AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

250 ರನ್ ಬಾರಿಸಿದ ರಾಣ: ಎದುರಾಳಿ ತಂಡ 170 ರನ್​ಗೆ ಆಲೌಟ್..!

Ranji Trophy 2024: ವಿಶೇಷ ಎಂದರೆ ಈ ಪಂದ್ಯದಲ್ಲಿ 2 ಇನಿಂಗ್ಸ್​ಗಳಿಂದ ಮಣಿಪುರ ತಂಡ ಕಲೆಹಾಕಿದ್ದು ಕೇವಲ 170 ರನ್​ಗಳು ಮಾತ್ರ. ಅದೇ ಅತ್ತ ಹರ್ಯಾಣ ಪರ ಹಿಮಾಂಶು ರಾಣ ಏಕಾಂಗಿಯಾಗಿ 250 ರನ್​ ಪೇರಿಸಿದ್ದರು.

250 ರನ್ ಬಾರಿಸಿದ ರಾಣ: ಎದುರಾಳಿ ತಂಡ 170 ರನ್​ಗೆ ಆಲೌಟ್..!
ಹಿಮಾಂಶು ರಾಣ
TV9 Web
| Edited By: |

Updated on:Jan 21, 2024 | 2:27 PM

Share

ಅಹಮದಾಬಾದ್​ನಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಹರ್ಯಾಣ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪುರ ತಂಡವು ಹರ್ಯಾಣವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹರ್ಯಾಣ ತಂಡಕ್ಕೆ ಅಂಕಿತ್ ಕುಮಾರ್ (56) ಉತ್ತಮ ಆರಂಭ ಒದಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಣಿಪುರ ಬೌಲರ್​ಗಳನ್ನು ಬೆಂಡೆತ್ತಿ ಅಬ್ಬರಿಸಿದ ರಾಣ ಮೊದಲ ದಿನದಾಟದಲ್ಲೇ ದ್ವಿಶತಕ ಪೂರೈಸಿದರು.

ಇನ್ನೊಂದೆಡೆ ನಿಶಾಂತ್ ಸಿಂಧು (119) ಕೂಡ ಶತಕ ಬಾರಿಸಿ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ 313 ಎಸೆತಗಳನ್ನು ಎದುರಿಸಿದ ಹಿಮಾಂಶು ರಾಣ 33 ಫೋರ್​ಗಳೊಂದಿಗೆ ಅಜೇಯ 250 ರನ್ ಬಾರಿಸಿದರು. ಈ ಭರ್ಜರಿ ದ್ವಿಶತಕದ ನೆರವಿನಿಂದ ಹರ್ಯಾಣ ತಂಡವು 3 ವಿಕೆಟ್ ಕಳೆದುಕೊಂಡು 508 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು.

ಇದಾದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಮಣಿಪುರ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಹರ್ಯಾಣ ಬೌಲರ್​ಗಳು ಯಶಸ್ವಿಯಾಗಿದ್ದರು. 42 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಮಣಿಪುರ ತಂಡವು ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಆಲೌಟ್ ಆಗಿತ್ತು. ಅಂದರೆ ಮೊದಲ ಇನಿಂಗ್ಸ್​ ಅನ್ನು ಕೇವಲ 77 ರನ್​ಗಳಿಗೆ ಅಂತ್ಯಗೊಳಿಸಿತ್ತು.

ಇದರ ಬೆನ್ನಲ್ಲೇ ಫಾಲೋಆನ್ ಹೇರಿದ ಹರ್ಯಾಣ ತಂಡವು ಮಣಿಪುರ ತಂಡವನ್ನು ಮತ್ತೆ ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಮಣಿಪುರ ತಂಡವು ಈ ಬಾರಿ ಕೇವಲ 29 ರನ್​ ಕಲೆಹಾಕುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ನಾಯಕ ಕಿಶನ್​ಗ್ಬಮ್​ 70 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಒಂದು ವಿಕೆಟ್ ಸಿಗುತ್ತಿದ್ದಂತೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹರ್ಯಾಣ ಬೌಲರ್​ಗಳು ಮಣಿಪುರ ತಂಡವನ್ನು ಕೇವಲ 93 ರನ್​ಗಳಿಗೆ ಆಲೌಟ್ ಮಾಡಿತು.

ಹಿಮಾಂಶು vs ಮಣಿಪುರ:

ವಿಶೇಷ ಎಂದರೆ ಈ ಪಂದ್ಯದಲ್ಲಿ 2 ಇನಿಂಗ್ಸ್​ಗಳಿಂದ ಮಣಿಪುರ ತಂಡ ಕಲೆಹಾಕಿದ್ದು ಕೇವಲ 170 ರನ್​ಗಳು ಮಾತ್ರ. ಅದೇ ಅತ್ತ ಹರ್ಯಾಣ ಪರ ಹಿಮಾಂಶು ರಾಣ ಏಕಾಂಗಿಯಾಗಿ 250 ರನ್​ ಪೇರಿಸಿದ್ದರು.  ಹಾಗೆಯೇ 2ನೇ ದಿನದಾಟದಲ್ಲೇ ಮಣಿಪುರ ತಂಡದ 20 ವಿಕೆಟ್​ಗಳನ್ನು ಕಬಳಿಸುವ ಮೂಲಕ ಹರ್ಯಾಣ ತಂಡವು 338 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಹರ್ಯಾಣ (ಪ್ಲೇಯಿಂಗ್ XI): ಮಯಾಂಕ್ ಶಾಂಡಿಲ್ಯ, ಅಂಕಿತ್ ಕುಮಾರ್, ಹಿಮಾಂಶು ರಾಣ, ಅನ್ಶುಲ್ ಕಾಂಬೋಜ್, ನಿಶಾಂತ್ ಸಿಂಧು, ರೋಹಿತ್ ಪರ್ಮೋದ್ ಶರ್ಮಾ, ರಾಹುಲ್ ತೆವಾಟಿಯಾ, ಅಶೋಕ್ ಮೆನಾರಿಯಾ (ನಾಯಕ), ಜಯಂತ್ ಯಾದವ್, ಹರ್ಷಲ್ ಪಟೇಲ್, ಸುಮಿತ್ ಕುಮಾರ್.

ಇದನ್ನೂ ಓದಿ: Rishabh Pant: ಟೀಮ್ ಇಂಡಿಯಾ ಜೊತೆ ಕಾಣಿಸಿಕೊಂಡ ರಿಷಭ್ ಪಂತ್

ಮಣಿಪುರ (ಪ್ಲೇಯಿಂಗ್ XI): ಕರ್ಣಜಿತ್ ಯುಮ್ನಮ್, ಜಾನ್ಸನ್ ಸಿಂಗ್, ಲ್ಯಾಂಗ್ಲೋನಿಯಾಂಬ ಕಿಶನ್​ಗ್ಬಮ್​ (ನಾಯಕ), ಪ್ರಫುಲ್ಲೋಮಣಿ ಸಿಂಗ್, ರೆಕ್ಸ್ ರಾಜ್‌ಕುಮಾರ್, ಎಲ್ ಕಿಶನ್ ಸಿಂಘಾ, ಬಿಶ್ವರ್ಜಿತ್ ಕೊಂಥೌಜಮ್, ನರಿಸಿಂಗ್ ಯಾದವ್, ನಿತೇಶ್ ಸೆಡೈ, ಕಂಗಬಾಮ್ ಪ್ರಿಯೋಜಿತ್ ಸಿಂಗ್, ಕಿಶನ್ ಥೋಕ್ಚೋಮ್.

Published On - 2:23 pm, Sun, 21 January 24

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ