AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zodiac signs: ಈ ಮೂರು ರಾಶಿಯ ಜನ ಅಸಭ್ಯರು, ಮುಂಗೋಪಿಗಳು ಆಗಿರುತ್ತಾರೆ; ನಿಮ್ಮ ರಾಶಿ ಯಾವುದು?

ತುಲಾ ರಾಶಿಯವರು ಆಗಾಗ ಸ್ವಾರ್ಥಿಗಳು, ಅಸಭ್ಯರು, ಮುಂಗೋಪಿಗಳು ಆಗುತ್ತಿರುತ್ತಾರೆ. ಇವರು ಜನ ಪ್ರಿಯರೂ ಆಗಿರುತ್ತಾರೆ. ಆದರೆ ಅವರು ಬಯಸಿದ್ದನ್ನು ಸಾಧಿಸಿಕೊಳ್ಳಲು ಆಗದೇ ಇದ್ದಾಗ ತಮ್ಮ ಎದುರಿಗಿನ ಜನರ ಮೇಲೆ ಅಸಭ್ಯ ವ್ಯಕ್ತಿತ್ವ ಪ್ರದರ್ಶನಕ್ಕೆ ಇಡುತ್ತಾರೆ. ತುಲಾ ರಾಶಿಯವರು ಸರಿಯಾದ ಮೂಡ್​​ನಲ್ಲಿ ಇಲ್ಲಾ ಅಂದಾಗ ಅಂತಹವರಿಂದ ದೂರವುಳಿಯುವದೇ ಕ್ಷೇಮ, ಉಚಿತ.

Zodiac signs: ಈ ಮೂರು ರಾಶಿಯ ಜನ ಅಸಭ್ಯರು, ಮುಂಗೋಪಿಗಳು ಆಗಿರುತ್ತಾರೆ; ನಿಮ್ಮ ರಾಶಿ ಯಾವುದು?
ಬದಲಾವಣೆ ಎಂಬುದು ಜಗದ ನಿಯಮ: ಆದರೆ ಈ 3 ರಾಶಿಯ ಜನ ಬದಲಾವಣೆಯನ್ನು ಇಷ್ಟಪಡುವುದಿಲ್ಲ!
TV9 Web
| Edited By: ಆಯೇಷಾ ಬಾನು|

Updated on: Oct 28, 2021 | 8:40 AM

Share

ಯಾವುದನ್ನೇ ಆಗಲಿ ಪಡೆಯಲು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ, ಅದಕ್ಕೂ ಒಂದು ಮೌಲ್ಯ ಇರುತ್ತದೆ. ಅಸಭ್ಯತೆ, ಮುಂಗೋಪಿತನ ಆದರೂ ಅಷ್ಟೇ, ಅದಕ್ಕೂ ಬೆಲೆ ತೆರಬೇಕಾಗುತ್ತದೆ. ಈ ದುರ್ಗುಣ ಹೊಂದಿರುವವರು ಜೀನವದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಕುಟುಂಬಸ್ಥರು, ಸ್ನೇಹಿತ ವರ್ಗ, ಸುತ್ತಮುತ್ತಲ ಜನರು ಇಂತಹವರನ್ನು ಉಪೇಕ್ಷಿಸುವುದು ಜಾಸ್ತಿ. ಅದೂ ಸಹಜವೇ! ಯಾರು ತಾನೇ ಇಂತಹ ಅಸಭ್ಯರ ಜೊತೆ ಗುರುತಿಸಿಕೊಳ್ಳಲು ಬಯಸುತ್ತಾರೆ.

ಅಷ್ಟಕ್ಕೂ ಅಸಭ್ಯವಾಗಿರುವುದು ತುಂಬಾ ಸುಲಭ. ಆದರೆ ಶಾಂತವಾಗಿರುವುದು, ಇಂದ್ರಿಯನಿಗ್ರಹ ಮಾಡಿಕೊಂಡು ಸಂಯಮದಿಂದ ಇರುವುದು ನಿಜಕ್ಕೂ ಕಠಿಣವೇ ಸರಿ. ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಹಾಗಂತ ಎಲ್ಲರೂ ಅಸಭ್ಯರು ಆಗಿರುವುದಿಲ್ಲ. ಪ್ರತಿಕೂಲ ಪರಿಸ್ಥಿತಿಗಳು, ಪ್ರತಿಕೂಲ ವಾತಾವರಣಗಳು ನಮ್ಮನ್ನು ಅಸಭ್ಯತನಕ್ಕೆ ತಳ್ಳುತ್ತವೆ. ಆದರೆ ಎಕ್ಸಾಕ್ಟ್​​ಲಿ ಅಂತಹ ಸಂದರ್ಭಗಳಲ್ಲಿಯೇ ನಾವು ನಮ್ಮ ತನ ಕಾಯ್ದುಕೊಂಡು, ಸಭ್ಯರಾಗಿ ಉಳಿಯಬೇಕಾಗುತ್ತದೆ. ಇನ್ನು ಜ್ಯೋತಿಷ್ಯದ ಅನುಸಾರ ಮೂರು ರಾಶಿಯವರು ತುಂಬಾ ಕಠೋರರು, ಅಸಭ್ಯರು, ಅಶಿಸ್ತಿನ ಜನರು ಆಗಿರುತ್ತಾರೆ.

ಮಿಥುನ ರಾಶಿ: ಮಿಥುನ ರಾಶಿಯವರು ತುಂಬಾ ನೀರಸವಾಗಿರುತ್ತಾರೆ. ಆದರೆ ಇದು ಅಂತರ್ಗತವಾಗಿ ಅವರಲ್ಲಿ ಹುದುಗಿರುವ ಸ್ವಭಾವ ಅಲ್ಲ. ಒಳ್ಳೆಯ ಮೂಡ್​ನಲ್ಲಿ ಇಲ್ಲದಿದ್ದಾಗ ಅಂತಹ ಕೆಟ್ಟ ಸ್ವಭಾವ ಪ್ರಕಟವಾಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರು ಆಗಾಗ ಸ್ವಾರ್ಥಿಗಳು, ಅಸಭ್ಯರು, ಮುಂಗೋಪಿಗಳು ಆಗುತ್ತಿರುತ್ತಾರೆ. ಇವರು ಜನ ಪ್ರಿಯರೂ ಆಗಿರುತ್ತಾರೆ. ಆದರೆ ಅವರು ಬಯಸಿದ್ದನ್ನು ಸಾಧಿಸಿಕೊಳ್ಳಲು ಆಗದೇ ಇದ್ದಾಗ ತಮ್ಮ ಎದುರಿಗಿನ ಜನರ ಮೇಲೆ ಅಸಭ್ಯ ವ್ಯಕ್ತಿತ್ವ ಪ್ರದರ್ಶನಕ್ಕೆ ಇಡುತ್ತಾರೆ. ತುಲಾ ರಾಶಿಯವರು ಸರಿಯಾದ ಮೂಡ್​​ನಲ್ಲಿ ಇಲ್ಲಾ ಅಂದಾಗ ಅಂತಹವರಿಂದ ದೂರವುಳಿಯುವದೇ ಕ್ಷೇಮ, ಉಚಿತ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಕೆಟ್ಟ ಮನಸ್ಸಿನವರಲ್ಲ. ಆದರೆ ಅವರು ಕೆಲವು ನಿರ್ದಿಷ್ಟ ವ್ಯಕ್ತಿಗಳ ಜೊತೆ ತುಂಬಾ ಕಠಿಣರಾತ್ತಾರೆ. ಏಕೆಂದರೆ ಅಂತಹವರು ಇವರಿಗೆ ಸ್ವಭಾವತಃ ಇಷ್ಟವಿರುವುದಿಲ್ಲ. ವೃಶ್ಚಿಕ ರಾಶಿಯವರಿಗೆ ಕೆಲವರ ಜೊತೆ ಇಚ್ಛೆಯಿರುವುದಿಲ್ಲ. ಅಂತಹವರು ತಮ್ಮೊಂದಿಗೆ ಸಮಾನಮನಸ್ಕರು ಅಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಹಾಗಾಗಿ ಅಂತಹವರು ಎದುರಾದಾಗ ವೃಶ್ಚಿಕ ರಾಶಿಯವರು ತಮ್ಮ ಅಸಭ್ಯತೆ ಪ್ರದರ್ಶಿಸುತ್ತಾರೆ. ಇವ್ರ ವೈಬ್ಸ್​ ಅವರೊಂದಿಗೆ ತಾಳಮೇಳ ಆಗದೆ ಸ್ನೇಹಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಹಾಗಾಗಿ ಇಂತಹ ವೃಶ್ಚಿಕ ರಾಶಿಯವರ ಜೊತೆ ಮಾತುಕತೆ ನಡೆಸುವ ಮುನ್ನ ತುಂಬಾ ಎಚ್ಚರಿಕೆಯಿಂದಿದ್ದು, ಜಾಗ್ರತೆಯಿಂದ ಇರಬೇಕಾಗುತ್ತದೆ.

(people with these 3 zodiac signs are rude and Uncultured know about these zodiac signs)

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!