Duleep Trophy: ಸೆಮಿಫೈನಲ್​ಗೆ 4 ತಂಡಗಳು ಫಿಕ್ಸ್; ಯಾರಿಗೆ ಯಾರು ಎದುರಾಳಿ? ಇಲ್ಲಿದೆ ವಿವರ

Duleep Trophy Semifinals 2026: ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್ಸ್ ಮುಗಿದಿದ್ದು, ಪೂರ್ವ ಮತ್ತು ಉತ್ತರ ವಲಯ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಆಗಸ್ಟ್ 30 ರಂದು ಬೆಂಗಳೂರಿನಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯ (ರಜತ್ ಪಾಟಿದಾರ್ ನಾಯಕತ್ವ) ಪೂರ್ವ ವಲಯವನ್ನು (ಇಶಾನ್ ಕಿಶನ್ ನಾಯಕತ್ವ) ಎದುರಿಸಲಿದೆ. ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ (ತಿಲಕ್ ವರ್ಮಾ ನಾಯಕತ್ವ) ಉತ್ತರ ವಲಯವನ್ನು ಎದುರಿಸಲಿದೆ.

Duleep Trophy: ಸೆಮಿಫೈನಲ್​ಗೆ 4 ತಂಡಗಳು ಫಿಕ್ಸ್; ಯಾರಿಗೆ ಯಾರು ಎದುರಾಳಿ? ಇಲ್ಲಿದೆ ವಿವರ
Duleep Trophy

Updated on: Aug 26, 2026 | 7:17 PM

ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ (Duleep Trophy) ಕ್ವಾರ್ಟರ್ ಫೈನಲ್ ಸುತ್ತು ಮುಗಿದಿದೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಪೂರ್ವ ವಲಯ ಮತ್ತು ಈಶಾನ್ಯ ವಲಯ ನಡುವೆ ನಡೆದ ಪಂದ್ಯವನ್ನು ಪೂರ್ವ ವಲಯ ತಂಡವು ಇನ್ನಿಂಗ್ಸ್ ಮತ್ತು 210 ರನ್‌ಗಳಿಂದ ಗೆದ್ದುಕೊಂಡರೆ, ಎರಡನೇ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಉತ್ತರ ವಲಯ ತಂಡವು ಪಶ್ಚಿಮ ವಲಯ ತಂಡವನ್ನು 52 ರನ್‌ಗಳಿಂದ ಮಣಿಸಿ ಸೆಮಿಫೈನಲ್‌ಗೇರಿತು. ಇದರರ್ಥ ಪೂರ್ವ ವಲಯ ಮತ್ತು ಉತ್ತರ ವಲಯ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿಕೊಂಡಿವೆ.

ಮೊದಲ ಸೆಮಿಫೈನಲ್‌ ಪಂದ್ಯ

ಇದೀಗ ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್‌ ಪಂದ್ಯ ಆಗಸ್ಟ್ 30 ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಕೇಂದ್ರ ವಲಯ ಹಾಗೂ ಪೂರ್ವ ವಲಯ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಬೆಳಿಗ್ಗೆ 9:30 ರಿಂದ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಗ್ರೌಂಡ್ 1 ರಲ್ಲಿ ನಡೆಯಲಿದೆ. ಕೇಂದ್ರ ವಲಯದ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದರೆ, ಇತ್ತ ಪೂರ್ವ ವಲಯ ತಂಡವನ್ನು ಇಶಾನ್ ಕಿಶನ್ ಮುನ್ನಡೆಸುತ್ತಿದ್ದಾರೆ.

ಎರಡನೇ ಸೆಮಿಫೈನಲ್‌ ಪಂದ್ಯ

ಹಾಗೆಯೇ ಎರಡನೇ ಸೆಮಿಫೈನಲ್‌ ಪಂದ್ಯ ದಕ್ಷಿಣ ವಲಯ ಮತ್ತು ಉತ್ತರ ವಲಯ ತಂಡಗಳ ನಡುವೆ ನಡೆಯಲಿದ್ದು, ಈ ಪಂದ್ಯವೂ ಆಗಸ್ಟ್ 30 ರಿಂದ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಗ್ರೌಂಡ್ 2 ರಲ್ಲಿ ಆರಂಭವಾಗಲಿದೆ. ತಿಲಕ್ ವರ್ಮಾ ದಕ್ಷಿಣ ವಲಯ ತಂಡದ ನಾಯಕತ್ವವಹಿಸಿದ್ದರೆ, ಉತ್ತರ ವಲಯದ ನಾಯಕತ್ವವನ್ನು ಕನ್ಹಯ್ಯಾ ವಾಧವನ್ ವಹಿಸಿದ್ದಾರೆ. ಈ ಪಂದ್ಯ ಕೂಡ ಬೆಳಿಗ್ಗೆ 9:30 ರಿಂದ ಆರಂಭವಾಗಲಿದೆ.

ಸೆಮಿಫೈನಲ್​ಗೇರಿರುವ 4 ತಂಡಗಳು

ಕೇಂದ್ರ ವಲಯ ತಂಡ: ರಜತ್ ಪಾಟಿದಾರ್ (ನಾಯಕ), ರಿಂಕು ಸಿಂಗ್ (ಉಪನಾಯಕ), ಆರ್ಯನ್ ಜುಯಲ್ (ವಿಕೆಟ್ ಕೀಪರ್), ಸರನ್ಶಾ ಜೈನ್, ಅಮನ್ ಮೊಖಾಡೆ, ಕುನಾಲ್ ಚಾಂಡೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ಸಿಂಗ್ ರಾಥೋಡ್, ಯಶ್ ರಾಥೋಡ್, ಪರ್ವ್ ರಾಥೋಡ್, ಯಶ್ ಠಾಕೂರ್, ನಚಿಕೇತ್ ಭೂತೆ,

ಸ್ಟ್ಯಾಂಡ್‌ಬೈ ಆಟಗಾರರು: ಅಮನದೀಪ್ ಖರೆ, ಮಯಾಂಕ್ ಮಿಶ್ರಾ, ಸೌರಭ್ ರಾವತ್, ಭಾರ್ಗವ್ ಮೆರಾಯ್, ಕುನಾಲ್ ಯಾದವ್, ಕುಮಾರ್ ಕಾರ್ತಿಕೇಯ.

ಪೂರ್ವ ವಲಯ ತಂಡ: ಅಭಿಮನ್ಯು ಈಶ್ವರನ್, ಸುದೀಪ್ ಘರಾಮಿ, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್, ಸೂರಜ್ ಜೈಸ್ವಾಲ್, ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ವಿರಾಟ್ ಸಿಂಗ್, ಕುಮಾರ್ ಕುಶಾಗ್ರ, ಶಿಖರ್ ಮೋಹನ್, ಸುಬ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಅನುಕೂಲ್ ರಾಯ್ ಮತ್ತು ಡೆನಿಶ್ ದಾಸ್.

ಸ್ಟ್ಯಾಂಡ್‌ಬೈ ಆಟಗಾರರು: ಆಯುಷ್ ಲೋಹರುಕ, ಶ್ರೀದಂ ಪಾಲ್, ಸಂಬಿತ್ ಎಸ್ ಬರಾಲ್, ಶರಣದೀಪ್ ಸಿಂಗ್ ಮತ್ತು ಸ್ವಸ್ತಿಕ್ ಸಮಲ್.

ದಕ್ಷಿಣ ವಲಯ ತಂಡ: ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ, ಅಭಿನವ್ ತೇಜ್ರಾನಾ, ಶೇಖ್ ರಶೀದ್, ಕೆ. ಹಿಮತೇಜ, ಸ್ಮರಣ್ ರವಿಚಂದ್ರನ್, ಎನ್. ಜಗದೀಶನ್, ಕರುಣ್ ನಾಯರ್, ಟಿ. ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಸಾಯಿ ತೇಜ, ಟಿ. ವಿಜಯ್, ವಿದ್ವತ್ ಕಾವೇರಪ್ಪ, ಅಮನ್ ಖಾನ್.

ಉತ್ತರ ವಲಯ ತಂಡ: ಕನ್ಹಯ್ಯಾ ವಾಧವನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಂಬೋಜ್, ಯುಧ್ವೀರ್ ಸಿಂಗ್, ನಿಖಿಲ್ ಕಶ್ಯಪ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Wed, 26 August 26

Loading...
Unable to load recommendations.
Follow Us