Vasant Panchami Vrat Rules: ವಸಂತ ಪಂಚಮಿ ವ್ರತದ ನಿಯಮಗಳೇನು? ವ್ರತದಲ್ಲಿ ಏನನ್ನು ತಿನ್ನಬೇಕು?

ಧಾರ್ಮಿಕ ನಂಬಿಕೆಗಳ ಪ್ರಕಾರ, ವಸಂತ ಅಥವಾ ಬಸಂತ್ ಪಂಚಮಿಯ ದಿನದಂದು ತಾಯಿ ಸರಸ್ವತಿಯನ್ನು ಪೂಜಿಸುವುದರಿಂದ ಜ್ಞಾನ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಆದರೆ ಈ ದಿನದಂದು ಉಪವಾಸ ಮಾಡುವವರು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈ ಪಂಚಮಿ ವ್ರತದಲ್ಲಿ ಏನನ್ನು ತಿನ್ನಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Vasant Panchami Vrat Rules: ವಸಂತ ಪಂಚಮಿ ವ್ರತದ ನಿಯಮಗಳೇನು? ವ್ರತದಲ್ಲಿ ಏನನ್ನು ತಿನ್ನಬೇಕು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 12, 2024 | 4:35 PM

ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯು ಫೆ. 14 ರಂದು ಬರುತ್ತದೆ. ಈ ದಿನ ಬಸಂತ್ ಅಥವಾ ವಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ದಿನದಂದು ಜ್ಞಾನದ ದೇವತೆಯಾದ ತಾಯಿ ಸರಸ್ವತಿಯನ್ನು ಭಕ್ತಿಯಿಂದ ಪೂಜೆ ಮಾಡುವುದು ವಿಶೇಷ. ಮಾಘ ಮಾಸದ ಪಂಚಮಿಯಂದು ವ್ರತಾಚರಣೆ ಮಾಡುವುದರಿಂದ, ಶಾರದಾ ದೇವಿಯು ಸಂತುಷ್ಟಳಾಗಿ ಆಶೀರ್ವದಿಸುತ್ತಾಳೆ ಅಲ್ಲದೆ ಬೇಡಿದ ವರವನ್ನು ನೀಡುತ್ತಾಳೆ. ಹಾಗಾಗಿ ಈ ದಿನ ಜನರು, ತಮ್ಮ ಮನೆಗಳಲ್ಲಿ ರುಚಿಕರವಾದ ಆಹಾರ ಮತ್ತು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಕೆಲವು ಭಾಗಗಳಲ್ಲಿ ಈ ದಿನ ಮನೆಯವರೆಲ್ಲರೂ ಹಳದಿ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಇನ್ನು ಈ ಹಬ್ಬದ ಸಂದರ್ಭದಲ್ಲಿ, ನೀವು ಸರಸ್ವತಿ ದೇವಿಯ ಪೂಜೆಗಾಗಿ ಉಪವಾಸ ಮಾಡಲು ಬಯಸಿದರೆ ಅದಕ್ಕಾಗಿ ಕೆಲವು ಪ್ರಮುಖ ನಿಯಮಗಳನ್ನು ತಿಳಿದಿರಬೇಕು ಜೊತೆಗೆ ಅದನ್ನು ಪಾಲನೆ ಮಾಡಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಸಂತ ಪಂಚಮಿ ವ್ರತದಲ್ಲಿ ಏನನ್ನು ತಿನ್ನಬೇಕು?

-ನೀವು ವಸಂತ ಪಂಚಮಿಯಂದು ಉಪವಾಸ ಮಾಡುತ್ತಿದ್ದರೆ ಸರಸ್ವತಿ ದೇವಿಯನ್ನು ಪೂಜಿಸದೆಯೇ ಏನನ್ನೂ ತಿನ್ನಬಾರದು.

-ಬಸಂತ್ ಅಥವಾ ವಸಂತ ಪಂಚಮಿಯ ಪೂರ್ತಿ ದಿನ ಉಪವಾಸವನ್ನು ಆಚರಿಸುವ ಅಗತ್ಯವಿಲ್ಲ. ಈ ದಿನದ ಶುಭ ಸಮಯದಲ್ಲಿ ತಾಯಿ ಸರಸ್ವತಿಯನ್ನು ಪೂಜಿಸಿದ ನಂತರ ನಿಮ್ಮ ಉಪವಾಸವನ್ನು ಮುರಿಯಬಹುದು.

-ಉಪವಾಸವನ್ನು ಮುರಿಯುವ ಮೊದಲು ತಾಯಿ ಸರಸ್ವತಿಯನ್ನು ಪೂಜಿಸಿ ಬಳಿಕ ಅವಳ ನೆಚ್ಚಿನ ಹಣ್ಣು, ಸಿಹಿ ತಿಂಡಿಗಳನ್ನು ತಿನ್ನುವ ಮೂಲಕ ಉಪವಾಸವನ್ನು ಮುರಿಯಬೇಕು.

-ತಾಯಿ ಸರಸ್ವತಿಗೆ ಅರ್ಪಿಸಿದ ಆಹಾರವನ್ನು ಎಲ್ಲರಿಗೂ ವಿತರಿಸಿ. ಇದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.

-ಈ ದಿನ ಪ್ಲಮ್, ಬೆರ್ರಿ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಇದರ ಹಿಂದೆ ಯಾವುದೇ ಧಾರ್ಮಿಕ ಕಾರಣಗಳಿಲ್ಲ. ಬದಲಾಗಿ ಇವು ಉಪವಾಸದ ಸಮಯದಲ್ಲಿ ನಿಮಗೆ ಶಕ್ತಿಯನ್ನು ನೀಡುತ್ತದೆ.

-ಹಳದಿ ಬಣ್ಣದ ಸಿಹಿ ತಿಂಡಿಗಳು ಮತ್ತು ಕೇಸರಿಯಿಂದ ತಯಾರಿಸಿದ ಪಾಯಸ, ಹಲ್ವಾ ಇವುಗಳನ್ನು ದೇವಿಯ ನೈವೇದ್ಯಕ್ಕೆ ಇಡಬಹುದು.

-ಇದರ ಹೊರತಾಗಿ ಸಿಹಿ ಅನ್ನ, ಮಾಲ್ ಪುವಾ, ಲಡ್ಡುಗಳು ಮತ್ತು ಕಾಲೋಚಿತ ಹಣ್ಣುಗಳನ್ನು ನೈವೇದ್ಯಕ್ಕಾಗಿ ಇಡಬಹುದು ಜೊತೆಗೆ ಪೂಜೆ ಮುಗಿದ ಬಳಿಕ ಇದನ್ನು ಸೇವನೆ ಮಾಡಬಹುದು.

ಇದನ್ನೂ ಓದಿ: ದೇವಾಲಯದಿಂದ ಹಿಂದಿರುಗುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ವಸಂತ ಪಂಚಮಿ ವ್ರತದಲ್ಲಿ ಏನನ್ನು ತಿನ್ನಬಾರದು?

-ಈ ದಿನ ತಾಮಸಿಕ್ ಆಹಾರಗಳನ್ನು ತಿನ್ನಬೇಡಿ ಮತ್ತು ಮಾಂಸ ಮತ್ತು ಮದ್ಯದಿಂದ ಕಡ್ಡಾಯವಾಗಿ ದೂರವಿರಿ.

-ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.

-ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ. ಮಸಾಲೆಯುಕ್ತ ಆಹಾರವನ್ನು ಕೂಡ ತಪ್ಪಿಸಿ.

-ಹೊರಗಡೆ ಸಿಗುವ ಜಂಕ್ ಫುಡ್ ಗಳನ್ನು ಈ ದಿನ ತಿನ್ನಬೇಡಿ.

-ಹಿಂದಿನ ದಿನ ಮಾಡಿಟ್ಟ ಅನ್ನ ಅಥವಾ ಇತರೆ ಪದಾರ್ಥಗಳನ್ನು ಪಂಚಮಿಯ ದಿನ ಸೇವನೆ ಮಾಡಬೇಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:10 pm, Fri, 9 February 24

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ