AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SL vs PAK: ಪಾಕ್ ದಾಳಿಗೆ ಪತರಗುಟ್ಟಿದ ಲಂಕಾ ಬ್ಯಾಟರ್​ಗಳು; ಇತ್ತ ಪಾಕ್ ಆರಂಭವೂ ಉತ್ತಮವಾಗಿಲ್ಲ

SL vs PAK: ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಆದರೆ ತಂಡದ ಎಂಟು ವಿಕೆಟ್‌ಗಳು 133 ರನ್‌ಗಳಿಗೆ ಪತನಗೊಂಡವು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡದ ಮೊತ್ತವನ್ನು 222 ರನ್​ಗಳಿಗೆ ಕರೆದೊಯ್ದರು.

SL vs PAK: ಪಾಕ್ ದಾಳಿಗೆ ಪತರಗುಟ್ಟಿದ ಲಂಕಾ ಬ್ಯಾಟರ್​ಗಳು; ಇತ್ತ ಪಾಕ್ ಆರಂಭವೂ ಉತ್ತಮವಾಗಿಲ್ಲ
Dinesh Chandimal
TV9 Web
| Edited By: |

Updated on: Jul 16, 2022 | 9:38 PM

Share

ಗಾಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರದಿಂದ ಆರಂಭವಾಗಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ (PAK vs SL) ನ ಮೊದಲ ದಿನದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್‌ಗಳು ಮಾರಕ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಬೌಲರ್‌ಗಳ ಮುಂದೆ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಹೆಚ್ಚು ಕಾಲ ಮೈದಾನದಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಆತಿಥೇಯರು ಮೊದಲ ದಿನವೇ 222 ರನ್‌ಗಳಿಗೆ ಆಲೌಟ್ ಆದರು. ಮೊದಲ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ ಕೂಡ ತನ್ನ ಎರಡು ವಿಕೆಟ್ ಕಳೆದುಕೊಂಡು ಕೇವಲ 24 ರನ್ ಗಳಿಸಿದೆ. ಪಾಕಿಸ್ತಾನ ಇನ್ನೂ ಎಂಟು ವಿಕೆಟ್‌ಗಳು ಬಾಕಿ ಉಳಿದಿರುವಂತೆಯೇ ಆತಿಥೇಯರಿಗಿಂತ 198 ರನ್‌ಗಳಷ್ಟು ಹಿಂದಿದೆ.

ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಆದರೆ ತಂಡದ ಎಂಟು ವಿಕೆಟ್‌ಗಳು 133 ರನ್‌ಗಳಿಗೆ ಪತನಗೊಂಡವು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡದ ಮೊತ್ತವನ್ನು 222 ರನ್​ಗಳಿಗೆ ಕರೆದೊಯ್ದರು. ಶ್ರೀಲಂಕಾ ಕೊನೆಯ ಎರಡು ವಿಕೆಟ್‌ಗಳಿಗೆ 89 ರನ್ ಸೇರಿಸಿತು. ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಒಂದು ರನ್ ಗಳಿಸಿ ಔಟಾದರು. ಕುಶಾಲ್ ಮೆಂಡಿಸ್ 21 ರನ್ ಗಳಿಸಿದರು. ಏಂಜೆಲೊ ಮ್ಯಾಥ್ಯೂಸ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಓಷಾಡ ಫೆರ್ನಾಂಡೊ ಅವರ ಇನ್ನಿಂಗ್ಸ್‌ ಅನ್ನು 35 ರನ್‌ಗಳಿಂದ ಮೀರಿ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಧನಂಜಯ್ ಡಿ ಸಿಲ್ವಾ 14 ರನ್ ಗಳಿಸಿ ಔಟಾದರು. ನಿರೋಶನ್ ಡಿಕ್ವೆಲ್ಲಾ ನಾಲ್ಕು, ರಮೇಶ್ ಮೆಂಡಿಸ್ 11, ಪ್ರಭಾತ್ ಜಯಸೂರ್ಯ ಮೂರು ರನ್ ಗಳಿಸಿದರು.

ಚಂಡಿಮಾಲ್ ಮತ್ತೆ ಅದ್ಭುತ ಆಟ

ಇದನ್ನೂ ಓದಿ
Image
ಜೈ ಶಾ ಯೋಜನೆಗೆ ಐಸಿಸಿ ಗ್ರೀನ್ ಸಿಗ್ನಲ್; ಇನ್ಮುಂದೆ ಎರಡೂವರೆ ತಿಂಗಳು ನಡೆಯಲಿದೆ ಐಪಿಎಲ್! ಜೊತೆಗೆ?
Image
IND vs ENG: 6 ಪಂದ್ಯಗಳಲ್ಲಿ 17 ಕ್ಯಾಚ್​ ಬಿಟ್ಟ ಟೀಂ ಇಂಡಿಯಾ; ಹೀಗಾದರೆ ಟಿ20 ವಿಶ್ವಕಪ್ ಕೈ ಜಾರುವುದು ಗ್ಯಾರಂಟಿ?
Image
IND vs ENG, 3rd ODI: ಭಾರತ- ಇಂಗ್ಲೆಂಡ್ ಫೈನಲ್ ಕದನಕ್ಕೆ ರೋಹಿತ್ ಪಡೆಯ ಸಂಭಾವ್ಯ 11

ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮತ್ತು 39 ರನ್‌ಗಳಿಂದ ಶ್ರೀಲಂಕಾದ ವಿಜಯದಲ್ಲಿ 206 ರನ್ ಗಳಿಸಿದ ದಿನೇಶ್ ಚಾಂಡಿಮಾಲ್ 76 ರನ್‌ಗಳೊಂದಿಗೆ ಗರಿಷ್ಠ ಸ್ಕೋರ್ ಮಾಡಿದರು. ಅವರು ಮಹಿಷ್ ತೀಕ್ಷಣ ಅವರೊಂದಿಗೆ ಒಂಬತ್ತನೇ ವಿಕೆಟ್‌ಗೆ 44 ರನ್ ಸೇರಿಸಿದರು. ಯಾಸಿರ್ ಶಾಗೆ ಚಾಂಡಿಮಾಲ್ ಕ್ಯಾಚ್ ನೀಡುವ ಮೂಲಕ ಹಸನ್ ಅಲಿ ಈ ಜೊತೆಯಾಟವನ್ನು ಮುರಿದರು. ತಮ್ಮ 115 ಎಸೆತಗಳ ಇನ್ನಿಂಗ್ಸ್‌ನಲ್ಲಿ ಚಾಂಡಿಮಾಲ್ 10 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅವರ ಔಟಾದ ನಂತರ, ತಿಕ್ಷನ್ ಮತ್ತು 11ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಕಸುನ್ ರಜಿತಾ 45 ರನ್ ಜೊತೆಯಾಟವನ್ನು ಹಂಚಿಕೊಂಡರು. ಟೀಕ್ಷಣ 65 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದರು. ಪಾಕ್ ಪರ ಶಾಹೀನ್ ಶಾ ಆಫ್ರಿದಿ 58 ರನ್ ನೀಡಿ 4 ವಿಕೆಟ್ ಪಡೆದರು. ಯಾಸಿರ್ ಶಾ ಮತ್ತು ಹಸನ್ ಅಲಿ ತಲಾ ಎರಡು ವಿಕೆಟ್ ಪಡೆದರು.

ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ

ಪಾಕಿಸ್ತಾನದ ಇನ್ನಿಂಗ್ಸ್ ಕಳಪೆಯಾಗಿ ಪ್ರಾರಂಭವಾಯಿತು. ಕಸುನ್ ರಜಿತಾ, ಇಮಾಮುಲ್ ಹಕ್ ಅವರನ್ನು ಎರಡು ರನ್‌ಗಳಿಗೆ ಎಲ್ಬಿಡಬ್ಲ್ಯೂ ಔಟ್ ಮಾಡಿದರು. ಇದಾದ ನಂತರ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅಬ್ದುಲ್ಲಾ ಶಫೀಕ್ (13)ರನ್ನು ಎಲ್ಬಿಡಬ್ಲ್ಯು ಔಟ್ ಮಾಡಿದರು. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಇಲ್ಲಿ ಎರಡು ಪಂದ್ಯಗಳ ಸರಣಿ ನಡೆಯುತ್ತಿದೆ. ಶ್ರೀಲಂಕಾದಲ್ಲಿ ಇಂಧನ, ಅಡುಗೆ ಅನಿಲ ಮತ್ತು ಔಷಧಿಗಳ ತೀವ್ರ ಕೊರತೆಯಿದ್ದು, ಸಾಕಷ್ಟು ವಿದ್ಯುತ್ ಕಡಿತವಾಗಿದೆ. ಅದರ ನಡುವೆಯೂ ಈ ಸರಣಿ ಆರಂಭವಾಗಿದೆ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?