AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narasimha Dwadashi 2022: ನರಸಿಂಹ ದ್ವಾದಶಿ ವ್ರತವನ್ನು ಮಾಡುವುದರಿಂದ ಸಿಗುವ ಪ್ರಯೋಜನವೇನು? ಇಲ್ಲಿದೆ ಪೂಜಾ ವಿಧಾನ

ಭಗವಾನ್ ವಿಷ್ಣು ನರಸಿಂಹನ ಅವತಾರ ತಾಳಿ ರಾಕ್ಷಸರಾಜ ಎಂದೇ ಹೆಸರಾಗಿದ್ದ ರಾಜ ಹಿರಣ್ಯಕಶಿಪನ್ನು ಸಂಹಾರ ಮಾಡಿ ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಿದನು. ಆದ್ದರಿಂದ, ಭಕ್ತರು ತಮ್ಮ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ನರಸಿಂಹ ದೇವರನ್ನು ಪೂಜಿಸುತ್ತಾರೆ. ಇದಲ್ಲದೆ, ಈ ವ್ರತವನ್ನು ಆಚರಿಸುವುದರಿಂದ ಹಿಂದಿನ ಪಾಪಗಳನ್ನು ತೊಡೆದುಹಾಕಲು ಮತ್ತು ಮೋಕ್ಷವನ್ನು ಪಡೆಯಬಹುದು ಎಂದು ನಂಬಲಾಗಿದೆ.

Narasimha Dwadashi 2022: ನರಸಿಂಹ ದ್ವಾದಶಿ ವ್ರತವನ್ನು ಮಾಡುವುದರಿಂದ ಸಿಗುವ ಪ್ರಯೋಜನವೇನು? ಇಲ್ಲಿದೆ ಪೂಜಾ ವಿಧಾನ
ಗೋವಿಂದ
TV9 Web
| Edited By: |

Updated on: Mar 15, 2022 | 6:30 AM

Share

ಇಂದು ಅಂದ್ರೆ ಮಾರ್ಚ್ 15ರ ಮಂಗಳವಾರ ಭಗವಾನ್ ವಿಷ್ಣುವಿನ ಭಕ್ತರು ನರಸಿಂಹ ದ್ವಾದಶಿ ವ್ರತವನ್ನು ಆಚರಿಸುತ್ತಾರೆ. ನರಸಿಂಹ ದ್ವಾದಶಿಯನ್ನು ಗೋವಿಂದ ದ್ವಾದಶಿ ಎಂದೂ ಸಹ ಕರೆಯಲಾಗುತ್ತೆ. ಈ ಹಬ್ಬವನ್ನು ಪಾಲ್ಗುಣ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ಆಚರಿಸಲಾಗುತ್ತೆ. ಇನ್ನು ಇದೇ ದಿನ ಮೀನ ಸಂಕ್ರಾಂತಿ ಮತ್ತು ಭೌಮ ಪ್ರದೋಷ ವ್ರತವೂ ಬಂದಿದೆ. ಒಂದೇ ದಿನದಲ್ಲಿ ಮೂರು ವಿಶೇಷ ಹಬ್ಬಗಳು ಬಂದಿವೆ.

ನರಸಿಂಹ ಅವತಾರವು ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರವಾಗಿದೆ. ಹೆಸರೇ ಸೂಚಿಸುವಂತೆ, ನರಸಿಂಹ ಎಂದರೆ (ಅರ್ಧ ಸಿಂಹ ಮತ್ತು ಅರ್ಧ ಮನುಷ್ಯ). ದುರಹಂಕಾರಿ ಮತ್ತು ದಬ್ಬಾಳಿಕೆಯನ್ನು ಬೆಳೆಸಿದ ನಂತರ ವಿನಾಶವನ್ನು ಸೃಷ್ಟಿಸಿದ ಹಿರಣ್ಯಕಶಿಪು ಎಂಬ ರಾಕ್ಷಸನನ್ನು ಕೊಂದು ಹಾಕಲು ನರಸಿಂಹ ಸತ್ಯಯುಗದಲ್ಲಿ ಕಾಣಿಸಿಕೊಂಡನು. ಹೀಗಾಗಿ, ನರಸಿಂಹನಾಗಿ, ವಿಷ್ಣು ತನ್ನ ಭಕ್ತರಲ್ಲೊಬ್ಬರಾದ ಭಕ್ತ ಪ್ರಹ್ಲಾದನನ್ನು ರಕ್ಷಿಸಿದನು ಮತ್ತು ಧರ್ಮವನ್ನು ಪುನಃಸ್ಥಾಪಿಸಿದನು.

ನರಸಿಂಹ ದ್ವಾದಶಿ 2022 ದಿನಾಂಕ ದ್ವಾದಶಿ ತಿಥಿ ಆರಂಭ: ಮಾರ್ಚ್ 14, 2022 ಮಧ್ಯಾಹ್ನ 12:05 ದ್ವಾದಶಿ ತಿಥಿ ಕೊನೆಗೊಳ್ಳುವುದು: ಮಾರ್ಚ್ 15, 2022 ಮಧ್ಯಾಹ್ನ 1:12

ನರಸಿಂಹ ದ್ವಾದಶಿಯನ್ನು ಹೇಗೆ ಆಚರಿಸಲಾಗುತ್ತದೆ? ಭಕ್ತರು ಬೇಗನೆ ಎದ್ದು ಪವಿತ್ರ ನದಿಗಳಲ್ಲಿ (ಗಂಗಾ, ಯಮುನಾ, ಗೋದಾವರಿ, ನರ್ಮದಾ ಇತ್ಯಾದಿ) ಸ್ನಾನ ಮಾಡುತ್ತಾರೆ. ಈ ದಿನ ಭಕ್ತರು ದಿನವಿಡೀ ಉಪವಾಸವನ್ನು ಮಾಡುತ್ತಾರೆ. ಈ ದಿನ ಅಕ್ಕಿ, ಗೋಧಿ, ಬೇಳೆಕಾಳುಗಳು, ಮಾಂಸ, ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮದ್ಯ ಮತ್ತು ತಂಬಾಕು ಸಹ ನಿಷೇಧಿಸಲಾಗಿದೆ. ಭಕ್ತರು ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ. ಭಕ್ತರು ಈ ದಿನ ನರಸಿಂಹ ದೇವರ ಪೂಜೆ ಮಾಡುತ್ತಾರೆ. ಭಕ್ತರು ನರಸಿಂಹನಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಅವರಿಗೆ ಧೈರ್ಯ, ಶಕ್ತಿ, ಇಚ್ಛಾಶಕ್ತಿ ಇತ್ಯಾದಿಗಳನ್ನು ನೀಡುವಂತೆ ಪ್ರಾರ್ಥಿಸುತ್ತಾರೆ.

ಕೆಲವು ಪ್ರದೇಶಗಳಲ್ಲಿ, ವಿಷ್ಣುವಿನ ಪುಂಡರೀಕಾಕ್ಷ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಭಕ್ತರು ಮೋಕ್ಷವನ್ನು ಪಡೆಯಲು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಇದಲ್ಲದೆ, ಜೀವನದಲ್ಲಿ ಸಂತೋಷ, ಸುಖ, ನೆಮ್ಮದಿ ನೆಲೆಸಲು ನರಸಿಂಹ ದೇವರ ಪೂಜೆ ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಗೋವಿಂದ ದ್ವಾದಶಿ ಮಂತ್ರ ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ‘ ಶ್ರೀಕೃಷ್ಣಾಯ ನಮಃ, ಸರ್ವಾತ್ಮನೇ ನಮಃ’ ಓಂ ನಮೋ ನಾರಾಯಣಾಯ ನಮಃ’

ನರಸಿಂಹ ದ್ವಾದಶಿ ವ್ರತದ ಮಹತ್ವ ಭಗವಾನ್ ವಿಷ್ಣು ನರಸಿಂಹನ ಅವತಾರ ತಾಳಿ ರಾಕ್ಷಸರಾಜ ಎಂದೇ ಹೆಸರಾಗಿದ್ದ ರಾಜ ಹಿರಣ್ಯಕಶಿಪನ್ನು ಸಂಹಾರ ಮಾಡಿ ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಿದನು. ಆದ್ದರಿಂದ, ಭಕ್ತರು ತಮ್ಮ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ನರಸಿಂಹ ದೇವರನ್ನು ಪೂಜಿಸುತ್ತಾರೆ. ಇದಲ್ಲದೆ, ಈ ವ್ರತವನ್ನು ಆಚರಿಸುವುದರಿಂದ ಹಿಂದಿನ ಪಾಪಗಳನ್ನು ತೊಡೆದುಹಾಕಲು ಮತ್ತು ಮೋಕ್ಷವನ್ನು ಪಡೆಯಬಹುದು ಎಂದು ನಂಬಲಾಗಿದೆ. ಫಾಲ್ಗುಣ ದ್ವಾದಶಿಯ ದಿನ ಪೂರ್ಣಮನಸ್ಸಿನಿಂದ ಪೂಜೆ, ಭಜನೆ, ಕೀರ್ತನೆ ಇತ್ಯಾದಿಗಳನ್ನು ಮಾಡುವುದರಲ್ಲಿ ಸಮಯವನ್ನು ಕಳೆಯಬೇಕು.

ಇದನ್ನೂ ಓದಿ: Vaikuntha Ekadashi: ಈ ದಿನ ಸುಖ-ಶಾಂತಿಯ ನೆಲೆ ವೈಕುಂಠದ ಬಾಗಿಲು ತೆರೆದಿರುತ್ತೆ

Amalaki Ekadashi 2022: ಅಮಲಕಿ ಏಕಾದಶಿ ಎಂದರೇನು? ಇದನ್ನು ಏಕೆ ಆಚರಿಸುತ್ತಾರೆ?

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ