ಟೀಂ ಇಂಡಿಯಾ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಆರಂಭವನ್ನು ಮಾಡಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 6 ವಿಕೆಟ್ಗಳಿಂದ ಸೋಲಿಸಿದ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದೆ. ಭಾರತದ ಗೆಲುವಿನಲ್ಲಿ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್, ಕೆಎಲ್ ರಾಹುಲ್ ಹಾಗೂ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದರು. ಗಿಲ್ ಅದ್ಭುತ ಇನ್ನಿಂಗ್ಸ್ ಆಡಿ ಸತತ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಪರ ಶತಕ ಗಳಿಸುವ ಮಹಾನ್ ಸಾಧನೆ ಮಾಡಿದರು. ಇತ್ತ ರಾಹುಲ್ ಕೂಡ ಅಜೇಯ 41 ರನ್ಗಳ ಕಾಣಿಕೆ ನೀಡಿದರೆ, ಬೌಲಿಂಗ್ನಲ್ಲಿ ಮಿಂಚಿದ ಶಮಿ 5 ವಿಕೆಟ್ಗಳ ಗೊಂಚಲು ಪಡೆದರು.
ಶುಭಮನ್ ಗಿಲ್ ಅವರ ಶತಕದ ಸಹಾಯದಿಂದ, ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಆರು ವಿಕೆಟ್ಗಳಿಂದ ಸೋಲಿಸಿತು. ಮೊಹಮ್ಮದ್ ಶಮಿ ನೇತೃತ್ವದಲ್ಲಿ, ಭಾರತೀಯ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿ ಬಾಂಗ್ಲಾದೇಶವನ್ನು 49.4 ಓವರ್ಗಳಲ್ಲಿ 228 ರನ್ಗಳಿಗೆ ನಿರ್ಬಂಧಿಸಿದರು. ಇದಕ್ಕೆ ಉತ್ತರವಾಗಿ, ಭಾರತ 46.3 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳಿಗೆ 231 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು, ಗಿಲ್ 129 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಹಾಯದಿಂದ ಅಜೇಯ 101 ರನ್ ಗಳಿಸಿದರು.
ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಗಿಲ್ 125 ಎಸೆತಗಳಲ್ಲಿ ಶತಕ ಪೂರೈಸಿದರು. ಭಾರತ ತಂಡ ಗೆಲುವಿನ ಸನಿಹದಲ್ಲಿದ್ದು ಗೆಲ್ಲಲು ಏಳು ರನ್ಗಳ ಅಗತ್ಯವಿದೆ. ಗಿಲ್ ಜೊತೆ ಕೆಎಲ್ ರಾಹುಲ್ ಕೂಡ ಕ್ರೀಸ್ನಲ್ಲಿದ್ದಾರೆ.
ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅರ್ಧಶತಕದ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಮೇಲೆ ಹಿಡಿತ ಸಾಧಿಸಿ ತಂಡವನ್ನು 200 ರನ್ಗಳ ಗಡಿ ದಾಟಿಸಿದ್ದಾರೆ. ಭಾರತ ತಂಡ ಗೆಲುವಿನ ಸನಿಹದಲ್ಲಿದೆ, ಇತ್ತ ಶುಭಮನ್ ಗಿಲ್ ತಮ್ಮ ಶತಕಕ್ಕೆ ಕೇವಲ 14 ರನ್ಗಳ ದೂರದಲ್ಲಿದ್ದಾರೆ.
38 ಓವರ್ಗಳ ಅಂತ್ಯಕ್ಕೆ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದೆ. ಈಗ ಭಾರತ ತಂಡ ಗೆಲ್ಲಲು 72 ಎಸೆತಗಳಲ್ಲಿ 54 ರನ್ಗಳ ಅವಶ್ಯಕತೆಯಿದೆ. ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಭಾರತ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯುತ್ತಿದ್ದಾರೆ.
ಟೀಮ್ ಇಂಡಿಯಾ 31.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿದೆ. ಗಿಲ್ ಇನ್ನೂ ಕ್ರೀಸ್ನಲ್ಲಿದ್ದಾರೆ, ಇದು ಟೀಮ್ ಇಂಡಿಯಾಕ್ಕೆ ಸಮಾಧಾನಕರ ಸುದ್ದಿ.
ಭಾರತ ತಂಡ ಸಂಕಷ್ಟದಲ್ಲಿದೆ ಎಂದು ತೋರುತ್ತದೆ. ತಂಡವು 144 ರನ್ಗಳಿಗೆ ನಾಲ್ಕನೇ ಹಿನ್ನಡೆ ಅನುಭವಿಸಿದೆ. ಅಕ್ಷರ್ ಪಟೇಲ್ 8 ರನ್ ಗಳಿಸಿ ಔಟಾದರು.
ಟೀಮ್ ಇಂಡಿಯಾ 133 ರನ್ಗಳಿಗೆ ಮೂರನೇ ಹಿನ್ನಡೆ ಅನುಭವಿಸಿದೆ. ಶ್ರೇಯಸ್ ಅಯ್ಯರ್ 17 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಶುಭಮನ್ ಗಿಲ್ ಅವರಿಂದ ಅದ್ಭುತ ಇನ್ನಿಂಗ್ಸ್ ಕಂಡುಬಂದಿದೆ. ಅವರು 69 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಮ್ಮ ಬಲಿಷ್ಠ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.
ಟೀಮ್ ಇಂಡಿಯಾ 112 ರನ್ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು.
20 ಓವರ್ಗಳಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಶುಭಮನ್ ಗಿಲ್ 42 ರನ್ ಗಳಿಸಿ ಮತ್ತು ವಿರಾಟ್ ಕೊಹ್ಲಿ 16 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಇಬ್ಬರು ಆಟಗಾರರ ನಡುವೆ ಉತ್ತಮ ಪಾಲುದಾರಿಕೆ ಕಂಡುಬರುತ್ತಿದೆ.
16 ಓವರ್ಗಳು ಮುಗಿಯುವ ವೇಳೆಗೆ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ. ಶುಭಮನ್ ಗಿಲ್ 38 ರನ್ ಗಳಿಸಿ ಮತ್ತು ವಿರಾಟ್ ಕೊಹ್ಲಿ 7 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಟೀಮ್ ಇಂಡಿಯಾ 69 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 41 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ.
ಟೀಮ್ ಇಂಡಿಯಾ ಕೇವಲ 8 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 50 ರನ್ಗಳ ಗಡಿ ತಲುಪಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ನಡುವೆ ಉತ್ತಮ ಜೊತೆಯಾಟ ಕಂಡುಬರುತ್ತಿದೆ.
ರೋಹಿತ್ ಶರ್ಮಾ ತಮ್ಮ ಏಕದಿನ ವೃತ್ತಿಜೀವನದಲ್ಲಿ 11 ಸಾವಿರ ರನ್ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಭಾರತ ಪರ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಟೀಮ್ ಇಂಡಿಯಾದಿಂದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಬಹಳ ಎಚ್ಚರಿಕೆಯಿಂದ ಆರಂಭಿಸಿದ್ದಾರೆ. ಭಾರತ ತಂಡ ಮೊದಲ 3 ಓವರ್ಗಳಲ್ಲಿ 11 ರನ್ ಗಳಿಸಿದೆ.
ಬಾಂಗ್ಲಾದೇಶ ತಂಡ 49.4 ಓವರ್ಗಳಲ್ಲಿ 228 ರನ್ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್ನಲ್ಲಿ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಮೊಹಮ್ಮದ್ ಶಮಿ. ಶಮಿ 10 ಓವರ್ಗಳಲ್ಲಿ 53 ರನ್ಗಳಿಗೆ 5 ವಿಕೆಟ್ಗಳನ್ನು ಪಡೆದರು. ಹರ್ಷಿತ್ ರಾಣಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು. ಮತ್ತೊಂದೆಡೆ, ತೌಹಿದ್ ಹೃದಯೋಯ್ ಬಾಂಗ್ಲಾದೇಶ ಪರ ಪ್ರಮುಖ ಇನ್ನಿಂಗ್ಸ್ ಆಡಿದರು. ಅವರು 118 ಎಸೆತಗಳಲ್ಲಿ 100 ರನ್ ಗಳಿಸಿದರು. ಇವರಲ್ಲದೆ, ಜಾಕಿರ್ ಅಲಿ ಕೂಡ 68 ರನ್ ಗಳ ಕೊಡುಗೆ ನೀಡಿದರು.
ಮೊಹಮ್ಮದ್ ಶಮಿ ತಮ್ಮ 5 ನೇ ವಿಕೆಟ್ ಪಡೆದಿದ್ದಾರೆ. 6 ಎಸೆತಗಳಲ್ಲಿ 3 ರನ್ ಗಳಿಸಿದ ತಸ್ಕಿನ್ ಅಹ್ಮದ್ ಶಮಿಯ 5ನೇ ಬಲಿಯಾದರು.
ತೌಹೀದ್ ಹೃದಯ್ 114 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅವರ ಏಕದಿನ ವೃತ್ತಿಜೀವನದ ಮೊದಲ ಶತಕವಾಗಿದ್ದು, ಸರಿಯಾದ ಸಮಯದಲ್ಲಿ ಬಂದಿದೆ.
ಮೊಹಮ್ಮದ್ ಶಮಿ ನಾಲ್ಕನೇ ವಿಕೆಟ್ ಪಡೆದಿದ್ದಾರೆ. ತನ್ಜಿಮ್ ಹಸನ್ ಶಕೀಬ್ ಅವರನ್ನು ಔಟ್ ಮಾಡುವ ಮೂಲಕ ಶಮಿ ತಮ್ಮ 4ನೇ ವಿಕೆಟ್ ಪೂರೈಸಿದರು.
ಬಾಂಗ್ಲಾದೇಶ 214 ರನ್ಗಳಿಗೆ 7ನೇ ವಿಕೆಟ್ ಕಳೆದುಕೊಂಡಿತು. ರಿಯಾಜ್ ಹುಸೇನ್ 12 ಎಸೆತಗಳಲ್ಲಿ 18 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಈ ವಿಕೆಟ್ ಹರ್ಷಿತ್ ರಾಣಾ ಪಾಲಾಯಿತು.
ಬಾಂಗ್ಲಾದೇಶ ತಂಡ 45 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 212 ರನ್ ಗಳಿಸಿದೆ. ಪ್ರಸ್ತುತ ತೌಹೀದ್ ಹೃದಯ್ ಮತ್ತು ರಿಷದ್ ಹುಸೇನ್ ಕ್ರೀಸ್ನಲ್ಲಿದ್ದಾರೆ.
ಬಾಂಗ್ಲಾದೇಶಕ್ಕೆ ಟೀಮ್ ಇಂಡಿಯಾ ಆರನೇ ಹೊಡೆತ ನೀಡಿದೆ. ಝಾಕಿರ್ ಅಲಿ 68 ರನ್ ಗಳಿಸಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಔಟ್ ಆದರು. ಬಾಂಗ್ಲಾದೇಶ 189 ರನ್ಗಳಿಗೆ ವಿಕೆಟ್ ಕಳೆದುಕೊಂಡಿತು.
ಜಾಕಿರ್ ಅಲಿ ನಂತರ, ತೌಹೀದ್ ಹೃದಯೋಯ್ ಕೂಡ 85 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಬ್ಬರೂ ಆಟಗಾರರು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಜೇಕರ್ ಅಲಿ ಅರ್ಧಶತಕ ಪೂರೈಸಿದ್ದಾರೆ. ಅವರ ಇನ್ನಿಂಗ್ಸ್ನಿಂದಾಗಿ, ಬಾಂಗ್ಲಾದೇಶ ತಂಡವು ಈ ಪಂದ್ಯದಲ್ಲಿ ಚೇತರಿಸಿಕೊಳ್ಳುವಂತಿದೆ. ಸೊನ್ನೆಗೆ ರೋಹಿತ್ ನೀಡಿದ ಜೀವದಾನವನ್ನು ಜೇಕರ್ ಅಲಿ ಸಂಪೂರ್ಣವಾಗಿ ಉಪಯೋಗಿಸಿಕೊಂಡಿದ್ದಾರೆ.
ಜಾಕಿರ್ ಅಲಿ ಮತ್ತು ತೌಹೀದ್ ಹೃದಯ್ ಅವರ ಅದ್ಭುತ ಇನ್ನಿಂಗ್ಸ್ನಿಂದಾಗಿ ಬಾಂಗ್ಲಾದೇಶದ ಸ್ಕೋರ್ 32 ಓವರ್ಗಳ ಅಂತ್ಯಕ್ಕೆ ಐದು ವಿಕೆಟ್ಗಳಿಗೆ 119 ರನ್ ಗಳಿಸಿದೆ.
ಬಾಂಗ್ಲಾದೇಶ ಕೊನೆಗೂ 100 ರನ್ಗಳನ್ನು ಪೂರ್ಣಗೊಳಿಸಿತು. 29ನೇ ಓವರ್ನ ಮೊದಲ ಎಸೆತದಲ್ಲೇ ತಂಡ 100 ರನ್ಗಳ ಗಡಿ ದಾಟಿತು. ಕುಸಿತ ಕಂಡ ಇನ್ನಿಂಗ್ಸ್ ಅನ್ನು ಸ್ವಲ್ಪ ಮಟ್ಟಿಗೆ ಸ್ಥಿರಗೊಳಿಸುವಲ್ಲಿ ಝಾಕಿರ್ ಮತ್ತು ಹೃದಯ್ ಯಶಸ್ವಿಯಾಗಿದ್ದಾರೆ.
23ನೇ ಓವರ್ನ ಮೊದಲ ಎಸೆತದಲ್ಲಿ ಜಡೇಜಾ ಅವರ ಎಸೆತದಲ್ಲಿ ಸ್ಟಂಪಿಂಗ್ ತಪ್ಪಿತು. ಕೆಎಲ್ ರಾಹುಲ್ ಮಾಡಿದ ತಪ್ಪು. ಝಾಕಿರ್ ಅಲಿಗೆ ಎರಡನೇ ಅವಕಾಶ. ರೋಹಿತ್ ಶರ್ಮಾ ಕೂಡ ಈ ಮೊದಲು ಕ್ಯಾಚ್ ಕೈಚೆಲ್ಲಿದರು.
ಬಾಂಗ್ಲಾದೇಶಕ್ಕೆ ಆರಂಭಿಕ ಹಿನ್ನಡೆಯುಂಟಾಗಿರುವುದರಿಂದ ಬ್ಯಾಟಿಂಗ್ ನಿಧಾನಗತಿಯಲ್ಲಿ ಸಾಗುತ್ತಿದೆ. 23 ಓವರ್ಗಳ ಅಂತ್ಯಕ್ಕೆ ಬಾಂಗ್ಲಾದೇಶ ಐದು ವಿಕೆಟ್ಗಳಿಗೆ 86 ರನ್ ಗಳಿಸಿದೆ. ಪ್ರಸ್ತುತ ಝಾಕಿರ್ ಅಲಿ ಮತ್ತು ತೌಹೀದ್ ಹೃದಯೋಯ್ ಕ್ರೀಸ್ನಲ್ಲಿದ್ದಾರೆ.
ಅಕ್ಷರ್ ಪಟೇಲ್ಗೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಕೈತಪ್ಪಿದೆ. 9ನೇ ಓವರ್ನಲ್ಲಿ ಸತತ 2 ವಿಕೆಟ್ ಪಡೆದಿದ್ದ ಅಕ್ಷರ್ ಅದೇ ಓವರ್ನಲ್ಲಿ ಹ್ಯಾಟ್ರಿಕ್ ಪಡೆಯುವ ಅವಕಾಶ ಹೊಂದಿದ್ದರು. ಆದರೆ ಜೇಕರ್ ಅಲಿ ಸ್ಲಿಪ್ನಲ್ಲಿ ನೀಡಿದ ಸುಲಭ ಕ್ಯಾಚ್ ಅನ್ನು ನಾಯಕ ರೋಹಿತ್ ಕೈಚೆಲ್ಲಿದರು. ಇದರಿಂದಾಗಿ ಅಕ್ಷರ್ಗೆ ಹ್ಯಾಟ್ರಿಕ್ ಕೈತಪ್ಪಿದೆ.
ಬಾಂಗ್ಲಾದೇಶದ ಐದನೇ ವಿಕೆಟ್ ಕೂಡ ಅಕ್ಷರ್ ಪಟೇಲ್ ಪಾಲಾಗಿದೆ. ಒಂಬತ್ತನೇ ಓವರ್ನ ಮೂರನೇ ಎಸೆತದಲ್ಲಿ ಮುಷ್ಫಿಕರ್ ರಹೀಮ್ ಅವರನ್ನು ಅಕ್ಷರ್ಗೆ ಶೂನ್ಯಕ್ಕೆ ಔಟ್ ಮಾಡಿದರು. ಈಗ ಅಕ್ಷರ್ ಹ್ಯಾಟ್ರಿಕ್ ಸನಿಹದಲ್ಲಿದ್ದಾರೆ.
ಬಾಂಗ್ಲಾದೇಶ ತಂಡ 35 ರನ್ಗಳಿಗೆ ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. 25 ರನ್ ಗಳಿಸಿ ತಂಜಿದ್ ಹಸನ್ ಔಟಾ ಅಕ್ಷರ್ ಪಟೇಲ್ ಎಸೆತದಲ್ಲಿ ರಾಹುಲ್ಗೆ ಕ್ಯಾಚಿತ್ತು ಔಟಾದರು.
7 ಓವರ್ಗಳ ಆಟ ಮುಗಿದಿದೆ. ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ.
ಮೊಹಮ್ಮದ್ ಶಮಿ ದುಬೈನಲ್ಲಿ ವಿನಾಶವನ್ನುಂಟು ಮಾಡಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ. ಸೌಮ್ಯ ಸರ್ಕಾರ್ ನಂತರ, ಇದೀಗ ಮೆಹದಿ ಹಸನ್ ಮಿರಾಜ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶ ತಂಡ ಮೂರನೇ ಹಿನ್ನಡೆ ಅನುಭವಿಸಿದೆ.
5 ಓವರ್ಗಳ ಆಟ ಮುಗಿದಿದೆ. ಬಾಂಗ್ಲಾದೇಶ 2 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿದೆ.
2ನೇ ಓವರ್ನಲ್ಲಿ ದಾಳಿಗಿಳಿದ ಯುವ ವೇಗಿ ಹರ್ಷಿತ್ ರಾಣಾ, ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗಟ್ಟಿದ್ದಾರೆ.
ಬಾಂಗ್ಲಾ; 2/2
ವೇಗಿ ಮೊಹಮ್ಮದ್ ಶಮಿ, ಆರಂಭಿಕ ಆಟಗಾರ ಸೌಮ್ಯ ಸರ್ಕಾರ್ ಅವರನ್ನು ಮೊದಲ ಓವರ್ನಲ್ಲಿಯೇ ಔಟ್ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ಹೊಡೆತ ನೀಡಿದ್ದಾರೆ.
ದುಬೈನಲ್ಲಿ 13 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಚೇಸಿಂಗ್ ತಂಡ 9 ಬಾರಿ ಗೆದ್ದಿದೆ. ಇಲ್ಲಿ ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 181 ರನ್ಗಳು. ಇದರರ್ಥ ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಸಾಮಾನ್ಯವಾಗಿ ಕಷ್ಟ. ಈ ಮೈದಾನದಲ್ಲಿ ಗೆಲುವಿನ ಸ್ಕೋರ್ 233 ರನ್ಗಳು.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.
ತಂಝಿದ್ ಹಸನ್, ಸೌಮ್ಯ ಸರ್ಕಾರ್, ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ಜೇಕರ್ ಅಲಿ, ರಿಶಾದ್ ಹೊಸೈನ್, ತಂಝಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್.
ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ.
Published On - 2:03 pm, Thu, 20 February 25