AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami 2024: ರಾಮನವಮಿಯ ದಿನ ಈ ಕೆಲಸವನ್ನು ತಪ್ಪದೇ ಮಾಡಿ

ರಾಮನವಮಿಯ ದಿನ ಅಭಿಜಿತ್ ಮುಹೂರ್ತದಲ್ಲಿ ಭಗವಾನ್ ರಾಮನನ್ನು ಪೂಜಿಸುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ ಈ ವರ್ಷ, ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆ ನಡೆದಿರುವುದರಿಂದ ರಾಮನವಮಿಯ ವೈಭವವು ವಿಶೇಷವಾಗಿರುತ್ತದೆ. ಹಾಗಾದರೆ 2024 ರಲ್ಲಿ ರಾಮನವಮಿ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ? ಪೂಜಾ ಸಮಯ ಮತ್ತು ಈ ಬಾರಿ ಏನು ವಿಶೇಷತೆ ಇದೆ ಎಂದು ತಿಳಿದುಕೊಳ್ಳಿ.

Ram Navami 2024: ರಾಮನವಮಿಯ ದಿನ ಈ ಕೆಲಸವನ್ನು ತಪ್ಪದೇ ಮಾಡಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 14, 2024 | 4:56 PM

Share

ವಾಲ್ಮೀಕಿ ರಾಮಾಯಣದ ಪ್ರಕಾರ, ವಿಷ್ಣುವಿನ ಏಳನೇ ಅವತಾರವಾದ ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ಜನಿಸಿದನು. ರಾಮ ಲಲ್ಲಾ ಮಧ್ಯಾಹ್ನ ಸಮಯದಲ್ಲಿ ಜನಿಸಿದನು ಎನ್ನಲಾಗುತ್ತದೆ, ಆದ್ದರಿಂದ ರಾಮನವಮಿಯ ದಿನ ಅಭಿಜಿತ್ ಮುಹೂರ್ತದಲ್ಲಿ ಭಗವಾನ್ ರಾಮನನ್ನು ಪೂಜಿಸುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ ಈ ವರ್ಷ, ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆ ನಡೆದಿರುವುದರಿಂದ ರಾಮನವಮಿಯ ವೈಭವವು ವಿಶೇಷವಾಗಿರುತ್ತದೆ. ಹಾಗಾದರೆ 2024 ರಲ್ಲಿ ರಾಮನವಮಿ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ? ಪೂಜಾ ಸಮಯ ಮತ್ತು ಈ ಬಾರಿ ಏನು ವಿಶೇಷತೆ ಇದೆ ಎಂದು ತಿಳಿದುಕೊಳ್ಳಿ.

2024ರ ರಾಮನವಮಿಯ ಶುಭ ಮುಹೂರ್ತ;

ಈ ವರ್ಷ ರಾಮನವಮಿಯನ್ನು ಎ. 17 ರಂದು ಆಚರಣೆ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಎ. 16 ರಂದು ಮಧ್ಯಾಹ್ನ 01.23 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಎ. 17ರಂದು ಮಧ್ಯಾಹ್ನ 03.14 ಕ್ಕೆ ಕೊನೆಗೊಳ್ಳುತ್ತದೆ. ರಾಮ ನವಮಿಯಂದು ಅಭಿಜಿತ್ ಮುಹೂರ್ತವು ಬೆಳಿಗ್ಗೆ 11.08 ರಿಂದ ಮಧ್ಯಾಹ್ನ 01:36 ರ (ಅವಧಿ – 2 ಗಂಟೆ 28 ನಿಮಿಷಗಳು) ವರೆಗೆ ಇರುತ್ತದೆ.

ರಾಮ ನವಮಿಯಂದು ರವಿ ಯೋಗ

ಈ ವರ್ಷದ ರಾಮನವಮಿಯಂದು ಇಡೀ ದಿನ ರವಿ ಯೋಗವಿದ್ದು ಇದು ತುಂಬಾ ಮಂಗಳಕರ ಎನ್ನಲಾಗುತ್ತದೆ, ಇದರಲ್ಲಿ ಸೂರ್ಯನ ಪ್ರಭಾವವಿದ್ದು ಎಲ್ಲಾ ರೀತಿಯ ದೋಷಗಳು ಕೂಡ ನಿವಾರಣೆಯಾಗುತ್ತದೆ ಜೊತೆಗೆ ಈ ಅವಧಿಯಲ್ಲಿ ಮಾಡುವ ಪೂಜೆಗಳು ವೃತ್ತಿ ಜೀವನದಲ್ಲಿ ಗೌರವ ಮತ್ತು ಯಶಸ್ಸನ್ನು ನೀಡುತ್ತವೆ ಎನ್ನುವ ನಂಬಿಕೆ ಇದೆ.

ಇದನ್ನೂ ಓದಿ: ಕುಂಭ ರಾಶಿಯಲ್ಲಿ ಅಪರೂಪದ ತ್ರಿಗ್ರಾಹಿ ಯೋಗ ಸೃಷ್ಟಿ.. ಈ 3 ರಾಶಿಗಳು ಸಂಪದ್ಭರಿತವಾಗಲಿವೆ!

ಅಯೋಧ್ಯೆಯಲ್ಲಿ ರಾಮನವಮಿ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾನ ಭವ್ಯ ಪ್ರತಿಷ್ಠಾಪನೆಯ ನಂತರ ಇದೇ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನವಮಿಯನ್ನು ಆಚರಿಸಲಾಗುವುದು. ಹಾಗಾಗಿ ಇಲ್ಲಿಯ ಆಚರಣೆ ಅನೇಕ ಪಟ್ಟು ಹೆಚ್ಚಾಗಲಿದ್ದು ದಿನವಿಡೀ ರಾಮನಾಮ ಪಠಿಸಲಾಗುತ್ತದೆ. ಅದಲ್ಲದೆ ಇಲ್ಲಿ ಪ್ರತಿ ವರ್ಷ ರಾಮನವಮಿಯ ದಿನದ ಅಂಗವಾಗಿ 9 ದಿನಗಳ ಜಾತ್ರೆ ಕೂಡ ನಡೆಯುತ್ತದೆ.

ರಾಮನವಮಿಯಂದು ಈ ಕೆಲಸವನ್ನು ತಪ್ಪದೇ ಮಾಡಿ!

ಈ ದಿನ ಮನೆಯಲ್ಲಿ ರಾಮಾಯಣ ಅಥವಾ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ ಇದರಿಂದ ಜೀವನದಲ್ಲಿ ಎಲ್ಲವೂ ಪ್ರಾಪ್ತಿಯಾಗುತ್ತದೆ. ಗ್ರಹಗಳ ದೋಷವಿದ್ದಲ್ಲಿ ಪರಿಹಾರ ಸಿಗುತ್ತದೆ. ರಾಮನವಮಿಯ ದಿನದಂದು, ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ ಬಳಿಕ ರಾಮನಿಗೆ ಹಳದಿ ಬಣ್ಣದ ಬಟ್ಟೆ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ ಮತ್ತು ಮಧ್ಯಾಹ್ನ 12 ಗಂಟೆಗೆ, ಶಂಖ ಊದುವ ಮೂಲಕ ರಾಮನನ್ನು ಪೂಜಿಸಿ. ಇದಲ್ಲದೆ ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಇದು ಮನೆಯಲ್ಲಿ ಸಂತೋಷ, ಸಮೃದ್ಧಿ, ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು