AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಮಿಕಾ ಎತ್ತಿಕೊಂಡ ಅನುಷ್ಕಾ ಶರ್ಮ, ಲಗೇಜ್ ಹಿಡಿದ ವಿರಾಟ್ ಕೊಹ್ಲಿ; ಏರ್​ಪೋರ್ಟ್ ಫೊಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಅನುಷ್ಕಾ ಹಾಗೂ ಮಗಳು ವಮಿಕಾ ಗುಜರಾತ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಯಾಗಿದ್ದರು. ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು.

ವಮಿಕಾ ಎತ್ತಿಕೊಂಡ ಅನುಷ್ಕಾ ಶರ್ಮ, ಲಗೇಜ್ ಹಿಡಿದ ವಿರಾಟ್ ಕೊಹ್ಲಿ; ಏರ್​ಪೋರ್ಟ್ ಫೊಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ
Follow us
TV9 Web
| Updated By: ganapathi bhat

Updated on:Apr 06, 2022 | 6:54 PM

ನಟಿ ಅನುಷ್ಕಾ ಶರ್ಮ, ವಿರಾಟ್ ಕೊಹ್ಲಿ ಅಹಮದಾಬಾದ್ ಏರ್​ಪೋರ್ಟ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವಿರುಷ್ಕಾ ದಂಪತಿ ತಮ್ಮ ಮಗುವಿನೊಂದಿಗೆ ಕಂಡುಬಂದ ಫೊಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದೆ. ಅನುಷ್ಕಾ ಶರ್ಮ ತಮ್ಮ ಮಗಳನ್ನು ಎತ್ತಿಕೊಂಡಿದ್ದರೆ, ವಿರಾಟ್ ಕೊಹ್ಲಿ ಲಗೇಜ್​ನ್ನು ಹಿಡಿದು ಕಂಡುಬಂದಿದ್ದಾರೆ. ಸೆಲೆಬ್ರಿಟಿ ಸಂಸಾರದ ಕ್ಯೂಟ್ ಫೊಟೊ ಈಗ ಅಭಿಮಾನಿಗಳ ಮನಗೆದ್ದಿದೆ. ಮಗುವಿನ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಬಾರದು ಎಂದು ದಂಪತಿ ಈ ಹಿಂದೆ ಕೇಳಿಕೊಂಡಿದ್ದರು. ಅದರಂತೆ ವೈರಲ್ ಆಗಿರುವ ಫೊಟೊದಲ್ಲೂ ಮಗುವಿನ ಮುಖ ಕಾಣುತ್ತಿಲ್ಲ.

ಅನುಷ್ಕಾ ಹಾಗೂ ಮಗಳು ವಮಿಕಾ ಗುಜರಾತ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಯಾಗಿದ್ದರು. ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು. ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಗೆಲ್ಲುವ ಮೂಲಕ ಭಾರತ 3-2 ಅಂತರದ ಗೆಲುವು ದಾಖಲಿಸಿತ್ತು.

ಈ ಮೊದಲು ಮಹಿಳಾ ದಿನಕ್ಕೆ ಸಂಬಂಧಿಸಿ ವಿರಾಟ್ ಕೊಹ್ಲಿ ಅನುಷ್ಕಾ ಹಾಗೂ ವಮಿಕಾಗೆ ಶುಭಕೋರಿ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮಗುವಿನ ಜನನವೊಂದು ಅಭೂತಪೂರ್ವ ಘಳಿಗೆ. ಮಾನವನೊಬ್ಬ ಹೊಂದಬಹುದಾದ ಅದ್ಭುತ ಅನುಭವ ಎಂದು ತಮ್ಮ ತಂದೆತನದ ಬಗ್ಗೆ ತಿಳಿಸಿದ್ದರು. ಮಹಿಳೆಯರು ನಮಗಿಂತ ಬಹಳ ಶಕ್ತಿಶಾಲಿಗಳು ಎಂದೂ ಕೊಹ್ಲಿ ಹೇಳಿದ್ದರು. ಮಡದಿ, ಮಗಳಿಗೆ ಮಹಿಳಾ ದಿನದ ಶುಭ ಕೋರಿದ್ದ ಕೊಹ್ಲಿ ಜೊತೆಗೆ ಪ್ರಪಂಚದ ಎಲ್ಲಾ ಮಹಿಳೆಯರಿಗೂ ಶುಭಾಶಯ ಕೋರಿದ್ದರು.

ಮಗಳು ವಮಿಕಾ, ಅನುಷ್ಕಾ ಶರ್ಮ ಹಾಗೂ ವಿರಾಟ್ ಫೊಟೊ ವೈರಲ್

ಬಯೋ ಬಬಲ್ ಕಾರಣ ಜೊತೆಗಿದ್ದರು ಅನುಷ್ಕಾ, ವಿರಾಟ್, ವಮಿಕಾ! ಈ ಹಿಂದೆ, ಕೊರೊನಾ ಸೋಂಕಿನಿಂದ ಟೀಂ ಇಂಡಿಯಾ ಆಟಗಾರರನ್ನು ರಕ್ಷಿಸುವ ಸಲುವಾಗಿ ಬಿಸಿಸಿಐ ತನ್ನ ನಿಯಾಮಾವಳಿಗಳಲ್ಲಿ ಹಲವು ಬದಲಾವಣೆಗಳನ್ನು ತಂದಿತ್ತು. ಆ ನಿಯಮಗಳ ಫಲವೇ ಬಯೋ ಬಬಲ್. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಕ್ರಿಕೆಟಿಗರು ಎರಡು ತಿಂಗಳಿಗೂ ಹೆಚ್ಚು ಕಾಲ ಬಯೋ ಬಬಲ್​ ನಿಯಮಕ್ಕೆ ಒಳಗಾಗಿದ್ದರು. ಚೆನ್ನೈನಲ್ಲಿ ನಡೆದ ನಾಲ್ಕು ಟೆಸ್ಟ್ ಸರಣಿಯ ಮುನ್ನ ಕೊಹ್ಲಿ ಅಂಡ್​ ಟೀಂ ಚೆನ್ನೈನಲ್ಲಿ ಬಯೋ-ಬಬಲ್ ನಿಯಮಕ್ಕೆ ಒಳಗಾಗಿತು. ಇದಕ್ಕೂ ಮೊದಲು ಟೀಂ ಇಂಡಿಯಾ ಆಸಿಸ್​ ಪ್ರವಾಸದ ವೇಳೆ ಬಯೋ ಬಬಲ್​ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿತ್ತು.

ಇದರ ಫಲವಾಗಿ ಟೀಂ ಇಂಡಿಯಾದ ಕೆಲವು ಆಟಗಾರರು ಮತ್ತು ಇಂಗ್ಲೆಂಡ್ ತಂಡದ ಆಟಗಾರರು ಅಹಮದಾಬಾದ್‌ನ ಹಯಾಟ್ ರೀಜೆನ್ಸಿ ಹೋಟೆಲ್​ನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಾಸ್ತವ್ಯ ಹೂಡಿದ್ದರು. ಟೀಂ ಇಂಡಿಯಾ ನಾಯಕ ಕೊಹ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಕೂಡ ಹಯಾಟ್ ರೀಜೆನ್ಸಿ ಹೋಟೆಲ್​ನಲ್ಲಿ ನೆಲೆಯೂರಿದ್ದರು.

ಹೀಗಾಗಿ ನಾಯಕ ವಿರಾಟ್​ ಕೊಹ್ಲಿ ಉಳಿದುಕೊಂಡಿರುವ ಕೋಣೆಯ ಬಾಗಿಲಿನ ಮೇಲೆ ನಾಮ ಫಲಕವನ್ನು ಹಾಕಲಾಗಿತ್ತು. ಈ ಫಲಕದ ಮೇಲೆ ವಿರಾಟ್​ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಹೆಸರನ್ನು ಸಹ ಬರೆಯಲಾಗಿತ್ತು. ಜೊತೆಗೆ ಸ್ವಿಟ್​ ಹೋಮ್​ ಎಂಬ ಹೆಡ್ಡಿಂಗ್​ ಸಹ ನೀಡಲಾಗಿತ್ತು. ಇದರಿಂದ ಆಟಗಾರರಿಗೆ ಹೋಟೆಲ್​ನ ರೂಂಗಳು ತಮ್ಮ ಮನೆಗಳಂತೆಯೇ ಭಾಸವಾಗುತ್ತದೆ ಎಂಬುದು ಹೋಟೆಲ್​ ಸಿಬ್ಬಂದಿಗಳ ವಿವರಣೆಯಾಗಿತ್ತು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ ಅನ್ನೋದು ನಿಜವೇ?

ವಿರುಷ್ಕಾ ದಂಪತಿ ಮಗಳ ಹೆಸರು ‘ವಮಿಕಾ’.. ಏನಿದರ ಅರ್ಥ?

Published On - 10:40 pm, Sun, 21 March 21

ಪಹಲ್ಗಾಮ್ ಘಟನೆ ಬಗ್ಗೆ ರಾಗಿಣಿ ದ್ವಿವೇದಿ ಆಕ್ರೋಶ: ವಿಡಿಯೋ ನೋಡಿ
ಪಹಲ್ಗಾಮ್ ಘಟನೆ ಬಗ್ಗೆ ರಾಗಿಣಿ ದ್ವಿವೇದಿ ಆಕ್ರೋಶ: ವಿಡಿಯೋ ನೋಡಿ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ