AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WI vs BAN: ಬಿಟ್ಟಿದ್ದು ಬರೋಬ್ಬರಿ 24 ಕ್ಯಾಚ್! ಗಲ್ಲಿ ಕ್ರಿಕೆಟ್ ನೆನಪಿಸಿದ ಬಾಂಗ್ಲಾ ತಂಡ; ಗೆಲುವಿನ ಸನಿಹದಲ್ಲಿ ವಿಂಡೀಸ್

WI vs BAN: ಟೆಸ್ಟ್ ಕ್ರಿಕೆಟ್‌ನಲ್ಲಿ, ಬಾಂಗ್ಲಾದೇಶ ಈ ವರ್ಷ ಇದುವರೆಗೆ 24 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಬಾಂಗ್ಲಾದೇಶದ ಕ್ಯಾಚ್‌ಗಳನ್ನು ಕೈಬಿಡುವ ಈ ಪ್ರವೃತ್ತಿಯು ಇತರ ಸ್ವರೂಪಗಳಲ್ಲಿಯೂ ಮುಂದುವರಿಯುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಅವರು 84 ಕ್ಯಾಚ್‌ಗಳನ್ನು ಹಿಡಿದಿದ್ದರೆ, 39 ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ.

WI vs BAN: ಬಿಟ್ಟಿದ್ದು ಬರೋಬ್ಬರಿ 24 ಕ್ಯಾಚ್! ಗಲ್ಲಿ ಕ್ರಿಕೆಟ್ ನೆನಪಿಸಿದ ಬಾಂಗ್ಲಾ ತಂಡ; ಗೆಲುವಿನ ಸನಿಹದಲ್ಲಿ ವಿಂಡೀಸ್
WI vs BAN
TV9 Web
| Updated By: ಪೃಥ್ವಿಶಂಕರ|

Updated on:Jun 18, 2022 | 3:29 PM

Share

ಕ್ರಿಕೆಟ್‌ನ ಸೂತ್ರ ನಿಮಗೆ ಗೊತ್ತಿರಬೇಕು. ಕ್ಯಾಚ್ ಕ್ಯಾಚ್, ವಿನ್ ಮ್ಯಾಚ್. ಆದರೆ, ಬಾಂಗ್ಲಾದೇಶ ತಂಡ (Bangladesh team)ಕ್ಕೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ? ಬಾಂಗ್ಲಾ ಆಟಗಾರರು ಫೀಲ್ಡಿಂಗ್ ಮಾಡುವುದನ್ನೇ ಮರೆತಿದ್ದಾರೆಯೇ? ಎಂಬುದು ಈಗ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಕಳಪೆ ಫೀಲ್ಡಿಂಗ್‌ನ ಫಲವಾಗಿ ಬಾಂಗ್ಲಾದೇಶ ತಂಡ ಈಗ ಆ್ಯಂಟಿಗುವಾ ಟೆಸ್ಟ್‌ನಲ್ಲಿ ಸೋಲಿನತ್ತ ಸಾಗುತ್ತಿದೆ. ತಂಡದ ಕಳಪೆ ಫೀಲ್ಡಿಂಗ್‌ನಿಂದಾಗಿ, ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕ್ರೇಗ್ ಬ್ರಾಥ್‌ವೈಟ್ 94 ರನ್ ಗಳಿಸಿದರು. ಬೋನರ್ 33 ರನ್ ಗಳಿಸಿದರು ಮತ್ತು ಮೂರನೇ ವಿಕೆಟ್‌ಗೆ ಬ್ರಾಥ್‌ವೈಟ್ ಜೊತೆಗೆ ಸ್ಕೋರ್ ಬೋರ್ಡ್‌ಗೆ 62 ರನ್ ಸೇರಿಸಿದರು.

ಬಾಂಗ್ಲಾದೇಶವು ಕ್ರೇಗ್ ಬ್ರಾಥ್‌ವೈಟ್ ಅವರ 3 ಕ್ಯಾಚ್‌ಗಳನ್ನು ಕೈಬಿಟ್ಟಿತು, ಹೀಗಾಗಿ ಇದರ ಲಾಭವನ್ನು ಬ್ರಾಥ್‌ವೈಟ್ ಸರಿಯಾಗಿ ಬಳಸಿಕೊಂಡರು. ಬ್ರಾಥ್‌ವೈಟ್ ಇನ್ನೂ ಖಾತೆ ತೆರೆಯದಿದ್ದಾಗಲೇ ಬಾಂಗ್ಲಾ ತಂಡಕ್ಕೆ ಅವಕಾಶ ನೀಡಿದ್ದರು. ಆದರೆ ಬಾಂಗ್ಲಾ ಆಟಗಾರರು ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ನಂತರ 16 ರನ್‌ಗಳಿದ್ದಾಗ ಎರಡನೇ ಕ್ಯಾಚ್‌ ಬಿಟ್ಟರು. ನಂತರ, ಬಾಂಗ್ಲಾದೇಶದ 63 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಬ್ರಾಥ್‌ವೈಟ್​ಗೆ 3ನೇ ಜೀವದಾನ ಸಿಕ್ಕಿತು. ಬೋನರ್ ವಿಷಯದಲ್ಲೂ ಅದೇ ಸಂಭವಿಸಿತು. ಬೋನರ್ ಕೇವಲ 33 ರನ್ ಗಳಿಸಿದ್ದಾಗ ಬಾಂಗ್ಲಾದೇಶ ಅವರಿಗೆ ಎರಡು ಜೀವದಾನ ನೀಡಿತು. ಮೊದಲ ಕ್ಯಾಚ್ ಅನ್ನು 14 ರನ್‌ಗಳಿಗೆ ಕೈಬಿಟ್ಟರೆ, ಎರಡನೇ ಕ್ಯಾಚ್ ಅನ್ನು 22 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಕೈಬಿಟ್ಟರು.

ಇದನ್ನೂ ಓದಿ:Ranji Trophy: 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ..!

ಇದನ್ನೂ ಓದಿ
Image
Ranji Trophy: 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ..!
Image
ENG vs NED: 498 ರನ್, 3 ಶತಕ, 26 ಸಿಕ್ಸರ್! ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ನಿರ್ಮಿಸಿದ 5 ವಿಶ್ವ ದಾಖಲೆಗಳಿವು
Image
IND vs SA: ಸಿಂಗಲ್​ಗೆ ಒಲ್ಲೆ ಎಂದ ಪಾಂಡ್ಯ; 26 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಉತ್ತರ ಕೊಟ್ಟ ಕಾರ್ತಿಕ್

ಈ ವರ್ಷ ಟೆಸ್ಟ್‌ನಲ್ಲಿ 24 ಕ್ಯಾಚ್‌ ಡ್ರಾಪ್

ಟೆಸ್ಟ್ ಕ್ರಿಕೆಟ್‌ನಲ್ಲಿ, ಬಾಂಗ್ಲಾದೇಶ ಈ ವರ್ಷ ಇದುವರೆಗೆ 24 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಬಾಂಗ್ಲಾದೇಶದ ಕ್ಯಾಚ್‌ಗಳನ್ನು ಕೈಬಿಡುವ ಈ ಪ್ರವೃತ್ತಿಯು ಇತರ ಸ್ವರೂಪಗಳಲ್ಲಿಯೂ ಮುಂದುವರಿಯುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಅವರು 84 ಕ್ಯಾಚ್‌ಗಳನ್ನು ಹಿಡಿದಿದ್ದರೆ, 39 ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ, ಮುಖ್ಯ ಕೋಚ್ ರಸೆಲ್ ಡೊಮಿಂಗೊ ​​ಅವರು ಅಫ್ಘಾನಿಸ್ತಾನ ವಿರುದ್ಧ ಐದು ವೈಟ್‌ಬಾಲ್ ಪಂದ್ಯಗಳಲ್ಲಿ 9 ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಆಟಗಾರರ ಮೇಲೆ ಕೋಪಗೊಂಡಿದ್ದರು. ಆದರೆ, ತಂಡದ ಆಟಗಾರರು ಏಕೆ ಕ್ಯಾಚ್‌ಗಳನ್ನು ಬಿಡುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ ಎಂದು ಡೊಮಿಂಗೊ ​​ಹೇಳಿದರು.

ಆ್ಯಂಟಿಗುವಾ ಟೆಸ್ಟ್‌ನಲ್ಲಿ ಬಾಂಗ್ಲಾದೇಶಕ್ಕೆ ಸೋಲು

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶದ ಸಮಸ್ಯೆ ಅವರ ಫೀಲ್ಡಿಂಗ್‌ನಲ್ಲಿ ಮಾತ್ರವಲ್ಲದೆ ಅವರ ಬ್ಯಾಟಿಂಗ್‌ನಲ್ಲಿಯೂ ಕಂಡುಬರುತ್ತದೆ. ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದು, ಇದೀಗ ಆ್ಯಂಟಿಗುವಾದಲ್ಲಿ ತಂಡ ಸೋಲಿನ ಭೀತಿಯಲ್ಲಿದೆ. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 103 ರನ್ ಗಳಿಸಲಷ್ಟೇ ಶಕ್ತವಾಗಿತ್ತು, ತಂಡದ 6 ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯಲಿಲ್ಲ. ಇದಾದ ಬಳಿಕ ಇದೀಗ ಎರಡನೇ ಇನ್ನಿಂಗ್ಸ್ ಆಡುತ್ತಿರುವ ತಂಡ ಕೇವಲ 50 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದೆ. ಆತಿಥೇಯ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 162 ರನ್ ಮುನ್ನಡೆ ಸಾಧಿಸಿದೆ. ವಿಂಡೀಸ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 265 ರನ್ ಗಳಿಸಿತ್ತು. ಟೆಸ್ಟ್ ಪಂದ್ಯಕ್ಕೆ ಇನ್ನು 2 ದಿನ ಬಾಕಿ ಇದೆ. ಅಂದರೆ ಫಲಿತಾಂಶ ಹೊರಬೀಳಲಿದ್ದು, ವೆಸ್ಟ್ ಇಂಡೀಸ್ ಗೆಲ್ಲಲಿದೆ ಎಂಬ ಭರವಸೆಯಿದೆ. ಏಕೆಂದರೆ ಈಗ ಬಾಂಗ್ಲಾದೇಶವು ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಜಯಿಸಬೇಕಾಗಿದೆ, ಆದರೆ ಬಾಂಗ್ಲಾ ತಂಡ 112 ರನ್‌ಗಳ ಇನ್ನಿಂಗ್ಸ್ ಹಿನ್ನಡೆಯಲ್ಲಿದ್ದಾರೆ.

Published On - 3:29 pm, Sat, 18 June 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?