ಕಾಮನ್‌ವೆಲ್ತ್ ಗೇಮ್ಸ್​ ತಯಾರಿಯಲ್ಲಿರುವ ಭಾರತ ಹಾಕಿ ಅಭ್ಯಾಸ ಶಿಬಿರದಲ್ಲಿ ಕೊರೊನಾ ಹಾವಳಿ; ಐವರಿಗೆ ಸೋಂಕು..!

| Updated By: ಪೃಥ್ವಿಶಂಕರ

Updated on: Jun 30, 2022 | 3:36 PM

Commonwealth Games 2022: ತಂಡದ ಸ್ಟ್ರೈಕರ್ ಗುರ್ಜಂತ್ ಸಿಂಗ್ ಮತ್ತು ಮುಖ್ಯ ಕೋಚ್ ಗ್ರಹಾಂ ರೀಡ್ ಸೇರಿದಂತೆ ಐವರು ಆಟಗಾರರು ವೈರಸ್‌ಗೆ ತುತ್ತಾಗಿದ್ದಾರೆ. ಬುಧವಾರ ಬೆಳಗ್ಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗಿದ್ದು, ಸೋಂಕಿತರು ಕೊರೊನಾದ ಸೌಮ್ಯ ರೋಗಲಕ್ಷಣಗಳಿಂದ ಬಳಲುತ್ತಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್​ ತಯಾರಿಯಲ್ಲಿರುವ ಭಾರತ ಹಾಕಿ ಅಭ್ಯಾಸ ಶಿಬಿರದಲ್ಲಿ ಕೊರೊನಾ ಹಾವಳಿ; ಐವರಿಗೆ ಸೋಂಕು..!
ಭಾರತ ಹಾಕಿ ತಂಡ
Follow us on

ಕಾಮನ್‌ವೆಲ್ತ್ ಗೇಮ್ಸ್ 2022ಕ್ಕೆ ತಯಾರಿ ನಡೆಸುತ್ತಿರುವ ಭಾರತೀಯ ಪುರುಷರ ಹಾಕಿ ತಂಡದ ತಯಾರಿ ಶಿಬಿರದ ಮೇಲೆ ಕೊರೊನಾ ದಾಳಿ ಮಾಡಿದೆ. ತಂಡದ ಸ್ಟ್ರೈಕರ್ ಗುರ್ಜಂತ್ ಸಿಂಗ್ ಮತ್ತು ಮುಖ್ಯ ಕೋಚ್ ಗ್ರಹಾಂ ರೀಡ್ ಸೇರಿದಂತೆ ಐವರು ಆಟಗಾರರು ವೈರಸ್‌ಗೆ ತುತ್ತಾಗಿದ್ದಾರೆ. ಬುಧವಾರ ಬೆಳಗ್ಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗಿದ್ದು, ಸೋಂಕಿತರು ಕೊರೊನಾದ ಸೌಮ್ಯ ರೋಗಲಕ್ಷಣಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಯಾರನ್ನೂ ಹೆಸರಿಸದೆ ಮಾಧ್ಯಮ ಪ್ರಕಟಣೆಯಲ್ಲಿ ಹಾಕಿ ಇಂಡಿಯಾ, ‘ಕಾಮನ್‌ವೆಲ್ತ್ ಗೇಮ್ಸ್ 2022 ಕ್ಕೆ ತಯಾರಿ ನಡೆಸುತ್ತಿರುವ ಭಾರತೀಯ ಪುರುಷರ ಹಾಕಿ ತಂಡದ ಇಬ್ಬರು ಆಟಗಾರರು ಮತ್ತು ಮೂವರು ಸಹಾಯಕ ಸಿಬ್ಬಂದಿಗೆ ಕೋವಿಡ್ -19 ಪಾಸಿಟಿವ್ ಇರುವುದು ಕಂಡುಬಂದಿದೆ ಎಂದು ತಿಳಿಸಿದೆ.

ಹಾಕಿ ಅಭ್ಯಾಸ ಶಿಬಿರದಲ್ಲಿ ಕೊರೊನಾ ಹಾವಳಿ

ತಂಡದ ಮೂಲವೊಂದು ಪಿಟಿಐಗೆ ತಿಳಿಸಿದ್ದು, ಗುರ್ಜಂತ್ ಮತ್ತು ಗ್ರಹಾಂ ರೀಡ್ ಸೋಂಕಿಗೆ ಒಳಗಾಗಿದ್ದಾರೆ. ತಂಡದ ವಿಡಿಯೋ ವಿಶ್ಲೇಷಕ ಅಶೋಕ್ ಕುಮಾರ್ ಚಿನ್ನಸ್ವಾಮಿ ಅವರಿಗೂ ಪಾಸಿಟಿವ್ ಬಂದಿದೆ. ಗುರ್ಜಂತ್ ಹೊರತಾಗಿ, ಪಾಸಿಟಿವ್ ಕಂಡುಬಂದಿರುವ ಆಟಗಾರ ಆಶಿಶ್ ಕುಮಾರ್ ಟಾಪ್ನೋ ಆಗಿದ್ದಾರೆ. ಪಿಆರ್ ಶ್ರೀಜೇಶ್, ಮನ್‌ಪ್ರೀತ್ ಸಿಂಗ್, ಪವನ್, ಲಲಿತ್ ಕುಮಾರ್ ಉಪಾಧ್ಯಾಯ, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್ ಮತ್ತು ಅಮಿತ್ ರೋಹಿದಾಸ್ ಸೇರಿದಂತೆ 31 ಆಟಗಾರರು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ವಿರುದ್ಧ ಆಡಿದ ನಂತರ ಆಟಗಾರರು ಶಿಬಿರಕ್ಕೆ ಆಗಮಿಸಿದರು. ಶಿಬಿರವು ಜುಲೈ 23 ರಂದು ಕೊನೆಗೊಳ್ಳಲಿದ್ದು, ನಂತರ ತಂಡವು ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರಳಲಿದೆ.

ಇದನ್ನೂ ಓದಿ
Russia Ukraine War: ರಷ್ಯಾ ಕ್ಷಿಪಣಿ ದಾಳಿಗೆ ಉಕ್ರೇನ್​ನ ಫುಟ್ಬಾಲ್ ಸ್ಟೇಡಿಯಂನಲ್ಲಿ ಬಿತ್ತು 5 ಮೀ. ಆಳದ ಕುಳಿ
MS Dhoni: ಯಾರಿಂದಲೂ ಗುಣವಾಗಿಲ್ಲ, ಕೊನೆಗೆ ಹಳ್ಳಿ ವೈದ್ಯರ ಮೊರೆ ಹೋದ ಧೋನಿ..!

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,819 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ನಾಲ್ಕು ಸಾವಿರದ 555. ದೇಶದಲ್ಲಿ 39 ಹೊಸ ಸಾವುಗಳೊಂದಿಗೆ, ಸೋಂಕಿನಿಂದ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಐದು ಲಕ್ಷದ 25 ಸಾವಿರದ 116 ಕ್ಕೆ ಏರಿದೆ.

ಭಾರತ ಅತ್ಯಂತ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ

ಕಾಮನ್‌ವೆಲ್ತ್ ಗೇಮ್ಸ್‌ಗೆ ಬಲಿಷ್ಠ ಹಾಕಿ ತಂಡವನ್ನು ಆಯ್ಕೆ ಮಾಡಲಾಗಿದೆ. ತಂಡದ ಕಮಾಂಡ್ ಮನ್ ಪ್ರೀತ್ ಸಿಂಗ್ ಅವರದ್ದಾಗಿದೆ. ಅದೇ ಸಮಯದಲ್ಲಿ ಪಿಆರ್ ಶ್ರೀಜೇಶ್ ಕೂಡ ತಂಡದ ಭಾಗವಾಗಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಂಡ ನಾಲ್ಕನೇ ಸ್ಥಾನ ಪಡೆದಿದ್ದು, ಈ ಬಾರಿ ಪದಕ ತರುವುದು ಇದರ ಗುರಿಯಾಗಿದೆ.

ಭಾರತೀಯ ಹಾಕಿ ತಂಡ

ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್ (ನಾಯಕ), ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಹಾರ್ದಿಕ್ ಸಿಂಗ್, ಆಕಾಶದೀಪ್ ಸಿಂಗ್, ನೀಲಕಾಂತ್ ಶರ್ಮಾ.

ಗೋಲ್‌ಕೀಪರ್‌ಗಳು: ಪಿಆರ್ ಶ್ರೀಜೇಶ್ ಮತ್ತು ಕೃಷ್ಣ ಬಹದ್ದೂರ್ ಪಾಠಕ್

ಡಿಫೆಂಡರ್ಸ್: ವರುಣ್ ಕುಮಾರ್, ಸುರೇಂದ್ರ ಕುಮಾರ್, ಹರ್ಮನ್ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್, ಅಮಿತ್ ರೋಹಿದಾಸ್, ಮತ್ತು ಜರ್ಮನ್ಪ್ರೀತ್ ಸಿಂಗ್.

Published On - 3:36 pm, Thu, 30 June 22