AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marigold: ನಿತ್ಯ ದೇವರ ಪೂಜೆಯಲ್ಲಿ ಗೊಂಡೆ ಹೂವು ಬಳಸಿ, ಜತೆಗೆ ಅದರ ಮಹತ್ವ ತಿಳಿಯಿರಿ

ಮನೆಯಲ್ಲಿ ಯಾವುದೇ ಸಮಾರಂಭವಿರಲಿ ಅಲಂಕಾರಕ್ಕೆ ಚೆಂಡು ಹೂವಿದ್ದರೆ ಚೆಂದ. ಮಾರಿಗೋಲ್ಡ್ ಅಥವಾ ಚೆಂಡು ಹೂವಿನ ಪ್ರಾಮುಖ್ಯತೆಯ ಬಗ್ಗೆ ಮತ್ತು ಅದನ್ನು ಪೂಜೆಯಲ್ಲಿ ಏಕೆ ಹೆಚ್ಚು ಹೆಚ್ಚು ಬಳಸಲಾಗುತ್ತದೆ ಎಂಬುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಧಾರ್ಮಿಕ ಪ್ರಾಮುಖ್ಯತೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Marigold: ನಿತ್ಯ ದೇವರ ಪೂಜೆಯಲ್ಲಿ ಗೊಂಡೆ ಹೂವು ಬಳಸಿ, ಜತೆಗೆ ಅದರ ಮಹತ್ವ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 02, 2024 | 4:03 PM

ಹಿಂದೂ ಮನೆಗಳಲ್ಲಿ ದೇವರಿಗೆ ಹೂವು ಅರ್ಪಿಸದೆಯೇ ಪೂಜೆ ಮಾಡುವುದು ಕಡಿಮೆ. ಧರ್ಮ ಗ್ರಂಥಗಳ ಪ್ರಕಾರ, ಹೂವುಗಳು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಿಂದೂ ಧರ್ಮದಲ್ಲಿ ಹೂವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲಿಯೂ ಚೆಂಡು ಹೂವು ಮತ್ತು ಅದರ ಹಾರಗಳನ್ನು ದೇವಾಲಯಗಳಲ್ಲಿ ಅಥವಾ ಪೂಜೆಯ ಸಮಯದಲ್ಲಿ ಬಳಸುವುದನ್ನು ನೀವು ನೋಡಿರಬಹುದು. ಮನೆಯಲ್ಲಿ ಯಾವುದೇ ಸಮಾರಂಭವಿರಲಿ ಅಲಂಕಾರಕ್ಕೆ ಚೆಂಡು ಹೂವಿದ್ದರೆ ಚೆಂದ. ಮಾರಿಗೋಲ್ಡ್ ಅಥವಾ ಚೆಂಡು ಹೂವಿನ ಪ್ರಾಮುಖ್ಯತೆಯ ಬಗ್ಗೆ ಮತ್ತು ಅದನ್ನು ಪೂಜೆಯಲ್ಲಿ ಏಕೆ ಹೆಚ್ಚು ಹೆಚ್ಚು ಬಳಸಲಾಗುತ್ತದೆ ಎಂಬುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಧಾರ್ಮಿಕ ಪ್ರಾಮುಖ್ಯತೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮದಲ್ಲಿ, ಎಲ್ಲಾ ಹೂವುಗಳಿಗೆ ವಿಭಿನ್ನ ಪ್ರಾಮುಖ್ಯತೆ ಇದೆ. ಅಂತೆಯೇ, ಚೆಂಡು ಹೂವು ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ಪೂಜೆ, ಮದುವೆ, ದೇವಸ್ಥಾನದ ಪ್ರತಿಷ್ಠೆ, ಗೃಹಪ್ರವೇಶ ಮುಂತಾದ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಇನ್ನು ಇದರಲ್ಲಿ ದುರ್ಗಾ ಮಾತೆಗೆ ಕೆಂಪು ಹೂವುಗಳನ್ನು, ಶಿವನಿಗೆ ಬಿಳಿ ಹೂವುಗಳನ್ನು ಮತ್ತು ವಿಷ್ಣುವಿಗೆ ಹಳದಿ ಹೂವುಗಳನ್ನು ಅರ್ಪಿಸುವುದು ಬಹಳ ಶುಭ ಎನ್ನಲಾಗುತ್ತದೆ.

ದೇವರಿಗೆ ಅರ್ಪಿಸುವುದರಿಂದ ಸಿಗುವ ಪ್ರಯೋಜನಗಳೇನು?

ಮಾರಿಗೋಲ್ಡ್ ಅಥವಾ ಚೆಂಡು ಹೂವುಗಳನ್ನು ದೇವರಿಗೆ ಅರ್ಪಿಸುವುದರಿಂದ ಒಬ್ಬ ವ್ಯಕ್ತಿಗೆ ಬುದ್ಧಿವಂತಿಕೆ, ಜ್ಞಾನ ಮತ್ತು ಸಂಪತ್ತು ಒಲಿಯುತ್ತದೆ ಎಂದು ಹೇಳಲಾಗುತ್ತದೆ. ಈ ಹೂವಿನ ಅತ್ಯಂತ ವಿಶೇಷ ಸಂಗತಿಯೆಂದರೆ ಇದರಲ್ಲಿ ಒಂದಲ್ಲ, ಎರಡಲ್ಲ ಅನೇಕ ದಳಗಳಿರುತ್ತವೆ ಹಾಗಾಗಿ ಈ ಹೂವುಗಳನ್ನು ಭಾಂದವ್ಯದ ಸಂಕೇತ ಎನ್ನಲಾಗುತ್ತದೆ. ಹೇಗೆ ಈ ಹೂವು ಎಲ್ಲಾ ದಳಗಳನ್ನು ಒಟ್ಟು ಗೂಡಿಸಿ ಇಟ್ಟುಕೊಂಡಿರುತ್ತದೆಯೋ ಹಾಗೆಯೇ ಸಂಬಂಧಗಳನ್ನು ಕೂಡ ಅಷ್ಟೇ ಚೆನ್ನಾಗಿ ಕಾಪಾಡಿಕೊಳ್ಳುತ್ತದೆ ಎನ್ನಲಾಗುತ್ತದೆ. ಹಾಗಾಗಿಯೇ ಈ ಹೂವುಗಳನ್ನು ಎಲ್ಲಾ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಇನ್ನು ಈ ಹೂವುಗಳನ್ನು ಮಂಗಳಕರವೆಂದು ಭಾವಿಸುವುದರಿಂದ ಮನೆಯ ಬಾಗಿಲಲ್ಲಿ ಚೆಂಡು ಹೂವಿನ ಹಾರವನ್ನು ಸದಾ ಇಡಲಾಗುತ್ತದೆ.

ಇದನ್ನೂ ಓದಿ: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ

ನಾವು ಯಾವ ದೇವರಿಗೆ ಚೆಂಡು ಹೂಗಳನ್ನು ಅರ್ಪಿಸಬೇಕು?

ವಿಷ್ಣುವಿಗೆ ಚೆಂಡು ಹೂಗಳನ್ನು ಅರ್ಪಿಸಬಹುದು. ಮಕ್ಕಳ ವಿಷಯದಲ್ಲಿ ತೊಂದರೆ ಅನುಭವಿಸುತ್ತಿರುವವರು ವಿಷ್ಣುವಿಗೆ ಚೆಂಡು ಹೂವನ್ನು ಅರ್ಪಿಸುವುದರಿಂದ ಸಂತೋಷದ ಸುದ್ದಿ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಮಾರಿಗೋಲ್ಡ್ ಹೂವುಗಳನ್ನು ಗಣಪತಿ ದೇವನ ಪೂಜೆಯಲ್ಲಿಯೂ ಬಳಸಲಾಗುತ್ತದೆ. ಈ ಹೂವಿನ ಪ್ರತಿಯೊಂದು ದಳದಲ್ಲಿ ವಿವಿಧ ದೇವರುಗಳು ಮತ್ತು ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ, ಈ ಹೂವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಾಗಾಗಿ ಶ್ರೀ ಹರಿಗೆ ಚೆಂಡು ಹೂಗಳನ್ನು ಅರ್ಪಿಸುವ ಮೂಲಕ, ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಿ. ಇನ್ನು ಈ ಹೂವನ್ನು ನೀವು ವಿಷ್ಣು, ಗಣೇಶ ಮತ್ತು ತಾಯಿ ಲಕ್ಷ್ಮೀಯ ಆರಾಧನೆಯಲ್ಲಿ ಹೆಚ್ಚಾಗಿ ಬಳಸಬಹುದಾಗಿದೆ. ಸಾಧ್ಯವಾದರೆ ಶುಭ ಸಮಾರಂಭಗಳಲ್ಲಿ ಮನೆಯ ಬಾಗಿಲಿಗೆ ಇದನ್ನು ಹಾಕಿ. ಇದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು