹಾಗೇ ರಾಮಚಂದ್ರನಿಗೆ ವಿನಂತಿಸಿದ. ಮುಂದೆ ಕೃಷ್ಣಾವತಾರದಲ್ಲಿ ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನ ಬೆಟ್ಟ ಎತ್ತಿದ.

ಇದನ್ನೂ ಓದಿ: ನಾರಾಯಣ ಪ್ರಿಯ ನಾರದನಿಂದ ವಿಷ್ಣುವಿಗೆ ಶಾಪ, ರಾಮನ ಅವತಾರದಲ್ಲಿ ಹನುಮಂತನ ಸಹಾಯ ಪಡೆಯಲು ಕಾರಣವಾಗಿದ್ದು ಇದೇ ಕೋಪ

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು