AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs UPW Highlights, WPL 2026: ಯುಪಿ ವಿರುದ್ಧ 9 ವಿಕೆಟ್​ಗಳಿಂದ ಗೆದ್ದ ಆರ್​ಸಿಬಿ

Mumbai Indians vs Delhi Capital Highlights in Kannada: ಆರ್‌ಸಿಬಿ ಕೇವಲ 12.1 ಓವರ್‌ಗಳಲ್ಲಿ 144 ರನ್‌ಗಳ ಗುರಿಯನ್ನು ತಲುಪಿ ಸತತ ಎರಡನೇ ಗೆಲುವು ದಾಖಲಿಸಿತು. ಯುಪಿ ವಾರಿಯರ್ಸ್ 5 ವಿಕೆಟ್‌ಗಳ ನಷ್ಟಕ್ಕೆ 143 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ, ಆರ್‌ಸಿಬಿ 1 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿತು. ಗ್ರೇಸ್ ಹ್ಯಾರಿಸ್ 40 ಎಸೆತಗಳಲ್ಲಿ 85 ರನ್ ಗಳಿಸಿದರೆ, ಸ್ಮೃತಿ ಮಂಧಾನ 47 ರನ್ ಗಳಿಸಿ ಅಜೇಯರಾಗಿ ಉಳಿದರು.

RCB vs UPW Highlights, WPL 2026: ಯುಪಿ ವಿರುದ್ಧ 9 ವಿಕೆಟ್​ಗಳಿಂದ ಗೆದ್ದ ಆರ್​ಸಿಬಿ
Rcb Womens
ಪೃಥ್ವಿಶಂಕರ
|

Updated on:Jan 12, 2026 | 10:42 PM

Share

ಮಹಿಳಾ ಪ್ರೀಮಿಯರ್ ಲೀಗ್ 2026 ರ ಐದನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವೆ ನಡೆಯಿತು. ನವಿ ಮುಂಬೈನ DY ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ, ಯುಪಿ ವಾರಿಯರ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 143 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಆರ್​ಸಿಬಿ ಕೇವಲ 12.1 ಓವರ್‌ಗಳಲ್ಲಿ ಗುರಿಯನ್ನು ತಲುಪಿತು.

LIVE NEWS & UPDATES

The liveblog has ended.
  • 12 Jan 2026 10:40 PM (IST)

    9 ವಿಕೆಟ್‌ಗಳ ಗೆಲುವು

    ಆರ್‌ಸಿಬಿ ಕೇವಲ 12.1 ಓವರ್‌ಗಳಲ್ಲಿ 144 ರನ್‌ಗಳ ಗುರಿಯನ್ನು ತಲುಪಿ ಸತತ ಎರಡನೇ ಗೆಲುವು ದಾಖಲಿಸಿತು. ಯುಪಿ ವಾರಿಯರ್ಸ್ 5 ವಿಕೆಟ್‌ಗಳ ನಷ್ಟಕ್ಕೆ 143 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ, ಆರ್‌ಸಿಬಿ 1 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿತು. ಗ್ರೇಸ್ ಹ್ಯಾರಿಸ್ 40 ಎಸೆತಗಳಲ್ಲಿ 85 ರನ್ ಗಳಿಸಿದರೆ, ಸ್ಮೃತಿ ಮಂಧಾನ 47 ರನ್ ಗಳಿಸಿ ಅಜೇಯರಾಗಿ ಉಳಿದರು.

  • 12 Jan 2026 10:27 PM (IST)

    40 ಎಸೆತಗಳಲ್ಲಿ 85 ರನ್

    ಗ್ರೇಸ್ ಹ್ಯಾರಿಸ್ 40 ಎಸೆತಗಳಲ್ಲಿ 85 ರನ್ ಗಳಿಸಿ ಆರ್‌ಸಿಬಿಗೆ ಆರಾಮದಾಯಕ ಗೆಲುವು ತಂದುಕೊಟ್ಟರು. ಶಿಖಾ ಪಾಂಡೆ ಅವರ ವಿಕೆಟ್ ಪಡೆದರು.

  • 12 Jan 2026 09:59 PM (IST)

    ಹ್ಯಾರಿಸ್ 22 ಎಸೆತಗಳಲ್ಲಿ ಅರ್ಧಶತಕ

    ಗ್ರೇಸ್ ಹ್ಯಾರಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಡಿಯಾಂಡ್ರಾ ಡಾಟಿನ್ ಅವರ ಓವರ್‌ನಲ್ಲಿ ಸತತ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿ 32 ರನ್ ಗಳಿಸಿದರು. ಆರ್‌ಸಿಬಿ 6 ಓವರ್‌ಗಳ ನಂತರ 78/0 ಸ್ಕೋರ್ ಮಾಡಿದೆ.

  • 12 Jan 2026 09:35 PM (IST)

    144 ರನ್ ಗಳ ಗುರಿ

    ಯುಪಿ ತಂಡ 50 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಾಗ ದೀಪ್ತಿ ಶರ್ಮಾ ಮತ್ತು ಡಿಯಾಂಡ್ರಾ ಡಾಟಿನ್ ಅದ್ಭುತ ಬ್ಯಾಟಿಂಗ್ ನಡೆಸಿ ತಂಡವನ್ನು 143 ರನ್​ಗಳಿಗೆ ಕೊಂಡೊಯ್ದರು. ಇಬ್ಬರು ಅಜೇಯ 93 ರನ್‌ಗಳ ಪಾಲುದಾರಿಕೆ ನಡೆಸಿದರು. ಆರ್‌ಸಿಬಿ ಈಗ 144 ರನ್‌ಗಳ ಗುರಿಯನ್ನು ಹೊಂದಿದೆ. ದೀಪ್ತಿ 35 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿದರೆ, ಡಿಯಾಂಡ್ರಾ 37 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು.

  • 12 Jan 2026 09:04 PM (IST)

    100 ರನ್ ಪೂರ್ಣ

    ಯುಪಿ ವಾರಿಯರ್ಸ್ 16 ಓವರ್‌ಗಳಲ್ಲಿ 100 ರನ್ ಗಳಿಸಿತು. ದೀಪ್ತಿ ಶರ್ಮಾ ಮತ್ತು ಡಿಯಾಂಡ್ರಾ ಡಾಟಿನ್ 50 ರನ್‌ಗಳ ಪಾಲುದಾರಿಕೆಯನ್ನು ಪೂರ್ಣಗೊಳಿಸಿದರು. ದೀಪ್ತಿ 19 ಮತ್ತು ಡಿಯಾಂಡ್ರಾ 25 ರನ್ ಗಳಿಸಿದ್ದಾರೆ.

  • 12 Jan 2026 08:19 PM (IST)

    ಮತ್ತೇರಡು ವಿಕೆಟ್

    ನಾಡಿನ್ ಡಿ ಕ್ಲರ್ಕ್ ತಮ್ಮ ಮೊದಲ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಯುಪಿಗೆ ಎರಡು ಹೊಡೆತಗಳನ್ನು ನೀಡಿದರು. ಶ್ವೇತಾ ಸೆಹ್ರಾವತ್ ಗೋಲ್ಡನ್ ಡಕ್‌ಗೆ ಔಟಾದರು. ಅವರಿಗೂ ಮೊದಲು ಕಿರಣ್ ನವಗಿರೆ ಅವರನ್ನು ಔಟ್ ಮಾಡಿದ್ದರು.

  • 12 Jan 2026 08:18 PM (IST)

    ಶ್ರೇಯಂಕಾ ಡಬಲ್ ವಿಕೆಟ್

    ಶ್ರೇಯಾಂಕ ಪಾಟೀಲ್ ಒಂದೇ ಓವರ್‌ನಲ್ಲಿ ಮೆಗ್ ಲ್ಯಾನಿಂಗ್ ಮತ್ತು ಫೋಬೆ ಲಿಚ್‌ಫೀಲ್ಡ್ ಅವರನ್ನು ಔಟ್ ಮಾಡಿದರು. ಯುಪಿ ವಾರಿಯರ್ಸ್ ಈಗ ಕೇವಲ 50 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಕಿರಣ್ ನವಗಿರೆ ಮತ್ತು ದೀಪ್ತಿ ಶರ್ಮಾ ಕ್ರೀಸ್‌ನಲ್ಲಿದ್ದಾರೆ.

  • 12 Jan 2026 08:02 PM (IST)

    ಹರ್ಲೀನ್ ವಿಕೆಟ್

    ಲಾರೆನ್ ಬೆಲ್ ಆರ್‌ಸಿಬಿಗೆ ಮೊದಲ ಬ್ರೇಕ್‌ಥ್ರೂ ನೀಡಿದರು, ಹರ್ಲೀನ್ ಡಿಯೋಲ್ ಅವರನ್ನು ತಮ್ಮ ಮೂರನೇ ಓವರ್‌ನಲ್ಲಿ ಔಟ್ ಮಾಡಿದರು. ಹರ್ಲೀನ್ 14 ಎಸೆತಗಳಲ್ಲಿ 11 ರನ್ ಗಳಿಸಿದರು.

  • 12 Jan 2026 07:23 PM (IST)

    UP ವಾರಿಯರ್ಸ್

    ಮೆಗ್ ಲ್ಯಾನಿಂಗ್ (ನಾಯಕಿ), ಕಿರಣ್ ನವಗಿರೆ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್ (ವಿಕೆಟ್ ಕೀಪರ್), ಡಿಯಾಂಡ್ರಾ ಡಾಟಿನ್, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಕ್ರಾಂತಿ ಗೌಡ್, ಆಶಾ ಶೋಬನಾ.

  • 12 Jan 2026 07:22 PM (IST)

    ಆರ್​ಸಿಬಿ ತಂಡ

    ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಡಿ. ಹೇಮಲತಾ, ಗೌತಮಿ ನಾಯಕ್, ರಿಚಾ ಘೋಷ್ (ವಿಕೆಟ್ ಕೀಪರ್), ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಶ್ರೇಯಾಂಕಾ ಪಾಟೀಲ್.

  • 12 Jan 2026 07:07 PM (IST)

    ಟಾಸ್ ಗೆದ್ದ ಆರ್​​ಸಿಬಿ

    ಸತತ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

Published On - Jan 12,2026 7:06 PM

Follow Us
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!