AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SL vs PAK: ಪಾಕಿಸ್ತಾನಕ್ಕೆ ದುಬಾರಿಯಾದ ರಿಜ್ವಾನ್ ಅರ್ಧಶತಕ; ಲಂಕಾ ಗೆಲ್ಲಲು ಬಾಬರ್ ಪಡೆಯ 5 ತಪ್ಪುಗಳೇ ಕಾರಣ..!

Asia Cup 2022: ಟೂರ್ನಿಯುದ್ದಕ್ಕೂ ಪಾಕಿಸ್ತಾನ ತಂಡ ಅಮೋಘ ಆಟ ಪ್ರದರ್ಶಿಸಿತು. ಫೈನಲ್‌ಗೂ ಮುನ್ನ ಸೂಪರ್ 4ರಲ್ಲಿ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಸೆಣಸಿ ಸೋಲನುಭವಿಸಿತ್ತು. ಫೈನಲ್‌ನಲ್ಲಿಯೂ ಅದೇ ಫಲಿತಾಂಶ ಹೊರಬಿತ್ತು.

SL vs PAK: ಪಾಕಿಸ್ತಾನಕ್ಕೆ ದುಬಾರಿಯಾದ ರಿಜ್ವಾನ್ ಅರ್ಧಶತಕ; ಲಂಕಾ ಗೆಲ್ಲಲು ಬಾಬರ್ ಪಡೆಯ 5 ತಪ್ಪುಗಳೇ ಕಾರಣ..!
ಪಾಕ್ ತಂಡ
TV9 Web
| Updated By: ಪೃಥ್ವಿಶಂಕರ|

Updated on:Sep 12, 2022 | 2:22 PM

Share

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ತಂಡ ಸುಮಾರು ಎಂಟು ವರ್ಷಗಳ ಬಳಿಕ ಮತ್ತೊಮ್ಮೆ ಏಷ್ಯನ್ ಗದ್ದುಗೆ ಏರಿದೆ. ದುಬೈನಲ್ಲಿ ನಡೆದ ಏಷ್ಯಾಕಪ್‌ನ (Asia Cup 2022) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿ ಶ್ರೀಲಂಕಾ ಪ್ರಶಸ್ತಿ ಗೆದ್ದುಕೊಂಡಿತು. ಈ ಮೂಲಕ ಶ್ರೀಲಂಕಾ 2014 ರಿಂದ ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು. ಇದು ಲಂಕಾ ತಂಡದ ಆರನೇ ಏಷ್ಯಾಕಪ್ ಪ್ರಶಸ್ತಿಯಾಗಿದೆ. ಗ್ರೂಪ್ ಸುತ್ತಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲಿನ ನಂತರ ಪುಟಿದ್ದೇದ್ದ ಲಂಕಾ ತಂಡ ಯಾವುದೇ ಪಂದ್ಯದಲ್ಲಿ ಸೋಲನುಭವಿಸಲಿಲ್ಲ. ಜೊತೆಗೆ ಸೂಪರ್ 4ರಲ್ಲಿಯೂ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿತ್ತು.

ತಪ್ಪುಗಳ ಭಾರ ಹೊತ್ತ ಪಾಕಿಸ್ತಾನ

ಟೂರ್ನಿಯುದ್ದಕ್ಕೂ ಪಾಕಿಸ್ತಾನ ತಂಡ ಅಮೋಘ ಆಟ ಪ್ರದರ್ಶಿಸಿತು. ಆದರೆ ಫೈನಲ್‌ಗೂ ಮುನ್ನ ಅಡಿದ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಸೆಣಸಿ ಸೋಲನುಭವಿಸಿತ್ತು. ಫೈನಲ್‌ನಲ್ಲಿಯೂ ಅದೇ ಫಲಿತಾಂಶ ಹೊರಬಿತ್ತು. ಪಾಕ್ ತಂಡದ ಈ ಸೋಲಿಗೆ ಅವರ ಸ್ವಯಂಕೃತ ತಪ್ಪುಗಳೇ ಕಾರಣವಾದವು. ಈ ಫೈನಲ್​ನಲ್ಲಿ ಪಾಕಿಸ್ತಾನ ತಂಡ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಎಲ್ಲಿಯೂ 100% ಪರಿಪೂರ್ಣತೆಯನ್ನು ಕಾಣಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನ ಸೋಲಿಗೆ ಕಾರಣಗಳೇನು?

  1. ಪಾಕ್ ತಂಡದ ಈ ಸೋಲಿಗೆ ಪ್ರಮುಖ ಕಾರಣ ತಂಡದ ನಾಯಕ ಬಾಬರ್ ಅಜಮ್. ಈ ಸರಣಿಯುದ್ದಕ್ಕೂ ಬಾಬರ್ ಬ್ಯಾಟ್ ಅಬ್ಬರಿಸಲೇ ಇಲ್ಲ. ಎಂದಿನಂತೆಯೇ ಈ ಪಂದ್ಯದಲ್ಲೂ ಬಾಬರ್ ಕೇವಲ ಕೇವಲ ಐದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಇನಿಂಗ್ಸ್‌ನ ಆರಂಭದಲ್ಲಿ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿದ ಕಾರಣ ಶ್ರೀಲಂಕಾಗೆ  ಇದು ಲಾಭವಾಯಿತು.
  2. ಮೊಹಮ್ಮದ್ ರಿಜ್ವಾನ್ ಹೊರತುಪಡಿಸಿ ಪಾಕಿಸ್ತಾನದ ಯಾವುದೇ ಬ್ಯಾಟ್ಸ್‌ಮನ್ ಅವಶ್ಯಕ ಇನ್ನಿಂಗ್ಸ್ ಆಡಲಿಲ್ಲ. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. ಉಳಿದಂತೆ ತಂಡದ ಏಳು ಬ್ಯಾಟ್ಸ್‌ಮನ್‌ಗಳು 10ಕ್ಕಿಂತ ಕಡಿಮೆ ವೈಯಕ್ತಿಕ ಸ್ಕೋರ್‌ನಲ್ಲಿ ಔಟಾದರು.
  3. ರಿಜ್ವಾನ್ ಕೂಡ ಫೈನಲ್​ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದೆ ತಂಡದ ಸೋಲಿಗೆ ಮತ್ತೊಂದು ಪ್ರಮುಖ ಕಾರಣವಾಯಿತು. ರಿಜ್ವಾನ್ ಬರೋಬ್ಬರಿ 49 ಎಸೆತಗಳನ್ನು ಎದುರಿಸಿ ಕೇವಲ 55 ರನ್ ಗಳಿಸಿದರು. ಈ ಇನ್ನಿಂಗ್ಸ್​ನಲ್ಲಿ ಅವರು ಕೇವಲ ಒಂದು ಸಿಕ್ಸರ್ ಬಾರಿಸಲಷ್ಟೇ ಶಕ್ತರಾದರು. ಹೀಗಾಗಿ 171 ರನ್‌ಗಳ ಸ್ಕೋರ್ ಬೆನ್ನಟ್ಟಿದ ಪಾಂಕ್ ತಂಡಕ್ಕೆ ರಿಜ್ವಾನ್ ಬ್ಯಾಟಿಂಗ್ ಯಾವ ರೀತಿಯ ಸಹಾವನ್ನು ಮಾಡಲಿಲ್ಲ
  4. ಪಾಕಿಸ್ತಾನದ ಸೋಲಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಅವರ ಕಳಪೆ ಫೀಲ್ಡಿಂಗ್. 18ನೇ ಓವರ್ ನಲ್ಲಿ ಭಾನುಕಾ ರಾಜಪಕ್ಸೆ ನೀಡಿದ ಕ್ಯಾಚ್ ಅನ್ನು ಹ್ಯಾರಿಸ್ ರೌಫ್ ಕೈಬಿಟ್ಟರು. ಬಳಿಕ ಕೊನೆಯ ಓವರ್‌ನಲ್ಲೂ ಶಾದಾಬ್ ಮತ್ತು ಆಸಿಫ್ ನಡುವಿನ ಸಂವಹನದ ಕೊರತೆಯಿಂದಾಗಿ ಇಬ್ಬರು ಸೇರಿ ಕ್ಯಾಚ್ ಕೈಚೆಲ್ಲಿದರು. ಎರಡು ಜೀವದಾನ ಪಡೆದ ಭಾನುಕಾ ರಾಜಪಕ್ಸೆ 45 ಎಸೆತಗಳಲ್ಲಿ 71 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದರು.
  5. ವನಿಂದು ಹಸರಂಗ ಅವರನ್ನು ಪಾಕ್ ತಂಡ ಕಡೆಗಣಿಸಿದ್ದೆ ಅವರ ಸೋಲಿಗೆ ಮತ್ತೊಂದು ಕಾರಣವಾಗಿದೆ. ಮೊದಲು ಬ್ಯಾಟ್‌ನಿಂದ 21 ಎಸೆತಗಳಲ್ಲಿ 36 ರನ್​ಗಳ ಕೊಡುಗೆ ನೀಡಿದ ಹಸರಂಗ, ಬಳಿಕ ಬೌಲಿಂಗ್​ನಲ್ಲಿ ಒಂದೇ ಓವರ್​ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ತಲೆಕೆಳಗಾಗಿಸಿದರು.

Published On - 2:22 pm, Mon, 12 September 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್