AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಸಿಎಸ್​ಕೆಯನ್ನು ಬಗ್ಗು ಬಡಿದ ಬಳಿಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ

IPL 2022, LSG vs CSK: ಅಮೋಘ ಪ್ರದರ್ಶನದಿಂದಾಗಿ ರಾಹುಲ್ ಪಡೆ ಗೆಲುವಿನ ಹಳಿಗೇರಿದರೆ, ಸಿಎಸ್​ಕೆ ತಂಡ  ಭಾರೀ ಮುಖಭಂಗ ಅನುಭವಿಸಿತು. ಪಂದ್ಯ ಮುಗಿದ ಬಳಿಕ ಲಖನೌ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, ಏನು ಹೇಳಿದರು ಎಂಬುದನ್ನು ಕೇಳಿ.

KL Rahul: ಸಿಎಸ್​ಕೆಯನ್ನು ಬಗ್ಗು ಬಡಿದ ಬಳಿಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
KL Rahul post-match presentation
TV9 Web
| Updated By: Vinay Bhat|

Updated on: Apr 01, 2022 | 10:02 AM

Share

ಹೊಸ ನಾಯಕ, ಹೊಸ ತಂಡದೊಂದಿಗೆ ಐಪಿಎಲ್ 2022ಕ್ಕೆ (IPL 2022) ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಸೋತ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ತನ್ನ ದ್ವಿತೀಯ ಪಂದ್ಯದಲ್ಲಿ ಊಹಿಸಲಾಗದ ರೀತಿ ಕಮ್​ಬ್ಯಾಕ್ ಮಾಡಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ಎಲ್​ಎಸ್​​ಜಿ (LSG vs CSK) 6 ವಿಕೆಟ್​​ಗಳಿಂದ ಗೆಲುವು ಸಾಧಿಸಿತು. ಸ್ಫೋಟಕ ಬ್ಯಾಟರ್ ಎವಿನ್ ಲೆವಿಸ್ (55*ರನ್, 23 ಎಸೆತ, 6 ಬೌಂಡರಿ, 3 ಸಿಕ್ಸರ್) ಅಂತಿಮ ಹಂತದಲ್ಲಿ ತೋರಿದ ಅದ್ಭುತ ನಿರ್ವಹಣೆ ಹಾಗೂ ಯುವ ಬ್ಯಾಟರ್ ಆಯುಷ್ ಬಡೋನಿ (19*ರನ್, 9 ಎಸೆತ, 2 ಸಿಕ್ಸರ್) ತೋರಿದ ಅಮೋಘ ಪ್ರದರ್ಶನದಿಂದಾಗಿ ರಾಹುಲ್ ಪಡೆ ಗೆಲುವಿನ ಹಳಿಗೇರಿದರೆ, ಸಿಎಸ್​ಕೆ ತಂಡ  ಭಾರೀ ಮುಖಭಂಗ ಅನುಭವಿಸಿತು. ಪಂದ್ಯ ಮುಗಿದ ಬಳಿಕ ಲಖನೌ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, ಏನು ಹೇಳಿದರು ಎಂಬುದನ್ನು ಕೇಳಿ.

“ರವಿ ಬಿಷ್ಟೋಯಿ ಇಂದು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರದ್ದು ಉದಾರವಾದ ಹೃದಯ. ಅವರೊಬ್ಬ ಫೈಟರ್. ಕಳೆದ ಪಂದ್ಯಕ್ಕಿಂತ ಈ ಪಂದ್ಯದಲ್ಲಿ ಅವರು ವೆಟ್​​ ಬಾಲ್ ಇದ್ದರೂ ಕಮ್​ಬ್ಯಾಕ್ ಮಾಡಿದ್ದು ರೋಚಕವಾಗಿತ್ತು. ನಿಜಕ್ಕೂ ಇದು ಖುಷಿ ತಂದಿದೆ. ಅವರು ಇನ್ನಷ್ಟು ಬೆಳೆಯಬೇಕು, ಕಲಿಯಬೇಕು, ಅದನ್ನು ನೋಡಲು ಕಾತುರನಾಗಿದ್ದೇನೆ. ಆಯಿಷ್ ಬದೋನಿ ಒಬ್ಬ ಬಲಿಷ್ಠವಾದ 360 ಡಿಗ್ರಿ ಪ್ಲೇಯರ್. ಅವರ ಕೆಲ ಬ್ಯಾಟಿಂಗ್ ವಿಡಿಯೋವನ್ನು ನಾನು ನೋಡಿದ್ದೆ. ಅದರಲ್ಲಿ ಕೆಲ ಅದ್ಭುತ ಹೊಡೆತಗಳಿವೆ. ಭಾರತಕ್ಕೆ ಈರೀತಿಯ ಆಟಗಾರ ಬೇಕು. ಇವರು ವೈಟ್ ಬಾಲ್ ಕ್ರಿಕೆಟ್​ನ ಆಸ್ತಿ. ಕ್ವಿಂಟನ್ ಡಿಕಾಕ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಎವಿನ್ ಲೆವಿಸ್ ನೆಟ್​ನಲ್ಲಿ ಸಾಕಷ್ಟು ಬ್ಯಾಟಿಂಗ್ ಅಭ್ಯಾಸ ಮಾಡಿದ್ದರು. ಅವರ ಟೈಮಿಂಗ್ ಅದ್ಭುತವಾಗಿತ್ತು. ಈ ಗೆಲುವು ಖುಷಿ ನೀಡಿದೆ,” ಎಂದು ಹೇಳಿದ್ದಾರೆ.

ಇನ್ನು ಸೋತ ತಂಡದ ನಾಯಕ ರವೀಂದ್ರ ಜಡೇಜಾ ಮಾತನಾಡಿ, “ನಾವು ಉತ್ತಮ ಆರಂಭ ಪಡೆದುಕೊಂಡೆವು. ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅಮೋಘ ಪ್ರದರ್ಶನ ನೀಡಿದರು. ಆದರೆ, ನಮ್ಮ ಫೀಲ್ಡಿಂಗ್ ಚೆನ್ನಾಗಿರಲಿಲ್ಲ. ಒಂದು ಕ್ಯಾಚ್ ಒಂದು ಪಂದ್ಯವನ್ನು ಗೆಲ್ಲಬಹುದು. ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು. ಇಲ್ಲಿ ಸಾಕಷ್ಟು ಡ್ಯೂ ಇದ್ದವು. ಕೈಯಲ್ಲಿ ಚೆಂಡು ನಿಲ್ಲುತ್ತಿರಲಿಲ್ಲ. ಮುಂದೆ ನಾವು ಚೆಂಡಿಯಾದ ಚೆಂಡಿನಲ್ಲಿ ಅಭ್ಯಾಸ ನಡೆಸಬೇಕಿದೆ. ಟಾಪ್ ಸಿಕ್ಸ್​ನಲ್ಲಿ ನಮ್ಮ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಮಧ್ಯಮ ಓವರ್​ನಲ್ಲಿ ಕೂಡ. ಬ್ಯಾಟ್​ಗೆ ವಿಕೆಟ್ ಚೆನ್ನಾಗಿ ಬರುತ್ತಿತ್ತು. ನಮ್ಮ ಯೋಜನೆಯನ್ನು ಇನ್ನಷ್ಟು ಉತ್ತಮವಾಗಿ ಜಾರಿಗೆ ತರಬೇಕಿತ್ತು,” ಎಂದು ಹೇಳಿದ್ದಾರೆ.

ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕ್ವಿಂಟನ್ ಡಿಕಾಕ್ ಕೂಡ ಗೆಲುವಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, “ಇದನ್ನು ಊಹಿಸಲು ಆಗುತ್ತಿಲ್ಲ. ಅಂತಿಮ ಹಂತದಲ್ಲಿ ಈರೀತಿ ಗೆಲುವು ಸಾಧಿಸಿರುವುದು ಖುಷಿ ನೀಡುತ್ತದೆ. ಎಲ್ಲರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 210 ರನ್ ಗುರಿ ಮುಟ್ಟುವ ವಿಶ್ವಾಸ ನಮ್ಮಲ್ಲಿತ್ತು. ಎರಡು-ಮೂರು ಓವರ್ ಆದ ಬಳಿಕ ಚೆಂಡು ವಿಕೆಟ್​ಗೆ ಚೆನ್ನಾಗಿ ಬರುತ್ತಿದೆ ಎಂಬುದು ಅರಿವಾಯಿತು. ಎವಿನ್ ಲೆವಿಸ್ ಮತ್ತು ಆಯುಷ್ ಬದೋನಿ ಅದ್ಭುತ ಬ್ಯಾಟಿಂಗ್ ನಿರ್ವಹಿಸಿದರು,” ಎಂದು ಹೇಳಿದ್ದಾರೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ರಾಬಿನ್ ಉತ್ತಪ್ಪ (50 ರನ್, 27 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಆಲ್ರೌಂಡರ್ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ಫಲವಾಗಿ 7 ವಿಕೆಟ್‌ಗೆ 210 ರನ್ ಪೇರಿಸಿತು. ಬಳಿಕ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಎಲ್‌ಎಸ್‌ಜಿ, ನಾಯಕ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ ಉತ್ತಮ ಆರಂಭ ಒದಗಿಸಿತು. ಕೊನೇ ಹಂತದಲ್ಲಿ ಲೆವಿಸ್ ಮತ್ತು ಬದೋನಿ ಅಬ್ಬರಿದ ಫಲವಾಗಿ ಎಲ್‌ಎಸ್‌ಜಿ ತಂಡ 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 211 ರನ್‌ಗಳಿಸಿ ಗೆಲುವು ಕಂಡಿತು.

KKR vs PBKS, IPL 2022: ಐಪಿಎಲ್​​ನಲ್ಲಿಂದು ಕೋಲ್ಕತ್ತಾ- ಪಂಜಾಬ್ ಮುಖಾಮುಖಿ: ಅಯ್ಯರ್ ಪಡೆ ಮೇಲೆ ಎಲ್ಲರ ಕಣ್ಣು

LSG vs CSK, IPL 2022: ಹಿಂದೆಂದೂ ಹೀಗೆ ಆಗಿಲ್ಲ: ಐಪಿಎಲ್ ಇತಿಹಾಸದಲ್ಲೇ ಸಿಎಸ್​​ಕೆಗೆ ಭಾರೀ ಮುಖಭಂಗ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ