AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕೇವಲ 200 ರೂಪಾಯಿಯ ವಸ್ತು: ಟೀಮ್ ಇಂಡಿಯಾ ಅಷ್ಟೊಂದು ಕ್ಯಾಚ್‌ ಬಿಡಲು ಕಾರಣ ಬಹಿರಂಗ

Team India Drop Catch Reason: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿಯೇ ಯಶಸ್ವಿ ಜೈಸ್ವಾಲ್ 3 ಕ್ಯಾಚ್‌ಗಳನ್ನು ಕೈಬಿಟ್ಟರು, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅವರು ಒಂದು ಕ್ಯಾಚ್ ಅನ್ನು ಕೈಬಿಟ್ಟರು. ಅವರಲ್ಲದೆ, ರವೀಂದ್ರ ಜಡೇಜಾ ಅವರಂತಹ ಅತ್ಯುತ್ತಮ ಫೀಲ್ಡರ್ ಕೂಡ ಈ ತಪ್ಪನ್ನು ಮಾಡಿದರು.

IND vs ENG: ಕೇವಲ 200 ರೂಪಾಯಿಯ ವಸ್ತು: ಟೀಮ್ ಇಂಡಿಯಾ ಅಷ್ಟೊಂದು ಕ್ಯಾಚ್‌ ಬಿಡಲು ಕಾರಣ ಬಹಿರಂಗ
Team India Catch Drop
Vinay Bhat
|

Updated on: Jun 27, 2025 | 9:47 AM

Share

ಬೆಂಗಳೂರು (ಜೂ. 27): ಇಂಗ್ಲೆಂಡ್ ಪ್ರವಾಸವು ಭಾರತ ತಂಡಕ್ಕೆ (Indian Cricket Team) ಉತ್ತಮವಾಗಿ ಆರಂಭವಾಗಿಲ್ಲ. ಹೊಸ ನಾಯಕನೊಂದಿಗೆ ಮತ್ತು ಸಾಕಷ್ಟು ಯುವ ಆಟಗಾರರೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ, ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿಗೆ ಹಲವು ಕಾರಣಗಳಲ್ಲಿ ತಂಡದ ಕಳಪೆ ಕ್ಯಾಚಿಂಗ್ ಕೂಡ ಒಂದು. ಭಾರತೀಯ ತಂಡ, ವಿಶೇಷವಾಗಿ ಯಶಸ್ವಿ ಜೈಸ್ವಾಲ್, ಎರಡೂ ಇನ್ನಿಂಗ್ಸ್‌ಗಳಲ್ಲಿ ಅನೇಕ ಕ್ಯಾಚ್‌ಗಳನ್ನು ಕೈಬಿಟ್ಟರು. ಆದರೆ ಕ್ಯಾಚಿಂಗ್ ತಂತ್ರವನ್ನು ಹೊರತುಪಡಿಸಿ, ಇದರ ಹಿಂದೆ ಒಂದು ವಿಷಯವಿದೆ, ಇದರ ಬೆಲೆ ಕೇವಲ 200-300 ರೂ.

ಲೀಡ್ಸ್ ಟೆಸ್ಟ್‌ಗೆ ಭಾರತ ಪ್ರವೇಶಿಸಿದಾಗ, ಶುಭ್​ಮನ್ ಗಿಲ್ ನೇತೃತ್ವದಲ್ಲಿ ಆರಂಭದಲ್ಲಿ ಇಷ್ಟೊಳ್ಳೆಯ ಪ್ರದರ್ಶನ ನೀಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಈ ಸೋಲು ಟೀಮ್ ಇಂಡಿಯಾಕ್ಕೆ ನಿರಾಶಾದಾಯಕವಾಗಿತ್ತು. ಏಕೆಂದರೆ ಭಾರತ ಈ ಪಂದ್ಯದಲ್ಲಿ ಹಲವು ಬಾರಿ ಮುಂದಿತ್ತು ಮತ್ತು ಇಂಗ್ಲೆಂಡ್ ಅನ್ನು ಪಂದ್ಯದಿಂದ ಹೊರಗಿಡಬಹುದಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿಯೇ ಯಶಸ್ವಿ ಜೈಸ್ವಾಲ್ 3 ಕ್ಯಾಚ್‌ಗಳನ್ನು ಕೈಬಿಟ್ಟರು, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅವರು ಒಂದು ಕ್ಯಾಚ್ ಅನ್ನು ಕೈಬಿಟ್ಟರು. ಅವರಲ್ಲದೆ, ರವೀಂದ್ರ ಜಡೇಜಾ ಅವರಂತಹ ಅತ್ಯುತ್ತಮ ಫೀಲ್ಡರ್ ಕೂಡ ಈ ತಪ್ಪನ್ನು ಮಾಡಿದರು.

ಇದನ್ನೂ ಓದಿ
Image
'ಕುಟುಂಬಕ್ಕಿಂತ ದೇಶ ಮುಖ್ಯ' ರಾಹುಲ್​ನ ಈ ನಿರ್ಧಾರಕ್ಕೆ ಸೆಲ್ಯೂಟ್
Image
7 ಕ್ರೀಡಾ ಸಾಧಕರಿಗೆ ಯುಪಿ ಸರ್ಕಾರದಿಂದ ಸರ್ಕಾರಿ ಉದ್ಯೋಗ
Image
ಬರ್ಮಿಂಗ್ಹ್ಯಾಮ್‌ನಲ್ಲಿ 2ನೇ ಟೆಸ್ಟ್; ಇಲ್ಲಿದೆ 5 ದಿನಗಳ ಹವಾಮಾನ ವರದಿ
Image
ಭಾರತ- ಆಸ್ಟ್ರೇಲಿಯಾ ಏಕದಿನ ಪಂದ್ಯದ ಟಿಕೆಟ್ ಸೋಲ್ಡ್ ಔಟ್

ಕ್ಯಾಚ್ ಬಿಡಲು ಟೇಪ್ ಕಾರಣವ

ಅಂದಿನಿಂದ, ಜೈಸ್ವಾಲ್ ಸೇರಿದಂತೆ ಭಾರತೀಯ ಫೀಲ್ಡರ್‌ಗಳ ತಂತ್ರ ಕಳಪೆಯಾಗಿದೆಯೇ ಎಂಬ ಪ್ರಶ್ನೆಗಳು ಏಳುತ್ತಿವೆ. ಫೀಲ್ಡಿಂಗ್ ತರಬೇತಿಯ ಕೊರತೆಯಿದೆಯೇ? ಎಂಬ ಅನುಮಾನ ಎದ್ದಿದೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಕೈಫ್ ಗಮನಸೆಳೆದಿರುವ ಒಂದು ಕಾರಣವೆಂದರೆ ಕೈಯಲ್ಲಿರುವ ಬ್ಯಾಂಡೇಜ್ ಅಥವಾ ಟೇಪ್. ಕೈಗೆ ಕಟ್ಟಿರುವ ಬ್ಯಾಂಡೇಜ್ (ಟೇಪ್) ನಿಂದಾಗಿ ಕ್ಯಾಚ್‌ಗಳನ್ನು ತೆಗೆದುಕೊಳ್ಳಲು ತೊಂದರೆಯಾಗುತ್ತಿದೆ ಎಂದು ಕೈಫ್ ವಿಡಿಯೋದಲ್ಲಿ ಹೇಳಿದ್ದಾರೆ.

KL Rahul: ಕುಟುಂಬಕ್ಕಿಂತ ದೇಶ ಮುಖ್ಯ… ಕೆಎಲ್ ರಾಹುಲ್ ತೆಗೆದುಕೊಂಡ ಈ ನಿರ್ಧಾರಕ್ಕೆ ಸೆಲ್ಯೂಟ್ ಮಾಡಲೇಬೇಕು

ಕೈಫ್ ಪ್ರಕಾರ, ಕೈಯಲ್ಲಿ ಕಟ್ಟಿರುವ ಟೇಪ್ ಅಥವಾ ಬ್ಯಾಂಡೇಜ್ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಚೆಂಡು ಹೊರಗೆ ಪುಟಿಯುತ್ತದೆ. ಅಷ್ಟೇ ಅಲ್ಲ, ಕೈಗಳ ಮೇಲಿನ ಬ್ಯಾಂಡೇಜ್‌ನಿಂದಾಗಿ ಬೆರಳುಗಳು ಗಟ್ಟಿಯಾಗುತ್ತವೆ ಮತ್ತು ಅವುಗಳ ಚಲನೆಯು ನಿರ್ಬಂಧಿಸಲ್ಪಡುತ್ತದೆ, ಇದರಿಂದಾಗಿ ಚೆಂಡನ್ನು ಹಿಡಿಯುವುದು ಸುಲಭವಲ್ಲ ಎಂದು ಅವರು ಹೇಳಿದರು. ಚೆಂಡಿನೊಂದಿಗೆ ಕೈಗಳ ನೈಸರ್ಗಿಕ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು ಎಂದು ಕೈಫ್ ಒತ್ತಿ ಹೇಳಿದರು.

ಇದಕ್ಕಾಗಿಯೇ ಈ ಟೇಪ್ ಅನ್ನು ಉಪಯೋಗಿಸುತ್ತಾರೆ

ಸಾಮಾನ್ಯವಾಗಿ ಆಟಗಾರರು ಯಾವುದೇ ಗಾಯ ಅಥವಾ ನೋವು ಉಂಟಾದಾಗ ಈ ಟೇಪ್ ಅನ್ನು ತಮ್ಮ ಕೈ ಅಥವಾ ಬೆರಳುಗಳ ಸುತ್ತಲೂ ಸುತ್ತಿಕೊಳ್ಳುತ್ತಾರೆ. ಇದನ್ನು ಕಿನೆಸಿಯೊ ಟೇಪ್ ಎಂದು ಕರೆಯಲಾಗುತ್ತದೆ. ಇದು ನೋವನ್ನು ನಿಯಂತ್ರಿಸುವುದರ ಜೊತೆಗೆ ಅದರಿಂದ ಪರಿಹಾರವನ್ನು ನೀಡುತ್ತದೆ. ಈ ಟೇಪ್‌ಗಳು ಮೂಳೆಗಳು ಮತ್ತು ಸ್ನಾಯುಗಳನ್ನು ಸ್ಥಿರವಾಗಿಡಲು ಸಹ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಆಟಗಾರರು ಪಂದ್ಯ ಅಥವಾ ಅಭ್ಯಾಸದ ಸಮಯದಲ್ಲಿ ಗಾಯದ ನಂತರ ತಮ್ಮ ಕೈ ಅಥವಾ ಪಾದಗಳ ಮೇಲೆ ಈ ತಿಳಿ ಹಳದಿ ಅಥವಾ ನೀಲಿ ಬಣ್ಣದ ಟೇಪ್‌ಗಳನ್ನು ಹಚ್ಚಿಕೊಳ್ಳುವುದನ್ನು ಹೆಚ್ಚಾಗಿ ಕಾಣಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ