
ದಿನವಿಡೀ ಕಚೇರಿ ಕೆಲಸ, ಟ್ರಾಫಿಕ್ ಕಿರಿಕಿರಿ ಎದುರಿಸಿ ಮನೆಗೆ ಬಂದಾಗ ನಮಗೆ ಬೇಕಿರುವುದು ನೆಮ್ಮದಿಯ ನಿದ್ರೆ. ಆದರೆ, ಸಾಕಷ್ಟು ನಿದ್ರೆ ಮಾಡಿದರೂ ಮರುದಿನ ಬೆಳಿಗ್ಗೆ ಉತ್ಸಾಹವಿಲ್ಲದೆ, ಆಲಸ್ಯ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ ಅದು ನಿಮ್ಮ ತಪ್ಪಲ್ಲ; ನಿಮ್ಮ ಮನೆಯ ವಿನ್ಯಾಸದ ದೋಷವಿರಬಹುದು!
ಆಧುನಿಕ ಅಪಾರ್ಟ್ಮೆಂಟ್ಗಳಲ್ಲಿ ಜಾಗದ ಮಿತಿಯಿಂದಾಗಿ ಹಾಸಿಗೆಯ ಎದುರಿಗೇ ಶೌಚಾಲಯದ ಬಾಗಿಲು ಇರುವ ವಿನ್ಯಾಸ ಸಾಮಾನ್ಯವಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇದು ದೊಡ್ಡ ದೋಷ. ಶೌಚಾಲಯವು ಅಶುದ್ಧ ಸ್ಥಳವಾಗಿದ್ದು, ಅಲ್ಲಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ನೇರವಾಗಿ ನಿಮ್ಮ ಹಾಸಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ನಿದ್ರಾಹೀನತೆ ಮತ್ತು ಮಾನಸಿಕ ಅಸ್ಥಿರತೆ ಉಂಟಾಗಬಹುದು. ಇದಲ್ಲದೇ ಜೀರ್ಣಕ್ರಿಯೆ ತೊಂದರೆ ಮತ್ತು ಮೂಳೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ದಂಪತಿಗಳ ನಡುವೆ ಅನಗತ್ಯ ಮನಸ್ತಾಪ ಮತ್ತು ಕಹಿಯನ್ನು ಇದು ಉಂಟುಮಾಡಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಮನೆಯ ಗೋಡೆಗಳನ್ನು ಒಡೆಯಲು ಅಥವಾ ವಿನ್ಯಾಸ ಬದಲಿಸಲು ಸಾಧ್ಯವಾಗದಿದ್ದಾಗ, ಈ ಸುಲಭ ಉಪಾಯಗಳನ್ನು ಅನುಸರಿಸಿ ನಕಾರಾತ್ಮಕ ಶಕ್ತಿಯನ್ನು ತಡೆಯಬಹುದು.
ಶೌಚಾಲಯದ ಬಾಗಿಲನ್ನು ಯಾವಾಗಲೂ ಮುಚ್ಚಿಡಿ. ಅಷ್ಟೇ ಅಲ್ಲದೆ, ಬಾಗಿಲಿನ ಮೇಲೆ ದಪ್ಪನೆಯ ಮತ್ತು ಗಾಢ ಬಣ್ಣದ ಪರದೆಯನ್ನು ನೇತುಹಾಕಿ. ಇದು ನಕಾರಾತ್ಮಕ ಶಕ್ತಿಯ ವಿರುದ್ಧ ಗುರಾಣಿಯಂತೆ ಕಾರ್ಯನಿರ್ವಹಿಸುತ್ತದೆ. ಶೌಚಾಲಯವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ತೇವವಿಲ್ಲದಂತೆ ಒಣಗಿಸಿಡಿ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಒಂದು ಗಾಜಿನ ಬಟ್ಟಲಿನಲ್ಲಿ ಕಲ್ಲು ಉಪ್ಪನ್ನು (ಸಮುದ್ರದ ಉಪ್ಪು) ತುಂಬಿಸಿ ಸ್ನಾನಗೃಹದ ಮೂಲೆಯಲ್ಲಿಡಿ. ಇದು ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ಆದರೆ ನೆನಪಿಡಿ, ಪ್ರತಿ 15 ದಿನಕ್ಕೊಮ್ಮೆ ಈ ಉಪ್ಪನ್ನು ಬದಲಿಸಬೇಕು.
ಸ್ನಾನಗೃಹದ ಬಾಗಿಲಿನ ಹೊರಭಾಗದಲ್ಲಿ ಒಂದು ಸಣ್ಣ ಕನ್ನಡಿಯನ್ನು ಅಳವಡಿಸಿ. ಇದು ರೂಮಿನೊಳಗೆ ಬರಲು ಪ್ರಯತ್ನಿಸುವ ನಕಾರಾತ್ಮಕ ಶಕ್ತಿಯನ್ನು ಪ್ರತಿಫಲಿಸಿ ಮರಳಿ ಕಳುಹಿಸುತ್ತದೆ.
ಕತ್ತಲೆಯಾದ ಬಾತ್ರೂಮ್ ನಕಾರಾತ್ಮಕತೆಯ ಕೇಂದ್ರ. ಆದ್ದರಿಂದ ಅಲ್ಲಿ ಪ್ರಕಾಶಮಾನವಾದ ಬಿಳಿ ಎಲ್ಇಡಿ ದೀಪಗಳನ್ನು ಬಳಸಿ. ಧನಾತ್ಮಕತೆ ಹೆಚ್ಚಿಸಲು ಕರ್ಪೂರ ಅಥವಾ ಲೆಮನ್ ಗ್ರಾಸ್ (ನಿಂಬೆ ಹುಲ್ಲು) ಎಣ್ಣೆಯ ಸುಗಂಧವನ್ನು ಬಳಸಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ