AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನ್ ಬದಲು ಈತನಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕಿತ್ತು ಎಂದ ಯುವರಾಜ್ ಸಿಂಗ್

ODI World Cup 2023: ಚಹಲ್ ಪರ ಬ್ಯಾಟ್ ಬೀಸಿರುವ ಆಲ್‌ರೌಂಡರ್ ಯುವರಾಜ್ ಸಿಂಗ್, ‘ ಈ ತಂಡಕ್ಕೆ ಲೆಗ್‌ಸ್ಪಿನ್ನರ್‌ನ ಅಗತ್ಯವಿತ್ತು. ಹೀಗಾಗಿ ಚಾಹಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕಿತ್ತು. ಒಂದು ವೇಳೆ ಚಾಹಲ್ ಅವರನ್ನು ಆಯ್ಕೆ ಮಾಡದಿದ್ದರೆ, ವಾಷಿಂಗ್ಟನ್ ಸುಂದರ್ ಅವರನ್ನು ತಂಡದಲ್ಲಿ ನೋಡಬಹುದೆಂದು ನಾನು ಭಾವಿಸಿದ್ದೆ ಎಂದಿದ್ದಾರೆ.

ಅಶ್ವಿನ್ ಬದಲು ಈತನಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕಿತ್ತು ಎಂದ ಯುವರಾಜ್ ಸಿಂಗ್
ಆರ್​ ಅಶ್ವಿನ್, ಯುವರಾಜ್ ಸಿಂಗ್
ಪೃಥ್ವಿಶಂಕರ
|

Updated on:Sep 30, 2023 | 8:05 AM

Share

ಭಾರತ ಕ್ರಿಕೆಟ್ ತಂಡ ವಿಶ್ವಕಪ್ (ODI World Cup 2023) ತಂಡದಲ್ಲಿ ಕೊನೆಯ ಕ್ಷಣದಲ್ಲಿ ಒಂದೇ ಒಂದು ಬದಲಾವಣೆ ಮಾಡಿದೆ. ಏಷ್ಯಾಕಪ್ ಫೈನಲ್‌ಗೂ ಮುನ್ನ ಗಾಯಗೊಂಡಿದ್ದ ಅಕ್ಷರ್ ಪಟೇಲ್ (Axar Patel) ಬದಲು ಹಿರಿಯ ಅನುಭವಿ ಸ್ಪಿನ್ನರ್ ಆರ್​ ಅಶ್ವಿನ್​ಗೆ (Ravichandran Ashwin) ತಂಡದಲ್ಲಿ ಅವಕಾಶ ನೀಡಿದೆ. ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ ಅಶ್ವಿನ್ ಕೊನೆಗೂ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಯ್ಕೆ ಮಂಡಳಿಯ ಈ ನಿರ್ಧಾರ ತಂಡದ ಕೆಲವು ಮಾಜಿ ಆಟಗಾರರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರು ಅಶ್ವಿನ್ ಬದಲು ಇತರ ಆಟಗಾರರಿಗೆ ಅವಕಾಶ ನೀಡಬೇಕು ಎಂದಿದ್ದಾರೆ. ಇದಕ್ಕೆ ಮಾಜಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh) ಕೂಡ ಹೊರತಾಗಿಲ್ಲ.

ಚಾಹಲ್ ಮಾತ್ರ ಕಾಣೆಯಾಗಿದ್ದಾರೆ

ವಾಸ್ತವವಾಗಿ ಈ ಬಾರಿಯ ವಿಶ್ವಕಪ್ ಭಾರತದಲ್ಲೆ ನಡೆಯುತ್ತಿದೆ. ಇದಕ್ಕೂ ಮುನ್ನ 2011ರಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆದಿತ್ತು. ಆ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು. ಅಂದು ತಂಡದ ಪರ ಆಲ್​ರೌಂಡರ್ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್, ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಈ ಬಾರಿಯ ವಿಶ್ವಕಪ್ ತಂಡದ ಬಗ್ಗೆ ಪ್ರತಿಕ್ರಿಯಿಸಿರುವ ಯುವಿ, ‘ವೈಯಕ್ತಿಕವಾಗಿ, ಈ ತಂಡದಲ್ಲಿ ಚಾಹಲ್ ಮಾತ್ರ ಕಾಣೆಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿ ಲೆಗ್‌ಸ್ಪಿನ್ನರ್‌ನ ಅಗತ್ಯವಿತ್ತು’ ಎಂದಿದ್ದಾರೆ.

ಯುವರಾಜ್ ಸಿಂಗ್ ಮನೆಗೆ ಪುಟ್ಟ ರಾಜಕುಮಾರಿಯ ಆಗಮನ; ಮುದ್ದಾದ ಮಗುವಿನ ಹೆಸರೇನು ಗೊತ್ತಾ?

ಸುಂದರ್ ಪರ ಯುವಿ ಬ್ಯಾಟ್

ಮುಂದುವರೆದು ಮಾತನಾಡಿದ ಯುವಿ, ‘ಯುಜುವೇಂದ್ರ ಚಹಾಲ್ ವಿಶ್ವಕಪ್‌ನ ಆರಂಭಿಕ ಯೋಜನೆಯಲ್ಲಿ ಇರಲಿಲ್ಲ. ಅಶ್ವಿನ್ ಕೂಡ ಹಾಗೆಯೇ. ಏಷ್ಯಾಕಪ್ ಫೈನಲ್‌ಗೆ ಮುನ್ನ ಅಕ್ಷರ್ ಗಾಯಗೊಂಡಿದ್ದರಿಂದ ವಾಷಿಂಗ್ಟನ್ ಸುಂದರ್​ಗೆ ತಂಡದಲ್ಲಿ ಅವಕಾಶ ನೀಡಲಾಯಿತು. ಇತ್ತ ಸುದೀರ್ಘ ಒಂದೂವರೆ ವರ್ಷಗಳ ನಂತರ ಅಶ್ವಿನ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಾಷಿಂಗ್ಟನ್ ಸುಂದರ್ ಕೂಡ ಬಹಳ ದಿನಗಳ ನಂತರ ತಂಡದಲ್ಲಿ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಅಶ್ವಿನ್ ಆಡಿದ್ದರೆ, ಮೂರನೇ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್​ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಅಕ್ಷರ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ತೆಗೆದುಕೊಳ್ಳಬಹುದಿತ್ತು ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.

ಈ ತಂಡಕ್ಕೆ ಲೆಗ್‌ಸ್ಪಿನ್ನರ್‌ನ ಅಗತ್ಯವಿತ್ತು

ಇನ್ನು ಚಹಲ್ ಪರ ಬ್ಯಾಟ್ ಬೀಸಿರುವ ಆಲ್‌ರೌಂಡರ್ ಯುವರಾಜ್ ಸಿಂಗ್, ‘ಈ ತಂಡಕ್ಕೆ ಲೆಗ್‌ಸ್ಪಿನ್ನರ್‌ನ ಅಗತ್ಯವಿತ್ತು. ಹೀಗಾಗಿ ಚಾಹಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕಿತ್ತು. ಒಂದು ವೇಳೆ ಚಾಹಲ್ ಅವರನ್ನು ಆಯ್ಕೆ ಮಾಡದಿದ್ದರೆ, ವಾಷಿಂಗ್ಟನ್ ಸುಂದರ್ ಅವರನ್ನು ತಂಡದಲ್ಲಿ ನೋಡಬಹುದೆಂದು ನಾನು ಭಾವಿಸಿದ್ದೆ. ಆದರೆ ಆಯ್ಕೆ ಮಂಡಳಿ ಅನುಭವಿಗೆ ಹೆಚ್ಚು ಆದ್ಯತೆ ನೀಡಿದೆ. ಅದಕ್ಕಾಗಿಯೇ ಅಶ್ವಿನ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿದೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 am, Sat, 30 September 23