AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನವಕಾರ ಮಹಾಮಂತ್ರ ದಿವಸ್‌’; ಪ್ರಧಾನಿ ಮೋದಿ ಪಠಿಸಿದ ಮಹಾಮಂತ್ರದ ಅರ್ಥವೇನು?

ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನಡೆದ ನವಕಾರ ಮಹಾಮಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ನವಕಾರ ಮಹಾ ಮಂತ್ರವನ್ನು ಪಠಿಸಿದರು. ಜೈನ ಧರ್ಮದಲ್ಲಿ ಪವಿತ್ರವಾದ ಈ ಮಂತ್ರವು ಆತ್ಮಶುದ್ಧಿ ಮತ್ತು ಆಂತರಿಕ ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಮಂತ್ರದ ಇತಿಹಾಸ ಮತ್ತು ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

'ನವಕಾರ ಮಹಾಮಂತ್ರ ದಿವಸ್‌'; ಪ್ರಧಾನಿ ಮೋದಿ ಪಠಿಸಿದ ಮಹಾಮಂತ್ರದ ಅರ್ಥವೇನು?
Navkar Mahamantra
ಅಕ್ಷತಾ ವರ್ಕಾಡಿ
|

Updated on: Apr 09, 2025 | 12:40 PM

Share

ನವದೆಹಲಿ: ಬುಧವಾರ(ಏ.09) ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ನವಕಾರ ಮಹಾಮಂತ್ರ ದಿವಸ್‌’ನಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ‘ನವಕಾರ ಮಹಾಮಂತ್ರ’ವನ್ನು ಪಠಿಸಿದರು. ಈ ಮಂತ್ರದ ಕುರಿತು ಮೋದಿಯವರ ಅಧಿಕೃತ ಟ್ವಿಟರ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ಹಾಗಿದ್ರೆ  ಏನಿದು ನವಕಾರ ಮಹಾಮಂತ್ರ ದಿವಸ್​​ ಹಾಗೂ ಈ ಮಹಾಮಂತ್ರದ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನವಕಾರ ಮಹಾಮಂತ್ರ ಎಂದರೇನು?

ಜೈನ ಧರ್ಮದಲ್ಲಿ ನವಕಾರ ಮಂತ್ರವನ್ನು ಯುಗಯುಗಗಳಿಂದಲೂ ಬಹಳ ಮುಖ್ಯವಾದ ಮಂತ್ರವೆಂದು ಪರಿಗಣಿಸಲಾಗಿದೆ . ಇದು ಜೈನರು ಧ್ಯಾನ ಮಾಡುವಾಗ ಪಠಿಸುವ ಮೊದಲ ಪ್ರಾರ್ಥನೆ. ಈ ಮಂತ್ರವನ್ನು ಪಂಚ ನಮಸ್ಕಾರ ಮಂತ್ರ , ನಮಸ್ಕಾರ ಮಂತ್ರ , ನವಕಾರ ಮಂತ್ರ , ನಮಸ್ಕಾರ ಮಂಗಳ ಅಥವಾ ಪರಮೇಷ್ಠಿ ಮಂತ್ರ ಎಂದೂ ಕರೆಯಲಾಗುತ್ತದೆ . ಈ ಮಂತ್ರವು ನಮ್ಮ ಆಂತರಿಕ ಶತ್ರುಗಳಾದ ಅಪನಂಬಿಕೆ, ನಕಾರಾತ್ಮಕತೆ, ಹಗೆತನ ಮತ್ತು ಸ್ವಾರ್ಥವನ್ನು ಗುರುತಿಸುವ ಮೂಲಕ  ಅಂತರಂಗ ವೈರಿಗಳನ್ನು ಜಯಿಸಲು ಪ್ರೇರೇಪಿಸುತ್ತದೆ.

ಮೋದಿ ನವಕಾರ ಮಹಾಮಂತ್ರ ಪಠಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ:

At Vigyan Bhawan, amidst the sacred aura of Navkar Mahamantra Divas, Hon’ble PM @narendramodi ji chanted the timeless Navkar Mahamantra — a moment where spiritual reverence met national leadership.

A leader who shapes the future and honours dharmic roots. pic.twitter.com/4vShNJQcVo

— Dr Padma Veerapaneni ( Modi Ka Parivar) (@DrPadmaofficial) April 9, 2025

ಇದನ್ನೂ ಓದಿ: ಅಮರನಾಥ ಯಾತ್ರೆಗೆ ಯಾವಾಗ ನೋಂದಣಿ ಆರಂಭ? ಇಲ್ಲಿದೆ ಮಾಹಿತಿ

ಮಹಾರಾಷ್ಟ್ರದ ಪೇಲ್ ಗುಹೆಗಳಲ್ಲಿ ಅಂದರೆ ಮುಂಬೈನಿಂದ ದಕ್ಷಿಣಕ್ಕೆ 105 ಕಿ.ಮೀ ದೂರದಲ್ಲಿರುವ ಮಹಾದ್ ಬಳಿಯ ಮುಂಬೈ-ಗೋವಾ ಹೆದ್ದಾರಿಯಲ್ಲಿನ 30 ಬೌದ್ಧ ಗುಹೆಗಳಲ್ಲಿ ನಮೋಕರ ಮಂತ್ರದ ಮೊದಲ ಸಾಲಿನ ನಮೋ ಅರಹತನಂ ( नमो अरहतानं ) ಬಗ್ಗೆಗಿನ ಉಲ್ಲೇಖಗಳಿವೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ