AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shikha Pandey: ಸ್ಪಿನ್ನರ್​ಗಳಿಗೂ ಕಷ್ಟ: ವೇಗಿ ಶಿಖಾ ಪಾಂಡೆ ಎಸೆದ ಬಾಲ್ ಟರ್ನ್ ಆದ ಪರಿ ನೋಡಿ: ಕ್ಲೀನ್ ಬೌಲ್ಡ್

Australia Women vs India Women T20 Match: ಎರಡನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆಟಗಾರ್ತಿ ಶಿಖಾ ಪಾಂಡೆ ತಮ್ಮ ಅದ್ಭುತ ಸ್ವಿಂಗ್ ಬಾಲ್ ಮೂಲಕ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಅನ್ನು ಔಟ್ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Shikha Pandey: ಸ್ಪಿನ್ನರ್​ಗಳಿಗೂ ಕಷ್ಟ: ವೇಗಿ ಶಿಖಾ ಪಾಂಡೆ ಎಸೆದ ಬಾಲ್ ಟರ್ನ್ ಆದ ಪರಿ ನೋಡಿ: ಕ್ಲೀನ್ ಬೌಲ್ಡ್
INDW vs AUSW Shikha Pandey
TV9 Web
| Updated By: Vinay Bhat|

Updated on: Oct 10, 2021 | 9:15 AM

Share

ಭಾರತ ಮಹಿಳಾ ಕ್ರಿಕೆಟ್ ತಂಡ (Indian Womens Cricket Team) ಕಾಂಗರೂಗಳ ನಾಡಿನಲ್ಲಿ ಬೀಡುಬಿಟ್ಟಿದ್ದು ಟಿ20 ಸರಣಿ ಆಡುತ್ತಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರು (AUSW vs INDW) ಸೋಲು ಕಂಡರಾದರೂ ವೇಗಿ ಶಿಖಾ ಪಾಂಡೆ (Shikha Pandey) ಎಲ್ಲರ ಗಮನ ಸೆಳೆದರು. ತಮ್ಮ ಅದ್ಭುತ ಸ್ವಿಂಗ್ ಬಾಲ್ (Swing Ball) ಮೂಲಕ ಎದುರಾಳಿ ಬ್ಯಾಟರ್ ಅನ್ನು ಔಟ್ ಮಾಡಿದ್ದು ಶತಮಾನದ ಎಸೆತ ಎಂದು ಕರೆಯಲಾಗಿದೆ. ಹೌದು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ. 25 ರನ್​ಗೂ ಮುನ್ನವೇ ಸ್ಮೃತಿ ಮಂದಾನ 1 ರನ್ (Smriti Mandhana), ಶೆಫಾಲಿ ವರ್ಮಾ (3) ಮತ್ತು ಜೆಮಿಯಾ ರೋಡ್ರಿಗಸ್ (7) ವಿಕೆಟ್ ಕಳೆದುಕೊಂಡಿತು. ಯಶ್ತಿಕಾ ಭಾಟಿಯಾ (8) ಹಾಗೂ ರಿಚಾ ಘೋಷ್ (2) ಕೂಡ ಬೇಗನೆ ಔಟ್ ಆದರು.

ಈ ಸಂದರ್ಭ ನಾಯಕಿ ಹರ್ಮನ್​ಪ್ರೀತ್ ಕೌರ್ ಕೆಲಹೊತ್ತು ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾದರು. 20 ಎಸೆತಗಳಲ್ಲಿ 28 ರನ್ ಗಳಿಸಿದರು. ಚೆನ್ನಾಗಿಯೆ ಆಡುತ್ತಿದ್ದ ದೀಪ್ತಿ ಶರ್ಮಾ 16 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾದರು. ಅಂತಿಮ ಹಂತದಲ್ಲಿ ಪೂಜಾ ವಸ್ತ್ರಾಕರ್ 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 37 ರನ್ ಗಳಿಸಿದ ಪರಿಣಾಮ ಭಾರತ ಮಹಿಳಾ ತಂಡದ ಮೊತ್ತ 20 ಓವರ್​ಗೆ 118ಕ್ಕೆ ತಲುಪಿತು. 9 ವಿಕೆಟ್ ಕಳೆದುಕೊಂಡಿದ್ದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ವನಿತೆಯರಿಗೆ ಮೊದಲ ಓವರ್​​ನಲ್ಲೇ ಶಾಕ್ ನೀಡಿದ್ದು ಶಿಖಾ ಪಾಂಡೆ. ಇವರು ಎಸೆದ ಆ ಒಂದು ಎಸೆತವು ಇಡೀ ಕ್ರಿಕೆಟ್ ಲೋಕವನ್ನು ನಿಬ್ಬೆರಗಾಗಿಸಿದೆ. ತನ್ನ 2ನೇ ಎಸೆತದಲ್ಲಿ ಅಲೈಸಾ ಹೀಲಿ ಅವರನ್ನು ಸ್ವಿಂಗ್ ಎಸೆತದ ಮೂಲಕ ಬೌಲ್ಡ್ ಮಾಡಿದರು. ಸುಮಾರು 6-8 ಸ್ಟಂಪ್ಸ್ ದೂರದಲ್ಲೇ ಬಿದ್ದ ಚೆಂಡು, ಆಸೀಸ್ ಬ್ಯಾಟರ್‌ಗೆ ಕಣ್ತಿಪಿಸಿ ಮಿಡ್ ಸ್ಟಂಪ್‌ಗೆ ಬಡಿಯಿತು. ನಂಬಲಾಗದ ರೀತಿಯಲ್ಲಿ ಸ್ಪಿನ್ ಬಾಲ್ ರೀತಿ ಸ್ವಿಂಗ್ ಆದ ಆ ಚೆಂಡು ಸೀದಾ ಬೇಲ್ ಎಗರಿಸಿತು. ಆಫ್​ಸೈಡ್​ಆಚೆ ಬಿದ್ದು ಕಟ್ ಆದ ಈ ಚೆಂಡನ್ನ ಎದುರಿಸಲು ಯಾವ ಬ್ಯಾಟರ್​ಗೂ ಅಸಾಧ್ಯದ ಮಾತೇ. ಬ್ಯಾಟರ್ ಅಲೈಸಾ ಹೀಲಿ ಈ ಬಾಲ್​ನ ಇನ್​ಸ್ವಿಂಗ್ ಕಂಡು ಕಕ್ಕಾಬಿಕ್ಕಿಯಾದರು.

ಆಸ್ಟ್ರೇಲಿಯಾ ಕ್ರಿಕೆಟ್​ನ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಇದರ ವಿಡಿಯೋ ಹಾಕಿ ಆಶ್ಚರ್ಯ ವ್ಯಕ್ತಪಡಿಸಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಹಳಷ್ಟು ವೈರಲ್ ಆಗುತ್ತಿದೆ.

ಆದರೆ, ಭಾರತೀಯ ಬೌಲರ್​ಗಳು ನಂತರದಲ್ಲಿ ಇದೇ ರೀತಿಯ ಮಾರಕ ದಾಳಿ ಸಂಘಟಿಸಲು ಸಾಧ್ಯವಾಗಲಿಲ್ಲ. ಬೆತ್ ಮೂನೀ (36 ಎಸೆತ 34 ರನ್) ಮತ್ತು ಟಹಿಲಾ ಮೆಕ್​ಗ್ರಥ್ (33 ಎಸೆತ 42* ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 19.1 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿದರು.

ಸದ್ಯ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅಂತಿಮ ಮೂರನೇ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 1:40ಕ್ಕೆ ಆರಂಭವಾಗಲಿದೆ.

T20 World Cup: ಟಿ20 ವಿಶ್ವಕಪ್​ಗೆ ಭಾರತ ತಂಡದ ಬದಲಾವಣೆ ಕುರಿತು ಬಿಸಿಸಿಐಯಿಂದ ಶಾಕಿಂಗ್ ನಿರ್ಧಾರ

DC vs CSK Qualifier 1, IPL 2021: ಇಂದು ಮೊದಲ ಕ್ವಾಲಿಫೈಯರ್​ನಲ್ಲಿ ಡೆಲ್ಲಿ-ಚೆನ್ನೈ ಮುಖಾಮುಖಿ: ಗೆದ್ದರೆ ನೇರ ಫೈನಲ್​ಗೆ

(AUSW vs INDW Shikha Pandey produced one of the greatest deliveries in 2nd T20I against Australia)

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?