AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England 5th T20I live Score: ಸುಲಭ ಜಯದೊಂದಿಗೆ ಸರಣಿ ಮೇಲೆ ಒಡೆತನ ಸಾಧಿಸಿದ ಟೀಮ್ ಇಂಡಿಯಾ

ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಭುವನೇಶ್ವರ್ ಕಮಾರ್. ತಮ್ಮ ಕೋಟಾದ 4 ಓವರ್​ಗಳಲ್ಲಿ ಕೇವಲ 15 ರನ್​ ನೀಡಿದ  ಭುವಿ  2 ವಿಕೆಟ್​ ಪಡೆದರು

India vs England 5th T20I live Score: ಸುಲಭ ಜಯದೊಂದಿಗೆ ಸರಣಿ ಮೇಲೆ ಒಡೆತನ ಸಾಧಿಸಿದ ಟೀಮ್ ಇಂಡಿಯಾ
ಪಂದ್ಯದ ವ್ಯಕ್ತಿ ಭುವನೇಶ್ವರ್ ಕುಮಾರ್
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 20, 2021 | 11:25 PM

Share

ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟಿ20 ಸರಣಿಯ 5ನೇ ಮತ್ತು ಕೊನೆಯ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಸುಲಭವಾಗಿ 36 ರನ್​ಗಳಿಂದ ಸೋಲಿಸಿದ ಭಾರತ ಸರಣಿಯನ್ನು 3-2 ಅಂತರದಿಂದ ತನ್ನದಾಗಿಸಿಕೊಂಡಿದೆ. ಗೆಲ್ಲಲು 225ರನ್ ಗಳಿಸಬೇಕಿದ್ದ ಆಂಗ್ಲರಿಗೆ ನಿಗದಿತ 20 ಓವರ್​ಗಳಲ್ಲಿ 188/8 ಗಳಿಸಲು ಮಾತ್ರ ಸಾಧ್ಯವಾಯಿತು.  ಇಂಗ್ಲೆಂಡ್ ಪರ ಕೇವಲ ದಾವಿದ್ ಮಲಾನ್ (68, 46 ಎಸೆತ 9 ಬೌಂಡರಿ 2 ಸಿಕ್ಸ್) ಮತ್ತು ಜೋಸ್ ಬಟ್ಲರ್ 52 ( 34 ಎಸೆತ 2 ಬೌಂಡರಿ 4 ಸಿಕ್ಸ್) ಮಾತ್ರ ಹೋರಾಟ ಪ್ರದರ್ಶಿಸಿದರು. 45 ರನ್​ಗ​ಳಿಗೆ 3 ವಿಕೆಟ್​   ಶಾರ್ದುಲ್ ಠಾಕೂರ್ ಭಾರತದ ಯಶಸ್ವೀ ಬೌಲರ್ ಎನಿಸಿದರು.

ಆದರೆ, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಭುವನೇಶ್ವರ್ ಕಮಾರ್. ತಮ್ಮ ಕೋಟಾದ 4 ಓವರ್​ಗಳಲ್ಲಿ ಕೇವಲ 15 ರನ್​ ನೀಡಿದ  ಭುವಿ  2 ವಿಕೆಟ್​ ಪಡೆದರು.

ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ವಿಶ್ದ ನಂಬರ್ ವನ್ ತಂಡ ಎನಿಸಿದೆ. ಮೂರನೇ ಌಂಕಿನ ಭಾರತ ಅದನ್ನು ಸೋಲಿಸಿ ಅಕ್ಟೋಬರ್-ನವೆಂಬರ್​ ನಡೆಯುವ ಟಿ20 ವಿಶ್ವಕಪ್​ಗೆ ಮುಂಚೆ ತನ್ನ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ 224/2 ಮೊತ್ತ ಗಳಿಸಿತು. ನಾಯಕ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ ಅಜೇಯ 80 ರನ್ (7 ಬೌಂಡರಿ 2 ಸಿಕ್ಸರ್) ಬಾರಿಸಿದರು. ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಕೇವಲ 34 ಎಸೆತಗಳಲ್ಲಿ 64 ರನ್ (4 ಬೌಂಡರಿ 5 ಸಿಕ್ಸ್ ) ಬಾರಿಸಿದರು, ನಾಯಕ ಮತ್ತು ಉಪನಾಯಕ ಮೊದಲ ವಿಕೆಟ್​ಗೆ 9 ಓವರ್​ಗಳಲ್ಲಿ 94 ರನ್ ಸೇರಿಸಿದರು .

ಮೂರನೇ ಕ್ರಮಾಂಕದಲ್ಲಿ ಆಡಲು ಬಂದ  ಸೂರ್ಯಕುಮಾರ್ ಯಾದವ್ 17 ಎಸೆತಗಳಲ್ಲಿ 32 ರನ್ ಗಳಿಸಿದರು, ಅವರ ಸ್ಕೋರಿನಲ್ಲಿ 3 ಬೌಂಡರಿ 2 ಸಿಕ್ಸ್ ಇದ್ದವು.

ಈ ಪಂದ್ಯಕ್ಕೆ ರಾಹುಲ್ ಅವರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ವೇಗದ ಬೌಲರ್ ಟಿ ನಟರಾಜನ್ ಅವರನ್ನು ಆಡಿಸಲಾಯಿತು.

ಅಂತಿಮ ಸ್ಕೋರ್:

ಭಾರತ: 224/2 (20 ಓವರ್​ಗಳಲ್ಲಿ)

ಇಂಗ್ಲೆಂಡ್: 188/8 (20 ಓವರ್​ಗಳಲ್ಲಿ)

Published On - 10:55 pm, Sat, 20 March 21

ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ