Daily Devotional: ಗಣಪನನ್ನು ಪೂಜಿಸುವಾಗ ತುಳಸಿ ಬಳಸುವುದಿಲ್ಲ ಯಾಕೆ?
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಏಕೆ ಬಳಸುವಂತಿಲ್ಲ ಎಂಬುದನ್ನು ವಿವರಿಸಿದ್ದಾರೆ. ತುಳಸಿ ದೇವಿ ಮತ್ತು ಗಣಪತಿಯ ನಡುವಿನ ಪುರಾಣ ಕಥೆಯನ್ನು ಉಲ್ಲೇಖಿಸಿ ಈ ನಿಷೇಧದ ಹಿನ್ನೆಲೆಯನ್ನು ಗುರೂಜಿ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಗಣೇಶನ ಪೂಜೆ ಅತ್ಯಂತ ಮಹತ್ವ ಪಡೆದಿದ್ದು, ಸರ್ವದೇವನಮಸ್ಕಾರದಲ್ಲಿ ಗಣೇಶನನ್ನು ಪ್ರಥಮ ಪೂಜಿತನೆಂದು ಪರಿಗಣಿಸಲಾಗಿದೆ. ಯಾವುದೇ ಹೋಮ, ಹವನ, ಯಜ್ಞಗಳನ್ನು ಆರಂಭಿಸುವ ಮೊದಲು ಗಣೇಶನ ಪೂಜೆಯನ್ನು ನೆರವೇರಿಸುವುದು ವಾಡಿಕೆ. ಪೂಜೆಗಳಲ್ಲಿ ವಿವಿಧ ಪುಷ್ಪಗಳು, ಭಕ್ಷ್ಯಗಳು ಬಳಕೆಯಾಗುತ್ತವೆ. ಭಕ್ತಿಯಿಂದ ಅರ್ಪಿಸಿದ ಯಾವುದೇ ವಸ್ತುವನ್ನು ಭಗವಂತ ಸ್ವೀಕರಿಸುತ್ತಾನೆ ಎಂಬ ನಂಬಿಕೆ ಇದೆ. ಆದರೆ, ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸುವುದನ್ನು ಏಕೆ ನಿಷೇಧಿಸಲಾಗಿದೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಈ ನಿಷೇಧದ ಹಿಂದಿನ ಕಾರಣವನ್ನು ಇಲ್ಲಿ ತಿಳಿದುಕೊಳ್ಳಿ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಏಕೆ ಬಳಸುವಂತಿಲ್ಲ ಎಂಬುದನ್ನು ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: ಸೆ. 07 ಎರಡನೇ ಚಂದ್ರಗ್ರಹಣ; ಈ ಎರಡು ರಾಶಿಯವರು ಅತ್ಯಂತ ಜಾಗರೂಕರಾಗಿರಿ
ಪುರಾಣಗಳ ಪ್ರಕಾರ, ಗಣಪತಿಯನ್ನು ತುಳಸಿ ದೇವಿ ವಿವಾಹವಾಗಲು ಬಯಸಿದ್ದಳು. ಆದರೆ, ಗಣಪತಿ ನಿರಾಕರಿಸಿದಾಗ ಕೋಪಗೊಂಡ ತುಳಸಿ ದೇವಿ, ಗಣೇಶನಿಗೆ ಶಾಪ ನೀಡಿದಳು. ಆ ಶಾಪವೇ ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಬಾರದು ಎಂಬುದಾಗಿದೆ. ಈ ಕಾರಣದಿಂದಲೇ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ. ಇದನ್ನು ನಾವು ಮುಂದಿನ ಪೀಳಿಗೆಗೆ ತಿಳಿಸುವುದು ಅತ್ಯಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Tue, 26 August 25




