Rohit Sharma: ತನ್ನದೇ ತಂಡದ ಆಟಗಾರನ ವಿರುದ್ಧ ರೊಚ್ಚಿಗೆದ್ದ ರೋಹಿತ್ ಶರ್ಮಾ: ಸೋತ ಬಳಿಕ ಏನಂದ್ರು ಗೊತ್ತೇ?

India vs Pakistan, Asia Cup 2022: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಶ್​ದೀಪ್ ಸಿಂಗ್ (Arshdeep Singh) ಕ್ಯಾಚ್ ಬೈಟ್ಟಿದ್ದು ಸೋಲಿಗೆ ಮುಖ್ಯ ಕಾರಣವಾಯಿತು. ಈ ಸಂದರ್ಭ ರೋಹಿತ್ ಶರ್ಮಾ ಕೋಪಗೊಂಡ ಘಟನೆ ಕೂಡ ನಡೆದಿದೆ.

Rohit Sharma: ತನ್ನದೇ ತಂಡದ ಆಟಗಾರನ ವಿರುದ್ಧ ರೊಚ್ಚಿಗೆದ್ದ ರೋಹಿತ್ ಶರ್ಮಾ: ಸೋತ ಬಳಿಕ ಏನಂದ್ರು ಗೊತ್ತೇ?
Rohit Sharma IND vs PAK Asia Cup 2022
Updated By: Vinay Bhat

Updated on: Sep 05, 2022 | 9:53 AM

ಏಷ್ಯಾಕಪ್ 2022ರ (Asia Cup 2022) ಸೂಪರ್ 4 ಹಂತದ ತನ್ನ ಮೊದಲ ಪಂದ್ಯದಲ್ಲೇ ಭಾರತ ಸೋಲು ಕಂಡಿದೆ. ಭಾನುವಾರ ಪಾಕಿಸ್ತಾನ ವಿರುದ್ಧ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ವೈಫಲ್ಯ ಅನಭವಿಸಿದ್ದು ಸೋಲಿಗೆ ಮುಖ್ಯ ಕಾರಣವಾಯಿತು. ಕೊನೆಯ ಹಂತದಲ್ಲಿ ರೋಹಿತ್ ಪಡೆ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದಾದ ಅವಕಾಶವಿತ್ತು. ಆದರೆ, ಬೌಲರ್​ಗಳು ದುಬಾರಿಯಾಗುವ ಜೊತೆ ಫೀಲ್ಡಿಂಗ್​ನಲ್ಲಿ ಕೂಡ ಕೆಲ ಕ್ಯಾಚ್​ಗಳನ್ನು ಕೈಬಿಟ್ಟಿದ್ದು ದೊಡ್ಡ ಹೊಡೆತ ಬಿದ್ದಿತು. ಅದರಲ್ಲೂ ಮುಖ್ಯವಾಗಿ 18ನೇ ಓವರ್​ನಲ್ಲಿ ಅರ್ಶ್​ದೀಪ್ ಸಿಂಗ್ (Arshdeep Singh) ಕ್ಯಾಚ್ ಕೈಚೆಲ್ಲಿದ್ದು ಸ್ವತಃ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆನೇ ಕೋಪ ತರಿಸಿತು.

18ನೇ ಓವರ್ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡ ಸ್ಫೋಟಕ ಬ್ಯಾಟರ್​ಗಳಾದ ಮೊಹಮ್ಮದ್ ರಿಜ್ವಾನ್ (71) ಹಾಗೂ ಮೊಹಮ್ಮದ್ ನವಾಜ್ (42) ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಹೊಸ ಬ್ಯಾಟ್ಸ್​ಮನ್​ ಸಂಕಷ್ಟಕ್ಕೆ ಸಿಲುಕಿದ್ದರು. ಒತ್ತಡದ ನಡುವೆ 18ನೇ ಓವರ್​ನ 3ನೇ ಎಸೆತದ ರವಿ ಬಿಷ್ಣೋಯ್ ಬೌಲಿಂಗ್​ನಲ್ಲಿ ಅಸಿಫ್ ಅಲಿ ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ, ಚೆಂಡು ಅವರು ಅಂದುಕೊಂಡಂತೆ ಸಾಗದೆ ಟಾಪ್ ಎಡ್ಜ್ ಆಯಿತು. ಈ ಸಂದರ್ಭ ಫೀಲ್ಡಿಂಗ್ ಮಾಡುತ್ತಿದ್ದ ಅರ್ಶ್​ದೀಪ್ ಸಿಂಗ್​ ಹತ್ತಿರ ಚೆಂಡು ಬಂದಿದ್ದು ಸುಲಭ ಕ್ಯಾಚ್ ಹಿಡಿಯಬಹುದಿತ್ತು.

ಇದನ್ನೂ ಓದಿ
IND vs PAK: ಪಂದ್ಯದ ಮಧ್ಯೆ ಸೂರ್ಯಕುಮಾರ್ ಜೊತೆ ಜಗಳಕ್ಕಿಳಿದ ರಿಜ್ವಾನ್, ಶದಾಬ್: ಮುಂದೇನಾಯ್ತು?
Virat Kohli: ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ ತಕ್ಷಣ ಸ್ಟೇಡಿಯಂನಲ್ಲಿ ಫ್ಯಾನ್ಸ್ ಏನು ಮಾಡಿದ್ರು ನೋಡಿ
IND vs PAK: ಒಂದು ತಪ್ಪಿನಿಂದ ಸೋಲುಂಡ ಟೀಮ್ ಇಂಡಿಯಾ..!
Virat Kohli: ಹೊಸ ವಿಶ್ವ ದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ

ಆದರೆ, ಅರ್ಶ್​ದೀಪ್ ಮ್ಯಾಚ್ ಟರ್ನಿಂಗ್ ಪಾಯಿಂಟ್ ಆಗುತ್ತಿದ್ದ ಕ್ಯಾಚನ್ನು ಕೈಚೆಲ್ಲಿದರು. ಈ ಸಂದರ್ಭ ನಾಯಕ ರೋಹಿತ್ ಶರ್ಮಾ ಕೋಪಗೊಂಡು ಅರ್ಶ್​ದೀಪ್ ಮೇಲೆ ರೇಗಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ಕ್ಯಾಚ್ ಕೈ ಚೆಲ್ಲಿದ ಬಳಿಕ ಅಸಿಫ್ ಅಲಿ ಹಾಗೂ ಕುಶ್ದಿಲ್ ಶಾ ಜೊತೆಗೂಡಿ 17 ಎಸೆತಗಳಲ್ಲಿ 33 ರನ್​ಗಳ ಜೊತೆಯಾಟ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

 

ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ”ಇದೊಂದು ಸಾಕಷ್ಟು ಒತ್ತಡದಿಂದ ಕೂಡಿದ್ದ ಪಂದ್ಯ. ರಿಜ್ವಾನ್ ಮತ್ತು ನವಾಜ್ ನಡುವಣ ಜೊತೆಯಾಟ ಶುರುವಾದಾಗ ನಾವು ಶಾಂತವಾಗೇ ಇದ್ದೆವು. ಆದರೆ, ಅದು ದೊಡ್ಡ ಜೊತೆಯಾಟ ಆಯಿತು. ಅವರಿಬ್ಬರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕಿಸ್ತಾನ ಬ್ಯಾಟರ್​ಗಳ ಈರೀತಿಯ ಆಟವನ್ನು ಹಿಂದೆ ಕೂಡ ನೋಡಿದ್ದೇವೆ. ಹೀಗಾಗಿ ನಮಗೆ ಇದು ಆಶ್ಚರ್ಯ ತಂದಿಲ್ಲ,” ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ರೋಹಿತ್, ”ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಸ್ವಲ್ಪ ಉತ್ತಮವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೆವು. ಇದೊಂದು ನಮಗೆ ಒಳ್ಳೆಯ ಪಾಠ. ನಾವು ಕಲೆಹಾಕಿದ ಸ್ಕೋರ್ ಉತ್ತಮವಾಗಿತ್ತು. ಯಾವುದೇ ಪಿಚ್ ಆಗಿರಲಿ, ಯಾವುದೇ ಕಂಡೀಶನ್ ಇರಲಿ ಟಿ20 ಕ್ರಿಕೆಟ್​ನಲ್ಲಿ 180 ಉತ್ತಮ ಮೊತ್ತ. ಆದರೆ, ಕ್ರೆಡಿಟ್ ಪಾಕಿಸ್ತಾನಕ್ಕೆ ಸಲ್ಲಬೇಕು. ನಮಗಿಂತ ಸೊಗಸಾಗಿ ಅವರು ಆಡಿದ್ದಾರೆ,” ಎಂದರು.

ಇನ್ನು ವಿರಾಟ್ ಕೊಹ್ಲಿ ವಿಚಾರವಾಗಿ ಮಾತನಾಡಿದ ರೋಹಿತ್, ”ಕೊಹ್ಲಿಯ ಫಾರ್ಮ್ ಅತ್ಯುತ್ತಮವಾಗಿದೆ. ವಿಕೆಟ್ ಕಳೆದುಕೊಂಡಾಗ ಕೊನೆಯ ವರೆಗೂ ಆಡುವ ಒಬ್ಬ ಆಟಗಾರ ಬೇಕು. ಕೊಹ್ಲಿ ಇಂದು ಆ ಜವಾಬ್ದಾರಿ ನಿರ್ವಹಿಸಿದ್ದಾರೆ. ಒತ್ತಡದ ನಡುವೆಯೂ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ವಿರಾಟ್ ಗಳಿಸಿದ ರನ್ ನಮ್ಮ ತಂಡಕ್ಕೆ ತುಂಬಾ ಉಪಯುಕ್ತವಾಗಿದೆ. ಹಾರ್ದಿಕ್ ಹಾಗೂ ಪಂತ್ ವಿಕೆಟ್ ಆ ಸಮಯದಲ್ಲಿ ಹೋಗಬಾರದಿತ್ತು. ಆದರೆ ನಾವು ಮುಕ್ತ ಮನಸ್ಸಿನಿಂದ ಆಡಲು ಬಯಸುತ್ತೇವೆ. ಕೆಲವೊಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ಪ್ರತಿಬಾರಿ ಯಶಸ್ಸು ಸಿಗುವುದಿಲ್ಲ,” ಎಂಬುದು ರೋಹಿತ್ ಮಾತು.