AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನವಕಾರ ಮಹಾಮಂತ್ರ ದಿವಸ್‌’; ಪ್ರಧಾನಿ ಮೋದಿ ಪಠಿಸಿದ ಮಹಾಮಂತ್ರದ ಅರ್ಥವೇನು?

ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನಡೆದ ನವಕಾರ ಮಹಾಮಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ನವಕಾರ ಮಹಾ ಮಂತ್ರವನ್ನು ಪಠಿಸಿದರು. ಜೈನ ಧರ್ಮದಲ್ಲಿ ಪವಿತ್ರವಾದ ಈ ಮಂತ್ರವು ಆತ್ಮಶುದ್ಧಿ ಮತ್ತು ಆಂತರಿಕ ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಮಂತ್ರದ ಇತಿಹಾಸ ಮತ್ತು ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

'ನವಕಾರ ಮಹಾಮಂತ್ರ ದಿವಸ್‌'; ಪ್ರಧಾನಿ ಮೋದಿ ಪಠಿಸಿದ ಮಹಾಮಂತ್ರದ ಅರ್ಥವೇನು?
Navkar Mahamantra
ಅಕ್ಷತಾ ವರ್ಕಾಡಿ
|

Updated on: Apr 09, 2025 | 12:40 PM

Share

ನವದೆಹಲಿ: ಬುಧವಾರ(ಏ.09) ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ನವಕಾರ ಮಹಾಮಂತ್ರ ದಿವಸ್‌’ನಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ‘ನವಕಾರ ಮಹಾಮಂತ್ರ’ವನ್ನು ಪಠಿಸಿದರು. ಈ ಮಂತ್ರದ ಕುರಿತು ಮೋದಿಯವರ ಅಧಿಕೃತ ಟ್ವಿಟರ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ಹಾಗಿದ್ರೆ  ಏನಿದು ನವಕಾರ ಮಹಾಮಂತ್ರ ದಿವಸ್​​ ಹಾಗೂ ಈ ಮಹಾಮಂತ್ರದ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನವಕಾರ ಮಹಾಮಂತ್ರ ಎಂದರೇನು?

ಜೈನ ಧರ್ಮದಲ್ಲಿ ನವಕಾರ ಮಂತ್ರವನ್ನು ಯುಗಯುಗಗಳಿಂದಲೂ ಬಹಳ ಮುಖ್ಯವಾದ ಮಂತ್ರವೆಂದು ಪರಿಗಣಿಸಲಾಗಿದೆ . ಇದು ಜೈನರು ಧ್ಯಾನ ಮಾಡುವಾಗ ಪಠಿಸುವ ಮೊದಲ ಪ್ರಾರ್ಥನೆ. ಈ ಮಂತ್ರವನ್ನು ಪಂಚ ನಮಸ್ಕಾರ ಮಂತ್ರ , ನಮಸ್ಕಾರ ಮಂತ್ರ , ನವಕಾರ ಮಂತ್ರ , ನಮಸ್ಕಾರ ಮಂಗಳ ಅಥವಾ ಪರಮೇಷ್ಠಿ ಮಂತ್ರ ಎಂದೂ ಕರೆಯಲಾಗುತ್ತದೆ . ಈ ಮಂತ್ರವು ನಮ್ಮ ಆಂತರಿಕ ಶತ್ರುಗಳಾದ ಅಪನಂಬಿಕೆ, ನಕಾರಾತ್ಮಕತೆ, ಹಗೆತನ ಮತ್ತು ಸ್ವಾರ್ಥವನ್ನು ಗುರುತಿಸುವ ಮೂಲಕ  ಅಂತರಂಗ ವೈರಿಗಳನ್ನು ಜಯಿಸಲು ಪ್ರೇರೇಪಿಸುತ್ತದೆ.

ಮೋದಿ ನವಕಾರ ಮಹಾಮಂತ್ರ ಪಠಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ:

At Vigyan Bhawan, amidst the sacred aura of Navkar Mahamantra Divas, Hon’ble PM @narendramodi ji chanted the timeless Navkar Mahamantra — a moment where spiritual reverence met national leadership.

A leader who shapes the future and honours dharmic roots. pic.twitter.com/4vShNJQcVo

— Dr Padma Veerapaneni ( Modi Ka Parivar) (@DrPadmaofficial) April 9, 2025

ಇದನ್ನೂ ಓದಿ: ಅಮರನಾಥ ಯಾತ್ರೆಗೆ ಯಾವಾಗ ನೋಂದಣಿ ಆರಂಭ? ಇಲ್ಲಿದೆ ಮಾಹಿತಿ

ಮಹಾರಾಷ್ಟ್ರದ ಪೇಲ್ ಗುಹೆಗಳಲ್ಲಿ ಅಂದರೆ ಮುಂಬೈನಿಂದ ದಕ್ಷಿಣಕ್ಕೆ 105 ಕಿ.ಮೀ ದೂರದಲ್ಲಿರುವ ಮಹಾದ್ ಬಳಿಯ ಮುಂಬೈ-ಗೋವಾ ಹೆದ್ದಾರಿಯಲ್ಲಿನ 30 ಬೌದ್ಧ ಗುಹೆಗಳಲ್ಲಿ ನಮೋಕರ ಮಂತ್ರದ ಮೊದಲ ಸಾಲಿನ ನಮೋ ಅರಹತನಂ ( नमो अरहतानं ) ಬಗ್ಗೆಗಿನ ಉಲ್ಲೇಖಗಳಿವೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?