AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sankashti Chaturthi: ಸಂಕಷ್ಟ ಚತುರ್ಥಿಯ ದಿನಾಂಕ, ಶುಭ ಸಮಯ, ಮಹತ್ವ

ಹಿಂದೂ ಪಂಚಾಂಗದ ಪ್ರಕಾರ, ಸಂಕಷ್ಟ ಚತುರ್ಥಿ ಉಪವಾಸವನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯ ದಿನದಂದು ಆಚರಿಸಲಾಗುತ್ತದೆ. ಅದರಲ್ಲೂ ಶ್ರಾವಣ ಮಾಸ ಸಂಕಷ್ಟ ಚತುರ್ಥಿಯು ಹೆಚು ಮಹತ್ವದ್ದಾಗಿದೆ. ಏಕೆಂದರೆ ಈ ತಿಂಗಳು ಶಿವ ದೇವರಿಗೆ ಸಮರ್ಪಿತವಾಗಿದೆ. ಮತ್ತು ಈ ಪವಿತ್ರ ಮಾಸದಲ್ಲಿ ದೇವರನ್ನು ಪೂಜಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ಬಾರಿಯ ಸಂಕಷ್ಟ ಚತುರ್ಥಿ ಯಾವಾಗ ಮತ್ತು ಪೂಜೆಯ ಶುಭ ಸಮಯ ಯಾವುದು ಎಂದು ತಿಳಿಯೋಣಾ.

Sankashti Chaturthi: ಸಂಕಷ್ಟ ಚತುರ್ಥಿಯ ದಿನಾಂಕ, ಶುಭ ಸಮಯ, ಮಹತ್ವ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jul 05, 2023 | 3:49 PM

Share

ಸಂಕಷ್ಟಿ ಚತುರ್ಥಿಯು ವಿಘ್ನನಿವಾರಕ ಗಣೇಶನಿಗೆ ಸಮರ್ಪಿತವಾದ ಮಂಗಳಕರ ಹಬ್ಬವಾಗಿದೆ. ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ಥಿಯ ದಿನದಂದು ಸಂಕಷ್ಟಿ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನವು ಸಂಪೂರ್ಣವಾಗಿ ಗಣಪತಿಗೆ ಸಮರ್ಪಿತವಾಗಿದ್ದು, ಭಕ್ತರು ಈ ದಿನದಂದು ಸಂಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಗಣಪತಿಯನ್ನು ಪೂಜಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ದುಃಖಗಳು ದೂರವಾಗುತ್ತದೆ ಹಾಗೂ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ ಎಂಬ ನಂಬಿಕೆಯಿದೆ. ನೀವು ಸಹ ಗಣೇಶನ ಕೃಪೆಗೆ ಪಾತ್ರರಾಗಲು, ಶ್ರಾವಣ ಸಂಕಷ್ಟ ಚತುರ್ಥಿಯ ಶುಭ ದಿನದಂದು ಗಣೇಶನನ್ನು ಪೂಜಿಸಿ.

ಸಂಕಷ್ಟ ಚತುರ್ಥಿ ಜುಲೈ 2023 ದಿನಾಂಕ:

ಸಂಕಷ್ಟ ಚತುರ್ಥಿ ವ್ರತವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಈ ದಿನಾಂಕವು ಜುಲೈ 6 ರ ಗುರುವಾರ ಬೆಳಗ್ಗೆ 6.30 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜುಲೈ 7 ಶುಕ್ರವಾರದಂದು ಬೆಳಗ್ಗೆ 3.12 ಕ್ಕೆ ಕೊನೆಗೊಳ್ಳುತ್ತದೆ. ಈ ದಿನಾಂಕದ ಪ್ರಕಾರ ನೋಡುವುದಾದರೆ ಜುಲೈ 6 ರಂದು ಗಜಾನನ ಸಂಕಷ್ಟ ಚತುರ್ಥಿಯ ಉಪವಾಸ ನಡೆಯಲಿದೆ. ಈ ಉಪವಾಸವು ಗಣಪತಿ ದೇವರಿಗೆ ಸಮರ್ಪಿತವಾಗಿದ್ದು, ಈ ದಿನ ವಿಧಿ ವಿಧಾನಗಳೊಂದಿಗೆ ಪೂಜೆ ಮಾಡಿದರೆ ಗಣಪತಿಯೊಂದಿಗೆ ಶಿವನ ಅನುಗ್ರಹವು ನಿಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಸಂಕಷ್ಟ ಚತುರ್ಥಿಯ ಶುಭ ಸಮಯ:

ಪಂಚಾಂಗದ ಪ್ರಕಾರ ಸಂಕಷ್ಟಿ ಚತುರ್ಥಿಯ ದಿನದಂದು ಬೆಳಗ್ಗೆ 10.41 ರಿಂದ ಮದ್ಯಾಹ್ನ 12.26 ರ ವರೆಗೆ ಪೂಜೆಗೆ ಶುಭ ಮುಹೂರ್ತವಿದೆ. ಇದಾದ ನಂತರ ಸಂಜೆ 7.23 ರಿಂದ 8.29 ವರೆಗೆ ದೇವರ ಪೂಜೆಗೆ ಶುಭ ಮುಹೂರ್ತವಿದೆ. ಜುಲೈ 6 ರಂದು ಚಂದ್ರೋದಯದ ಸಮಯ ರಾತ್ರಿ 10.12 ಕ್ಕೆ ಚಂದ್ರನಿಗೆ ನೀರನ್ನು ಅರ್ಪಿಸಿದ ನಂತರ ಉಪವಾಸವನ್ನು ಮುರಿದು ಆಹಾರವನ್ನು ಸೇವಿಸಬಹುದು.

ಇದನ್ನೂ ಓದಿ: Sankashti Chaturthi 2023: ಇಂದು ಸಂಕಷ್ಟ ಚತುರ್ಥಿ, ಪೂಜೆಯ ವಿಧಿ ವಿಧಾನಗಳು, ಶುಭ ಮುಹೂರ್ತದ ಕುರಿತು ಮಾಹಿತಿ ಇಲ್ಲಿದೆ

ಸಂಕಷ್ಟ ಚತುರ್ಥಿಯ ಮಹತ್ವ:

ಗಣೇಶನನ್ನು ವಿಘ್ನ ನಿವಾರಕ ಎಂದ ಪೂಜಿಸಲಾಗುತ್ತದೆ. ಮತ್ತು ಪುರಾಣಗಳ ಪ್ರಕಾರ, ಸಂಕಷ್ಟಿಯ ದಿನದಂದು ಶಿವ ದೇವರು ತಮ್ಮ ಮಗನಾದ ಗಣಪತಿಯನ್ನು ವಿಷ್ಣು, ಲಕ್ಷ್ಮೀ ದೇವಿ, ಪಾರ್ವತಿ ದೇವಿ ಮತ್ತು ಶಿವ ಸೇರಿದಂತೆ ಎಲ್ಲಾ ದೇವರುಗಳಿಗಿಂತ ಅತ್ಯಂತ ಶ್ರೇಷ್ಠ ಎಂದು ಘೋಷಿಸಿದರು. ಗಣಪತಿಯನನು ಸಮೃದ್ಧಿ, ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರೆಂದು ಪೂಜಿಸಲಾಗುತ್ತದೆ. ಅಲ್ಲದೇ ಎಲ್ಲಾ ಶುಭ ಸಂದರ್ಭದಲ್ಲಿನ ಪ್ರಥಮ ಪೂಜೆಯನ್ನು ವಿಘ್ನ ನಿವಾರಕನಿಗೆ ಸಮರ್ಪಿಸಲಾಗಿದೆ. ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆಯಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:44 pm, Wed, 5 July 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ