AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಾಲಯದಿಂದ ಹಿಂದಿರುಗುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹಿಂದೂ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನಸ್ಸಿನ ಶಾಂತಿ ಮತ್ತು ದೇವರ ಆಶೀರ್ವಾದ ಪಡೆಯಲು ಪೂಜೆ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಒಬ್ಬ ವ್ಯಕ್ತಿಯು ಪೂಜೆಯ ಸಮಯದಲ್ಲಿ ಅಥವಾ ನಂತರ ಕೆಲವು ಸಣ್ಣ ತಪ್ಪುಗಳನ್ನು ಮಾಡುತ್ತಾನೆ. ಇದರಿಂದ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಆ ತಪ್ಪುಗಳು ಯಾವುದು? ಏಕೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ದೇವಾಲಯದಿಂದ ಹಿಂದಿರುಗುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 09, 2024 | 4:46 PM

Share

ಹಿಂದೂ ಧರ್ಮದಲ್ಲಿ, ದೇವರ ಆರಾಧನೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ವ್ಯಕ್ತಿಯು ದೇವರನ್ನು ಪೂಜಿಸುವಾಗ ಯಾವುದೇ ತಪ್ಪನ್ನು ಮಾಡಲು ಬಯಸುವುದಿಲ್ಲ. ಏಕೆಂದರೆ ದೇವರ ಆರಾಧನೆಯಲ್ಲಿ ತಪ್ಪುಗಳಾದರೆ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವರ ಪೂಜೆ ಮಾಡುವಾಗ ಅಥವಾ ದೇವಸ್ಥಾನದಿಂದ ಹಿಂತಿರುಗುವಾಗ ಕೆಲವು ಕೆಲಸಗಳನ್ನು ನಾವು ಮಾಡಬಾರದು. ಹಾಗಾದರೆ ಅವು ಯಾವವು? ಏಕೆ ಮಾಡಬಾರದು ಎಂಬುದನ್ನು ತಿಳಿಯಿರಿ.

ದಾರಿಯಲ್ಲಿ ಪ್ರಸಾದ ತಿನ್ನಬಾರದೇ?

ಜ್ಯೋತಿಷಿ ಪಂಡಿತ್ ರಾಕೇಶ್ ಪಾಂಡೆ ಅವರು ಟಿವಿ 9 ಡಿಜಿಟಲ್ ಗೆ ತಿಳಿಸಿರುವ ಪ್ರಕಾರ ದೇವಾಲಯದಿಂದ ತೆಗೆದುಕೊಂಡ ಪ್ರಸಾದವನ್ನು ಎಂದಿಗೂ ದಾರಿಯಲ್ಲಿ ತಿನ್ನಬಾರದು. ಏಕೆಂದರೆ ಈ ರೀತಿ ಮಾಡುವುದರಿಂದ ನಿಮ್ಮ ಪೂಜೆ ಅಪೂರ್ಣ ಎನಿಸಿಕೊಳ್ಳುತ್ತದೆ. ನಂಬಿಕೆಯ ಪ್ರಕಾರ, ದೇವಾಲಯದಿಂದ ಪಡೆದ ಪ್ರಸಾದವನ್ನು ಮನೆಗೆ ತೆರಳಿ ಇಡೀ ಕುಟುಂಬಕ್ಕೆ ವಿತರಿಸಿ ಅವರ ಒಟ್ಟಿಗೆ ನಾವು ಕೂಡ ಸೇವಿಸಬೇಕು. ಕುಂಕಮ ಪ್ರಸಾದವಾಗಿದ್ದರೆ ಅದನ್ನು ಮನೆಯಲ್ಲಿರುವ ಭಂಡಾರ ಅಥವಾ ಕುಂಕುಮದ ಪಾತ್ರೆಗೆ ಹಾಕಿ, ದೇವರಿಗೆ ನಮಸ್ಕರಿಸಿ ಆ ಬಳಿಕ ಮನೆಯವರೆಲ್ಲಾ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಪ್ರಸಾದವನ್ನು ಆ ಮನೆಯ ಹಿರಿಯರು ತೆಗೆದುಕೊಂಡು ಅವರು ತಮ್ಮ ಕಿರಿಯರಿಗೆ ಕೊಡುವ ಮೂಲಕ ಆಶೀರ್ವದಿಸಬೇಕು. ಈ ಪದ್ದತಿ ಈಗಲೂ ಸಾಕಷ್ಟು ಮನೆಗಳಲ್ಲಿ ಚಾಲ್ತಿಯಲ್ಲಿದೆ.

ಖಾಲಿ ಮಡಕೆಯನ್ನು ಮನೆಗೆ ತರಬಾರದೇ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಾಲಯಕ್ಕೆ ಹೋಗುವಾಗ ಅಥವಾ ಬರುವಾಗ ಖಾಲಿ ಮಡಕೆಯನ್ನು ಖರೀದಿಸಿ ಎಂದಿಗೂ ಮನೆಗೆ ತರಬಾರದು. ಏಕೆಂದರೆ ಇದು ವ್ಯಕ್ತಿಯ ಜೀವನದಲ್ಲಿ ಆತ ಮಾಡುತ್ತಿರುವ ಕೆಲಸವನ್ನು ಹಾಳು ಮಾಡುತ್ತದೆ ಎಂದು ನಂಬಲಾಗಿದೆ. ನೀವು ದೇವರಿಗೆ ಮಡಿಕೆಯಲ್ಲಿಯೇ ನೀರನ್ನು ಅರ್ಪಿಸುವುದಾದರೆ ಆ ಸಮಯದಲ್ಲಿ ಅದನ್ನು ಪೂರ್ತಿ ಕಾಲಿ ಮಾಡದೆಯೇ ಸ್ವಲ್ಪ ನೀರನ್ನು ಅದರಲ್ಲಿಯೇ ಬಿಡಬೇಕು. ಅಥವಾ ನೀವು ದೇವಾಲಯದಿಂದ ಪಡೆದ ಪೂಜಾ ಹೂವುಗಳನ್ನು ಮಡಕೆಯಲ್ಲಿ ಇಟ್ಟುಕೊಂಡು ಬರಬಹುದು. ಇನ್ನು ದೇವಾಲಯದಿಂದ ತುಂಬಿದ ಮಡಕೆಯನ್ನು ತರುವುದು ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿ ಯಾವಾಗ? ಈ ದಿನದ ಮಹತ್ವ ಏನು?

ದೇವಾಲಯದಲ್ಲಿ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ?

ಮಂದಿರಗಳಿಗೆ ಹೋದಾಗ ಉರಿಯುತ್ತಿರುವ ದೀಪದಿಂದ ಮತ್ತೊಂದು ದೀಪವನ್ನು ನಾವು ಎಂದಿಗೂ ಬೆಳಗಿಸಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದು ನಿಮಗೆ ಪೂಜಾ ಫಲಗಳನ್ನು ನೀಡುವುದಿಲ್ಲ. ಪೂಜೆಯ ಸಮಯದಲ್ಲಿ ನೀವು ದೇವರಿಗೆ ಅರ್ಪಿಸುವ ಯಾವುದೇ ಪೂಜಾ ಸಾಮಗ್ರಿಗಳನ್ನು ನೆಲಕ್ಕೆ ಬಿಳಿಸಬಾರದು. ಒಂದೊಮ್ಮೆ ಬಿದ್ದಲ್ಲಿ ಆ ವಸ್ತುವನ್ನು ದೇವರಿಗೆ ಎಂದು ನೀಡಬಾರದು, ಇನ್ನು ದೇವಾಸ್ಥನಗಳಿಗೆ ಹೋದ ಬಳಿಕ ಪೂಜಾ ಸಾಮಗ್ರಿಗಳನ್ನು ಎಂದಿಗೂ ಸ್ವಚ್ಛಗೊಳಿಸಬಾರದು. ಇನ್ನು ದೇವಸ್ಥಾನಕ್ಕೆ ಹೋಗುವವರು ಮನೆಯಿಂದ ಒಂದೆರಡು ಹೂವುಗಳನ್ನಾದರೂ ತೆಗೆದುಕೊಂಡು ಹೋಗಿ ಬಳಿಕ ಬೇರೆ ಅಂಗಡಿಗಳಲ್ಲಿ ಹೂವು ತೆಗೆದುಕೊಳ್ಳಬಹುದು. ಏಕೆಂದರೆ ಮನೆಯಲ್ಲಿ ನೀವು ನೆಟ್ಟು ಬೆಳೆಸಿದ ಹೂವಿಗಿಂತ ಶ್ರೇಷ್ಠವಾದದ್ದು ಯಾವುದು ಇಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ