AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yashoda jayanti 2022: ಮಾತೃ ಹೃದಯಿ ತಾಯಿ ಯಶೋದೆಯ ಕೃಪೆ ತಮ್ಮ ಮಕ್ಕಳ ಮೇಲಿರಲು ಇಂದು ಕೃಷ್ಣ-ಯಶೋದೆಯ ಪೂಜೆ ಮಾಡಿ

ಈ ದಿನ ತಾಯಿ ಯಶೋದೆಯನ್ನು ಪೂಜಿಸಲಾಗುತ್ತದೆ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನ ದೇವಸ್ಥಾನಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ಅಲಂಕರಿಸಲಾಗುತ್ತದೆ.

Yashoda jayanti 2022: ಮಾತೃ ಹೃದಯಿ ತಾಯಿ ಯಶೋದೆಯ ಕೃಪೆ ತಮ್ಮ ಮಕ್ಕಳ ಮೇಲಿರಲು ಇಂದು ಕೃಷ್ಣ-ಯಶೋದೆಯ ಪೂಜೆ ಮಾಡಿ
ತಾಯಿ ಯಶೋದೆ ಮತ್ತು ಬಾಲ ಕೃಷ್ಣ
TV9 Web
| Edited By: |

Updated on: Feb 22, 2022 | 7:15 AM

Share

ಭಗವಾನ್ ಶ್ರೀ ಕೃಷ್ಣನಿಗೆ(Lord Krishna) ಇಬ್ಬರು ತಾಯಂದಿರು. ಹೆತ್ತ ತಾಯಿ ದೇವಕಿಯಾದ್ರೆ(Devaki) ಕೃಷ್ಣನನ್ನು ತನ್ನದೇ ಮಗನಂತೆ ಪಾಲನೆ-ಪೋಷಣೆ ಮಾಡಿದ್ದು ಯಶೋದೆ(Yashoda). ಕಂಸನ ಕೈಗೆ ಸಿಕ್ಕಿ ತನ್ನ 8ನೇ ಮಗು ಕೂಡ ಬಲಿಯಾಗಬಾರದೆಂದು ತ್ಯಾಗ ಮಾಡಿದ ದೇವಕಿ ಒಂದು ಕಡೆಯಾದ್ರೆ. ಕೃಷ್ಣನ ತುಂಟಾಟ, ಚೆಲ್ಲಾಟಗಳನ್ನು ಸಹಿಸಿಕೊಂಡು ತನ್ನದೇ ಮಗುವೆಂದು ಭಾವಿಸಿ ಮಾತೃ ಮಾತ್ಸಲ್ಯ ಮೆರೆದ ಯಶೋದೆ ಮತ್ತೊಂದು ಕಡೆ. ಆದ್ರೆ ಶ್ರೀ ಕೃಷ್ಣ ತನ್ನ ಇಬ್ಬರೂ ತಾಯಂದಿರನ್ನು ಸಮಾನವಾದ ಪ್ರೀತಿ ನೀಡಿ ಗೌರವಿಸಿದ್ದಾನೆ. ಇಂದು ಕಷ್ಣನ ಸಾಕು ತಾಯಿ ಯಶೋದೆಯ ಜಯಂತಿಯನ್ನು ಆಚರಿಸಲಾಗುತ್ತೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ತಾಯಿ ಯಶೋದಾ ಜಯಂತಿಯನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷ ಷಷ್ಠಿಯಂದು ಆಚರಿಸಲಾಗುತ್ತದೆ. ಯಶೋದಾ ಜಯಂತಿ ಫೆಬ್ರವರಿ 22 ರಂದು ಅಂದ್ರೆ ಮಂಗಳವಾರದಂದು ಬಂದಿದೆ.

ಈ ದಿನ ತಾಯಿ ಯಶೋದೆಯನ್ನು ಪೂಜಿಸಲಾಗುತ್ತದೆ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನ ದೇವಸ್ಥಾನಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ಅಲಂಕರಿಸಲಾಗುತ್ತದೆ. ಈ ದಿನ ಭಕ್ತರು ಕೃಷ್ಣನ ದರ್ಶನ ಮಾಡಿ ತಾಯಿ ಯಶೋದೆಯ ಪೂಜೆ ಮಾಡುತ್ತಾರೆ. ಫೆಬ್ರವರಿ 21, 2022 ರಂದು ಸಂಜೆ 07:57 ಷಷ್ಠಿ ತಿಥಿ ಆರಂಭವಾಗಿ ಫೆಬ್ರವರಿ 22, 2022 ರಂದು 06:34 PM ರಂದು ಷಷ್ಠಿ ತಿಥಿ ಮುಕ್ತಾಯವಾಗುತ್ತದೆ.

ಈ ದಿನ ಈ ರೀತಿ ಮಾಡುವುದಿಂದ ಯಶೋದೆ-ಕೃಷ್ಣನ ಕೃಪೆಗೆ ಪಾತ್ರರಾಗುತ್ತೀರಿ -ಯಶೋದಾ ಜಯಂತಿಯ ದಿನದಂದು ಕೃಷ್ಣನ ದೇವಸ್ಥಾನದಲ್ಲಿ ಗೋಧಿ ತುಂಬಿದ ತಾಮ್ರದ ಕಲಶವನ್ನು ಅರ್ಪಿಸುವುದು ಒಳ್ಳೆಯದು ಎಂದು ನಂಬಲಾಗಿದೆ. -ಮನೆಯ ಸಂಕಷ್ಟಗಳು ದೂರವಾಗಲು ತಾಯಿ ಯಶೋದೆ ಮೇಲೆ ಶ್ರೀಕೃಷ್ಣ ಕುಳಿತಿರುವ ಫೋಟೋವನ್ನು ಮನೆಯ ಮುಖ್ಯ ದ್ವಾರದಲ್ಲಿ ಅಂಟಿಸಬೇಕು ಎಂದು ಹೇಳಲಾಗುತ್ತದೆ. -ಯಶೋದಾ ಜಯಂತಿಯ ದಿನದಂದು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. -ಈ ದಿನದಂದು ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಅಥವಾ ಓಂ ಅನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ ಎಂದು ನಂಬಲಾಗಿದೆ.

ಯಶೋದಾ ಜಯಂತಿ ಪೂಜಾ ವಿಧಿ ಯಶೋದಾ ಜಯಂತಿಯ ದಿನದಂದು ಮಾತೆ ಯಶೋದೆಯ ಮಡಿಲಲ್ಲಿ ಕುಳಿತಿರುವ ಶ್ರೀ ಕೃಷ್ಣನ ಚಿತ್ರ ಅಥವಾ ಮೂರ್ತಿಯನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಮಾತೃ ಹೃದಯಿ ಯಶೋದೆಯ ಕೃಪೆ ತಮ್ಮ ಮಗುವಿನ ಮೇಲಿದ್ದು ಮಗುವಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ದಿನ ಮಹಿಳೆಯರು ಶ್ರೀ ಕೃಷ್ಣ ಮತ್ತು ತಾಯಿ ಯಶೋದೆಯನ್ನು ಪೂಜಿಸಿದರೆ, ಶ್ರೀಕೃಷ್ಣನು ಮಗುವಿನ ರೂಪದಲ್ಲಿ ಕೃಪೆ ನೀಡುತ್ತಾನೆ ಎಂದು ನಂಬಲಾಗಿದೆ.

ಯಶೋದಾ ಜಯಂತಿಯ ದಿನ ಪೂಜೆ ಮಾಡುವುದರಿಂದ ಆಗುವ ಲಾಭಗಳು ತಾಯಿ ಯಶೋದಾ ಮತ್ತು ಶ್ರೀ ಕೃಷ್ಣನನ್ನು ಪೂಜಿಸುವುದು ಮತ್ತು ಈ ದಿನದಂದು ಉಪವಾಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ದಿನದಂದು ಶ್ರೀಕೃಷ್ಣ ಮತ್ತು ತಾಯಿ ಯಶೋದೆಯನ್ನು ಪೂಜಿಸುವುದರಿಂದ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳಾಗುತ್ತವೆ. ಜೊತೆಗೆ ಮನೆಯಲ್ಲಿನ ತೊಂದರೆಗಳಿಂದ ಮುಕ್ತರಾಗುತ್ತಾರೆ.

ಇದನ್ನೂ ಓದಿ: ನಂಬಿದ ಭಕ್ತರ ಕೈ ಬಿಡುವುದಿಲ್ಲ ಶ್ರೀ ಕೃಷ್ಣ; ದಿನ ನಿತ್ಯ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಗಾಗಿ ಪವಾಡ ಸೃಷ್ಟಿಸಿದ ಮುರಳೀಧರ

‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ