Thursday Puja: ಆರ್ಥಿಕ ತೊಂದರೆಗಳಿಂದ ಮುಕ್ತಿ ಪಡೆಯಲು ಗುರುವಾರ ಈ ಪರಿಹಾರ ಮಾಡಿ
ಗುರುವಾರವು ವಿಷ್ಣು ಮತ್ತು ಗುರು ರಾಯರ ಆರಾಧನೆಗೆ ಸಮರ್ಪಿತವಾದ ಪವಿತ್ರ ದಿನ. ಈ ದಿನ ಉಪವಾಸ, ವಿಷ್ಣು ಪೂಜೆ, ಶ್ರೀ ವಿಷ್ಣು ಸ್ತೋತ್ರ ಪಠನೆ ಮುಂತಾದ ಕ್ರಿಯೆಗಳನ್ನು ಮಾಡುವುದರಿಂದ ಸಮೃದ್ಧಿ ಮತ್ತು ಸಂತೋಷ ದೊರೆಯುತ್ತದೆ ಎಂದು ನಂಬಲಾಗಿದೆ. ಬಡವರಿಗೆ ದಾನ ಮಾಡುವುದು, ಗೋಪಿಚಂದನ ತಿಲಕ ಹಚ್ಚುವುದು ಮತ್ತು ಭಗವದ್ಗೀತೆಯ ಹನ್ನೊಂದನೇ ಅಧ್ಯಾಯ ಪಠಿಸುವುದು ಸಹ ಶುಭಕರ. ಆದರೆ ಈ ದಿನ ಸಾಲ ನೀಡುವುದು ಅಥವಾ ಪಡೆಯುವುದು ಅಶುಭ ಎಂದು ಹೇಳಲಾಗಿದೆ.

Vishnu Puja
ಗುರುವಾರ ವಿಶೇಷವಾಗಿ ವಿಷ್ಣು ಮತ್ತು ಗುರು ರಾಯರ ಆರಾಧನೆಗೆ ಸಮರ್ಪಿತವಾದ ದಿನ. ಈ ದಿನ ಉಪವಾಸ ಆಚರಿಸಿ ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಹೀಗೆ ಮಾಡುವುದರಿಂದ, ಜೀವನದಲ್ಲಿ ಶುಭ ಫಲಿತಾಂಶ ಹಾಗೂ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲೂ ಇಂತಹ ಅನೇಕ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಗುರುವಾರದಂದು ಇವುಗಳನ್ನು ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಇದಲ್ಲದೆ, ನೀವು ಆರ್ಥಿಕ ತೊಂದರೆಗಳಿಂದ ಪರಿಹಾರ ಪಡೆಯಲು ಬಯಸಿದರೆ ಇಲ್ಲಿ ನೀಡಲಾಗಿರುವ ಗುರುವಾರದ ಕೆಲವು ಸರಳ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಪ್ರಯತ್ನಿಸಿ.
- ಗುರುವಾರ ಬೆಳಿಗ್ಗೆ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ವಿಷ್ಣುವನ್ನು ಧ್ಯಾನಿಸುತ್ತಾ ಶ್ರೀ ವಿಷ್ಣು ಸ್ತೋತ್ರ ಅಥವಾ ವಿಷ್ಣು ಸಹಸ್ರನಾಮ ಪಠಿಸಿ. ಭಕ್ತಿಯಿಂದ ದೇವರನ್ನು ಸ್ತುತಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಇದರಿಂದ ವಿಷ್ಣುವಿನ ವಿಶೇಷ ಆಶೀರ್ವಾದಗಳು ಸಿಗುತ್ತವೆ ಎಂದು ನಂಬಲಾಗಿದೆ.
- ಗುರುವಾರದಂದು ಗೋಪಿ ಚಂದನ ತಿಲಕ ಹಚ್ಚುವುದು ತುಂಬಾ ಶುಭ ಎಂದು ನಂಬಲಾಗಿದೆ. ಇದಲ್ಲದೆ, ಬಡವರಿಗೆ ಹಣ್ಣುಗಳನ್ನು ದಾನ ಮಾಡುವುದನ್ನು ಸಹ ಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.
- ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ, ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿದನು ಎಂಬ ಉಲ್ಲೇಖವಿದೆ. ಆದ್ದರಿಂದ ಪ್ರತೀ ಗುರುವಾರಗಳಂದು ಈ ಅಧ್ಯಾಯವನ್ನು ನಿಯಮಿತವಾಗಿ ಪಠಿಸುವುದು ತುಂಬಾ ಒಳ್ಳೆಯದು. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ.
- ಗುರುವಾರದಂದು ಅಗತ್ಯವಿರುವವರಿಗೆ ಔಷಧಿಗಳನ್ನು ಅಥವಾ ಆರೋಗ್ಯ ಸಂಬಂಧಿತ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.
- ಗುರುವಾರದಂದು ಯಾರಿಗೂ ಸಾಲ ನೀಡಬಾರದು ಅಥವಾ ಯಾರಿಂದಲೂ ಸಾಲ ಪಡೆಯಬಾರದು ಎಂದು ನಂಬಲಾಗಿದೆ. ಈ ದಿನದಂದು ಮಾಡುವ ವಹಿವಾಟುಗಳು ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




