
ಒಂದು ದಿನ ಚಾಣಕ್ಯ ಮತ್ತು ಚಂದ್ರಗುಪ್ತ ಮಗಧದಲ್ಲಿ ತಿರುಗಾಡುತ್ತಿದ್ದಾಗ, ಒಬ್ಬ ತಾಯಿಯು ಬಿಸಿ ರೊಟ್ಟಿಯ ಮಧ್ಯದಲ್ಲಿ ತನ್ನ ಕೈಯನ್ನು ಇಟ್ಟು, ಸುಟ್ಟುಕೊಂಡ ಮಗನನ್ನು ನೋಡಿ ಗದರಿಸುತ್ತಾಳೆ. ಆ ತಾಯಿ ಆಗ ಅಮೂಲ್ಯ ನೀತಿಪಾಠವೊಂದನ್ನು ಹೇಳುತ್ತಾಳೆ: ನೀನು ನೇರವಾಗಿ ಬಿಸಿಯಾದ ರೊಟ್ಟಿಯ ನಡುವೆ ಕೈ ಹಾಕಿದರೆ ಅದು ನಿನ್ನನ್ನು ಸುಡುವುದು ಖಂಡಿತ. ಗಡಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಬದಲು ನೇರವಾಗಿ ರಾಜಧಾನಿಯ ಮೇಲೆ ದಾಳಿ ಮಾಡಿ ಕೈ ಸುಟ್ಟುಕೊಂಡ ಮೂರ್ಖ ಚಾಣಕ್ಯನಂತೆ ಏಕೆ ವರ್ತಿಸುತ್ತಿದ್ದೀಯಾ? ಮೊದಲು ರೊಟ್ಟಿಯ ಅಂಚಿನ ಭಾಗವನ್ನು ತಿಂದು ಆಮೇಲೆ ನಿಧಾನವಾಗಿ ಮಧ್ಯದಲ್ಲಿ ಕೈ ಹಾಕು, ಆಗ ಅದು ನಿನ್ನನ್ನು ಸುಡುವುದಿಲ್ಲ. ಆ ತಾಯಿ ತನ್ನ ಮಗನನ್ನು ಹೀಗೆ ಬೈಯುತ್ತಿದ್ದಳು. ಚಾಣಕ್ಯ ಮತ್ತು ಚಂದ್ರಗುಪ್ತ ಅದನ್ನು ರಹಸ್ಯವಾಗಿ ಕೇಳಿಸಿಕೊಳ್ಳುತ್ತಾರೆ. ಅದನ್ನು ಕೇಳಿ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಮೊದಲು ಗಡಿಯನ್ನು ವಶಪಡಿಸಿಕೊಳ್ಳದೆ ರಾಜಧಾನಿ ಪಾಟಲೀಪುತ್ರದ ಮೇಲೆ ದಾಳಿ ಮಾಡಿದ್ದು ಅವರ ದೊಡ್ಡ ತಪ್ಪು ಎಂದು ವಿಷಾದ ವ್ಯಕ್ತಪಡಿಸಿದರು. ಚಾಣಕ್ಯ ಆ ಮಾತುಗಳಿಂದ ಲೋಕಜ್ಞಾನ ನೀಡಿದ ತಾಯಿಗೆ ನಮಸ್ಕರಿಸಿ ಮುಂದೆ ಹೋಗಲು ನಿರ್ಧರಿಸಿದರು. ಚಾಣಕ್ಯ ಒಬ್ಬ ಶಿಕ್ಷಕ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಮತ್ತು ರಾಜನೀತಿಜ್ಞನಾಗಿದ್ದ. ಅವರು ಭಾರತೀಯ ರಾಜಕೀಯ ಗ್ರಂಥವಾದ ‘ಅರ್ಥಶಾಸ್ತ್ರ’ (ರಾಜಕೀಯ ಮತ್ತು ಅರ್ಥಶಾಸ್ತ್ರ) ಎಂಬ ಸಾರ್ವಕಾಲಿಕ ಮಹಾಗ್ರಂಥವನ್ನು ಬರೆದರು. ಮೌರ್ಯ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಅವರು ಪ್ರಮುಖ...
Published On - 11:29 am, Tue, 28 May 24