AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ ತಿಂಗಳ ಹಬ್ಬದ ಕ್ಯಾಲೆಂಡರ್; ಈ ತಿಂಗಳು ಬರುವ ಹಬ್ಬದ ಪಟ್ಟಿ ಇಲ್ಲಿದೆ

September 2021 Festival Calendar: ಈ ತಿಂಗಳು ಮಾಸಿಕ ಏಕಾದಶಿ, ಪ್ರದೋಷ ವ್ರತ, ಸಂಕಷ್ಟ ಚತುರ್ಥಿಯಿಂದ ವಿನಾಯಕ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳು ಬಂದು ಹೋಗುತ್ತವೆ. ಸೆಪ್ಟೆಂಬರ್ 2021 ರಲ್ಲಿ ಬರುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ.

ಸೆಪ್ಟೆಂಬರ್ ತಿಂಗಳ ಹಬ್ಬದ ಕ್ಯಾಲೆಂಡರ್; ಈ ತಿಂಗಳು ಬರುವ ಹಬ್ಬದ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Sep 02, 2021 | 7:48 AM

Share

ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ವರ್ಷದುದ್ದಕ್ಕೂ ಅಸಂಖ್ಯಾತ ಹಬ್ಬಗಳನ್ನು ಹೊಂದಿದೆ. ನಾವು ಇಂದು ನಿಮಗೆ ಭಾದ್ರಪದ ಮಾಸ ಅಂದ್ರೆ ಸೆಪ್ಟೆಂಬರ್ನಲ್ಲಿ ಬರುವ ಹಬ್ಬದ ಪಟ್ಟಿಯನ್ನು ನೀಡುತ್ತಿದ್ದೇವೆ. ಈ ತಿಂಗಳು ಮಾಸಿಕ ಏಕಾದಶಿ, ಪ್ರದೋಷ ವ್ರತ, ಸಂಕಷ್ಟ ಚತುರ್ಥಿಯಿಂದ ವಿನಾಯಕ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳು ಬಂದು ಹೋಗುತ್ತವೆ. ಸೆಪ್ಟೆಂಬರ್ 2021 ರಲ್ಲಿ ಬರುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ.

ಅಜಾ ಏಕಾದಶಿ ಮತ್ತು ಪಾರ್ಶ್ವ ಏಕಾದಶಿ – ಸೆಪ್ಟೆಂಬರ್ 3 ಮತ್ತು ಸೆಪ್ಟೆಂಬರ್ 17 ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕವನ್ನು ಅಜಾ ಏಕಾದಶಿ ಎಂದು ಕರೆಯುತ್ತಾರೆ, ಈ ಬಾರಿ ಈ ದಿನ ಶುಭ ಶುಕ್ರವಾರದಂದು ಬಂದಿದೆ. ಅಂದರೆ ಸೆಪ್ಟೆಂಬರ್ 03ರಂದು ಬಿದ್ದಿದೆ. ಈ ದಿನ ಭಗವಾನ್ ವಿಷ್ಣು ಭಕ್ತರು ದಿನವಿಡೀ ಉಪವಾಸ ಆಚರಿಸುತ್ತಾರೆ, ಪೂಜೆ ಮಾಡುತ್ತಾರೆ, ಕೀರ್ತನೆಗಳನ್ನು ಹಾಡುತ್ತಾರೆ ಮತ್ತು ಸ್ತೋತ್ರಗಳನ್ನು ಪಠಿಸುತ್ತಾರೆ.

ಪ್ರದೋಷ ವ್ರತ – ಸೆಪ್ಟೆಂಬರ್ 4 ಮತ್ತು ಸೆಪ್ಟೆಂಬರ್ 18 ಪ್ರದೋಷ ವ್ರತವನ್ನು ಶಿವನಿಗೆ ಸಮರ್ಪಿಸಲಾಗಿದೆ. ಆ ದಿನದಂದು ಜನರು ಮಹಾದೇವನಿಗೆ ಪೂಜೆ ಸಲ್ಲಿಸಲು ವ್ರತವನ್ನು ಮಾಡುತ್ತಾರೆ. ಆ ದಿನ ಶಿವನ ಆರಾಧನೆ ಮಾಡುವುದರಿಂದ ಅನೇಕ ಫಲಗಳು ಸಿಗುತ್ತವೆ.

ಗೌರಿ ಹಬ್ಬ – ಸೆಪ್ಟೆಂಬರ್ 9 ಗೌರಿ ಹಬ್ಬವನ್ನು ಸೆಪ್ಟೆಂಬರ್ 9ರಂದು ಆಚರಿಸಲಾಗುತ್ತದೆ. ಮಹಿಳೆಯರು ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಅವರು ಈ ದಿನದಂದು ವ್ರತವನ್ನು ಆಚರಿಸುತ್ತಾರೆ ಮತ್ತು ತಮ್ಮ ಪತಿಯ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ಗಣೇಶ ಅಥವಾ ವಿನಾಯಕ ಚತುರ್ಥಿ – ಸೆಪ್ಟೆಂಬರ್ 10 ಸೆಪ್ಟೆಂಬರ್ 10ರಂದು ಗಣೇಶನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈ ಹಬ್ಬಗಳು ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಮತ್ತು ಇದು ಅನಂತ ಚತುರ್ದಶಿಯಂದು ದೇವರ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ.

ವಿಶ್ವಕರ್ಮ ಜಯಂತಿ – ಸೆಪ್ಟೆಂಬರ್ 17 ಈ ದಿನ, ಜನರು ಶಿಲ್ಪಿಗಳ ದೇವರು ವಿಶ್ವಕರ್ಮ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ವಿಶ್ವಕರ್ಮನು ಶಿಲ್ಪಕಲೆಗಳ ದೇವರು. ಇವರು ಇಡೀ ವಿಶ್ವವನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗಿದ್ದು ಇವರನ್ನು ದೇವ ಶಿಲ್ಪಿ ಎಂದೂ ಸಹ ಕರೆಯುತ್ತಾರೆ.

ಅನಂತ ಚತುರ್ದಶಿ – ಸೆಪ್ಟೆಂಬರ್ 19 ಅನಂತ ಚತುರ್ದಶಿಯು ಭಗವಾನ್ ವಿಷ್ಣುವಿನ ಅನಂತ (ಶಾಶ್ವತ) ರೂಪಕ್ಕೆ ಮೀಸಲಾಗಿರುವ ದಿನವಾಗಿದೆ. ಈ ದಿನ, ಭಕ್ತರು ಒಂದು ದಿನದ ಉಪವಾಸವನ್ನು ಮಾಡುತ್ತಾರೆ ಮತ್ತು ಭಗವಾನ್ ವಿಷ್ಣುವನ್ನು ಪ್ರಾರ್ಥಿಸುತ್ತಾರೆ, ಈ ಆದಿ ಶೇಷ ಎಂಬ ಐದು ಹೆಡೆಗಳ ಸರ್ಪದ ಸುರುಳಿಯಾಕಾರದ ದೇಹದ ಮೇಲೆ ವಿಶ್ರಾಂತಿ ಪಡೆಯುವ ವಿಷ್ಣುವಿನ ಈ ರೂಪವನ್ನು ಅನಂತ ಪದ್ಮನಾಭಸ್ವಾಮಿ ಎಂದೂ ಕರೆಯುತ್ತಾರೆ.

ಈ ದಿನ, ಗಣೇಶ ವಿಸರ್ಜನೆಯನ್ನೂ ನಡೆಸಲಾಗುತ್ತದೆ. ಇದು ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುವ ಮತ್ತು ಆತನಿಗೆ ಭವ್ಯವಾದ ವಿದಾಯದ ಆಚರಣೆಯಾಗಿದೆ.

ಇದನ್ನೂ ಓದಿ:ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ? 

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ