ನನ್ನನ್ನು ಭಾರತ ಗಡಿಪಾರು ಮಾಡಿಲ್ಲ: ಸ್ಪಷ್ಟನೆ ನೀಡಿದ ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್

"ನಾನು ಕ್ರಿಕೆಟ್​​ ಲೋಕವನ್ನು ತುಂಬಾ ಇಷ್ಟಪಡುತ್ತೇನೆ, ಕ್ರಿಕೆಟ್​​ ಕ್ಷೇತ್ರ ನನಗೆ ತುಂಬಾ ಅವಕಾಶವನ್ನು ನೀಡಿದೆ. ಇನ್ನು ಮುಂದಕ್ಕೂ ನಾನು ಇದರಲ್ಲಿಯೇ ಮುಂದುವರಿಯುವೆ. ಅದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ ಮತ್ತು ಈ ಕಾರಣಕ್ಕೆ ಕೃತಜ್ಞತೆಯನ್ನು ಹೊಂದಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಇನ್ನು ನನ್ನನ್ನು ಭಾರತ ಗಡಿಪಾರು ಮಾಡಿಲ್ಲ ಅಥವಾ ಭಾರತದಿಂದ ಹೊರಹೋಗುವಂತೆ ಹೇಳಿಲ್ಲ ಎಂದು ಜೈನಾಬ್ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ.

ನನ್ನನ್ನು ಭಾರತ ಗಡಿಪಾರು ಮಾಡಿಲ್ಲ: ಸ್ಪಷ್ಟನೆ ನೀಡಿದ ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್
ಝೈನಾಬ್ ಅಬ್ಬಾಸ್

Updated on: Oct 13, 2023 | 12:49 PM

2023ರ ವಿಶ್ವಕಪ್​​ನ ಐಸಿಸಿ ಡಿಜಿಟಲ್ ತಂಡದ ಭಾಗವಾಗಿದ್ದ ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್ (Zainab Abbas) ಅವರನ್ನು ಇದರಿಂದ ಹೊರ ಹಾಕಲಾಗಿದೆ ಎಂದು ಹೇಳಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರತ ವಿರೋಧಿ ಪೋಸ್ಟ್​ಗಳನ್ನು ಹಾಕಿದಕ್ಕಾಗಿ ಅವರನ್ನು ವಿಶ್ವಕಪ್​​ನ ಐಸಿಸಿ ಡಿಜಿಟಲ್ ತಂಡದಿಂದ ಹೊರಹಾಕಲಾಗಿದೆ. ಇದೀಗ ಝೈನಾಬ್ ಅಬ್ಬಾಸ್ ಈ ಬಗ್ಗೆ Xನಲ್ಲಿ (ಹಿಂದಿನ ಟ್ವಿಟರ್​​) ಮೊದಲು ಬಾರಿ ಹೇಳಿಕೆ ನೀಡಿದ್ದಾರೆ. “ನಾನು ಕ್ರಿಕೆಟ್​​ ಲೋಕವನ್ನು ತುಂಬಾ ಇಷ್ಟಪಡುತ್ತೇನೆ, ಕ್ರಿಕೆಟ್​​ ಕ್ಷೇತ್ರ ನನಗೆ ತುಂಬಾ ಅವಕಾಶವನ್ನು ನೀಡಿದೆ. ಇನ್ನು ಮುಂದಕ್ಕೂ ನಾನು ಇದರಲ್ಲಿಯೇ ಮುಂದುವರಿಯುವೆ. ಅದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ ಮತ್ತು ಈ ಕಾರಣಕ್ಕೆ ಕೃತಜ್ಞತೆಯನ್ನು ಹೊಂದಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಇನ್ನು ನನ್ನನ್ನು ಭಾರತ ಗಡಿಪಾರು ಮಾಡಿಲ್ಲ ಅಥವಾ ಭಾರತದಿಂದ ಹೊರಹೋಗುವಂತೆ ಹೇಳಿಲ್ಲ ಎಂದು ಝೈನಾಬ್ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ.

ಝೈನಾಬ್ ಅಬ್ಬಾಸ್ ಅವರು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ಮೂರು ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸಿದರು. ಆದರೆ ಭಾರತದ ವಿರೋಧ ಪೋಸ್ಟ್​ಗಳನ್ನು ಹಾಕಿದ್ದರು ಎಂದು ಅವರನ್ನು ಭಾರತದಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಹರಡಿತ್ತು. ಇನ್ನು ಈ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಝೈನಾಬ್ ಅಬ್ಬಾಸ್ ಅವರನ್ನು ಭಾರತದಿಂದ ಗಡಿಪಾರು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅವರನ್ನು ಭಾರತದಿಂದ ಕಳುಹಿಸಲಾಗಿಲ್ಲ, ಅವರೇ ವೈಯಕ್ತಿಕ ಕಾರಣದಿಂದ ಹೊರಗೆ ಹೋಗಿದ್ದಾರೆ ಎಂದು ಐಸಿಸಿ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಷ ರೂ. ಜೇಬಿನಲ್ಲಿರಲಿ; ಭಾರತ- ಪಾಕ್ ಪಂದ್ಯ ನೋಡಲು ಅಹಮದಾಬಾದ್​ಗೆ ಪ್ರಯಾಣಿಸುವವರ ಗಮನಕ್ಕೆ

ಜೈನಾಬ್ ಅಬ್ಬಾಸ್ ಅವರು ಮಾಡಿ ಪೋಸ್ಟ್​ ಏನು?

ಭಾರತದಲ್ಲಿ ಹಿಂದೂಗಳು ಪೂಜೆ ಮಾಡುವ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ 2014ರಲ್ಲಿ ಪೋಸ್ಟ್​​ ಮಾಡಿದರು. ಈ ವಿಚಾರವಾಗಿ ವಕೀಲ ವಿನೀತ್​​ ಜಿಂದಾಲ್​​, ಝೈನಾಬ್ ಅಬ್ಬಾಸ್ ಅವರ ವಿರುದ್ಧ ದೂರ ದಾಖಲಿಸಿದ್ದರು. ಸೈಬರ್​ ಕ್ರೈಂನಲ್ಲಿ ದೂರು ದಾಖಲಾದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಇದೀಗ ಜೈನಾಬ್ ಅಬ್ಬಾಸ್ ಮಾಡಿದ ಈ ಪೋಸ್ಟ್​​​ನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್​​ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 12:46 pm, Fri, 13 October 23

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us