Mohammed Siraj: ಕೊಹ್ಲಿ ಹಾದಿ ಅನುಸರಿಸಿದ ಸಿರಾಜ್: ದೊಡ್ಡ ರೆಸ್ಟೋರೆಂಟ್ ತೆರೆದ ಆಟೋ ಡ್ರೈವರ್ ಮಗ

Mohammed Siraj restaurant: ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೈದರಾಬಾದ್‌ನಲ್ಲಿ ‘ಜೋಹರ್ಫಾ’ ಎಂಬ ಹೆಸರಿನ ತಮ್ಮ ಮೊದಲ ರೆಸ್ಟೋರೆಂಟ್ ತೆರೆದಿದ್ದಾರೆ. ಹೈದರಾಬಾದ್‌ನ ಹೃದಯಭಾಗದಲ್ಲಿರುವ ಜೋಹರ್ಫಾ ರೆಸ್ಟೋರೆಂಟ್, ಪ್ರಸಿದ್ಧ ಚೀನೀ ಭಕ್ಷ್ಯಗಳೊಂದಿಗೆ ಮೊಘಲಾಯಿ, ಪರ್ಷಿಯನ್ ಮತ್ತು ಅರೇಬಿಯನ್ ಆಹಾರವನ್ನು ಒದಗಿಸುತ್ತದೆ. ಈ ರೆಸ್ಟೋರೆಂಟ್ ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಸಿರಾಜ್ ಹೇಳಿದರು.

Mohammed Siraj: ಕೊಹ್ಲಿ ಹಾದಿ ಅನುಸರಿಸಿದ ಸಿರಾಜ್: ದೊಡ್ಡ ರೆಸ್ಟೋರೆಂಟ್ ತೆರೆದ ಆಟೋ ಡ್ರೈವರ್ ಮಗ
Mohammed Siraj Restaurant
Edited By:

Updated on: Jul 16, 2025 | 6:08 PM

ಬೆಂಗಳೂರು (ಜು. 01): ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಕ್ರಿಕೆಟ್ ಮೈದಾನದ ಹೊರಗೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರು ತಮ್ಮ ತವರು ಹೈದರಾಬಾದ್‌ನಲ್ಲಿ ‘ಜೋಹರ್ಫಾ’ ಎಂಬ ಹೆಸರಿನ ತಮ್ಮ ಮೊದಲ ರೆಸ್ಟೋರೆಂಟ್ ತೆರೆದಿದ್ದಾರೆ. ಒಂದೆಡೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೆ ಮತ್ತೊಂದೆಡೆ, ಸಿರಾಜ್ ಈಗ ಉದ್ಯಮಿಯೂ ಆಗಿದ್ದಾರೆ. ನನಗೆ ಗೌರವ ನೀಡಿದ ನಗರಕ್ಕೆ ಏನನ್ನಾದರೂ ಮರಳಿ ನೀಡಲು ಮುಂದಾಗಿದ್ದೇನೆ ಎಂದು ಸಿರಾಜ್ ಹೇಳಿದ್ದಾರೆ.

ವಿವಿಧ ರೀತಿಯ ಬಗೆಬಗೆಯ ಆಹಾರ

ಹೈದರಾಬಾದ್‌ನ ಹೃದಯಭಾಗದಲ್ಲಿರುವ ಜೋಹರ್ಫಾ ರೆಸ್ಟೋರೆಂಟ್, ಪ್ರಸಿದ್ಧ ಚೀನೀ ಭಕ್ಷ್ಯಗಳೊಂದಿಗೆ ಮೊಘಲಾಯಿ, ಪರ್ಷಿಯನ್ ಮತ್ತು ಅರೇಬಿಯನ್ ಆಹಾರವನ್ನು ಒದಗಿಸುತ್ತದೆ. ಈ ರೆಸ್ಟೋರೆಂಟ್ ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಸಿರಾಜ್ ಹೇಳಿದರು. “ಜೋಹರ್ಫಾ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಹೈದರಾಬಾದ್ ನನಗೆ ನನ್ನ ಗುರುತನ್ನು ನೀಡಿದೆ. ಈ ರೆಸ್ಟೋರೆಂಟ್ ಈ ನಗರಕ್ಕೆ ಏನನ್ನಾದರೂ ಮರಳಿ ನೀಡುವ ನನ್ನ ಮಾರ್ಗವಾಗಿದೆ. ಇಲ್ಲಿ ಜನರು ಒಟ್ಟಿಗೆ ಸೇರಬಹುದು, ಆಹಾರವನ್ನು ಸೇವಿಸಬಹುದು ಮತ್ತು ಮನೆಯಲ್ಲಿರುವಂತೆ ಅನುಭವ ಪಡೆಯಬಹುದು” ಎಂದು ಸಿರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
ಬ್ಯಾಟ್ಸ್‌ಮನ್‌ಗಳಿಗೆ ಮಾತ್ರವಲ್ಲ, ಬೌಲರ್‌ಗಳಿಗೂ ಈ ಪಿಚ್ ಸ್ಮಶಾನ
IND vs ENG: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಟಿ20 ವಿಶ್ವಕಪ್​ 2026: 7 ಸ್ಥಾನಕ್ಕಾಗಿ 22 ತಂಡಗಳ ನಡುವೆ ಪೈಪೋಟಿ
IND vs ENG: ಟೀಮ್ ಇಂಡಿಯಾ ಪರ ಇಬ್ಬರು ಆಲ್​ರೌಂಡರ್​ಗಳು ಕಣಕ್ಕೆ

ಉತ್ತಮ ಅಡುಗೆಯವರ ತಂಡ

ಈ ರೆಸ್ಟೋರೆಂಟ್ ಅನುಭವಿ ಅಡುಗೆಯವರ ತಂಡವನ್ನು ಹೊಂದಿದೆ. ಈ ಅಡುಗೆಯವರು ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡುವಲ್ಲಿ ಪರಿಣಿತರು. ಅವರು ತಾಜಾ ಮತ್ತು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸುತ್ತಾರೆ. ಈ ಹೆಜ್ಜೆಯೊಂದಿಗೆ, ಸಿರಾಜ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರೂ ಈ ಹಿಂದೆ ಆಹಾರ ಮತ್ತು ಹೋಟೆಲ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ.

Edgbaston Pitch Report: ಬ್ಯಾಟ್ಸ್‌ಮನ್‌ಗಳಿಗೆ ಮಾತ್ರವಲ್ಲ, ಬೌಲರ್‌ಗಳಿಗೂ ಇದು ಸ್ಮಶಾನ: ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್ನ ಪಿಚ್ ನೋಡಿ

ಎರಡನೇ ಟೆಸ್ಟ್‌ನಲ್ಲಿ ಸಿರಾಜ್ ಮೇಲೆ ಜವಾಬ್ದಾರಿ

ಕ್ರಿಕೆಟ್ ಬಗ್ಗೆ ಹೇಳುವುದಾದರೆ, ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಬುಮ್ರಾ ಐದೂ ಟೆಸ್ಟ್ ಪಂದ್ಯಗಳಲ್ಲೂ ಆಡುವುದಿಲ್ಲ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಈಗಾಗಲೇ ಹೇಳಿದ್ದರು. ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕೇವಲ ಮೂರು ದಿನಗಳ ವಿರಾಮವಿದೆ. ಆದ್ದರಿಂದ, ಎರಡನೇ ಟೆಸ್ಟ್ ಪಂದ್ಯವು ಬುಮ್ರಾಗೆ ವಿಶ್ರಾಂತಿ ನೀಡಲು ಸರಿಯಾದ ಅವಕಾಶವಾಗಿದೆ.

ಅಂತಹ ಪರಿಸ್ಥಿತಿಯಲ್ಲಿ, ಎಲ್ಲರ ಕಣ್ಣುಗಳು ಮೊಹಮ್ಮದ್ ಸಿರಾಜ್ ಮೇಲೆ ಇರುತ್ತವೆ. ಅವರು ತಂಡದ ಅತ್ಯಂತ ಹಿರಿಯ ವೇಗದ ಬೌಲರ್ ಆಗಿದ್ದಾರೆ. ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಪ್ರದರ್ಶನ ನಿರೀಕ್ಷೆಯಂತೆ ಇರಲಿಲ್ಲ. ಅವರು 41 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದರು. ಈಗ ಬುಮ್ರಾ ಕೂಡ ಇಲ್ಲದ ಕಾರಣ ಟೀಮ್ ಇಂಡಿಯಾ ಮೊಹಮ್ಮದ್ ಸಿರಾಜ್ ಮೇಲೆ ಅವಲಂಬಿತವಾಗಿದ್ದು, ಎರಡನೇ ಟೆಸ್ಟ್​ನಲ್ಲಿ ಕಮಾಲ್ ಮಾಡಬೇಕಾದ ಒತ್ತಡದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Tue, 1 July 25