AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಮುಂದಿನ ಸೀಸನ್​ಗೆ ಆನೆ ಬಲ; 60 ಬಾಲ್​ಗೆ 141 ಚಚ್ಚಿದ ಆಟಗಾರ

ಫಿಲಿಪ್ ಸಾಲ್ಟ್ ಅವರು ಇತ್ತೀಚೆಗೆ 60 ಎಸೆತಗಳಲ್ಲಿ 141 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿ ತಂಡವು ಈ ಹಿಂದೆ ಅವರನ್ನು 11.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಸಾಲ್ಟ್ ಅವರ ಈ ಫಾರ್ಮ್ ಮುಂದಿನ ಐಪಿಎಲ್ ಸೀಸನ್‌ಗೆ ಆರ್‌ಸಿಬಿ ತಂಡಕ್ಕೆ ಉತ್ತಮ ಬಲವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

RCB ಮುಂದಿನ ಸೀಸನ್​ಗೆ ಆನೆ ಬಲ; 60 ಬಾಲ್​ಗೆ 141 ಚಚ್ಚಿದ ಆಟಗಾರ
Rcb
ರಾಜೇಶ್ ದುಗ್ಗುಮನೆ
|

Updated on:Sep 13, 2025 | 10:02 AM

Share

ಆರ್​​ಸಿಬಿ ತಂಡ ಈ ಬಾರಿ ಐಪಿಎಲ್​ನಲ್ಲಿ ಕಪ್ ಗೆದ್ದಿದೆ. ಮುಂದಿನ ಸೀಸನ್​ಗೆ ಈಗಲೇ ನಿರೀಕ್ಷೆ ಮೂಡಿದೆ. ಆರ್​ಸಿಬಿ (RCB) ಮತ್ತೊಮ್ಮೆ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಹೀಗಿರುವಾಗಲೇ ಆರ್​ಸಿಬಿಯಲ್ಲಿದ್ದಾಗ ಸಾಧಾರಣ ಆಟ ಆಡಿದ್ದ ಆಟಗಾರ ಈಗ ಫಾರ್ಮ್​ಗೆ ಮರಳಿದ್ದಾರೆ. 60 ಬಾಲ್​​ಗೆ 141 ರನ್ ಚಚ್ಚಿದ್ದಾರೆ. ಅವರು ಬೇರೆ ಯಾರೂ ಅಲ್ಲ ಫಿಲಿಪ್ ಸಾಲ್ಟ್. ಇದರಿಂದ ಆರ್​ಸಿಬಿ ಮುಂದಿನ ಸೀಸನ್​ಗೆ ಈಗಲೇ ಬಲ ಬಂದಂತೆ ಆಗಿದೆ.

ಮ್ಯಾಂಚೆಸ್ಟರ್​ನ ರಮಿರೇಟ್ಸ್ ಒಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 13) ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20 ಪಂದ್ಯ ನಡೆದಿದೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಫಿಲಿಪ್ ಸಾಲ್ಟ್ ಅವರು ಅಬ್ಬರದ ದಾಖಲೆ ಬರೆದಿದ್ದಾರೆ. ಕೇವಲ 60 ಬಾಲ್​ಗೆ 141 ರನ್ ಸಿಡಿಸಿದ್ದಾರೆ. ಇದರಲ್ಲಿ 15 ಫೋರ್ ಹಾಗೂ 8 ಸಿಕ್ಸ್​ಗಳಿವೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರ ಫಾರ್ಮ್ ನೋಡಿ ಅನೇಕರು ಹೌಹಾರಿದ್ದಾರೆ.

ಮೊದಲು ಬ್ಯಾಟಿಂಗ್​​ಗೆ ಇಳಿದ ಇಂಗ್ಲೆಂಡ್ ಬಿರುಸಿನ ಆಟ ಪ್ರಾರಂಭಿಸಿತು. ಕೇವಲ 7.5 ಓವರ್​ಗಳಲ್ಲಿ ತಂಡ 126 ರನ್​ಗಳ ಗಡಿ ದಾಟಿತ್ತು. ಸಾಲ್ಟ್ ಕೇವಲ 39 ಬಾಲ್​ಗಳಿಗೆ ಶತಕ ಕೂಡ ಸಿಡಿಸಿದರು. ಇನ್ನು, ಇಂಗ್ಲೆಂಡ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಕೂಡ ಸೃಷ್ಟಿ ಮಾಡಿದೆ. 20 ಓವರ್​ಗಳಲ್ಲಿ ತಂಡ 300 ರನ್ ಕಲೆ ಹಾಕಿದೆ.

ಇದನ್ನೂ ಓದಿ:  ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ದಾಖಲೆ: 300ಕ್ಕೂ ಅಧಿಕ ರನ್ ಚಚ್ಚಿದ ಇಂಗ್ಲೆಂಡ್

ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ ಸಾಲ್ಟ್​ನ ಆರ್​ಸಿಬಿ 11.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆರಂಭದಲ್ಲಿ ಅವರು ಉತ್ತಮವಾಗಿಯೇ ಆಡಿದ್ದರು. ನಂತರ ಕೆಲ ಮ್ಯಾಚ್ ಡಲ್ ಹೊಡೆದರು. ಹೀಗಾಗಿ, ಕೆಲ ಪಂದ್ಯಗಳಲ್ಲಿ ಅವರನ್ನು ಹೊರಕ್ಕೆ ಕೂಡ ಇಡಲಾಯಿತು. ಅವರ ಗರಿಷ್ಠ ರನ್ ಕೇವಲ 65 ರನ್​ಗಳಾಗಿದ್ದವು. ಈಗ ಅವರು ಫಾರ್ಮ್​ಗೆ ಮರಳಿದ್ದು ಆರ್​ಸಿಬಿ ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಕ್ರಿಕೆಟ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:02 am, Sat, 13 September 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ