
ಐಪಿಎಲ್ 2025 (IPL 2025) ರ ಲೀಗ್ ಹಂತ ಮುಗಿಯುತ್ತಾ ಬಂದಿದೆ. ಪ್ಲೇಆಫ್ ತಲುಪಲು ತಂಡಗಳು ಶ್ರಮಿಸುತ್ತಿವೆ. ಏತನ್ಮಧ್ಯೆ, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಘಾತ ಎದುರಾಗಿದೆ. ವಾಸ್ತವವಾಗಿ, ಆರ್ಸಿಬಿ ತಂಡದ ನಾಲ್ವರು ಪಂದ್ಯ ವಿಜೇತ ಆಗಾರರು ಗಾಯಗೊಂಡಿದ್ದು ಮುಂದಿನ ಪಂದ್ಯಗಳನ್ನು ಆಡುವುದು ಅನುಮಾನ ಎನ್ನಲಾಗುತ್ತಿದೆ. ಈ ಸೀಸನ್ನಲ್ಲಿ ಆರ್ಸಿಬಿಯ ಪ್ರದರ್ಶನ ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ತಂಡವು ಆಡಿರುವ 11 ಪಂದ್ಯಗಳಲ್ಲಿ 8 ರಲ್ಲಿ ಜಯಗಳಿಸಿದ್ದು, ಕೇವಲ ಮೂರರಲ್ಲಿ ಸೋಲನ್ನು ಎದುರಿಸಿದೆ. ಹೀಗಾಗಿ ತಂಡವು ಪ್ಲೇಆಫ್ಗೆ ಬಹುತೇಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ನಾಲ್ವರು ಆಟಗಾರರ ಅನುಪಸ್ಥಿತಿ ಕಪ್ ಗೆಲ್ಲುವ ಕನಸಿಗೆ ಅಡ್ಡಿಯಾಗಬಹುದು.
ಈ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಯಾಣವು ಇಲ್ಲಿಯವರೆಗೆಅಮೋಘವಾಗಿದೆ. ತಂಡವು ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಏತನ್ಮಧ್ಯೆ, ಈ ಸೀಸನ್ ಅಂತಿಮ ಹಂತದಲ್ಲಿ ಆರ್ಸಿಬಿ ನಾಲ್ಕು ಪ್ರಮುಖ ಹಿನ್ನಡೆಗಳನ್ನು ಅನುಭವಿಸಿದೆ. ನಾಯಕ ರಜತ್ ಪಾಟಿದಾರ್, ಆರಂಭಿಕ ಆಟಗಾರ ಫಿಲ್ ಸಾಲ್ಟ್, ವೇಗದ ಬೌಲರ್ ಜೋಶ್ ಹೇಜಲ್ವುಡ್ ಮತ್ತು ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ರೂಪದಲ್ಲಿ ಈ ಹಿನ್ನಡೆ ಎದುರಾಗಿದೆ. ಈ ಎಲ್ಲಾ ಆಟಗಾರರು ಪ್ರಸ್ತುತ ಉತ್ತಮ ಫಾರ್ಮ್ನಲ್ಲಿದ್ದು, ತಂಡಕ್ಕಾಗಿ ಅನೇಕ ಪಂದ್ಯ ಗೆಲ್ಲುವ ಇನ್ನಿಂಗ್ಸ್ಗಳನ್ನು ಆಡಿದ್ದಾರೆ.
RCB are facing a potential scare ahead of the business end of the IPL 2025 season. pic.twitter.com/MHuedY7oR6
— CricTracker (@Cricketracker) May 7, 2025
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ನಾಯಕ ರಜತ್ ಪಟಿದಾರ್ ಬೆರಳಿಗೆ ಗಾಯವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡುವುದು ಅನುಮಾನಾಸ್ಪದವಾಗಿದೆ. ಫಾರ್ಮ್ನಲ್ಲಿರುವ ಆರಂಭಿಕ ಆಟಗಾರ ಫಿಲ್ ಸಾಲ್ಟ್ ವೈರಲ್ ಜ್ವರದಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರು ಇನ್ನೂ ಜ್ವರದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರ ಸ್ಥಾನದಲ್ಲಿ ಜಾಕೋಬ್ ಬೆಥೆಲ್ ಅವರನ್ನು ತಂಡದಲ್ಲಿ ಸೇರಿಸಲಾಯಿತು. ಕಳೆದ ಪಂದ್ಯದಲ್ಲಿ ಬೆಥೆಲ್ ಅದ್ಭುತ ಅರ್ಧಶತಕ ಗಳಿಸಿದ್ದರು.
IPL 2025: ಆಪರೇಷನ್ ಸಿಂಧೂರ್; ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯಗಳ ಸ್ಥಳಾಂತರ
ಆರ್ಸಿಬಿ ತಂಡದ ಮಾರಕ ವೇಗಿ ಜೋಶ್ ಹೇಜಲ್ವುಡ್ ಭುಜದ ಗಾಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಸಿಎಸ್ಕೆ ವಿರುದ್ಧ ಬಿರುಗಾಳಿಯ ಅರ್ಧಶತಕ ಗಳಿಸಿದ್ದ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಕೂಡ ರಾಷ್ಟ್ರೀಯ ಕರ್ತವ್ಯದ ಕಾರಣದಿಂದಾಗಿ ಈ ಸೀಸನ್ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ನಾಲ್ವರು ಆಟಗಾರರು ಆಡದ ಕಾರಣ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ದುರ್ಬಲಗೊಂಡು ಟ್ರೋಫಿ ಗೆಲ್ಲುವ ಕನಸಿಗೆ ದೊಡ್ಡ ಹೊಡೆತ ಬೀಳಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ