IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು

IND vs SA: ಬೆಂಗಳೂರು ಟಿ20 ಮಳೆಯಿಂದಾಗಿ ರದ್ದಾಗಿದ್ದು, ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ ನಡುವಿನ ಟಿ20 ಸರಣಿ 2-2ರಲ್ಲಿ ಸಮಬಲಗೊಂಡಿದೆ. ಆದಾಗ್ಯೂ, ಇದರ ಹೊರತಾಗಿಯೂ, ಭಾರತ ತಂಡವು 3 ದೊಡ್ಡ ಯಶಸ್ಸನ್ನು ಸಾಧಿಸಿದೆ, ಇದು ಸರಣಿಯನ್ನು ಗೆಲ್ಲುವುದಕ್ಕಿಂತ ಹೆಚ್ಚಿನ ಉಪಕಾರ ಮಾಡಿಕೊಟ್ಟಿದೆ.

IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು
Team India
Follow us
| Updated By: ಪೃಥ್ವಿಶಂಕರ

Updated on: Jun 20, 2022 | 3:25 PM

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ ಐದನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದರೆ, ಸರಣಿಯಲ್ಲಿ ಶ್ರೇಷ್ಠ ಕ್ರಿಕೆಟ್ ಆಡಲಾಗಿದೆ. ಮೊದಲೆರಡು ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದ್ದು, ಬಳಿಕ ಟೀಂ ಇಂಡಿಯಾ ಅತಿಥಿಗಳನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಟೀಮ್ ಇಂಡಿಯಾ ಫಾರ್ಮ್​ನಲ್ಲಿದ್ದು, ಸರಣಿ ಗೆಲ್ಲುವ ಹೆಚ್ಚಿನ ಅವಕಾಶಗಳು ಇದ್ದವು ಆದರೆ ಮಳೆ ಪಂದ್ಯವನ್ನು ಹಾಳುಮಾಡಿತು. ಅಲ್ಲದೆ ಟೀಮ್ ಇಂಡಿಯಾ ಸರಣಿಯನ್ನು ಗೆಲ್ಲದಿದ್ದರೂ ಮೂರು ರಂಗಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ (Rahul Dravid and captain Rohit Sharma) ಮೂರು ದೊಡ್ಡ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡಿದ್ದಾರೆ.

ದಿನೇಶ್ ಕಾರ್ತಿಕ್ ರೂಪದಲ್ಲಿ ಫಿನಿಶರ್ ಸಿಕ್ಕಿದ್ದಾರೆ

ದಕ್ಷಿಣ ಆಫ್ರಿಕಾ ಸರಣಿಯಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ಗೆ ಒಬ್ಬ ಅದ್ಭುತ ಫಿನಿಶರ್‌ ಪಡೆದುಕೊಂಡಿದೆ. IPL 2022 ರ ನಂತರ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಮೂರು ವರ್ಷಗಳ ನಂತರ, ಕಾರ್ತಿಕ್, ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 46 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 92 ರನ್ ಗಳಿಸಿದರು. ದಿನೇಶ್ ಎರಡು ಬಾರಿ ಅಜೇಯರಾಗಿದ್ದು, ಅವರ ಸ್ಟ್ರೈಕ್ ದರವು 158 ಕ್ಕಿಂತ ಹೆಚ್ಚಿತ್ತು. ಅಂತಹ ಪರಿಸ್ಥಿತಿಯಲ್ಲಿ, ಕಾರ್ತಿಕ್ T20 ವಿಶ್ವಕಪ್‌ನಲ್ಲಿ ಫಿನಿಶರ್ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ
Image
NED vs ENG, 2nd ODI: ಸರಣಿ ಗೆದ್ದ ಇಂಗ್ಲೆಂಡ್; 100ನೇ ಪಂದ್ಯದಲ್ಲಿ ಸಿಡಿದೆದ್ದ ಜೇಸನ್ ರಾಯ್
Image
IND vs SA: ಇದೇನ ಸಭ್ಯತೆ? ಸೆಲ್ಫಿ ಕೇಳಿದ ಗ್ರೌಂಡ್ಸ್‌ಮನ್ ಜೊತೆ ರುತುರಾಜ್ ಅನುಚಿತ ವರ್ತನೆ..! ವಿಡಿಯೋ ನೋಡಿ

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದ ಆಯ್ಕೆ ಪ್ರಕ್ರಿಯೆ ಯಾವಾಗ? ಗಂಗೂಲಿ ನೀಡಿದ್ರು ಬಿಗ್​ ಅಪ್​ಡೇಟ್

ಹಾರ್ದಿಕ್ ಪಾಂಡ್ಯರಂತಹ ಮ್ಯಾಚ್ ವಿನ್ನರ್ ಸಿಕ್ಕಿದ್ದಾರೆ

ಹಾರ್ದಿಕ್ ಪಾಂಡ್ಯ ಕೂಡ ದ್ರಾವಿಡ್-ರೋಹಿತ್ ಶರ್ಮಾಗೆ ಬಿಗ್ ರಿಲೀಫ್ ನೀಡಿದ್ದಾರೆ. ಇದು ಪಾಂಡ್ಯ ಅವರ ಪುನರಾಗಮನದ ಸರಣಿಯೂ ಆಗಿತ್ತು. ಈ ಆಟಗಾರ ಈ ಸರಣಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 58 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 117 ರನ್ ಗಳಿಸಿದರು. ಪಾಂಡ್ಯ ಅವರ ಸ್ಟ್ರೈಕ್ ರೇಟ್ 153 ಕ್ಕಿಂತ ಹೆಚ್ಚಿತ್ತು. ಪಾಂಡ್ಯ ತಮ್ಮ ಫಿಟ್‌ನೆಸ್‌ನ ಶಕ್ತಿಯನ್ನು ಸಹ ತೋರಿಸಿದಲ್ಲದೆ ಅವರ ಬೌಲಿಂಗ್ ಕೂಡ ಉತ್ತಮವಾಗಿತ್ತು. ಪಾಂಡ್ಯ 5 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ, ಭಾರತದ ಎರಡು ವಿಜಯಗಳಿಗೆ ಅಪಾರ ಕೊಡುಗೆ ನೀಡಿದರು.

ಇಶಾನ್ ಕಿಶನ್ ಓಪನಿಂಗ್ ಅಬ್ಬರ

ಇಶಾನ್ ಕಿಶನ್ ಟಿ20 ಸರಣಿಯಲ್ಲಿ ಗರಿಷ್ಠ 206 ರನ್ ಗಳಿಸಿದರು. ಅವರ ಸರಾಸರಿಯು 41 ಕ್ಕಿಂತ ಹೆಚ್ಚಿತ್ತು, ಅದೇ ಸಮಯದಲ್ಲಿ ಸ್ಟ್ರೈಕ್ ರೇಟ್ ಕೂಡ 150 ಕ್ಕಿಂತ ಹೆಚ್ಚಿತ್ತು. ಕಿಶನ್ ಸರಣಿಯಲ್ಲಿ 2 ಅರ್ಧ ಶತಕಗಳನ್ನು ಗಳಿಸಿದಲ್ಲದೆ ಅತ್ಯುತ್ತಮ ಇನ್ನಿಂಗ್ಸ್‌ನೊಂದಿಗೆ, T20 ವಿಶ್ವಕಪ್‌ನಲ್ಲಿ ಬ್ಯಾಕ್‌ಅಪ್ ಆರಂಭಿಕ ಆಟಗಾರರಾಗಿದ್ದಾರೆ. ಅಂದರೆ ಇಶಾನ್ ಕಿಶನ್ ಈಗ ಕೆಎಲ್ ರಾಹುಲ್-ರೋಹಿತ್ ಶರ್ಮಾಗೆ ಪರ್ಯಾಯವಾಗಿ ಪರಿಗಣಿಸಲ್ಪಟ್ಟಿದ್ದಾರೆ.

ಇವರಲ್ಲದೆ, ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಕೇವಲ 6.07 ಎಕಾನಮಿ ರೇಟ್‌ನಲ್ಲಿ ರನ್ ನೀಡಿ 6 ವಿಕೆಟ್‌ಗಳನ್ನು ಪಡೆದರು. ಟೀಂ ಇಂಡಿಯಾ ಪಾಲಿಗೆ ಇದೊಂದು ಸಂತಸದ ಸುದ್ದಿ. ಹರ್ಷಲ್ ಪಟೇಲ್ ಟಿ20 ಮಾದರಿಯಲ್ಲಿ ಮತ್ತೊಮ್ಮೆ ತನ್ನನ್ನು ತಾನು ಸಾಬೀತುಪಡಿಸಿದ್ದು, ಸರಣಿಯಲ್ಲಿ ಅತಿ ಹೆಚ್ಚು 7 ವಿಕೆಟ್ ಪಡೆದಿದ್ದಾರೆ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ