AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Faf du Plessis: ಮೊದಲ ಗೆಲುವು: ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಕೇಳಿ

Dinesh Karthik as ice cool as MS Dhoni: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಕಡೇ ಓವರ್‌ವರೆಗೂ ಹೋರಾಡಿ ದಿನೇಶ್ ಕಾರ್ತಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಅಂತಿಮವಾಗಿ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮಾತನಾಡಿದ್ದು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

Faf du Plessis: ಮೊದಲ ಗೆಲುವು: ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಕೇಳಿ
Faf du Plessis post match RCB vs KKR
TV9 Web
| Updated By: Vinay Bhat|

Updated on: Mar 31, 2022 | 9:58 AM

Share

ಐಪಿಎಲ್ 2022ರ (IPL 2022) ಮೊದಲ ಪಂದ್ಯದಲ್ಲಿ 200ಕ್ಕೂ ಅಧಿಕ ರನ್ ಸಿಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್​ನಲ್ಲಿ ಸಂಪೂರ್ಣ ವಿಫಲವಾಗಿ ಸೋಲು ಕಂಡಿತು. ಇದೀಗ ಎರಡನೇ ಪಂದ್ಯದಲ್ಲಿ ಬೌಲರ್​​ಗಳು ಭರ್ಜರಿ ಪ್ರದರ್ಶನ ತೋರಿದರೆ ಬ್ಯಾಟರ್​ಗಳ ಸಾಧಾರಣ ಪ್ರದರ್ಶನದ ನಡುವೆ ಅಂತಿಮ ಹಂತದಲ್ಲಿ ಗೆಲುವಿನ ನಗೆ ಬೀರಿತು. ಕೊನೇ ಹಂತದವರೆಗೂ ನಡೆದ ಜಿದ್ದಾಜಿದ್ದಿಯ ಕಾದಾಟದಲ್ಲಿ ಆರ್​ಸಿಬಿ ತಂಡ ಕೋಲ್ಕತ್ತಾ ನೈಟ್‌ರೈಡರ್ಸ್‌ (RCB vs KKR) ಟೀಮ್ ಅನ್ನು 3 ವಿಕೆಟ್‌ಗಳಿಂದ ಮಣಿಸಿತು. ವನಿಂದು ಹಸರಂಗ (20ಕ್ಕೆ 4), ಆಕಾಶ್ ದೀಪ್ (45ಕ್ಕೆ 3) ಮತ್ತು ಹರ್ಷಲ್ ಪಟೇಲ್ (11ಕ್ಕೆ 2) ಮಾರಕ ದಾಳಿಗೆ ನಲುಗಿದ ಕೆಕೆಆರ್ 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಆರ್‌ಸಿಬಿ ಕಡೇ ಓವರ್‌ವರೆಗೂ ಹೋರಾಡಿ ದಿನೇಶ್ ಕಾರ್ತಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಅಂತಿಮವಾಗಿ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಮಾತನಾಡಿದ್ದು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

“ಈ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ನನಗೆ ತುಂಬಾ ಸಂತಸವಾಗಿದೆ. ಇದು ಕಡಿಮೆ ಮೊತ್ತದ ಗುರಿಯಾಗಿತ್ತು. ಇದರ ಹೊರತಾಗಿಯೂ ನೀವು ಕೊನೆಯ ಹಂತದವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಬಾರದು. ನಿಜ ಹೇಳಬೇಕೆಂದರೆ ನಮಗೆ ಬ್ಯಾಟಿಂಗ್ ಮಾಡಲು ಕಷ್ಟವಾಯಿತು. ಇದಕ್ಕೆ ಕಾರಣ ಎದುರಾಳಿ ತಂಡದ ಸೀಮಿರ್‌ಗಳು ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದು. ಈ ಪಂದ್ಯದಲ್ಲಿ ರಾತ್ರಿ ಸೀಮ್‌ ಹಾಗೂ ಸ್ವಲ್ಪ ಹೆಚ್ಚಿನ ಬೌನ್ಸ್‌ ಇತ್ತು, ಇದರ ಜೊತೆಗೆ ಹೆಚ್ಚಿನ ಸ್ವಿಂಗ್‌ ಕೂಡ ಆಗುತ್ತಿತ್ತು. ಕಳೆದ ಪಂದ್ಯದಲ್ಲಿ ನಮ್ಮದು 200 ರನ್ ಆಗಿತ್ತು. ಇವತ್ತು 130 ರನ್. ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಇದೆಲ್ಲ ಒಂದು ಉತ್ತಮ ಅನುಭವ. ರನ್‌ಗಳು ಎಂದಿಗೂ ಸಮಸ್ಯೆಯಾಗಿರಲಿಲ್ಲ. ನಮ್ಮ ಕೈಯಲ್ಲಿ ವಿಕೆಟ್ ಇರಬೇಕಷ್ಟೆ. ಇದೇ ರೀತಿ ಮುಂದೆ ಎದುರಾಗುವ ಪಂದ್ಯಗಳನ್ನು ಗೆಲ್ಲಬೇಕಾದ ಅಗತ್ಯವಿದೆ,” ಎಂದು ಹೇಳಿದ್ದಾರೆ.

ಆರ್​ಸಿಬಿ ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿರುವ ದಿನೇಶ್‌ ಕಾರ್ತಿಕ್‌ ಬಗ್ಗೆ ಮಾತನಾಡಿದ ಡುಪ್ಲೆಸಿಸ್, “ದಿನೇಶ್ ಕಾರ್ತಿಕ್ ಅವರ ಅಪಾರ ಅನುಭವ ನಮಗೆ ಇಲ್ಲಿ ತುಂಬಾ ಸಹಾಯವಾಗಿದೆ. ಕೊನೆಯ ಹಂತದಲ್ಲಿ ನಮಗೆ ಸಾಕಷ್ಟು ರನ್‌ಗಳ ಅಂತರವಿರಲಿಲ್ಲ. ಆದರೆ ಕೊನೆಯ ಐದು ಓವರ್‌ಗಳ ಒತ್ತಡದ ಸಂದರ್ಭವನ್ನು ದಿನೇಶ್‌ ಕಾರ್ತಿಕ್‌ ಅವರು ಎಂಎಸ್‌ ಧೋನಿಯಿಂತೆ ತಾಳ್ಮೆಯಿಂದ ನಿರ್ವಹಿಸಿದ್ದಾರೆ. ನಮ್ಮ ಕ್ಯಾಂಪ್​​ನಲ್ಲಿ ಅತ್ಯುತ್ತಮವಾದ ಸದಸ್ಯರಿದ್ದಾರೆ. ತಂಡದಲ್ಲಿ ಉತ್ತಮ ಸಂವಹನವಿದೆ. ಆಟಗಾರರು ಅದ್ಭುತವಾಗಿದ್ದಾರೆ. ಅವರು ಬೆಂಬಲ ನೀಡಿದ್ದಾರೆ. ಅವರ ಬಳಿ ಏನೇ ಹೊಸ ಹೊಸ ಆಲೋಚನೆಗಳಿದ್ದರೆ ನನ್ನ ಬಳಿ ಬಂದು ಹಂಚಿಕೊಳ್ಳುತ್ತಾರೆ,” ಎಂಬುದು ಫಾಫ್ ಮಾತು.

ಇನ್ನು ಪಂದ್ಯದ ಬಳಿಕ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, “ಪಂದ್ಯ ಆರಂಭ ಆಗುವುದಕ್ಕೂ ಮೊದಲು ಈ ಮ್ಯಾಚ್ ರೋಚಕವಾಗಿರುತ್ತದೆ ಎಂದು ನಾನು ಭಾವಿಸಿದ್ದೆ. ಈ ಪಂದ್ಯದಲ್ಲಿ ನಮ್ಮ ಪಾತ್ರ ಮುಖ್ಯವಾಗುತ್ತದೆ ಎಂದು ನಾನು ನನ್ನ ತಂಡದ ಆಟಗಾರರ ಜೊತೆ ಮಾತನಾಡಿಕೊಳ್ಳುತ್ತಿರುವಾಗ ಹೇಳಿದೆ. ಈ ಪಂದ್ಯದಲ್ಲಿ ನಾವು ಆಡಿದ ಬಗ್ಗೆ ನಮಗೆ ಹೆಮ್ಮೆಯಿದೆ. ಅದರಲ್ಲೂ ಕೊನೇ ಓವರ್ ವರೆಗೆ ಕೊಂಡೊಯ್ಯಿದಿದ್ದೇವೆ. ಅದು ತುಂಬಾ ಕಷ್ಟದ ಸಮಯವಾಗಿತ್ತು. ಯಾಕೆಂದರೆ ಎದುರಾಳಿಯ ವಿಕೆಟ್ ಕೀಳುವ ಯೋಜನೆಯಿಂದ ನಮ್ಮ ಬೆಸ್ಟ್ ಬೌಲರ್​​ಗಳ ಕೋಟವನ್ನು ಮೊದಲೇ ಮುಗಿಸಿದ್ದೆ. ಆದರೆ, ಅದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಆರ್​ಸಿಬಿ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಪ್ರಮುಖವಾಗಿ ಮಧ್ಯಮ ಕ್ರಮಾಂಕದಲ್ಲಿ,” ಎಂದು ಹೇಳಿದ್ದಾರೆ.

LSG vs CSK, IPL 2022: ಸೋತವರ ಕಾಳಗ: ಲಖನೌ-ಚೆನ್ನೈ ಪೈಕಿ ಗೆಲುವಿನ ಖಾತೆ ತೆರೆಯುವವರು ಯಾರು?

Dinesh Kartik: ಆರ್​ಸಿಬಿ ಗೆಲುವಿಗೆ ಕಾರಣ ಕೊನೇ ಓವರ್​ನಲ್ಲಿ ನಡೆದ ಆ ಒಂದು ಘಟನೆ: ಏನದು ಗೊತ್ತೇ?

ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ