AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಸಿ ಹೊಸ ನಿಯಮ: ಗಾಯಗೊಂಡು ಹೊರನಡೆದ ಆಟಗಾರನಿಗೆ 7 ದಿನಗಳ ನಿಷೇಧ

ICC New Rules: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2027ರ ಸೀಸನ್​ನೊಂದಿಗೆ ಕ್ರಿಕೆಟ್‌ನ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಈ ಬದಲಾವಣೆ ಜೊತೆಗೆ ಇದೀಗ ಕನ್ಕ್ಯುಶನ್ ಸಬ್​ ಆಟಗಾರರ ಪಟ್ಟಿಯನ್ನೂ ಸಹ ಸಲ್ಲಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೂಚಿಸಿದೆ.

ಐಸಿಸಿ ಹೊಸ ನಿಯಮ: ಗಾಯಗೊಂಡು ಹೊರನಡೆದ ಆಟಗಾರನಿಗೆ 7 ದಿನಗಳ ನಿಷೇಧ
Icc - Team India
ಝಾಹಿರ್ ಯೂಸುಫ್
|

Updated on:Jun 28, 2025 | 9:05 AM

Share

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಕೆಲವು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಜೂನ್ 17 ರಿಂದ ಪ್ರಾರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 4ನೇ ಆವೃತ್ತಿಯೊಂದಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಚ್, ಸ್ಟಾಪ್ ಗಡಿಯಾರ ಮತ್ತು 2 ಚೆಂಡುಗಳ ಬಳಕೆಯಂತಹ ಬದಲಾವಣೆಗಳು ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇದರ ಜೊತೆಗೆ ಇದೀಗ ಕನ್ಕ್ಯುಶನ್‌ಗೆ ಸಂಬಂಧಿಸಿದ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಪಂದ್ಯದ ನಡುವೆ ಗಾಯಗೊಂಡು ಹೊರನಡೆದ ಆಟಗಾರ ಮುಂದಿನ 7 ದಿನಗಳವರೆಗೆ ಕಣಕ್ಕಿಳಿಯುವಂತಿಲ್ಲ.

ನಿಖರವಾಗಿ 6 ​​ವರ್ಷಗಳ ಹಿಂದೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನ್ಕ್ಯುಶನ್ ನಿಯಮವನ್ನು ಜಾರಿಗೆ ತರಲು ಐಸಿಸಿ ನಿರ್ಧರಿಸಿತ್ತು. ಅಲ್ಲದೆ ಈಗಾಗಲೇ ಈ ನಿಯಮವನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2027ರ ಸರಣಿಯೊಂದಿಗೆ ಕನ್ಕ್ಯುಶನ್‌ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಫಿಲ್ ಹ್ಯೂಸ್ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದಾಗಿನಿಂದ, ಕ್ರಿಕೆಟ್‌ನಲ್ಲಿ ಕನ್ಕ್ಯುಶನ್ ಬದಲಿ ನಿಯಮವನ್ನು ಜಾರಿಗೆ ತರುವ ಬೇಡಿಕೆ ಇತ್ತು. ಈ ನಿಯಮದಡಿಯಲ್ಲಿ, ಯಾವುದೇ ಆಟಗಾರನಿಗೆ ತಲೆ ಅಥವಾ ಕುತ್ತಿಗೆಯಲ್ಲಿ ಗಾಯಗೊಂಡ ನಂತರ ತಲೆತಿರುಗುವಿಕೆ, ಮಸುಕಾದ ದೃಷ್ಟಿ ಅಥವಾ ತಲೆನೋವಿನ ಲಕ್ಷಣಗಳು ಕಂಡುಬಂದರೆ, ಆ ತಂಡವು ಆ ಆಟಗಾರನ ಬದಲಿಗೆ ಮತ್ತೋರ್ವ ಆಟಗಾರನನ್ನು ಕಣಕ್ಕಿಳಿಸಬಹುದು.

7 ದಿನಗಳ ನಿಷೇಧ ಹೇಗೆ?

ಪಂದ್ಯದ ನಡುವೆ ಯಾವುದೇ ಆಟಗಾರನ ತಲೆಗೆ ಅಥವಾ ಕುತ್ತಿಗೆ ಚೆಂಡು ಬಡಿದು, ಅವರು ಹೊರ ನಡೆದರೆ ಅವರ ಬದಲಿಗೆ ಮತ್ತೋರ್ವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ ಹೀಗೆ ಹೊರ ನಡೆದ ಆಟಗಾರ 7 ದಿನಗಳವರೆಗೆ ಯಾವುದೇ ಪಂದ್ಯವಾಡುವಂತಿಲ್ಲ ಎಂದು ಐಸಿಸಿ ತಿಳಿಸಿದೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಈ ಹಿಂದೆ ಕನ್ಕ್ಯುಶನ್ ಸಬ್ ಆಯ್ಕೆ ಇದ್ದರೂ, ಕೆಲ ತಂಡಗಳು ನಿರ್ಣಾಯಕ ಹಂತದಲ್ಲಿ ಬ್ಯಾಟರ್​ ಬದಲಿಗೆ ಬೌಲರ್​ನ ಬಳಸಿಕೊಂಡ ನಿದರ್ಶನಗಳಿವೆ. ಇಂತಹ ಮೋಸದಾಟಕ್ಕೆ ಕಡಿವಾಣ ಹಾಕಲು ಕೂಡ ಈ 7 ದಿನಗಳ ನಿಷೇಧ ಸಹಕಾರಿಯಾಗಲಿದೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.

5 ಆಟಗಾರರು ಕಡ್ಡಾಯ:

ಕನ್ಕ್ಯುಶನ್ ಸಬ್​ಗಾಗಿ ತಂಡವು ಪ್ಲೇಯಿಂಗ್ ಇಲೆವೆನ್​ ಜೊತೆ 5 ಆಟಗಾರರ ಪಟ್ಟಿಯನ್ನು ಸಲ್ಲಿಸುವುದು ಕೂಡ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಐಪಿಎಲ್​​​ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯಂತೆಯೇ ಇಲ್ಲಿ ಕನ್ಕ್ಯುಶನ್ ಸಬ್​ ಆಯ್ಕೆ ನೀಡಲಾಗಿದೆ. ಅದರಂತೆ ಪ್ರತಿ ತಂಡಗಳು ಪ್ಲೇಯಿಂಗ್ ಇಲೆವೆನ್ ಜೊತೆ, ಹೆಚ್ಚುವರಿಯಾಗಿ  ಒಬ್ಬ ಬ್ಯಾಟ್ಸ್‌ಮನ್, ಒಬ್ಬ ವಿಕೆಟ್ ಕೀಪರ್, ಒಬ್ಬ ಸ್ಪಿನ್ನರ್, ಒಬ್ಬ ಆಲ್-ರೌಂಡರ್ ಮತ್ತು ಒಬ್ಬ ವೇಗದ ಬೌಲರ್​ನನ್ನು ಹೆಸರಿಸಬೇಕು.

ಇದನ್ನೂ ಓದಿ: 6,6,6,6,6,6,6,6: ಪೂರನ್ ಪವರ್​ಫುಲ್ ಶತಕ

ಇಲ್ಲಿ ಬೌಲರ್​ ಬದಲಿಗೆ ಬೌಲರ್​ನನ್ನು, ಬ್ಯಾಟ್ಸ್​ಮನ್ ಬದಲಿಗೆ ಬ್ಯಾಟ್ಸ್​ಮನ್​ನನ್ನು ಹಾಗೂ ಆಲ್​ರೌಂಡರ್ ಬದಲಿಗೆ ಆಲ್​ರೌಂಡರ್​ನನ್ನು ಕಣಕ್ಕಿಳಿಸಬೇಕು ಎಂದು ಐಸಿಸಿ ಸ್ಪಷ್ಟಪಡಿಸಿದೆ. ಈ ನಿಯಮಗಳು ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯೊಂದಿಗೆ ಜಾರಿಗೆ ಬರಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.

Published On - 9:03 am, Sat, 28 June 25

Follow Us
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..
ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!