AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಮುಂದಿನ ಸೀಸನ್​ಗೆ ಆನೆ ಬಲ; 60 ಬಾಲ್​ಗೆ 141 ಚಚ್ಚಿದ ಆಟಗಾರ

ಫಿಲಿಪ್ ಸಾಲ್ಟ್ ಅವರು ಇತ್ತೀಚೆಗೆ 60 ಎಸೆತಗಳಲ್ಲಿ 141 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿ ತಂಡವು ಈ ಹಿಂದೆ ಅವರನ್ನು 11.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಸಾಲ್ಟ್ ಅವರ ಈ ಫಾರ್ಮ್ ಮುಂದಿನ ಐಪಿಎಲ್ ಸೀಸನ್‌ಗೆ ಆರ್‌ಸಿಬಿ ತಂಡಕ್ಕೆ ಉತ್ತಮ ಬಲವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

RCB ಮುಂದಿನ ಸೀಸನ್​ಗೆ ಆನೆ ಬಲ; 60 ಬಾಲ್​ಗೆ 141 ಚಚ್ಚಿದ ಆಟಗಾರ
Rcb
ರಾಜೇಶ್ ದುಗ್ಗುಮನೆ
|

Updated on:Sep 13, 2025 | 10:02 AM

Share

ಆರ್​​ಸಿಬಿ ತಂಡ ಈ ಬಾರಿ ಐಪಿಎಲ್​ನಲ್ಲಿ ಕಪ್ ಗೆದ್ದಿದೆ. ಮುಂದಿನ ಸೀಸನ್​ಗೆ ಈಗಲೇ ನಿರೀಕ್ಷೆ ಮೂಡಿದೆ. ಆರ್​ಸಿಬಿ (RCB) ಮತ್ತೊಮ್ಮೆ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಹೀಗಿರುವಾಗಲೇ ಆರ್​ಸಿಬಿಯಲ್ಲಿದ್ದಾಗ ಸಾಧಾರಣ ಆಟ ಆಡಿದ್ದ ಆಟಗಾರ ಈಗ ಫಾರ್ಮ್​ಗೆ ಮರಳಿದ್ದಾರೆ. 60 ಬಾಲ್​​ಗೆ 141 ರನ್ ಚಚ್ಚಿದ್ದಾರೆ. ಅವರು ಬೇರೆ ಯಾರೂ ಅಲ್ಲ ಫಿಲಿಪ್ ಸಾಲ್ಟ್. ಇದರಿಂದ ಆರ್​ಸಿಬಿ ಮುಂದಿನ ಸೀಸನ್​ಗೆ ಈಗಲೇ ಬಲ ಬಂದಂತೆ ಆಗಿದೆ.

ಮ್ಯಾಂಚೆಸ್ಟರ್​ನ ರಮಿರೇಟ್ಸ್ ಒಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 13) ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20 ಪಂದ್ಯ ನಡೆದಿದೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಫಿಲಿಪ್ ಸಾಲ್ಟ್ ಅವರು ಅಬ್ಬರದ ದಾಖಲೆ ಬರೆದಿದ್ದಾರೆ. ಕೇವಲ 60 ಬಾಲ್​ಗೆ 141 ರನ್ ಸಿಡಿಸಿದ್ದಾರೆ. ಇದರಲ್ಲಿ 15 ಫೋರ್ ಹಾಗೂ 8 ಸಿಕ್ಸ್​ಗಳಿವೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರ ಫಾರ್ಮ್ ನೋಡಿ ಅನೇಕರು ಹೌಹಾರಿದ್ದಾರೆ.

ಮೊದಲು ಬ್ಯಾಟಿಂಗ್​​ಗೆ ಇಳಿದ ಇಂಗ್ಲೆಂಡ್ ಬಿರುಸಿನ ಆಟ ಪ್ರಾರಂಭಿಸಿತು. ಕೇವಲ 7.5 ಓವರ್​ಗಳಲ್ಲಿ ತಂಡ 126 ರನ್​ಗಳ ಗಡಿ ದಾಟಿತ್ತು. ಸಾಲ್ಟ್ ಕೇವಲ 39 ಬಾಲ್​ಗಳಿಗೆ ಶತಕ ಕೂಡ ಸಿಡಿಸಿದರು. ಇನ್ನು, ಇಂಗ್ಲೆಂಡ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಕೂಡ ಸೃಷ್ಟಿ ಮಾಡಿದೆ. 20 ಓವರ್​ಗಳಲ್ಲಿ ತಂಡ 300 ರನ್ ಕಲೆ ಹಾಕಿದೆ.

ಇದನ್ನೂ ಓದಿ:  ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ದಾಖಲೆ: 300ಕ್ಕೂ ಅಧಿಕ ರನ್ ಚಚ್ಚಿದ ಇಂಗ್ಲೆಂಡ್

ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ ಸಾಲ್ಟ್​ನ ಆರ್​ಸಿಬಿ 11.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆರಂಭದಲ್ಲಿ ಅವರು ಉತ್ತಮವಾಗಿಯೇ ಆಡಿದ್ದರು. ನಂತರ ಕೆಲ ಮ್ಯಾಚ್ ಡಲ್ ಹೊಡೆದರು. ಹೀಗಾಗಿ, ಕೆಲ ಪಂದ್ಯಗಳಲ್ಲಿ ಅವರನ್ನು ಹೊರಕ್ಕೆ ಕೂಡ ಇಡಲಾಯಿತು. ಅವರ ಗರಿಷ್ಠ ರನ್ ಕೇವಲ 65 ರನ್​ಗಳಾಗಿದ್ದವು. ಈಗ ಅವರು ಫಾರ್ಮ್​ಗೆ ಮರಳಿದ್ದು ಆರ್​ಸಿಬಿ ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಕ್ರಿಕೆಟ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:02 am, Sat, 13 September 25

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು