AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!

World Championship: ಉದ್ದೇಶ ಪೂರಿತವಾಗಿಯೇ ಪ್ರಿಯಾಂಕ ಈ ಇಯರ್‌ಬಡ್ಸ್​ಗಳನ್ನು ತಮ್ಮ ಜಾಕೆಟ್​ನಲ್ಲಿ ಇರಿಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ವಿಶ್ವ ಚೆಸ್ ಫೆಡರೇಶನ್ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದೆ.

ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!
Priyanka Nutakki
TV9 Web
| Edited By: |

Updated on:Oct 19, 2022 | 11:18 AM

Share

ಭಾರತದ ಮಹಿಳಾ ಗ್ರ್ಯಾಂಡ್‌ಮಾಸ್ಟರ್ (India’s Grandmaster) ಮತ್ತು 7 ನೇ ಶ್ರೇಯಾಂಕದ ಪ್ರಿಯಾಂಕಾ ನುಟಕ್ಕಿ ಅವರನ್ನು ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ (World Championship) ಹೊರಹಾಕಲಾಗಿದೆ. ಪ್ರಿಯಾಂಕಾ ಧರಿಸಿದ್ದ ಜಾಕೆಟ್‌ನ ಜೇಬಿನಲ್ಲಿ ಇಯರ್‌ಬಡ್ಸ್ ಪತ್ತೆಯಾಗಿದ್ದು, ಈ ಕಾರಣದಿಂದಾಗಿ ಅವರನ್ನು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಿಂದ (World Junior Chess Championship) ಹೊರಗಿಟ್ಟಿರುವುದಾಗಿ ವಿಶ್ವ ಚೆಸ್ ಫೆಡರೇಶನ್ (FIDE) ಖಚಿತಪಡಿಸಿದೆ. ಪಂದ್ಯಾವಳಿಯಲ್ಲಿ ನಿಷೇಧಿತ ವಸ್ತುಗಳಲ್ಲಿ ಇಯರ್‌ಬಡ್ಸ್ ಕೂಡ ಒಂದಾಗಿದ್ದು, ಪ್ರಿಯಾಂಕಾ ಜಾಕೆಟ್​ನಲ್ಲಿ ಇದು ಪತ್ತೆಯಾದ ಬಳಿಕ ಅವರನ್ನು ಚಾಂಪಿಯನ್‌ಶಿಪ್‌ನಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ.

ಆದರೆ ಉದ್ದೇಶ ಪೂರಿತವಾಗಿಯೇ ಪ್ರಿಯಾಂಕ ಈ ಇಯರ್‌ಬಡ್ಸ್​ಗಳನ್ನು ತಮ್ಮ ಜಾಕೆಟ್​ನಲ್ಲಿ ಇರಿಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ವಿಶ್ವ ಚೆಸ್ ಫೆಡರೇಶನ್ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದೆ. ಹಾಗೆಯೇ ಪ್ರಿಯಾಂಕ ಅವರ ಅಜಾಗರೂಕತೆಯಿಂದ ಇಯರ್‌ಬಡ್ಸ್​ಗಳು ಜಾಕೆಟ್​ನಲ್ಲಿ ಉಳಿದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಫೇರ್‌ಪ್ಲೇ ನೀತಿಗಳ ಉಲ್ಲಂಘನೆ

ವಾಸ್ತವವಾಗಿ, ಪಂದ್ಯಾವಳಿಯ ಸಮಯದಲ್ಲಿ ಇಯರ್‌ಬಡ್ಸ್​ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆಯೇ ಆಟದ ಸಮಯದಲ್ಲಿ ಇಯರ್‌ಬಡ್ಸ್​ಗಳಂತಹ ಸಾಧನಗಳನ್ನು ಆಟಗಾರರು ತಮ್ಮ ಜೊತೆ ಒಯ್ಯುವುದು ಫೇರ್‌ಪ್ಲೇ ನೀತಿಗಳ ಉಲ್ಲಂಘನೆಯಾಗಿದೆ. ಯಾವುದೇ ಆಟಗಾರ ಈ ಕೆಲಸವನ್ನು ಮಾಡಿದರೆ, ಆತನನ್ನು ಕೂಡಲೇ ಆಟದಿಂದ ಹೊರಗಿಡಲಾಗುತ್ತದೆ ಅಥವಾ ಶಿಕ್ಷೆಯಾಗಿ ಆ ಆಟಗಾರ ಇಡೀ ಪಂದ್ಯಾವಳಿಯಿಂದಲೇ ಹೊರಗುಳಿಯಬೇಕಾಗುತ್ತದೆ.

ಎದುರಾಳಿಗೆ ಲಾಭ

ಈಗ ಈ ಚಾಂಪಿಯನ್‌ಶಿಪ್‌ನಿಂದ ಪ್ರಿಯಾಂಕಾ ನಿರ್ಗಮಿಸಿರುವುದು ಅವರ ಪ್ರತಿಸ್ಪರ್ಧಿಗೆ ಪ್ರಯೋಜನವಾಗಿದೆ. ವಾಸ್ತವವಾಗಿ, ಆರನೇ ಸುತ್ತಿನಲ್ಲಿ ಪ್ರಿಯಾಂಕ ಗಳಿಸಿದ ಅಂಕಗಳನ್ನು ಅವರ ಪ್ರತಿಸ್ಪರ್ಧಿ ಗೋವಾಹರ್ ಬೆದುಲೇವಾಗೆ ವರ್ಗಾಯಿಸಲಾಗಿದೆ. ವಿಶ್ವ ಚೆಸ್ ಫೆಡರೇಶನ್​ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತ ತಂಡ ಪಂದ್ಯಾವಳಿಯ ಮೇಲ್ಮನವಿ ಸಮಿತಿಯ ಮೊರೆ ಹೋಗಿತ್ತು. ಆದರೆ ಮೇಲ್ಮನವಿ ಸಮಿತಿ ಕೂಡ ವಿಶ್ವ ಚೆಸ್ ಫೆಡರೇಶನ್ ನಿರ್ಧಾರವನ್ನು ಎತ್ತಿಹಿಡಿದಿದೆ. ಈ ಟೂರ್ನಿಯಲ್ಲಿ ಆಡಿದ 5 ಸುತ್ತುಗಳಲ್ಲಿ ಪ್ರಿಯಾಂಕ 3 ಜಯ ಹಾಗೂ 2 ಡ್ರಾ ಸಾಧಿಸಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Wed, 19 October 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ