
ರುದ್ರಾಕ್ಷಿ ಕೇವಲ ಆಭರಣವಲ್ಲ, ಬದಲಾಗಿ ಇದು ಶಿವನ ಅನುಗ್ರಹ ಮತ್ತು ಆಧ್ಯಾತ್ಮಿಕ ಪ್ರಯಾಣದ ಪವಿತ್ರ ಸಾಧನ ಎಂದು ಹೇಳಲಾಗುತ್ತದೆ. ಹೇಗೆಂದರಲ್ಲಿ ರುದ್ರಾಕ್ಷಿಯನ್ನು ಧರಿಸುವಂತಿಲ್ಲ. ಅದಕ್ಕೆ ಅದರದ್ದೇ ಆದ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ನೀವು ಅನುಸರಿಸುವ ಮೂಲಕ, ರುದ್ರಾಕ್ಷಿಯ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಬಹುದು, ನಿಮ್ಮ ಜೀವನದಲ್ಲಿ ಸಮತೋಲನ, ಶಾಂತಿ ಮತ್ತು ದೈವಿಕ ಶಕ್ತಿಯನ್ನು ತರಬಹುದು. ನೀವು ರುದ್ರಾಕ್ಷಿಯನ್ನು ಮೊದಲ ಬಾರಿಗೆ ಧರಿಸುತ್ತಿದ್ದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ.
ರುದ್ರಾಕ್ಷಿ ಧರಿಸುವ ಮೊದಲು, ಅದನ್ನು ತುಪ್ಪದಲ್ಲಿ 24 ಗಂಟೆಗಳ ಕಾಲ ನೆನೆಸಿಡಿ. ತುಪ್ಪದ ನಂತರ, ರುದ್ರಾಕ್ಷಿಯನ್ನು ಹಸುವಿನ ಹಾಲಿನಲ್ಲಿ ನೆನೆಸಿಡಿ. ಬಳಿಕ ಗಂಗಾ ಜಲದಿಂದ ತೊಳೆಯಿರಿ ಮತ್ತು ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಅದನ್ನು ಹೆಣೆಯಲು ಹತ್ತಿ ಅಥವಾ ರೇಷ್ಮೆ ದಾರವನ್ನು ಬಳಸಿ. ನೀವು ಚಿನ್ನ ಅಥವಾ ಬೆಳ್ಳಿ ತಂತಿಗಳನ್ನು ಸಹ ಬಳಸಬಹುದು. ಈಗ ರುದ್ರಾಕ್ಷಿಯನ್ನು ಕೈಯಲ್ಲಿ ಹಿಡಿದುಕೊಂಡು 108 ಬಾರಿ ಶಿವ ಮಂತ್ರಗಳನ್ನು ಪಠಿಸಿ. ಈ ನಿಯಮ ಅನುಸರಿಸುವ ಮೂಲಕ, ರುದ್ರಾಕ್ಷಿಯ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ನೀವು 108 ರುದ್ರಾಕ್ಷಿ ಮಣಿಗಳ ಜಪಮಾಲೆ ಮತ್ತು ಒಂದು ಗುರು ಮಣಿಯನ್ನು ಧರಿಸಬಹುದು. ಇದಲ್ಲದೇ ನೀವು ಅದನ್ನು 27 ಅಥವಾ 54 ಸಂಖ್ಯೆಯಲ್ಲಿ ಧರಿಸಬಹುದು.
ರುದ್ರಾಕ್ಷಿ ಧರಿಸಲು ಉತ್ತಮ ಸಮಯವೆಂದರೆ ಬೆಳಗಿನ ಜಾವ ಬ್ರಹ್ಮ ಮುಹೂರ್ತ. ಸೋಮವಾರ ಅಥವಾ ಗುರುವಾರ, ಶುಭ ದಿನದಂದು ಇದನ್ನು ಧರಿಸಿ.
ಇದನ್ನೂ ಓದಿ: ಮನೆಯಲ್ಲಿ ಗಿಳಿ ಸಾಕಿದ್ದೀರಾ ಅಥವಾ ಸಾಕುವ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವಿಷ್ಯ ತಿಳಿದಿರಲಿ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Fri, 25 July 25