Sign In

By signing in or creating an account, you agree with Associated Broadcasting Company's Terms & Conditions and Privacy Policy.

Success: ಈ ನಾಲ್ಕು ಜನರ ಬೈಗುಳ, ಟೀಕೆಯನ್ನು ಪ್ರೀತಿಯಿಂದ ಸ್ವೀಕರಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತ!

ಯಾರಾದರೂ ನಮ್ಮನ್ನು ನಿಂದಿಸಿದರೆ ರಕ್ತ ಕುದಿಯುವುದು ಸಹಜ. ನಿಂದಿಸಿದವರನ್ನು ಅವಮಾನಿಸಿ ಸೇಡು ತೀರಿಸಿಕೊಳ್ಳುವುದೇ? ಅಥವಾ ಅವಮಾನದ ಸೇಡು ತೀರಿಸಿಕೊಳ್ಳಲು ಇನ್ನೇನಾದರೂ ಮಾಡುವುದೇ? ಯೋಚಿಸಬೇಕು. ಆದರೆ ಜೀವನದಲ್ಲಿ ಕೆಲವರಿಗೆ ಅವಮಾನಗಳು ಅನಿವಾರ್ಯ.

Success: ಈ ನಾಲ್ಕು ಜನರ ಬೈಗುಳ, ಟೀಕೆಯನ್ನು ಪ್ರೀತಿಯಿಂದ ಸ್ವೀಕರಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತ!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Jun 09, 2023 | 7:12 AM

ಯಾರಾದರೂ ನಮ್ಮನ್ನು ನಿಂದಿಸಿದರೆ ರಕ್ತ ಕುದಿಯುವುದು ಸಹಜ. ನಿಂದಿಸಿದವರನ್ನು ಅವಮಾನಿಸಿ ಸೇಡು ತೀರಿಸಿಕೊಳ್ಳುವುದೇ? ಅಥವಾ ಅವಮಾನದ ಸೇಡು ತೀರಿಸಿಕೊಳ್ಳಲು ಇನ್ನೇನಾದರೂ ಮಾಡುವುದೇ? ಯೋಚಿಸಬೇಕು. ಆದರೆ ಜೀವನದಲ್ಲಿ ಕೆಲವರಿಗೆ ಅವಮಾನಗಳು ಅನಿವಾರ್ಯ. ಆದರೆ, ಶಿವಪುರಾಣ(Shiva Purana) ಪ್ರಕಾರ, ಅವಮಾನಗಳನ್ನು ಸಹಿಸುವವರಿಗೆ ಅದೃಷ್ಟ ಮತ್ತು ಯಶಸ್ಸು ಬರುತ್ತದೆ. ಅವರ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಕಟುವಾದ ಮಾತು, ನಿಂದನೆಗಳನ್ನು ಆಶೀರ್ವಾದವೆಂದು ಪರಿಗಣಿಸಿ ಉನ್ನತ ಜೀವನಕ್ಕೆ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಬೆಳೆಯುತ್ತಾರೆ. ಮತ್ತು ಅವಮಾನಗಳನ್ನು ನಿರ್ಲಕ್ಷಿಸಿ ಜೀವನದಲ್ಲಿ ಯಶಸ್ವಿಯಾಗಲು ಯಾರ ಬೈಗುಳ, ನಿಂದನೆಯನ್ನು ಸ್ವೀಕರಿಸಬೇಕು ಎಂಬುದು ಇಲ್ಲಿದೆ.

ತಾಯಿಯ ಕೋಪ

ತಾಯಿ ನಿಮ್ಮನ್ನು ಗದರಿಸಿದರೆ ಅಥವಾ ನಿಮ್ಮ ಬಗ್ಗೆ ಕಟುವಾದ ಪದಗಳನ್ನು ಮಾತನಾಡಿದರೆ, ಅವುಗಳನ್ನು ಅವಮಾನವೆಂದು ಪರಿಗಣಿಸಬೇಡಿ. ಅವರ ಬೈಗುಳದಲ್ಲಿ ಒಳ್ಳೆಯದೇ ಇದೆ. ಆದುದರಿಂದಲೇ ಅವರ ಮಾತು, ಅವಮಾನಗಳನ್ನು ಸಂತೋಷದಿಂದ ಸ್ವೀಕರಿಸಬೇಕು. ಅವರನ್ನು ಅನುಸರಿಸಿ ಮತ್ತು ಬೈಯುವುದಕ್ಕೆ ಕಾರಣಗಳನ್ನು ಗುರುತಿಸಿ. ಹೀಗೆ ಮಾಡುವುದರಿಂದ ತಾಯಿಯ ಆಶೀರ್ವಾದದ ಜೊತೆಗೆ ದೇವರ ಅನುಗ್ರಹವೂ ದೊರೆಯುತ್ತದೆ. ಹೀಗೆ ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ.

ತಂದೆಯ ಛೀಮಾರಿ

ತಂದೆಯ ಸ್ಥಾನಮಾನವನ್ನು ದೇವರಿಗಿಂತ ಉನ್ನತವೆಂದು ಪರಿಗಣಿಸಲಾಗಿದೆ. ಅವರ ಕೋಪದ ಮಾತುಗಳನ್ನು ಅವಮಾನ ಎಂದು ತೆಗೆದುಕೊಳ್ಳಬೇಡಿ. ಬದಲಿಗೆ, ದೇವರು ಕೊಟ್ಟ ವರವೆಂದೇ ಭಾವಿಸಬೇಕು. ಅವರ ಪ್ರತಿಯೊಂದು ಮಾತನ್ನೂ ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಬೆಳೆಯಲು ಪ್ರಯತ್ನಿಸಿ.

ಶಿಕ್ಷಕರ ಬೈಗುಳ

ಶಿಕ್ಷಕರೇ ಯಶಸ್ಸಿನ ಮೆಟ್ಟಿಲು. ನಿಷ್ಪಾಪ ಶಿಕ್ಷಕ ನೀಡಿದ ಶಿಕ್ಷಣ ಮತ್ತು ಕಲಿಸಿದ ಜೀವನ ಪಾಠಗಳು ನಿಮ್ಮನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುತ್ತವೆ. ಜೀವನದಲ್ಲಿ ಬರಲಿರುವ ಸಂಕಷ್ಟಗಳನ್ನು ಎದುರಿಸುವ ಶಕ್ತಿ ನೀಡುತ್ತದೆ. ನಿಮ್ಮ ತಪ್ಪಿಗೆ ಶಿಕ್ಷಕರು ಬೈಯುವುದು, ಹೊಡೆಯುವುದು ಸಹಜ. ಆದಾಗ್ಯೂ, ಶಿಕ್ಷಕರ ಮಾತು ಮತ್ತು ಹೊಡೆತಗಳನ್ನು ಅವಮಾನವೆಂದು ಪರಿಗಣಿಸಬೇಡಿ. ಅದನ್ನೊಂದು ವರವಾಗಿ ಪರಿಗಣಿಸಿ ಮುನ್ನಡೆಯಿರಿ.

ದೇವಸ್ಥಾನದಲ್ಲಿ ತಾರತಮ್ಯವಾದರೆ…

ನೀವು ದೇವಸ್ಥಾನಕ್ಕೆ ದರ್ಶನಕ್ಕೆ ಹೋದರೆ, ಅಲ್ಲಿ ಯಾರಾದರೂ ನಿಮ್ಮನ್ನು ನಿಂದಿಸಿದರೆ ಅಥವಾ ತಾರತಮ್ಯ ಮಾಡಿದರೆ, ನೀವು ಹಗುರವಾಗಿ ತೆಗೆದುಕೊಳ್ಳಬೇಕು. ಪರಿಸ್ಥಿತಿಯನ್ನು ಶಾಂತವಾಗಿ ಎದುರಿಸಬೇಕು. ಕೋಪವು ಎಂದಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಯಾವುದೇ ಕಟುವಾದ ಮಾತುಗಳನ್ನು ದೇವಸ್ಥಾನದಲ್ಲಿ ಮೃದುವಾಗಿ ಸ್ವೀಕರಿಸಬೇಕು. ಆ ಮಾತುಗಳನ್ನು ನಿರ್ಲಕ್ಷಿಸಬೇಕು. ಅವರು ಹೇಳುವ ಪ್ರತಿಯೊಂದು ಶಾಪಕ್ಕೂ, ದೇವರಿಂದ ಉತ್ತರವಾಗಿ ಆಶೀರ್ವಾದ ಸಿಗುತ್ತದೆ.

ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ