AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯದಂದು ಮಿಸ್ ಆಗಿದ್ದರೆ ಬುದ್ದ ಪೂರ್ಣಿಮೆಯಂದು ಬಂಗಾರ ಕೊಳ್ಳಬಹುದು; ಏನಿದರ ಮಹತ್ವ? ಆಚರಣೆ ಹೇಗೆ?

Buddha Purnima 2023: ಬುದ್ಧ ಪೂರ್ಣಿಮಾ 2023: ಬುದ್ಧ ಜಯಂತಿ ಎಂದೂ ಕರೆಯಲ್ಪಡುವ ಇದು ಭಗವಾನ್ ಗೌತಮ ಬುದ್ಧನ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ. ಅಲ್ಲದೆ ಬಂಗಾರ ಪ್ರಿಯರಿಗೆ ಅಕ್ಷಯ ತೃತೀಯದಂದು ಬಂಗಾರ ಕೊಳ್ಳಲು ಆಗದಿದ್ದಲ್ಲಿ ಬುದ್ಧ ಪೂರ್ಣಿಮೇಯ ದಿನ ಕೊಂಡುಕೊಳ್ಳಬಹುದು. ಏನಿದು ಅಂತ ಆಶ್ವರ್ಯ ಆಯ್ತಾ? ಹಾಗಾದರೆ ಇಲ್ಲಿದೆ ಈ ಬಗ್ಗೆ ಮಾಹಿತಿ.

ಅಕ್ಷಯ ತೃತೀಯದಂದು ಮಿಸ್ ಆಗಿದ್ದರೆ ಬುದ್ದ ಪೂರ್ಣಿಮೆಯಂದು ಬಂಗಾರ ಕೊಳ್ಳಬಹುದು; ಏನಿದರ ಮಹತ್ವ? ಆಚರಣೆ ಹೇಗೆ?
ಗೌತಮ ಬುದ್ದ & ಚಿನ್ನದ ಆಭರಣ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:May 04, 2023 | 2:32 PM

ಬೌದ್ಧ ಧರ್ಮದ ಪಿತಾಮಹ ಎಂದು ಕರೆಯಲ್ಪಡುವ ಭಗವಾನ್ ಗೌತಮ ಬುದ್ಧನ ಜನ್ಮ ದಿನಾಚರಣೆಯನ್ನು ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಇದು ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಬೌದ್ಧ ಜನರು ವ್ಯಾಪಕವಾಗಿ ಆಚರಿಸುವ ಪ್ರಮುಖ ಹಬ್ಬವಾಗಿದೆ. ‘ಬುದ್ಧ ಜಯಂತಿ’ ಎಂದೂ ಕರೆಯಲ್ಪಡುವ ಈ ಹಬ್ಬವು ಪ್ರಪಂಚದಾದ್ಯಂತದ ಬೌದ್ಧರಿಗೆ ಅಪಾರ ಮಹತ್ವವನ್ನು ಹೊಂದಿದೆ.

ಬುದ್ಧ ಪೂರ್ಣಿಮೆಯ ಮಹತ್ವ

ಅದಲ್ಲದೆ ಈ ದಿನ ಕೇವಲ ಬೌದ್ಧರಿಗೆ ಮಾತ್ರವಲ್ಲ ಬಂಗಾರ ಪ್ರಿಯರಿಗೂ ಹಬ್ಬವೇ. ಏನು ಅದು ಅಂತೀರಾ? ಅಕ್ಷಯ ತೃತೀಯದಂದು ಬಂಗಾರ ಕೊಳ್ಳಲು ಆಗದಿದ್ದವರು ಬುದ್ಧ ಪೂರ್ಣಿಮೇಯಂದು ಬಂಗಾರ ಅಥವಾ ಬೆಳ್ಳಿ ಖರೀದಿ ಮಾಡಬಹುದು. ಪಂಚಾಗದ ಪ್ರಕಾರ ಬುದ್ಧ ಪೂರ್ಣಿಮೇಯ ದಿನ ಅತ್ಯಂತ ಶುಭವಾಗಿದ್ದು ಬಂಗಾರ ಮನೆಗೆ ಬಂದಲ್ಲಿ ಸಮೃದ್ಧಿಯಾಗುತ್ತದೆ ಎನ್ನುವ ಮಾತಿದೆ. ಅಲ್ಲದೆ ಅಕ್ಷಯ ತೃತೀಯದಂದು ನಿಮಗೆ ಬಂಗಾರ ಕೊಳ್ಳಲು ಆಗದಿದ್ದಲ್ಲಿ ಅಂದರೆ ಸೂತಕ ಇತ್ಯಾದಿ ಬಂದು ಬಂಗಾರ ಖರೀದಿ ಸಾಧ್ಯವಾಗದಿದ್ದಲ್ಲಿ, ಮೇ 5ರಂದು ಖರೀದಿಗೆ ಪ್ರಶಸ್ತ ದಿನ. ಹಾಗೇ ಬಂಗಾರದ ಜೊತೆ ಒಂದು ಚಿಕ್ಕದಾದರೂ ಬೆಳ್ಳಿಯನ್ನು ಖರೀದಿ ಮಾಡಿ ಮನೆಗೆ ತನ್ನಿ, ಬಳಿಕ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಒಳಿತಾಗುತ್ತದೆ. ಅಕ್ಷಯ ತೃತೀಯ ಹೇಗೆ ನಮಗೆ ಸಮೃದ್ಧಿಯನ್ನು ಸೂಚಿಸುತ್ತದೆಯೋ ಹಾಗೇ ಬುದ್ಧ ಪೂರ್ಣಿಮೇಯು ಸಹ.

ಬುದ್ಧ ಪೂರ್ಣಿಮೆಯ ದಿನಾಂಕ, ಸಮಯ ಮತ್ತು ಇತಿಹಾಸ:

ಬುದ್ಧ ಪೂರ್ಣಿಮಾ ಹಿಂದೂ ತಿಂಗಳ ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಬರುತ್ತದೆ. ಈ ವರ್ಷ, ಬುದ್ಧ ಜಯಂತಿಯನ್ನು ಮೇ 5 ರಂದು ಆಚರಿಸಲು ಸಜ್ಜಾಗಿದೆ. ಈ ಹಬ್ಬವು ವರ್ಷದ ಮೊದಲ ಚಂದ್ರ ಗ್ರಹಣದೊಂದಿಗೆ ಹೊಂದಿಕೆಯಾಗುತ್ತದೆ. ಭಗವಾನ್ ಬುದ್ಧನ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುವ ಬುದ್ಧ ಜಯಂತಿಯನ್ನು ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಹೆಚ್ಚಿನ ಭಾಗಗಳಲ್ಲಿ ರಾಜಕುಮಾರ ಸಿದ್ಧಾರ್ಥ ಗೌತಮ, ನಂತರ ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧನ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಈ ವರ್ಷ ಗೌತಮ ಬುದ್ಧನ 2585 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು. ಗೌತಮ ಬುದ್ಧ ಈ ದಿನದಂದು ಜ್ಞಾನೋದಯವನ್ನು ಪಡೆದನು ಎಂದು ನಂಬಲಾಗಿದೆ. ಬುದ್ಧ ಪೂರ್ಣಿಮಾವನ್ನು ಬುದ್ಧ ಜಯಂತಿ, ವೆಸಾಕ್, ವೈಶಾಕ ಮತ್ತು ಬುದ್ಧನ ಜನ್ಮದಿನ ಎಂದೂ ಕರೆಯಲಾಗುತ್ತದೆ.

ಗೌತಮ ಬುದ್ಧನ ಜನನ ಮತ್ತು ಮರಣದ ಸಮಯವು ಅನಿಶ್ಚಿತವಾಗಿದೆ. ಆದಾಗ್ಯೂ, ಹೆಚ್ಚಿನ ಇತಿಹಾಸಕಾರರು ಅವನ ಜೀವಿತಾವಧಿಯನ್ನು ಕ್ರಿ.ಪೂ 563-483 ರ ನಡುವೆ ಗುರುತಿಸುತ್ತಾರೆ. ಹೆಚ್ಚಿನ ಜನರು ಲುಂಬಿನಿ, ನೇಪಾಳವನ್ನು ಬುದ್ಧನ ಜನ್ಮಸ್ಥಳವೆಂದು ಪರಿಗಣಿಸುತ್ತಾರೆ. ಬುದ್ಧನು ತನ್ನ 80 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಕುಶಿನಗರದಲ್ಲಿ ನಿಧನರಾದರು ಎಂದು ಹೇಳಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಉತ್ತರ ಭಾರತದಲ್ಲಿ ಬುದ್ಧನನ್ನು 9 ನೇ ಅವತಾರವೆಂದು ಪರಿಗಣಿಸಲಾಗುತ್ತದೆ ಮತ್ತು ಭಗವಾನ್ ಕೃಷ್ಣನನ್ನು ವಿಷ್ಣುವಿನ 8 ನೇ ಅವತಾರವೆಂದು ಪರಿಗಣಿಸಲಾಗುತ್ತದೆ.

ಬುದ್ಧ ಪೂರ್ಣಿಮೆಯ ಆಚರಣೆ ಹೇಗೆ?

ಬುದ್ಧ ಪೂರ್ಣಿಮೆಯ ದಿನದಂದು, ಬೌದ್ಧ ದೇವಾಲಯಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ. ಭಗವಾನ್ ಬುದ್ಧನಿಗೆ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಹಬ್ಬದ ದಿನದಂದು ಬುದ್ಧ ವಿಗ್ರಹಗಳನ್ನು ಪೂಜಿಸಲಾಗುತ್ತದೆ ಮತ್ತು ಪ್ರಾರ್ಥನೆ ನಡೆಯುತ್ತವೆ. ಭಕ್ತರು ಬೌದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಬೌದ್ಧ ಧರ್ಮಗ್ರಂಥಗಳನ್ನು ಪಠಿಸುತ್ತಾರೆ ಮತ್ತು ಧಾರ್ಮಿಕ ಚರ್ಚೆಗಳು ಮತ್ತು ಗುಂಪು ಧ್ಯಾನಗಳಲ್ಲಿ ಭಾಗವಹಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ, ಬೋಧಗಯದಲ್ಲಿನ ಮಹಾಬೋಧಿ ದೇವಾಲಯವು ಹೂಡ್ ಅಲಂಕಾರಗಳಿಂದ ಸುಂದರಗೊಂಡಿರುತ್ತದೆ. ಗೌತಮ ಬುದ್ಧನಿಗೆ ಬೋಧಿ ಮರದ ಕೆಳಗೆ ಜ್ಞಾನೋದಯವಾದ್ದರಿಂದ ಅಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ, ಹಾಗಾಗಿ ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯವು ಈ ಸಂದರ್ಭದಲ್ಲಿ ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ನೋಡಲು ಜನರಿಗೆ ಅವಕಾಶ ನೀಡುತ್ತದೆ. ಹಬ್ಬದ ದಿನದಂದು ಅಕ್ಕಿ ಮತ್ತು ಹಾಲನ್ನು ಬಳಸಿ ತಯಾರಿಸಿದ ‘ಖೀರ್’ ಎಂಬ ಸಿಹಿ ಖಾದ್ಯವನ್ನು ತಯಾರಿಸಲಾಗುತ್ತದೆ.

ಮತ್ತಷ್ಟು ಅಧ್ಯಾತ್ಮ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:23 am, Tue, 2 May 23

ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ