AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯ ಮುಖ್ಯದ್ವಾರಕ್ಕೆ ಸ್ಪಟಿಕವನ್ನು ಕಟ್ಟುವುದರ ಹಿಂದಿನ ಮಹತ್ವ; ಜ್ಯೋತಿಷ್ಯ ಸಲಹೆ ಇಲ್ಲಿದೆ

ಡಾ. ಬಸವರಾಜ್ ಗುರೂಜಿ, ಮನೆಗೆ ಸ್ಪಟಿಕ ಕಟ್ಟುವುದರ ಹಿಂದಿನ ಮಹತ್ವವನ್ನು ವಿವರಿಸಿದ್ದಾರೆ. ಮುಖ್ಯದ್ವಾರದಲ್ಲಿ ಸ್ಪಟಿಕವನ್ನು ಕಟ್ಟುವುದು ನಕಾರಾತ್ಮಕ ಶಕ್ತಿಗಳು ಮತ್ತು ದೃಷ್ಟಿದೋಷವನ್ನು ನಿವಾರಿಸುತ್ತದೆ. ಇದು ಕುಟುಂಬದ ಸದಸ್ಯರಿಗೆ, ವಿಶೇಷವಾಗಿ ಮಕ್ಕಳು ಮತ್ತು ಹಿರಿಯರಿಗೆ ಶುಭವನ್ನು ತರುತ್ತದೆ. ಸರಿಯಾದ ವಿಧಾನದಲ್ಲಿ ಸ್ಪಟಿಕವನ್ನು ಬಳಸಿ ಮನೆಯನ್ನು ರಕ್ಷಿಸಿಕೊಳ್ಳಿ.

Daily Devotional: ಮನೆಯ ಮುಖ್ಯದ್ವಾರಕ್ಕೆ ಸ್ಪಟಿಕವನ್ನು ಕಟ್ಟುವುದರ ಹಿಂದಿನ ಮಹತ್ವ; ಜ್ಯೋತಿಷ್ಯ ಸಲಹೆ ಇಲ್ಲಿದೆ
ಮನೆಯ ಮುಖ್ಯದ್ವಾರದಲ್ಲಿ ಸ್ಪಟಿಕ
ಅಕ್ಷತಾ ವರ್ಕಾಡಿ
|

Updated on: Nov 16, 2025 | 11:20 AM

Share

ಮನೆಯ ಮುಖ್ಯದ್ವಾರದಲ್ಲಿ ಸ್ಪಟಿಕವನ್ನು ಕಟ್ಟುವುದರ ಹಿಂದಿನ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಣೆ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮನೆಯೊಳಗೆ ನಕಾರಾತ್ಮಕ ಶಕ್ತಿಗಳು ಅಥವಾ ದೃಷ್ಟಿದೋಷ ಪ್ರವೇಶಿಸುವುದನ್ನು ತಡೆಯಲು ಈ ಪದ್ಧತಿ ಸಹಾಯಕವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರವೇಶದ್ವಾರವು ಕೆಟ್ಟ ಲಹರಿಗಳು ಒಳಬರುವ ಪ್ರಮುಖ ಮಾರ್ಗವಾಗಿದೆ. ಇದನ್ನು ತಪ್ಪಿಸಲು ಸ್ಪಟಿಕವು ಒಂದು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ.

ಸ್ಪಟಿಕವು ಶ್ವೇತ ವರ್ಣದ್ದಾಗಿದ್ದು, ಯಾವುದೇ ಗಂಧಿಗೆ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಇದನ್ನು ಮನೆಗೆ ತಂದ ನಂತರ ಶುದ್ಧ ನೀರಿನಿಂದ ತೊಳೆದು, ಹಾಲಿನ ಪ್ರೋಕ್ಷಣೆ ಮಾಡಬೇಕು. ನಂತರ ಕಪ್ಪು ದಾರದಲ್ಲಿ ಅಥವಾ ಕಪ್ಪು ಬಟ್ಟೆಯಲ್ಲಿ ಸುತ್ತಿ ಕಟ್ಟಬೇಕು. ಇದನ್ನು ಕಟ್ಟಲು ಸೂಕ್ತವಾದ ದಿನಗಳು ಸೋಮವಾರ, ಬುಧವಾರ ಅಥವಾ ಶುಕ್ರವಾರ. ಈ ದಿನಗಳಲ್ಲಿ ಸಂಧ್ಯಾಕಾಲದಲ್ಲಿ ಇದನ್ನು ಕಟ್ಟಬೇಕು. ಸ್ಪಟಿಕವನ್ನು ಬಾಗಿಲಿನ ಮಧ್ಯಭಾಗದಲ್ಲಿ ಅಥವಾ ಮನೆಯಿಂದ ಹೊರಹೋಗುವಾಗ ಬಲಭಾಗದಲ್ಲಿ (ಮನೆಗೆ ಪ್ರವೇಶಿಸುವಾಗ ಎಡಭಾಗದಲ್ಲಿ) ನೇತುಹಾಕಬೇಕು.

ವಿಡಿಯೋ ಇಲ್ಲಿದೆ ನೋಡಿ:

ಒಂದು ಸಣ್ಣ ಆಲೂಗಡ್ಡೆಯ ಗಾತ್ರದ ಸ್ಪಟಿಕವು ಮನೆಗೆ ರಕ್ಷಣೆ ನೀಡಲು ಸಾಕಾಗುತ್ತದೆ. ಇದನ್ನು ಕಟ್ಟುವುದರಿಂದ ಮನೆಯಲ್ಲಿ ವಾಸಿಸುವ ಮಕ್ಕಳು, ಹಿರಿಯರು ಮತ್ತು ಸ್ವತಃ ಮನೆಗೂ ಶುಭವಾಗುತ್ತದೆ. ದುಷ್ಟ ಗ್ರಹಗಳ ಪ್ರವೇಶವಾಗುವುದಿಲ್ಲ ಎಂದು ಗುರೂಜಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ಈ ಸ್ಪಟಿಕವನ್ನು ಮೂರು ಅಮಾವಾಸ್ಯೆಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಬದಲಾಯಿಸುವುದು ಉತ್ತಮ. ವರ್ಷದಲ್ಲಿ ನಾಲ್ಕು ಬಾರಿ ಇದನ್ನು ಬದಲಾಯಿಸಿದರೆ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ. ಬದಲಾಯಿಸಿದ ಹಳೆಯ ಸ್ಪಟಿಕವನ್ನು ಹರಿಯುವ ನೀರಿಗೆ ಬಿಡಬಹುದು ಅಥವಾ ಯಾರು ತುಳಿಯದ ಜಾಗದಲ್ಲಿ ಹಾಕಬಹುದು. ಇದರಿಂದ ಮನೆಯಲ್ಲಿದ್ದ ಕೆಟ್ಟ ಶಕ್ತಿಗಳು ಸಹ ಹೊರಟು ಹೋಗುತ್ತವೆ. ಕೇವಲ ಮನೆಯ ರಕ್ಷಣೆಗಷ್ಟೇ ಅಲ್ಲದೆ, ವೈಯಕ್ತಿಕ ರಕ್ಷಣೆಗೂ ಸ್ಪಟಿಕವನ್ನು ಬಳಸಬಹುದು. ಸಣ್ಣ ಗಾತ್ರದ ಸ್ಪಟಿಕವನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ವ್ಯಕ್ತಿಗೂ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ