AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamakhya Temple: ಅಸ್ಸಾಂನ ಗುವಾಹಟಿಯಲ್ಲಿದ್ದಾಳೆ ಋತುಸ್ರಾವದ ಮಹಿಳೆಯನ್ನು ಪ್ರತಿನಿಧಿಸುವ ದೇವತೆ

ಪ್ರತಿ ಮಹಿಳೆಯೂ ಹೊಂದಿರುವ 'ಶಕ್ತಿ'ಯನ್ನು ಪ್ರತಿನಿಧಿಸುವ ರಕ್ತಸ್ರಾವದ ದೇವತೆ, ದೇವಸ್ಥಾನವೇ ಗುವಾಹಟಿ ಸಮೀಪವಿರುವ ನೀಲಾಚಲ ಬೆಟ್ಟದ ಮೇಲೆ ನಿಸರ್ಗದ ಮಡಿಲಲ್ಲಿ ನೆಲೆಸಿರುವ ಕಾಮಾಕ್ಯ ದೇವಿ.

Kamakhya Temple: ಅಸ್ಸಾಂನ ಗುವಾಹಟಿಯಲ್ಲಿದ್ದಾಳೆ ಋತುಸ್ರಾವದ ಮಹಿಳೆಯನ್ನು ಪ್ರತಿನಿಧಿಸುವ ದೇವತೆ
ಕಾಮಾಕ್ಯ ದೇವತೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Mar 27, 2023 | 7:30 AM

Share

ಋತುಸ್ರಾವ, ಮುಟ್ಟು, ಋತುಕಾಲ, ರಜಸ್ಸು, ಋತುಚಕ್ರ, ಮೆನ್ಸಸ್ ಹೀಗೆ ನಾನಾ ಹೆಸರುಗಳಿಂದ ಚಾಲ್ತಿಯಲ್ಲಿರುವ, ಹೆಸರಿಗೆ ತಕ್ಕಂತೆ ನಾನಾ ರೀತಿಯಾಗಿ ಹೆಣ್ಣನ್ನು ಹಿಪ್ಪಿ ಹೀರಿಬಿಡುವ ಸ್ಥಿತಿ ಅದು. ಮಹಿಳೆಯರನ್ನು ದೈಹಿಕವಾಗಿ, ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ, ಮಾಸಿಕವಾಗಿ ದಣಿಸುವ ಸ್ಥಿತಿ ಅದು. ಹೇಳಿಕೊಳ್ಳಲಾಗದ, ಅನುಭವಿಸಲು ಚಿತ್ರಹಿಂಸೆ ಪಡುವಂತಹ ಅನಿವಾರ್ಯ ಸ್ಥಿತಿ ಅದು. ಆದರೆ ಮೂರ್ನಾಲ್ಕು ದಿನಗಳ ಆ ತೊಳಲಾಟದ ನಂತರ, ನಿರಾಳಗೊಂಡು ತನ್ನ ನಿಜವಾದ ಹೆಣ್ತದ ಬಗ್ಗೆ ಹೆಮ್ಮೆ ಪಡುವ ಅನುಭವವೂ ಅವಳದಾಗುತ್ತದೆ. ಇದು ಪ್ರತಿ ಮಹಿಳೆಯೂ ಹೊಂದಿರುವ ಶಕ್ತಿಯ ಸಂಕೇತವೂ ಹೌದು. ಎಲ್ಲರೂ ಗೌರವಿಸಬೇಕಾದ ಈ ಸ್ಥಿತಿಯು ಅದೇಕೋ ಸಮಾಜದಲ್ಲಿ ಆಗಾಗ್ಗೆ ಅವಹೇಳನಕ್ಕೆ ತುತ್ತಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮಹಿಳೆಯಲ್ಲಿನ ಈ ಅಂತಃಶಕ್ತಿಯನ್ನು ಪ್ರತಿನಿಧಿಸುವಂತೆ, ಅದಕ್ಕೊಂದು ಪೌರಾಣಿಕ ಚೌಕಟ್ಟನ್ನು ಒದಗಿಸುವ, ಋತುಸ್ರಾವದ ಮಹಿಳೆಯನ್ನು ಪ್ರತಿನಿಧಿಸುವ ದೇವತೆ ಇದ್ದಾಳೆ! ಆಕೆಗೊಂದು ಸ್ಥಳವೂ ಇದೆ! ಪೂಜನೀಯ ಸ್ಥಾನವನ್ನೂ ನೀಡಲಾಗಿದೆ! ಇದು ನಿಜಕ್ಕೂ ಭಾರತದ ಹೆಮ್ಮೆಯೇ ಸರಿ. ಏಕೆಂದ್ರೆ ಋತುಚಕ್ರದಂತಹ ತೊಳಲಾಟದ ಸ್ಥಿತಿಯನ್ನು ಅನುಭವಿಸುವ ಮಹಿಳೆಗೆ ಒಂದು ಸಾರ್ವಜನಿಕ ಚೌಕಟ್ಟು, ಗೌರವವನ್ನು ಈ ದೇವತೆಯ ಮೂಲಕ ಕಲ್ಪಿಸಲಾಗಿದೆ. ಅಂದಹಾಗೆ ಪ್ರತಿಯೊಬ್ಬ ಮಹಿಳೆಯೂ ಈ ದೇವತೆ/ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳುವುದು ಉಚಿತ. ಇನ್ನು ಆ ಸಾರ್ವಜನಿಕ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಿ, ತನ್ನ ಸ್ತ್ರೀತನದ ಬಗ್ಗೆ ಹೆಮ್ಮೆ ಪಡಬೇಕಾದ ಸ್ಥಳವದು. ಹೌದು ಹಿಂದೂ ದೇವ-ದೇವತೆಗಳ ನೆಲೆಬೀಡಾದ ದೂರದ ಅಸ್ಸಾಂನಲ್ಲಿ ಇಂತಹ ಒಂದು ಪುರಾತನ ಪೌರಾಣಿಕ ದೇವಾಲಯವಿದೆ. ಅದರ ಬಗ್ಗೆ ಸವಿಸ್ತಾರ ಮಾಹಿತಿ ಇಲ್ಲಿದೆ.

ಅದು ಕಾಮಾಕ್ಯ ದೇವತೆಯ ದಂತಕಥೆ. ಪ್ರತಿ ಮಹಿಳೆಯೂ ಹೊಂದಿರುವ ‘ಶಕ್ತಿ’ಯನ್ನು ಪ್ರತಿನಿಧಿಸುವ ರಕ್ತಸ್ರಾವದ ದೇವತೆ, ದೇವಸ್ಥಾನ ಅಲ್ಲಿದೆ. ಭಾರತದ ಬೇರೆಡೆಗಳಲ್ಲಿ ಮುಟ್ಟಿನ ಬಗ್ಗೆ ಅವಮಾನಕರ ಭಾವ ಇರುವಾಗ ಅದಕ್ಕೆ ವ್ಯತಿರಿಕ್ತವಾಗಿ ಈ ಕಾಮಾಕ್ಯ ದೇವಾಲಯದಲ್ಲಿ ಮಹಿಳೆ ಗರ್ಭ ಧರಿಸುವ ಸಾಮರ್ಥ್ಯವನ್ನು ಸಾಬೀತುಪಡಿಸುವ, ಪೂಜನೀಯ ಸ್ಥಳ ಮಹಾತ್ಮೆ ಇಲ್ಲಿಯದು. ಮಹಿಳೆ ಅತ್ಯಂತ ನೈಸರ್ಗಿಕವಾಗಿ ಆಚರಿಸುವ ಜೈವಿಕ ಪ್ರಕ್ರಿಯೆಯನ್ನು ಬಿಂಬಿಸುವ ದೇವಾಲಯ ಇದಾಗಿದೆ. ಕಾಮಾಕ್ಯ ದೇವಾಲಯವು ಅಸ್ಸಾಂನಲ್ಲಿರುವ ಕೇವಲ ಪ್ರಸಿದ್ಧ ಯಾತ್ರಾ ಸ್ಥಳವಲ್ಲ, ಅದು ಇಡೀ ದೇಶದಲ್ಲೇ ಒಂದು ವಿಶಿಷ್ಟವಾದ ದೇವಾಲಯವಾಗಿದ್ದು ಸಮರ್ಥ ಮಹಿಳೆಯನ್ನು ಬಿಂಬಿಸುತ್ತದೆ.

ಇದನ್ನೂ ಓದಿ: Valentines Day: ನಿಜವಾದ ಪ್ರೀತಿಯಂದ್ರೆ ಜನ್ಮ ಜನ್ಮಾಂತರಗಳ ಪ್ರೀತಿ, ಶಿವನನ್ನು ಪಡೆಯಲು ಕಠಿಣಾತಿ ಕಠಿಣ ತಪಸ್ಸುಗಳನ್ನು ಮಾಡಿದ್ದಳು ಪಾರ್ವತಿ

ಆಷಾಢ ಮಾಸದಲ್ಲಿ ಬ್ರಹ್ಮಪುತ್ರ ನದಿ ಕೆಂಪು ಬಣ್ಣಕ್ಕೆ ತಿರುಗುತ್ತೆ

ಗುವಾಹಟಿ ಸಮೀಪವಿರುವ ನೀಲಾಚಲ ಬೆಟ್ಟದ ಮೇಲೆ ನಿಸರ್ಗದ ಮಡಿಲಲ್ಲಿ ನೆಲೆಸಿರುವ ಕಾಮಾಕ್ಯ ದೇವಿಯೇ ಈ ರಕ್ತಸ್ರಾವ ದೇವತೆ (Bleeding Goddess). ದೇವಾಲಯದ ಗರ್ಭಗುಡಿಯಲ್ಲಿ ಹಿಂದೂ ಶಕ್ತಿ ದೇವತೆಯ ಗರ್ಭ ಮತ್ತು ಯೋನಿ ವಿಗ್ರಹ ಇದೆ. ಸತಿ ಅಥವಾ ದುರ್ಗಾ ದೇವಿಯ 108 ಶಕ್ತಿ ಪೀಠಗಳಲ್ಲಿ ಇದೂ ಒಂದಾಗಿದೆ. ಸ್ಥಳ ಪುರಾಣದ ಪ್ರಕಾರ ಪ್ರತಿ ವರ್ಷ ಆಷಾಢ ಮಾಸದಲ್ಲಿ (ಜೂನ್-ಜುಲೈ) ಕಾಮಾಕ್ಯ ಬಳಿ ಹರಿಯುವ ಬ್ರಹ್ಮಪುತ್ರ ನದಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಅವಧಿಯಲ್ಲಿ ದೇವಿಯು ‘ಋತುಸ್ರಾವ’ ಆಗುತ್ತಾಳೆ ಎಂದು ನಂಬಲಾಗಿದೆ. ಈ ದೇವಾಲಯದ ಮೂಲದ ಕಥೆಯೂ ಸಾಕಷ್ಟು ಆಸಕ್ತಿದಾಯಕವಾಗಿದೆ. ಇದು ಹಿಂದೂ ದೇವತೆಗಳಾದ ಶಿವ ಮತ್ತು ಸತಿಯ ಸುತ್ತ ಸುತ್ತುತ್ತದೆ. ಕಾಮಾಕ್ಯ ಎಂಬುದು ಹಿಂದೂಗಳ ಕಾಮ ದೇವನ ಹೆಸರು.

ಪುರಾಣ ಕಥೆಯು ಶಿವ ಮತ್ತು ಸತಿಯ ಸುತ್ತ ಸುತ್ತುತ್ತದೆ. ಸತಿಯ ತಂದೆಯು ದೇವರನ್ನು ಸಮಾಧಾನಪಡಿಸಲು ಮಾಡುತ್ತಿದ್ದ ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ತನ್ನ ಪುತ್ರಿ ಮತ್ತು ಅಳಿಯ ಇಬ್ಬರನ್ನೂ ಉದ್ದೇಶಪೂರ್ವಕವಾಗಿ ಆಹ್ವಾನಿಸಲಿಲ್ಲ. ಆದರೆ ಸತಿಯು ಯಜ್ಞ ಸ್ಥಳಕ್ಕೆ ತೆರಳಲು ಮುಂದಾದಳು. ಆಹ್ವಾನ ಇಲ್ಲದಿದ್ದರೂ ಯಜ್ಞಕ್ಕೆ ಬಂದ ಪುತ್ರಿಯು ತಂದೆಯಿಂದ ಅವಮಾನಿಸಲ್ಪಟ್ಟಳು. ಅಷ್ಟೇ ಅಲ್ಲ; ಅಳಿಯ ಶಿವನ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದನು. ಈ ಅವಮಾನವನ್ನು ಸಹಿಸಲಾಗದೆ, ಸತಿಯು ಯಜ್ಞ ಕುಂಡಕ್ಕೆ ಹಾರಿ ಬೆಂಕಿಗೆ ಆಹುತಿಯಾದಳು.

ವಿಷಯ ಶಿವನಿಗೆ ತಿಳಿದಾಗ, ಅವನ ಕೋಪಕ್ಕೆ ಮಿತಿಯಿಲ್ಲದೇ ಹೋಯಿತು. ತನ್ನ ಹೆಂಡತಿಯ ಸುಟ್ಟ ಶವವನ್ನು ಹೊತ್ತುಕೊಂಡು ‘ತಾಂಡವ ನೃತ್ಯದೊಂದಿಗೆ (ವಿನಾಶದ ನೃತ್ಯ) ವಿಜೃಂಭಿಸಿದನು. ಉಳಿದ ಎಲ್ಲಾ ದೇವರುಗಳು ಶಿವನ ಕೋಪ ಕಂಡು ಭಯಭೀತರಾಗಿದ್ದರು. ಆಗ ವಿಷ್ಣುವು ತನ್ನ ಚಕ್ರವನ್ನು ಬಿಟ್ಟು ನೊಂದ ದೇವನನ್ನು ಶಾಂತಗೊಳಿಸುವ ಸಲುವಾಗಿ ಸತಿಯ ದೇಹವನ್ನು ತುಂಡುತುಂಡಾಗಿಸಿದನು. ಇಂದು ಶಕ್ತಿ ಪೀಠಗಳು ಎಂದು ಕರೆಯಲ್ಪಡುವ ದೇಶಾದ್ಯಂತ 108 ಸ್ಥಳಗಳಲ್ಲಿ ಸತಿಯ ದೇಹದ ನೂರೆಂಟು ಭಾಗಗಳು ಬಿದ್ದಿವೆ ಎಂದು ನಂಬಲಾಗಿದೆ. ಅವುಗಳಲ್ಲಿ ಆಕೆಯ ಗರ್ಭ ಮತ್ತು ಯೋನಿ ಬಿದ್ದ ಸ್ಥಳವೇ ಕಾಮಾಕ್ಯ ದೇವಾಲಯವಾಗಿದೆ. ಹಾಗಾಗಿಯೇ ಋತುಸ್ರಾವದ ಸತಿ ಅಥವಾ ಶಕ್ತಿಯನ್ನು ಇಲ್ಲಿ ವಿಶೇಷವಾಗಿ ಋತುಮತಿ ಮಹಿಳೆಯ ಧ್ಯೋತಕವಾಗಿ ಪೂಜಿಸಲ್ಪಟ್ಟು, ಗೌರವಿಸಲಾಗುತ್ತದೆ.

ಮತ್ತಷ್ಟು ಅಧ್ಯಾತ್ಮಿಕ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..