AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tanah Lot Temple Bali: ಬಾಲಿಗೆ ಹೋದರೆ ನೀವು ಭೇಟಿ ನೀಡಲೇಬೇಕಾದ ಅದ್ಭುತ ದೇವಾಲಯವಿದು

ಬಾಲಿಯಲ್ಲಿರುವ ತನಾಹ್ ಲಾಟ್ ದೇವಸ್ಥಾನವು ಸಾಗರದ ನಡುವೆ ಒಂದು ಬಂಡೆಯ ಮೇಲೆ ನಿರ್ಮಿತವಾದ ಅದ್ಭುತವಾದ ದೇವಾಲಯ. ಇದು ಸಮುದ್ರದ ರಕ್ಷಕ ದೇವತೆಗೆ ಸಮರ್ಪಿತವಾಗಿದ್ದು, ಅಲೆಗಳು ದೇವಾಲಯವನ್ನು ಆವರಿಸುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ದೇವಾಲಯದ ಕೆಳಗೆ ಸಿಹಿನೀರಿನ ಬುಗ್ಗೆಯೂ ಇದೆ, ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪ್ರಾಚೀನ ಮತ್ತು ಅಮೂಲ್ಯವಾದ ಸಂಪತ್ತನ್ನು ಕಾಪಾಡುವ ಸರ್ಪಗಳಿವೆ ಎಂದು ನಂಬಲಾಗಿದೆ. ಇದು ಬಾಲಿಯ ಏಳು ಸಮುದ್ರ ದೇವಾಲಯಗಳಲ್ಲಿ ಒಂದಾಗಿದೆ.

Tanah Lot Temple Bali: ಬಾಲಿಗೆ ಹೋದರೆ ನೀವು ಭೇಟಿ ನೀಡಲೇಬೇಕಾದ ಅದ್ಭುತ  ದೇವಾಲಯವಿದು
Tanah Lot Temple Bali
ಅಕ್ಷತಾ ವರ್ಕಾಡಿ
|

Updated on: May 11, 2025 | 10:02 AM

Share

ಬಾಲಿಯಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ತನಾಹ್ ಲಾಟ್ ದೇವಾಲಯವೂ ಒಂದು. ಹಿಂದೂ ಮಹಾಸಾಗರದ ಭವ್ಯವಾದ ಬಂಡೆಯ ಮೇಲೆ ನೆಲೆಗೊಂಡಿರುವ ಈ ದೇವಾಲಯವು ತನ್ನ ಅದ್ಭುತ ವಾಸ್ತುಶಿಲ್ಪದಿಂದಲೇ ಖ್ಯಾತಿಯನ್ನು ಪಡೆದುಕೊಂಡಿದೆ. ಸ್ಥಳೀಯ ಹಿಂದೂಗಳು ಈ ದೇವಾಲಯವನ್ನು ಸಮುದ್ರದ ರಕ್ಷಕ ದೇವತೆಗೆ ಸಮರ್ಪಿಸಲಾಗಿದೆ ಎಂದು ನಂಬುತ್ತಾರೆ.

ಈ ಹಿಂದೂ ದೇವಾಲಯವು ಸಮುದ್ರ ಮತ್ತು ಭೂಮಿಯ ಸಂಗಮದಿಂದ ರೂಪುಗೊಂಡಿದೆ ಎಂದು ನಂಬಲಾಗಿದೆ. ಈ ದೇವಾಲಯವು ಸಾಗರದಿಂದ ಆವೃತವಾಗಿದ್ದು, ಇದರಿಂದಾಗಿ ದೊಡ್ಡ ಅಲೆಗಳು ಏಳುತ್ತವೆ. ಒಮ್ಮೆ ಅಲೆ ಬಂದರೆ, ದೇವಾಲಯದ ಎಲ್ಲಾ ಮೆಟ್ಟಿಲುಗಳು ನೀರಿನಲ್ಲಿ ಮುಳುಗಿಹೋಗುತ್ತವೆ. ಅಲೆ ಹಾದುಹೋದ ನಂತರ, ನೀವು ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳನ್ನು ನೋಡುತ್ತೀರಿ. ಆ ಸಮಯದಲ್ಲಿ ನೀವು ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ. ಇದು ಕರಾವಳಿಯಿಂದ ಕೇವಲ 20 ಮೀಟರ್ (65.6 ಅಡಿ) ದೂರದಲ್ಲಿರುವ 3 ಎಕರೆ ಬಂಡೆಯ ರಚನೆಯ ಮೇಲೆ ನಿರ್ಮಿಸಲ್ಪಟ್ಟಿದೆ.

ತನಾಹ್ ಲಾಟ್ ದೇವಾಲಯದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಅದು ಉಪ್ಪು ನೀರಿನಿಂದ ಆವೃತವಾಗಿದೆ. ಆದಾಗ್ಯೂ, ದೇವಾಲಯದ ಕೆಳಗೆ ಒಂದು ಗುಹೆ ಮತ್ತು ಸಿಹಿ ನೀರಿನ ಬುಗ್ಗೆ ಇದೆ. ಈ ನೀರು ಆತ್ಮಗಳನ್ನು ಶುದ್ಧೀಕರಿಸುವ ಮತ್ತು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ. ಈ ಪವಿತ್ರ ಬುಗ್ಗೆಯನ್ನು ‘ಬೇಜಿ ಕಲೇರ್’ ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಮುಖ್ಯ ದೇವಾಲಯವನ್ನು ಪ್ರವೇಶಿಸುವ ಮೊದಲು ಈ ನೀರಿನಿಂದ ಮುಖವನ್ನು ತೊಳೆದು ಒಳಗೆ ಹೋಗುತ್ತಾರೆ.

ಇದನ್ನೂ ಓದಿ: ತಿರುಪತಿಯ ಅರ್ಚಕರಿಗೆ ಸಿಗುವ ಸಂಬಳ ಎಷ್ಟು? ತಿಳಿದರೆ ಶಾಕ್ ಆಗುವುದಂತೂ ಖಂಡಿತಾ!

ಈ ಇಡೀ ದೇವಾಲಯವು ಒಂದೇ ಬಂಡೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಒಂದು ದೊಡ್ಡ ಬಂಡೆಯನ್ನು ದೇವಾಲಯವಾಗಿ ಕೆತ್ತಲಾಗಿದೆ. ತನಾಹ್ ಲಾಟ್ ದೇವಾಲಯದ ಸುತ್ತಲೂ ಎಂಟು ದೇವಾಲಯಗಳಿವೆ. ಈ ದೇವಾಲಯವು ಪ್ರಾಚೀನ ಮತ್ತು ಅಮೂಲ್ಯವಾದ ಸಂಪತ್ತನ್ನು ಹೊಂದಿದೆ ಮತ್ತು ಆ ನಿಧಿಯನ್ನು ಕಾಯಲು ಸರ್ಪಗಾವಲಿದೆ ನಂಬಲಾಗಿದೆ. ಇಲ್ಲಿನ ವಸ್ತುಗಳನ್ನು ಯಾರಾದರೂ ಕದಿಯಲು ಪ್ರಯತ್ನಿಸಿದರೆ, ಕಾಣದ ವಿಷಪೂರಿತ ಹಾವುಗಳು ಕಚ್ಚಿ ಕೊಲ್ಲುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಇದು ಬಾಲಿಯಲ್ಲಿರುವ ಸಮುದ್ರ ದೇವರುಗಳಿಗೆ ಮೀಸಲಾಗಿರುವ ಏಳು ಸಮುದ್ರ ದೇವಾಲಯಗಳಲ್ಲಿ ಒಂದಾಗಿದೆ. ಇವುಗಳನ್ನು ಬಾಲಿ ದ್ವೀಪದ ಕರಾವಳಿಯ ಸುತ್ತಲೂ ನಿರ್ಮಿಸಲಾಗಿದೆ. ಇದು ಬಾಲಿಯನ್ನು ದುಷ್ಟ ಸಮುದ್ರ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.

ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್