
ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ಏಕೆ ತೆಗೆಯಬೇಕು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಆಹಾರ ಸೇವನೆಯನ್ನು ಅನ್ನಯಜ್ಞ ಎಂದು ಕರೆಯಲಾಗುತ್ತದೆ. ಈ ಯಜ್ಞದ ಪ್ರಾರಂಭದಿಂದ ಮುಕ್ತಾಯದವರೆಗೆ ವಿನಯ, ವಿಧೇಯತೆ, ಭಕ್ತಿ ಮತ್ತು ಕೃತಜ್ಞತಾ ಭಾವ ಇರಬೇಕು. ಮನೆಯಲ್ಲಿ ತಾಯಿ, ಶ್ರೀಮತಿ, ಅಕ್ಕ, ತಂಗಿಯರು ಅಥವಾ ಬೇರೆಯವರು ಆಹಾರ ತಯಾರಿಸಿರಬಹುದು, ಅಥವಾ ನೀವೇ ತಯಾರಿಸಿರಬಹುದು. ಅನ್ನವು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ದೃಷ್ಟಿಯಿಂದ, ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದರೆ, ಅವರಿಗೆ ಎಂದಿಗೂ ಆಹಾರದ ಕೊರತೆ ಬರುವುದಿಲ್ಲ. ಅನ್ನಪೂರ್ಣೇಶ್ವರಿಗೆ, ಅನ್ನದಾತೆಗೆ ಮತ್ತು ಆಹಾರ ತಯಾರಿಸಿದ ಎಲ್ಲರಿಗೂ ಕೃತಜ್ಞತೆ ಮತ್ತು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ನಾವು ಭುಜಿಸಿದ ತಕ್ಷಣ ಆ ಆಹಾರ ಅಂಜಲು ಅಂದರೆ ಎಂಜಲು ಆಗುತ್ತದೆ. ಎಂಜಲು ಅನ್ನವನ್ನು ಬೇರೆಯವರು ತೆಗೆದುಕೊಂಡು ಹೋದಾಗ, ನಮ್ಮ ಅದೃಷ್ಟ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಅತಿಥಿಗಳು ಮನೆಗೆ ಬಂದಾಗ, ಅವರ ತಟ್ಟೆಯನ್ನು ಅವರ ಕೈಯಲ್ಲಿ ತೆಗೆಸಬಾರದು. ಅತಿಥಿ ದೇವೋಭವ ಎಂಬ ಭಾವನೆಯಿಂದ ಅವರ ಸೇವೆಯನ್ನು ನಾವು ಮಾಡಬೇಕು. ಇದು ನಮ್ಮ ಕರ್ತವ್ಯ. ಮನೆಯಲ್ಲಿ ಊಟವಾದ ನಂತರ, ತಟ್ಟೆಯಲ್ಲಿ ಒಂದು ಅಗಳೂ ಉಳಿಯದಂತೆ ಅದನ್ನು ಶುದ್ಧಿ ಮಾಡಬೇಕು. ತಟ್ಟೆಯಲ್ಲಿನ ಉಳಿದ ಆಹಾರವನ್ನು ಡಸ್ಟ್ಬಿನ್ಗೆ ಹಾಕಿ, ಸಾಧ್ಯವಾದರೆ ತಟ್ಟೆಯನ್ನು ತೊಳೆದು ಅಥವಾ ಕನಿಷ್ಠ ಸ್ವಚ್ಛ ಸ್ಥಳದಲ್ಲಿ ಇಟ್ಟು ಬರಬೇಕು. ಈ ಅಭ್ಯಾಸದಿಂದ ಅದೃಷ್ಟ ಕೂಡಿ ಬರುತ್ತದೆ. ಶಿಸ್ತು, ನಮ್ರತೆ ಮತ್ತು ಸಹನೆ ಬೆಳೆಯುತ್ತದೆ. ಮನಸ್ಸಿನಲ್ಲಿ ಕೃತಜ್ಞತಾ ಭಾವ ಮೂಡುತ್ತದೆ ಮತ್ತು ಕುಟುಂಬದ ಬಾಂಧವ್ಯಗಳು ಉತ್ತಮಗೊಳ್ಳುತ್ತವೆ.
ಜ್ಯೋತಿಷ್ಯದ ಪ್ರಕಾರ, ಅನ್ನವು ಶುಕ್ರನಿಗೆ ಮತ್ತು ಅಕ್ಕಿ ಚಂದ್ರನಿಗೆ ಕಾರಕತ್ವವನ್ನು ಹೊಂದಿದೆ. ಈ ಪದ್ಧತಿಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡರೆ ಆರ್ಥಿಕ ಸಮೃದ್ಧಿ ಉಂಟಾಗುತ್ತದೆ. ಅಲಕ್ಷ್ಮಿ ದೂರವಾಗಿ ನಕಾರಾತ್ಮಕ ಶಕ್ತಿಗಳು ಮನೆ ಬಿಟ್ಟು ಹೋಗುತ್ತವೆ ಮತ್ತು ಮನೆಯಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ. ತಟ್ಟೆಯಲ್ಲೇ ಕೈ ತೊಳೆಯುವುದನ್ನು ತಪ್ಪಿಸಿ, ತಟ್ಟೆಯನ್ನು ಬೇರೆಡೆ ಇಟ್ಟು ಕೈ ತೊಳೆಯುವುದು ಉತ್ತಮ. ಯಾವುದೇ ಕಾರಣಕ್ಕೂ ಅನ್ನವನ್ನು ತಟ್ಟೆಯಲ್ಲಿ ಬಿಡಬಾರದು, ಎಷ್ಟು ಬೇಕೋ ಅಷ್ಟನ್ನೇ ಇಡಿಸಿಕೊಳ್ಳಬೇಕು. ಊಟದ ನಂತರ ಕೈ ತೊಳೆದು ತಟ್ಟೆಯನ್ನು ಹಾಗೆಯೇ ಎರಡರಿಂದ ಮೂರು ನಿಮಿಷಗಳ ಕಾಲ ಬಿಟ್ಟರೆ ಅಲಕ್ಷ್ಮಿ ಅಥವಾ ದರಿದ್ರ ಲಕ್ಷ್ಮಿಯ ಕಂಟಕಗಳು ತಿಂಡವರಿಗೆ ವರ್ಗಾವಣೆಯಾಗುತ್ತವೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಇದು ಶಿಸ್ತು ಮತ್ತು ನಿಯಮಬದ್ಧ ಸಂಪ್ರದಾಯವಾಗಿದೆ. ರಾತ್ರಿಯಿಡೀ ಊಟದ ತಟ್ಟೆಯನ್ನು ಸಿಂಕ್ನಲ್ಲಿ ಬಿಡಬಾರದು, ರಾತ್ರಿಯೇ ಅದನ್ನು ಶುದ್ಧಿ ಮಾಡಿಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಆದಾಗ್ಯೂ, ಈ ನಿಯಮಗಳು ಕೆಲವು ಸಂದರ್ಭಗಳಿಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ, ವಿವಾಹಗಳಲ್ಲಿ ಅಥವಾ ಹೋಟೆಲ್ಗಳಲ್ಲಿ ಅತಿಥಿಯಾಗಿ ಹೋದಾಗ ತಟ್ಟೆಯನ್ನು ತೆಗೆಯುವುದು ಮುಜುಗರವನ್ನುಂಟು ಮಾಡಬಹುದು, ಅಲ್ಲಿ ಅದು ಸೇವಾ ಸಿಬ್ಬಂದಿಯ ಜವಾಬ್ದಾರಿಯಾಗಿರುತ್ತದೆ. ಈ ಸಂಪ್ರದಾಯ ಕೇವಲ ಮನೆಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ