AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs NZ: ಆಂಗ್ಲರ ಕೈ ಹಿಡಿದ ಅದೃಷ್ಟ; ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದ ಕಿವೀಸ್ ಬ್ಯಾಟರ್! ವಿಡಿಯೋ ನೋಡಿ

ENG vs NZ: ಹೆನ್ರಿ ನಿಕೋಲಸ್ ಔಟ್ ಆದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ಸ್ವತಃ ಎಂಸಿಸಿ ಟ್ವೀಟ್ ಮಾಡುವ ಮೂಲಕ ನಿಯಮಗಳನ್ನು ತಿಳಿಸಿದೆ.

ENG vs NZ: ಆಂಗ್ಲರ ಕೈ ಹಿಡಿದ ಅದೃಷ್ಟ; ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದ ಕಿವೀಸ್ ಬ್ಯಾಟರ್! ವಿಡಿಯೋ ನೋಡಿ
ಹೆನ್ರಿ ನಿಕೋಲ್ಸ್ ವಿಕೆಟ್ ಪ್ರಸಂಗ
TV9 Web
| Edited By: |

Updated on: Jun 24, 2022 | 1:24 PM

Share

ಗುರುವಾರ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ದಿನದಂದು ಚಹಾಕ್ಕೆ ಮುನ್ನ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್ (Henry Nicholas) ಕೊನೆಯ ಎಸೆತದಲ್ಲಿ ವಿಚಿತ್ರವಾಗಿ ಔಟಾದರು. ವಿರಾಮದ ತನಕ ಕಿವೀಸ್ 5 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಹೆನ್ರಿ ನಿಕೋಲ್ಸ್ ಅವರ ವಿಕೆಟ್ ಪತನ ಕಾಮೆಂಟರಿ ಬಾಕ್ಸ್‌ನಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಮೈದಾನದಲ್ಲಿ ಏನಾಯಿತು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟರಲ್ಲೇ ನಿಕೋಲ್ಸ್ ಮೈದಾನದಿಂದ ಹೊರಬರಬೇಕಾಯ್ತು. ಕ್ರಿಕೆಟ್‌ನ ಆಡಳಿತ ಮಂಡಳಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (MCC) ಈ ವಿಕೆಟ್ ಹೇಗೆ ಪತನವಾಯಿತು ಎಂಬುದನ್ನು ಟ್ವೀಟ್ ಮಾಡಿದೆ.

ವಿಚಿತ್ರವಾಗಿ ಔಟಾದ ನಿಕೋಲ್ಸ್

ಇದನ್ನೂ ಓದಿ
Image
R Vinay Kumar: ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವಿನಯ್​ ಕುಮಾರ್​ ದಂಪತಿಗಳಿಗೆ ಹೆಣ್ಣು ಮಗು ಜನನ
Image
N Jagadeesan: ಕ್ರಿಕೆಟ್​ನಲ್ಲೊಂದು ಅಸಹ್ಯ ಘಟನೆ: ಮಂಕಡ್ ರನೌಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿದ ಜಗದೀಶನ್

ನಿಕೋಲ್ಸ್ ಅವರು ಎದುರಾಳಿ ಸ್ಪಿನ್ನರ್ ಜಾಕ್ ಲೀಚ್ ಅವರ ಎಸೆತವನ್ನು ಸ್ಟ್ರೈಟ್ ಡ್ರೈವ್ ಮಾಡಿದರು. ಆದರೆ ಚೆಂಡು ನಾನ್-ಸ್ಟ್ರೈಕರ್‌ ತುದಿಯಲ್ಲಿ ನಿಂತಿದ್ದ ಸಹ ಬ್ಯಾಟ್ಸ್‌ಮನ್ ಡೇರಿಲ್ ಮಿಚೆಲ್‌ಗೆ ಬಡಿದು ಮಿಡ್-ಆಫ್ ಕಡೆ ಹೋಯಿತು. ಮಿಡ್ ಆಫ್‌ನಲ್ಲಿ ನಿಂತಿದ್ದ ಅಲೆಕ್ಸ್ ಲೀಸ್ ಸುಲಭ ಕ್ಯಾಚ್ ಪಡೆದರು. ಇದೆಲ್ಲವನ್ನು ನಿಕೋಲ್ಸ್ ಅರ್ಥಮಾಡಿಕೊಳ್ಳುವಷ್ಟರಲ್ಲಿ, ಅಂಪೈರ್ ನಿಕೋಲ್ಸ್ ಔಟ್ ಎಂದು ತೀರ್ಮಾನ ನೀಡಿದರು. ಇದರೊಂದಿಗೆ ಲೀಚ್ ಮತ್ತೊಂದು ವಿಕೆಟ್ ಪಡೆಯುವ ಮೂಲಕ ದಿನದಾಟವನ್ನು ಅಂತ್ಯಗೊಳಿಸಿದರು. ಆದರೆ ನಿಕೋಲ್ಸ್ ಮುಖದಲ್ಲಿ ಈ ರೀತಿ ಔಟಾಗಿರುವುದು ಆಘಾತಕ್ಕೆ ಕಾರಣವಾಗಿತ್ತು. ನಿಕೋಲ್ಸ್ 99 ಎಸೆತಗಳಲ್ಲಿ 19 ರನ್ ಗಳಿಸಿ ಪೆವಿಲಿಯನ್ ಸೇರಬೇಕಾಯ್ತು.

ಇದನ್ನೂ ಓದಿ: ENG vs NZ: ಜೋ ರೂಟ್ ದಾಖಲೆಯ ಶತಕ; ಮೊದಲ ಟೆಸ್ಟ್​ನಲ್ಲಿ ಕಿವೀಸ್​ಗೆ ಸೋಲಿನ ರುಚಿ ತೋರಿಸಿದ ಆಂಗ್ಲರು

ನಿಯಮಗಳೇನು?

ನಿಕೋಲಸ್ ಔಟಾದ ತಕ್ಷಣ, ಕಾಮೆಂಟೇಟರ್ ನಾಸಿರ್ ಹುಸೇನ್ ಎಮ್​ಸಿಸಿ ನಿಯಮಗಳನ್ನು ವಿವರಿಸುತ್ತಾ, ಆಕ್ಟ್ 33.2.2.3 ಅಡಿಯಲ್ಲಿ, ಬಾಲ್ ವಿಕೆಟ್, ಅಂಪೈರ್, ಇತರ ಫೀಲ್ಡರ್, ರನ್ನರ್ ಅಥವಾ ಬ್ಯಾಟ್ಸ್‌ಮನ್‌ಗೆ ಬಡಿದ ನಂತರ ಆ ಬಾಲನ್ನು ಫೀಲ್ಡರ್ ಕ್ಯಾಚ್ ಮಾಡಿದರೆ ಅದನ್ನು ಬ್ಯಾಟರ್ ಔಟ್ ಎಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.

ದಿನದಾಟ ಹೇಗಿತ್ತು?

ಊಟದ ಹೊತ್ತಿಗೆ ನ್ಯೂಜಿಲೆಂಡ್ ಮೂರು ವಿಕೆಟ್ ಕಳೆದುಕೊಂಡಿತ್ತು. ಊಟದ ನಂತರ, ಡೆವೊನ್ ಕಾನ್ವೇ (26) ಜೇಮೀ ಓವರ್ಟನ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ನಿಕೋಲ್ಸ್ 10 ರನ್‌ಗಳಿಸಿದ್ದಾಗ ಅವರಿಗೆ ಒಂದು ಜೀವದಾನವೂ ಸಿಕ್ಕಿತು. ಆದರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ರಿವ್ಯೂವ್ ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದರು ಇದರಿಂದ ಅವರಿಗೆ ಜೀವದಾನ ಸಿಕ್ಕಿತು.

ಮಿಚೆಲ್ ಈ ಸರಣಿಯಲ್ಲಿ ಎರಡು ಶತಕ ಮತ್ತು ಅರ್ಧ ಶತಕ ಗಳಿಸಿದ್ದಾರೆ ಮತ್ತು ಸುದೀರ್ಘ ಇನ್ನಿಂಗ್ಸ್ ಆಡುವ ಹಾದಿಯಲ್ಲಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆಯಲ್ಲಿರುವ ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಆದರೆ ಖಾತೆ ತೆರೆಯಲೂ ಸಾಧ್ಯವಾಗದ ಟಾಮ್ ಲ್ಯಾಥಮ್ ರೂಪದಲ್ಲಿ ಮೊದಲ ಓವರ್​ನಲ್ಲೇ ಮೊದಲ ವಿಕೆಟ್ ಪತನವಾಯಿತು. ವಿಲ್ ಯಂಗ್ 20 ರನ್ ಗಳಿಸಿ, ಲೀಚ್​ಗೆ ಮೊದಲ ಬಲಿಯಾದರು. ನಾಯಕ ಕೆನ್ ವಿಲಿಯಮ್ಸನ್ (31) ಅವರನ್ನು ಸ್ಟುವರ್ಟ್ ಬ್ರಾಡ್ ಊಟಕ್ಕೂ ಮುನ್ನ ಔಟ್ ಮಾಡಿದರು.

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ