Marital Relationships: ವೈವಾಹಿಕ ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳಿಗೆ ಚಾಣಕ್ಯ ನೀತಿಯಲ್ಲಿ ಇದೇ ಪರಿಹಾರ!

Chanakya Niti: ನಿಮ್ಮ ಹೆಂಡತಿ ನಿಮ್ಮನ್ನು ದೂರವಿಟ್ಟರೆ ಮತ್ತು ನಿಮ್ಮಿಂದ ಭಾವನಾತ್ಮಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರೆ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಹೆಚ್ಚು ಸ್ವಾರ್ಥಿ ಎಂದು ತೋರುತ್ತಿದ್ದರೆ, ಅವಳು ಯಾವುದೋ ಅಥವಾ ಇನ್ನೊಂದರ ಬಗ್ಗೆ ತೀವ್ರವಾಗಿ ದುಃಖಿತಳಾಗಿದ್ದಾಳೆ ಎಂದು ತೋರಿಸುತ್ತದೆ.

Marital Relationships: ವೈವಾಹಿಕ ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳಿಗೆ ಚಾಣಕ್ಯ ನೀತಿಯಲ್ಲಿ ಇದೇ ಪರಿಹಾರ!
Relationships
Follow us
| Updated By: ಸಾಧು ಶ್ರೀನಾಥ್​

Updated on: Feb 23, 2023 | 4:15 PM

ಚಾಣಕ್ಯ ನೀತಿಯ ತತ್ವಗಳನ್ನು (Principles of Chanakya Niti) ಅನೇಕರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಅದರಲ್ಲಿ ಅವರು ಯಾವಾಗಲೂ ಯಶಸ್ವಿಯಾಗಿದ್ದಾರೆ. ಚಾಣಕ್ಯನ ಲೌಕಿಕ ಬುದ್ಧಿವಂತಿಕೆಯು ಮನುಷ್ಯ ಜೀವನದಲ್ಲಿ ಎದುರಾಗುವ ಸಂದಿಗ್ಧತೆ ಮತ್ತು ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಅನೇಕರಿಗೆ ಸಹಾಯ ಮಾಡಿದೆ. ಮೊದಲನೆಯದಾಗಿ, ನಮ್ಮ ಜೀವನದಲ್ಲಿ ಪ್ರತಿಯೊಬ್ಬರ ಕಡೆಗೆ ವಿಶೇಷವಾಗಿ ನಮ್ಮ ಪ್ರೀತಿಪಾತ್ರರಿಗೆ ನೈಜ ಮನುಷ್ಯರಾಗಲು ಅವಕಾಶ ನೀಡುವ ಮಾನವ ಸ್ಪರ್ಶವನ್ನು ನಾವು ನೀಡಬೇಕು ಎಂಬುದನ್ನು ನೆನಪಿಟ್ಟುಕೊಳ್ಳಲು ನಾವು ವಿಫಲರಾಗುತ್ತೇವೆ. ನಾವು ಬಹುತೇಕ ಬಾರಿ, ಉದ್ವೇಗದ ಮನಸ್ಥಿತಿಯಲ್ಲಿ ಅಥವಾ ವಿಸ್ಫೋಟಕ ಪರಿಸ್ಥಿತಿಯಲ್ಲಿ ನಾವು ಏನು ಹೇಳುತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ನಮ್ಮ ಕಟುವಾದ ಮಾತು ಪ್ರತಿಯೊಬ್ಬರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಚಾಣಕ್ಯ ನೀತಿಯಿಂದ ನಾವು ಕೆಲವು ವಿಚಾರಗಳನ್ನು ಎರವಲು ಪಡೆಯಬೇಕಾಗಿದೆ. ವೈವಾಹಿಕ ಜೀವನದಲ್ಲಿನ (Marital Relationships) ಸಂತೋಷ, ಗಂಡನ (Husband) ನಡವಳಿಕೆ ಮತ್ತು ವರ್ತನೆಯಿಂದ ಮಹಿಳೆಯರು (Wife) ಏಕೆ ಅತೃಪ್ತರಾಗುತ್ತಾರೆ ಮತ್ತು ಅದರ ಬಗ್ಗೆ ತಮ್ಮ ಅಸಮಾಧಾನವನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದರ ಕುರಿತು ಅವರು ಬರೆದಿದ್ದಾರೆ. ವಾಸ್ತವವಾಗಿ, ಇದು ಸುಲಭ. ಆದರೆ ಪುರುಷರು ಮಹಿಳೆಯ ಮೌನವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಾರೆ. ಮಹಿಳೆಯ ಸಂತೋಷ, ಕೋಪ, ಪ್ರಕೋಪಗಳು, ಪ್ರಲಾಪಗಳು ಮತ್ತು ಕರಗುವಿಕೆಗಳು ಕನಿಷ್ಠ ಮಟ್ಟದಲ್ಲಿಯೂ ನಿರೀಕ್ಷಿಸದಿದ್ದಾಗ ಅವರಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿಯೇ ಸ್ತ್ರೀ ಜಾತಿಯನ್ನು ‘ಅತ್ಯಂತ ಅನಿರೀಕ್ಷಿತ’ ಎಂದು ಕರೆದುಬಿಡುತ್ತಾರೆ.

ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ಕೆಲವು ಸನ್ನೆಗಳ ಮೂಲಕ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಮತ್ತು ಸರಿಯಾದ ಕಾಳಜಿ ಮತ್ತು ಎಚ್ಚರಿಕೆಯೊಂದಿಗೆ ಅದನ್ನು ಸಹಜವಾಗಿ ಮಾಡುತ್ತಾರೆ. ಮಹಿಳೆಯರು ಅದನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಚಾಣಕ್ಯನ ಆಜ್ಞೆಗಳನ್ನು ಅನುಸರಿಸಿದರೆ ತನ್ನ ಮುಂದಿನ ಹೆಜ್ಜೆ ಏನೆಂದು ಪತಿ ಯಶಸ್ವಿಯಾಗಿ ಊಹಿಸಬಹುದು. ಮಹಿಳೆಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಸನ್ನೆಗಳು ಹೀಗಿವೆ:

1. ಅವಳ ವಟಗುಟ್ಟುವಿಕೆಯನ್ನು ನಿರುತ್ಸಾಹಗೊಳಿಸುವುದು

ಹುಟ್ಟಿನಿಂದಲೇ ಹೆಂಗಸರು ವಟಗುಟ್ಟುವ ಜಾತಿಯವರು ಎಂದು ಹೆಸರುವಾಸಿಯಾಗಿದ್ದಾರೆ. ಅವರು ಹರ್ಷಚಿತ್ತದಿಂದ ಇರುವಾಗ ತಮ್ಮ ಪತಿಯೊಂದಿಗೆ ಹೆಚ್ಚು ಮಾತನಾಡುತ್ತಾರೆ. ಆದರೆ ಪತಿ ತನ್ನ ಹೆಂಡತಿಯಲ್ಲಿನ ಈ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವಳನ್ನು ಮುಂದುವರಿಯಲು ಬಿಡಬೇಕು. ಅಂದರೆ ಅವಳ ಮಾತನ್ನು ಮನವಿಟ್ಟು/ಗಮನವಿಟ್ಟು ಆಲಿಸಬೇಕು ಮತ್ತು ಗ್ರಹಿಸಬೇಕು. ಆ ಬಗ್ಗೆ ನೀವು ನಿರ್ಲಕ್ಷ್ಯವನ್ನು ಪ್ರದರ್ಶಿಸಿದರೆ ಸ್ವಾಭಾವಿಕವಾಗಿ ಅವಳು ಕಲ್ಲಿನಂತೆ ಮೌನಕ್ಕೆ ಶರಣಾಗುತ್ತಾಳೆ. ಈ ಮೌನದ ಹಿಂದಿನ ಆಲೋಚನೆ ಎಂದರೆ ಅಸಮಾಧಾನ ಮತ್ತು ಕೋಪ. ಸಾಮಾನ್ಯವಾಗಿ, ಅತೃಪ್ತ ಹೆಂಡತಿಯರು ಕಡಿಮೆ ಮಾತನಾಡುತ್ತಾರೆ. ಆದ್ದರಿಂದ ಪತಿಯಾಗಿ ನಿಮ್ಮ ಕರ್ತವ್ಯವು ಅವಳನ್ನು ಈ ಬಗ್ಗೆ ವಿಚಾರಿಸುವುದು ಮತ್ತು ಅವಳ ಸಂಕಟಗಳಿಗೆ ಉತ್ತರಿಸುವ ಮೂಲಕ ನೀವು ಗಂಡಾಂತರವನ್ನು ಪರಿಹರಿಸಬಹುದು. ಇದು ನಿಮ್ಮ ಸಂಬಂಧದಲ್ಲಿ ಸಾಮರಸ್ಯ ಮತ್ತು ಆನಂದವನ್ನು ತುಂಬಿ, ಮತ್ತೆ ಪುಟಿಯಲು ಅನುವು ಮಾಡಿಕೊಡುತ್ತದೆ.

2. ಅವಳ ಮುಂಗೋಪದ ಮೂಡ್​ಸ್ವಿಂಗ್ಸ್​​ ಮತ್ತು ಕೋಪದ ಪ್ರಕೋಪ ಪ್ರಲಾಪಗಳನ್ನು ನಿರ್ವಹಿಸುವುದು

ಸಾಮಾನ್ಯವಾಗಿ, ಗಂಡಂದಿರು ಇದನ್ನು ನಂಬುವುದಿಲ್ಲ. ಆದರೆ ಮಹಿಳೆಗೆ ಅಂತಿಮವಾಗಿ ಪತಿಯೇ ಆದ್ಯತೆಯಾಗುತ್ತಾನೆ. ಪತಿಗೆ ಕೋಪವನ್ನುಂಟುಮಾಡಲು ಮತ್ತು ಅವನನ್ನು ಕೆರಳಿಸುವ ವಿಷಯದಲ್ಲಿ ಅವಳು ಕೊನೆಯವಳು ಎಂಬುದನ್ನು ಅರಿತುಕೊಳ್ಳಬೇಕು. ಅವಳು ನಿಮ್ಮೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದರೆ ಮತ್ತು ಪ್ರತಿ ಹಂತದಲ್ಲೂ ನಿಮ್ಮನ್ನು ಕೆಣಕುತ್ತಿದ್ದರೆ, ಇದು ಸ್ಪಷ್ಟವಾಗಿ ಅವಳು ನಿಮ್ಮೊಂದಿಗೆ ಅತೃಪ್ತಳಾಗಿರುವುದನ್ನು ಸೂಚಿಸುತ್ತದೆ. ಆದ್ದರಿಂದ, ಅವಳಿಗೆ ಏನು ತೊಂದರೆಯಾಗುತ್ತಿದೆ ಎಂಬುದನ್ನು ಕಂಡುಹಿಡಿಯಿರಿ ಮತ್ತು ಅದು ಕೆಟ್ಟ ಘಳಿಗೆಗೆ ತಿರುಗುವ ಮೊದಲು ಅದನ್ನು ಕೊನೆಗೊಳಿಸಿಕೊಳ್ಳಿ.

3. ಅವಳು ಭಾವನಾತ್ಮಕವಾಗಿ ದೂರವಾದಾಗ ಮತ್ತು ಸ್ವಾರ್ಥಿಯಾಗುವತ್ತ ಸಾಗಿದಾಗ…

ಮಹಿಳೆಯರು ತಮ್ಮ ಗಂಡನ ಕಡೆಗೆ ಸಂಪೂರ್ಣವಾಗಿ ಕಾಳಜಿ ವಹಿಸುತ್ತಾರೆ ಮತ್ತು ಅವರು ತಮ್ಮ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳಲು ಇಷ್ಟಪಡುತ್ತಾರೆ. ಇದು ದಂಪತಿ ಸಂಬಂಧದ ಸಾಮಾನ್ಯ ಲಕ್ಷಣವಾಗಿದೆ. ನಿಮ್ಮ ಹೆಂಡತಿ ನಿಮ್ಮನ್ನು ದೂರವಿಟ್ಟರೆ ಮತ್ತು ನಿಮ್ಮಿಂದ ಭಾವನಾತ್ಮಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರೆ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಹೆಚ್ಚು ಸ್ವಾರ್ಥಿ ಎಂದು ತೋರುತ್ತಿದ್ದರೆ, ಅವಳು ಯಾವುದೋ ಅಥವಾ ಇನ್ನೊಂದರ ಬಗ್ಗೆ ತೀವ್ರವಾಗಿ ದುಃಖಿತಳಾಗಿದ್ದಾಳೆ ಎಂದು ತೋರಿಸುತ್ತದೆ. ನೀವು ಶಾಂತತೆಯನ್ನು ಕಳೆದುಕೊಳ್ಳದೆ ಅವಳೊಂದಿಗೆ ಮಾತನಾಡಿ ಮತ್ತು ಅವಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಮೊದಲಿನಂತೆಯೇ ಸರಿಯಾಗುವುದು.

(ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ನಿಖರತೆ ಅಥವಾ ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವುದಿಲ್ಲ. ಲೇಖನಕ್ಕೆ ಸಂಬಂಧಿಸಿದ ಯಾವುದೇ ಒಳಹರಿವು ಅಥವಾ ಮಾಹಿತಿಯನ್ನು ನಾವು ದೃಢೀಕರಿಸುವುದಿಲ್ಲ. ಮಾಹಿತಿಯನ್ನು ಓದುಗರಿಗೆ ತಲುಪಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಇದರಲ್ಲಿನ ಯಾವುದೇ ಮಾಹಿತಿಯನ್ನು ಅಭ್ಯಾಸ ಮಾಡುವ ಅಥವಾ ಅನುಷ್ಠಾನಗೊಳಿಸುವ ಮೊದಲು ದಯವಿಟ್ಟು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ)

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ