AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯ ಸುತ್ತ ಮುತ್ತ ಪಪ್ಪಾಯ ಗಿಡವಿದ್ರೆ ಕಂಟಕ ತಪ್ಪಿದ್ದಲ್ಲ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಆವರಣದಲ್ಲಿ ಪಪ್ಪಾಯಿ ಗಿಡವನ್ನು ಬೆಳೆಸುವುದು ಶುಭಕರವಲ್ಲ. ರಾಹುವಿನ ಪ್ರಭಾವ ಮತ್ತು ಪೂರ್ವಿಕರ ನಿವಾಸದಿಂದಾಗಿ ಇದು ಧನಾತ್ಮಕ ಶಕ್ತಿಯನ್ನು ಕುಂಠಿತಗೊಳಿಸಿ, ಕಲಹಗಳು ಹಾಗೂ ಮಾನಸಿಕ ಯಾತನೆಗೆ ಕಾರಣವಾಗಬಹುದು. ಪಪ್ಪಾಯಿ ಗಿಡವನ್ನು ಮನೆಯಿಂದ ದೂರವಿಟ್ಟು ಅಥವಾ ಬೇರೆಡೆ ಸ್ಥಳಾಂತರಿಸುವುದು ಹೆಚ್ಚು ಶುಭಕರ.

Daily Devotional: ಮನೆಯ ಸುತ್ತ ಮುತ್ತ ಪಪ್ಪಾಯ ಗಿಡವಿದ್ರೆ ಕಂಟಕ ತಪ್ಪಿದ್ದಲ್ಲ!
ಪಪ್ಪಾಯಿ ಗಿಡ
ಅಕ್ಷತಾ ವರ್ಕಾಡಿ
|

Updated on: Oct 04, 2025 | 10:52 AM

Share

ನಮ್ಮ ದೈನಂದಿನ ಜೀವನ ನಿರ್ವಹಣೆಯಲ್ಲಿ ವಾಸ್ತು ಶಾಸ್ತ್ರದ ಪಾತ್ರ ಮತ್ತು ಮನೆಯ ಸುತ್ತಮುತ್ತಲಿನ ಸಸ್ಯಗಳ ಪ್ರಭಾವದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ವಿವರಿಸಿದ್ದಾರೆ. ಮನೆಗಳು ಮತ್ತು ಅದರ ಆವರಣದ ವಾಸ್ತು ನಮ್ಮ ಅದೃಷ್ಟ ಮತ್ತು ದುರದೃಷ್ಟಗಳ ಮೇಲೆ ಸಣ್ಣಪುಟ್ಟ ರೀತಿಯಲ್ಲಿ ಪ್ರಭಾವ ಬೀರಬಹುದು. ಇಂತಹ ಸಸ್ಯಗಳಲ್ಲಿ, ನಾವು ಸಾಮಾನ್ಯವಾಗಿ ಇಷ್ಟಪಟ್ಟು ಸವಿಯುವ ಪಪ್ಪಾಯಿ ಅಥವಾ ಪರಂಗಿ ಕಾಯಿ ಗಿಡದ ಕುರಿತಾದ ವಾಸ್ತು ದೃಷ್ಟಿಕೋನವನ್ನು ಗುರೂಜಿ ವಿವರಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಪಪ್ಪಾಯಿ ಗಿಡವನ್ನು ಮನೆಯ ಆವರಣದಲ್ಲಿ ಅಂದರೆ ಮನೆಯ ಸುತ್ತಮುತ್ತಲ ಜಾಗದಲ್ಲಿ ಬೆಳೆಸುವುದು ಅಷ್ಟಾಗಿ ಶುಭಕರವಲ್ಲ. ಇದು ಬೇರೆಯವರ ಜಾಗದಲ್ಲಿ ಬೆಳೆದರೆ ನಮಗೆ ಸಂಬಂಧವಿಲ್ಲ, ಆದರೆ ನಮ್ಮದೇ ಸ್ವಂತ ಮನೆಯ ಅಕ್ಕಪಕ್ಕ, ಬಾಗಿಲಿನ ಸಮೀಪ ಅಥವಾ ಸುತ್ತಮುತ್ತಲಿನ ಆವರಣದಲ್ಲಿ ಪಪ್ಪಾಯಿ ಗಿಡ ಇದ್ದರೆ, ಅದು ಕೆಲವು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ಎಚ್ಚರಿಸಿದ್ದಾರೆ.

ಪಪ್ಪಾಯಿ ಗಿಡದ ವಿಶಿಷ್ಟತೆ ಎಂದರೆ ಅದರ ಪ್ರತಿ ಭಾಗವೂ – ಹಣ್ಣು, ಎಲೆ, ಕಾಂಡ, ಬೇರು – ಹಾಲಿನಂತಹ ಸ್ರಾವವನ್ನು ಹೊಂದಿರುತ್ತದೆ. ಜ್ಯೋತಿಷ್ಯದಲ್ಲಿ, ಹಾಲು ಅಥವಾ ಹಾಲಿನಂತಹ ಸ್ರಾವಗಳನ್ನು ಹೊಂದಿರುವ ಸಸ್ಯಗಳು ರಾಹುವಿನ ಪ್ರಭಾವಕ್ಕೆ ಒಳಪಟ್ಟಿರುತ್ತವೆ ಎಂದು ನಂಬಲಾಗಿದೆ. ರಾಹುವಿನ ಪ್ರಭಾವವು ಮನೆಗೆ ಅಷ್ಟು ಶುಭಕರವಲ್ಲ. ಪಪ್ಪಾಯಿ ಗಿಡದ ಈ ರಾಹುವಿನ ಪ್ರಭಾವದಿಂದಾಗಿ, ಮನೆಯಲ್ಲಿ ಆಪತ್ತುಗಳು, ಭಿನ್ನಾಭಿಪ್ರಾಯಗಳು, ಕಲಹಗಳು, ಜಗಳಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇದು ಸುತ್ತಮುತ್ತಲಿನ ಧನಾತ್ಮಕ ಶಕ್ತಿಯ ಹರಿವನ್ನು ನಿಯಂತ್ರಿಸಿ, ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದರಿಂದ ಸಣ್ಣಪುಟ್ಟ ಮಾನಸಿಕ ಯಾತನೆಗಳು ಕೂಡ ಉಂಟಾಗಬಹುದು ಎಂದು ಗುರೂಜಿ ವಿವರಿಸಿದ್ದಾರೆ.

ಇದನ್ನೂ ಓದಿ: ತುಳಸಿ ಮಾಲೆ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಪಪ್ಪಾಯಿ ಗಿಡವು ರಾಹುವಿನ ಪ್ರಭಾವದ ಜೊತೆಗೆ, ಪೂರ್ವಿಕರ ನಿವಾಸವನ್ನು ಸಹ ಸೂಚಿಸುತ್ತದೆ ಎಂದು ವಾಸ್ತು ಹೇಳುತ್ತದೆ. ಪೂರ್ವಿಕರು ಮನೆಯ ಹತ್ತಿರ ಇರುವುದು ಶುಭ ಎಂದು ಕೆಲವರು ಭಾವಿಸಬಹುದು. ಆದರೆ, ಸಶರೀರರಾದ ನಾವು ಮತ್ತು ಶರೀರರಹಿತರಾದ ಪೂರ್ವಿಕರು ಒಂದೇ ಸ್ಥಳದಲ್ಲಿ ಇರುವಾಗ, ಅದು ಧನಾತ್ಮಕ ಶಕ್ತಿಯ ಕುಂಠಿತಕ್ಕೆ ಕಾರಣವಾಗುತ್ತದೆ. ಹೀಗಾಗಿ, ಮನೆಯ ಸುತ್ತಮುತ್ತ ಅಥವಾ ಅಕ್ಕಪಕ್ಕದಲ್ಲಿ ಪಪ್ಪಾಯಿ ಗಿಡವನ್ನು ಬೆಳೆಸುವುದು ಅಶುಭ.

ಆದರೆ, ಪಪ್ಪಾಯಿ ಗಿಡ ಬೆಳೆಸಲೇ ಬೇಕೆಂದಿದ್ದರೆ , ಅದನ್ನು ಮನೆಯಿಂದ ಸ್ವಲ್ಪ ದೂರದಲ್ಲಿ, ಉದಾಹರಣೆಗೆ ಹೊಲಗಳಲ್ಲಿ ಅಥವಾ ಸಾಕಷ್ಟು ಜಾಗವಿರುವ ಬೇರೆ ಪ್ರದೇಶಗಳಲ್ಲಿ ಬೆಳೆಸಬಹುದು. ಇದರಲ್ಲಿ ಯಾವುದೇ ತಪ್ಪಿಲ್ಲ. ಕೆಲವೊಮ್ಮೆ, ಪಪ್ಪಾಯಿ ಗಿಡ ತಾನಾಗಿಯೇ ಮನೆಯ ಹತ್ತಿರ ಬೆಳೆಯಬಹುದು. ಅಂತಹ ಸಂದರ್ಭಗಳಲ್ಲಿ, ಆ ಗಿಡವನ್ನು ಬೇರೆಡೆಗೆ, ಅಂದರೆ ಮನೆಯಿಂದ ದೂರವಿರುವ ಜಾಗಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ