Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ವಿಶ್ವಕಪ್ ಸೋಲಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೇಡು ತೀರಿಸಿಕೊಂಡ ರಾಹುಲ್

KL Rahul: ಭಾರತ, ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಪ್ರವೇಶಿಸಿದೆ. ಕೊಹ್ಲಿ ಅವರ 84 ರನ್‌ಗಳ ಅದ್ಭುತ ಇನ್ನಿಂಗ್ಸ್‌ನ ಜೊತೆಗೆ, ಕೆ.ಎಲ್. ರಾಹುಲ್ ಅವರ ಅಜೇಯ 42 ರನ್‌ಗಳು ಗೆಲುವಿಗೆ ಪ್ರಮುಖ ಕಾರಣವಾಯಿತು. 2023ರ ವಿಶ್ವಕಪ್ ಫೈನಲ್‌ನಲ್ಲಿನ ನಿರಾಶಾದಾಯಕ ಪ್ರದರ್ಶನದ ನಂತರ, ರಾಹುಲ್ ಈ ಗೆಲುವಿನ ಮೂಲಕ ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.

IND vs AUS: ವಿಶ್ವಕಪ್ ಸೋಲಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೇಡು ತೀರಿಸಿಕೊಂಡ ರಾಹುಲ್
Kl Rahul
Follow us
ಪೃಥ್ವಿಶಂಕರ
|

Updated on:Mar 05, 2025 | 9:14 PM

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿ ಅಜೇಯ ತಂಡವಾಗಿ ಫೈನಲ್​ಗೇರಿದೆ. ಮತ್ತೊಮ್ಮೆ ಚಾಂಪಿಯನ್ ಆಗಲು ತಂಡಕ್ಕೆ ಇನ್ನೊಂದು ಮೆಟ್ಟಿಲಷ್ಟೇ ಬಾಕಿ ಇದೆ. ಆಸ್ಟ್ರೇಲಿಯಾ ನೀಡಿದ 264 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಜೊತೆಯಾದ ಕೊಹ್ಲಿ ಹಾಗೂ ಅಯ್ಯರ್ ಇನ್ನಿಂಗ್ಸ್ ನಿಭಾಯಿಸಿದರು. ಆದರೆ ಅಯ್ಯರ್ ಹಾಗೂ ಅಕ್ಷರ್ ನಿರ್ಣಾಯಕ ಹಂತದಲ್ಲಿ ವಿಕೆಟ್ ಕೈಚೆಲ್ಲಿದರು. ಈ ವೇಳೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ರಾಹುಲ್ (KL Rahul), ಕೊಹ್ಲಿ ಜೊತೆ ಉತ್ತಮ ಜೊತೆಯಾಟವನ್ನಾಡಿದಲ್ಲದೆ, ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇದರ ಜೊತೆಗೆ 2023 ರ ವಿಶ್ವಕಪ್ ಫೈನಲ್‌ಗೆ ನೀನೇ ಕಾರಣ ಎನ್ನುತ್ತಿದ್ದವರಿಗೆ ರಾಹುಲ್ ಸರಿಯಾದ ತಿರುಗೇಟನ್ನು ನೀಡಿದರು.

84 ರನ್ ಸಿಡಿಸಿದ ಕೊಹ್ಲಿ

ಮಾರ್ಚ್ 4, ಮಂಗಳವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಭಾರತವೂ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು. ತಂಡದ ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ 84 ರನ್‌ಗಳ ಅದ್ಭುತ ಇನ್ನಿಂಗ್ಸ್ ಪ್ರಮುಖ ಕಾರಣವಾಯಿತು. ಆದಾಗ್ಯೂ ಕೊಹ್ಲಿಗೆ ಶತಕ ಗಳಿಸಲು ಸಾಧ್ಯವಾಗಲಿಲ್ಲ.

ಗೆಲುವಿನ ದಡ ಸೇರಿಸಿದ ರಾಹುಲ್

ಆದಾಗ್ಯೂ ಕೆಎಲ್ ರಾಹುಲ್ ಕೊಹ್ಲಿ ಕೆಲಸವನ್ನು ಪೂರ್ಣಗೊಳಿಸಿದರು. ರಾಹುಲ್ ಬ್ಯಾಟಿಂಗ್ ಮಾಡಲು ಬಂದಾಗ ಭಾರತದ ಸ್ಕೋರ್ 35 ಓವರ್‌ಗಳಲ್ಲಿ 178 ರನ್ ಆಗಿತ್ತು. ಗೆಲುವಿಗೆ ಇನ್ನೂ 87 ರನ್‌ಗಳು ಬೇಕಾಗಿದ್ದವು, 90 ಎಸೆತಗಳು ಬಾಕಿ ಇದ್ದವು. ಈ ಹಂತದಲ್ಲಿ ಭಾರತ 4 ವಿಕೆಟ್ ಕಳೆದುಕೊಂಡಿತ್ತು. ಅಂದರೆ ಗೆಲುವು ಇನ್ನೂ ಖಚಿತವಾಗಿರಲಿಲ್ಲ. ಎಲ್ಲರ ಕಣ್ಣುಗಳು ಕೊಹ್ಲಿಯ ಮೇಲೆ ಇದ್ದವು, ಆದರೆ ರಾಹುಲ್ ಮತ್ತೆ ಭಾರತದ ಸೋಲಿಗೆ ಕಾರಣರಾಗಬಹುದೆಂಬ ಅನುಮಾನಗಳಿದ್ದವು.

ಇದನ್ನೂ ಓದಿ
Image
ಅಭಿಮಾನಿಗಳ ಆತಂಕ ದೂರ ಮಾಡಿದ ಕೆಎಲ್ ರಾಹುಲ್
Image
ಬಾಂಗ್ಲಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
Image
ಬಾಂಗ್ಲಾ ಬ್ಯಾಟರ್​ಗಳಿಗೆ ವರವಾದ ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್
Image
ಕೆಎಲ್ ರಾಹುಲ್ ವೈಫಲ್ಯಕ್ಕೆ ಗಂಭೀರ್ ಕಾರಣ ಎಂದ ಶ್ರೀಕಾಂತ್

ವಿಶ್ವಕಪ್ ಸೋಲಿಗೆ ಹೊಣೆ

ವಾಸ್ತವವಾಗಿ, ಈ ಸೆಮಿಫೈನಲ್‌ಗೆ ಮೊದಲು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಏಕದಿನ ಪಂದ್ಯವು 2023 ರ ವಿಶ್ವಕಪ್‌ನ ಫೈನಲ್‌ನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ರಾಹುಲ್ ಅವರ ನಿಧಾನಗತಿಯ ಇನ್ನಿಂಗ್ಸ್ ಟೀಂ ಇಂಡಿಯಾದ ಸೋಲಿಗೆ ಕಾರಣವೆಂದು ಹಲವರು ವಾದಿಸಿದ್ದರು. ಆ ಒಂದು ಇನ್ನಿಂಗ್ಸ್‌ನಿಂದಾಗಿ, ರಾಹುಲ್ ಕಳೆದ ಒಂದೂವರೆ ವರ್ಷಗಳಿಂದ ನಿರಂತರ ಟೀಕೆ ಮತ್ತು ಟ್ರೋಲಿಂಗ್ ಒಳಗಾಗಬೇಕಾಯಿತು. ಸ್ವತಃ ರಾಹುಲ್ ಅವರೇ ಕೆಲವು ಸಂದರ್ಭಗಳಲ್ಲಿ ಆ ಇನ್ನಿಂಗ್ಸ್ ತನಗೆ ದುಃಸ್ವಪ್ನವಾಗಿತ್ತು ಎಂದು ಹೇಳಿದುಂಟು.

ಇದನ್ನೂ ಓದಿ: IND vs NZ: ಕಿವೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿದ ಕೆಎಲ್ ರಾಹುಲ್

ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು

ಹಿಂದೆ ನಡೆದ ಘಟನೆಯನ್ನು ಈಗ ಬದಲಾಯಿಸಲು ಅಥವಾ ಸರಿಪಡಿಸಲು ಸಾಧ್ಯವಿಲ್ಲ. ಆದರೆ ಅದರಿಂದ ಕಲಿಯುವ ಮೂಲಕ, ಹೊಸ ಸವಾಲನ್ನು ಖಂಡಿತವಾಗಿಯೂ ಯಶಸ್ಸಾಗಿ ಪರಿವರ್ತಿಸಬಹುದು. ರಾಹುಲ್ ಈ ಬಾರಿಯೂ ಹಾಗೆಯೇ ಮಾಡಿದರು. ಭಾರತವನ್ನು ಸಂಕಷ್ಟದ ಪರಿಸ್ಥಿತಿಯಿಂದ ಹೊರತಂದಿದ್ದು ಮಾತ್ರವಲ್ಲದೆ, ಕೊನೆಯವರೆಗೂ ಉಳಿದು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಪಂದ್ಯದ ಕೊನೆಯ ಶಾಟ್ ಮತ್ತು ಪಂದ್ಯ ಗೆಲ್ಲುವ ರನ್ ಕೂಡ ರಾಹುಲ್ ಅವರ ಬ್ಯಾಟ್‌ನಿಂದಲೇ ಬಂದಿದ್ದು, ಅವರು ಅದ್ಭುತ ಸಿಕ್ಸ್ ಬಾರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. ಅಂತಿಮವಾಗಿ ರಾಹುಲ್ ಕೇವಲ 34 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯ ಹೊಡೆತ ಹೊಡೆದ ನಂತರ ಕೆ.ಎಲ್. ರಾಹುಲ್ ಕಿರುಚಿದ ರೀತಿ, ಬಹುಶಃ ಅವರೊಳಗಿನ ಸೇಡಿನ ಜ್ವಾಲೆಯನ್ನು ಸ್ವಲ್ಪ ತಗ್ಗಿಸಿದಂತೆ ತೋರುತ್ತಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Wed, 5 March 25

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ