AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yashoda jayanti 2022: ಮಾತೃ ಹೃದಯಿ ತಾಯಿ ಯಶೋದೆಯ ಕೃಪೆ ತಮ್ಮ ಮಕ್ಕಳ ಮೇಲಿರಲು ಇಂದು ಕೃಷ್ಣ-ಯಶೋದೆಯ ಪೂಜೆ ಮಾಡಿ

ಈ ದಿನ ತಾಯಿ ಯಶೋದೆಯನ್ನು ಪೂಜಿಸಲಾಗುತ್ತದೆ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನ ದೇವಸ್ಥಾನಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ಅಲಂಕರಿಸಲಾಗುತ್ತದೆ.

Yashoda jayanti 2022: ಮಾತೃ ಹೃದಯಿ ತಾಯಿ ಯಶೋದೆಯ ಕೃಪೆ ತಮ್ಮ ಮಕ್ಕಳ ಮೇಲಿರಲು ಇಂದು ಕೃಷ್ಣ-ಯಶೋದೆಯ ಪೂಜೆ ಮಾಡಿ
ತಾಯಿ ಯಶೋದೆ ಮತ್ತು ಬಾಲ ಕೃಷ್ಣ
TV9 Web
| Edited By: ಆಯೇಷಾ ಬಾನು|

Updated on: Feb 22, 2022 | 7:15 AM

Share

ಭಗವಾನ್ ಶ್ರೀ ಕೃಷ್ಣನಿಗೆ(Lord Krishna) ಇಬ್ಬರು ತಾಯಂದಿರು. ಹೆತ್ತ ತಾಯಿ ದೇವಕಿಯಾದ್ರೆ(Devaki) ಕೃಷ್ಣನನ್ನು ತನ್ನದೇ ಮಗನಂತೆ ಪಾಲನೆ-ಪೋಷಣೆ ಮಾಡಿದ್ದು ಯಶೋದೆ(Yashoda). ಕಂಸನ ಕೈಗೆ ಸಿಕ್ಕಿ ತನ್ನ 8ನೇ ಮಗು ಕೂಡ ಬಲಿಯಾಗಬಾರದೆಂದು ತ್ಯಾಗ ಮಾಡಿದ ದೇವಕಿ ಒಂದು ಕಡೆಯಾದ್ರೆ. ಕೃಷ್ಣನ ತುಂಟಾಟ, ಚೆಲ್ಲಾಟಗಳನ್ನು ಸಹಿಸಿಕೊಂಡು ತನ್ನದೇ ಮಗುವೆಂದು ಭಾವಿಸಿ ಮಾತೃ ಮಾತ್ಸಲ್ಯ ಮೆರೆದ ಯಶೋದೆ ಮತ್ತೊಂದು ಕಡೆ. ಆದ್ರೆ ಶ್ರೀ ಕೃಷ್ಣ ತನ್ನ ಇಬ್ಬರೂ ತಾಯಂದಿರನ್ನು ಸಮಾನವಾದ ಪ್ರೀತಿ ನೀಡಿ ಗೌರವಿಸಿದ್ದಾನೆ. ಇಂದು ಕಷ್ಣನ ಸಾಕು ತಾಯಿ ಯಶೋದೆಯ ಜಯಂತಿಯನ್ನು ಆಚರಿಸಲಾಗುತ್ತೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ತಾಯಿ ಯಶೋದಾ ಜಯಂತಿಯನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷ ಷಷ್ಠಿಯಂದು ಆಚರಿಸಲಾಗುತ್ತದೆ. ಯಶೋದಾ ಜಯಂತಿ ಫೆಬ್ರವರಿ 22 ರಂದು ಅಂದ್ರೆ ಮಂಗಳವಾರದಂದು ಬಂದಿದೆ.

ಈ ದಿನ ತಾಯಿ ಯಶೋದೆಯನ್ನು ಪೂಜಿಸಲಾಗುತ್ತದೆ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನ ದೇವಸ್ಥಾನಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ಅಲಂಕರಿಸಲಾಗುತ್ತದೆ. ಈ ದಿನ ಭಕ್ತರು ಕೃಷ್ಣನ ದರ್ಶನ ಮಾಡಿ ತಾಯಿ ಯಶೋದೆಯ ಪೂಜೆ ಮಾಡುತ್ತಾರೆ. ಫೆಬ್ರವರಿ 21, 2022 ರಂದು ಸಂಜೆ 07:57 ಷಷ್ಠಿ ತಿಥಿ ಆರಂಭವಾಗಿ ಫೆಬ್ರವರಿ 22, 2022 ರಂದು 06:34 PM ರಂದು ಷಷ್ಠಿ ತಿಥಿ ಮುಕ್ತಾಯವಾಗುತ್ತದೆ.

ಈ ದಿನ ಈ ರೀತಿ ಮಾಡುವುದಿಂದ ಯಶೋದೆ-ಕೃಷ್ಣನ ಕೃಪೆಗೆ ಪಾತ್ರರಾಗುತ್ತೀರಿ -ಯಶೋದಾ ಜಯಂತಿಯ ದಿನದಂದು ಕೃಷ್ಣನ ದೇವಸ್ಥಾನದಲ್ಲಿ ಗೋಧಿ ತುಂಬಿದ ತಾಮ್ರದ ಕಲಶವನ್ನು ಅರ್ಪಿಸುವುದು ಒಳ್ಳೆಯದು ಎಂದು ನಂಬಲಾಗಿದೆ. -ಮನೆಯ ಸಂಕಷ್ಟಗಳು ದೂರವಾಗಲು ತಾಯಿ ಯಶೋದೆ ಮೇಲೆ ಶ್ರೀಕೃಷ್ಣ ಕುಳಿತಿರುವ ಫೋಟೋವನ್ನು ಮನೆಯ ಮುಖ್ಯ ದ್ವಾರದಲ್ಲಿ ಅಂಟಿಸಬೇಕು ಎಂದು ಹೇಳಲಾಗುತ್ತದೆ. -ಯಶೋದಾ ಜಯಂತಿಯ ದಿನದಂದು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. -ಈ ದಿನದಂದು ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಅಥವಾ ಓಂ ಅನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ ಎಂದು ನಂಬಲಾಗಿದೆ.

ಯಶೋದಾ ಜಯಂತಿ ಪೂಜಾ ವಿಧಿ ಯಶೋದಾ ಜಯಂತಿಯ ದಿನದಂದು ಮಾತೆ ಯಶೋದೆಯ ಮಡಿಲಲ್ಲಿ ಕುಳಿತಿರುವ ಶ್ರೀ ಕೃಷ್ಣನ ಚಿತ್ರ ಅಥವಾ ಮೂರ್ತಿಯನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಮಾತೃ ಹೃದಯಿ ಯಶೋದೆಯ ಕೃಪೆ ತಮ್ಮ ಮಗುವಿನ ಮೇಲಿದ್ದು ಮಗುವಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ದಿನ ಮಹಿಳೆಯರು ಶ್ರೀ ಕೃಷ್ಣ ಮತ್ತು ತಾಯಿ ಯಶೋದೆಯನ್ನು ಪೂಜಿಸಿದರೆ, ಶ್ರೀಕೃಷ್ಣನು ಮಗುವಿನ ರೂಪದಲ್ಲಿ ಕೃಪೆ ನೀಡುತ್ತಾನೆ ಎಂದು ನಂಬಲಾಗಿದೆ.

ಯಶೋದಾ ಜಯಂತಿಯ ದಿನ ಪೂಜೆ ಮಾಡುವುದರಿಂದ ಆಗುವ ಲಾಭಗಳು ತಾಯಿ ಯಶೋದಾ ಮತ್ತು ಶ್ರೀ ಕೃಷ್ಣನನ್ನು ಪೂಜಿಸುವುದು ಮತ್ತು ಈ ದಿನದಂದು ಉಪವಾಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ದಿನದಂದು ಶ್ರೀಕೃಷ್ಣ ಮತ್ತು ತಾಯಿ ಯಶೋದೆಯನ್ನು ಪೂಜಿಸುವುದರಿಂದ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳಾಗುತ್ತವೆ. ಜೊತೆಗೆ ಮನೆಯಲ್ಲಿನ ತೊಂದರೆಗಳಿಂದ ಮುಕ್ತರಾಗುತ್ತಾರೆ.

ಇದನ್ನೂ ಓದಿ: ನಂಬಿದ ಭಕ್ತರ ಕೈ ಬಿಡುವುದಿಲ್ಲ ಶ್ರೀ ಕೃಷ್ಣ; ದಿನ ನಿತ್ಯ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಗಾಗಿ ಪವಾಡ ಸೃಷ್ಟಿಸಿದ ಮುರಳೀಧರ

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ