AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!

World Championship: ಉದ್ದೇಶ ಪೂರಿತವಾಗಿಯೇ ಪ್ರಿಯಾಂಕ ಈ ಇಯರ್‌ಬಡ್ಸ್​ಗಳನ್ನು ತಮ್ಮ ಜಾಕೆಟ್​ನಲ್ಲಿ ಇರಿಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ವಿಶ್ವ ಚೆಸ್ ಫೆಡರೇಶನ್ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದೆ.

ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!
Priyanka Nutakki
TV9 Web
| Edited By: |

Updated on:Oct 19, 2022 | 11:18 AM

Share

ಭಾರತದ ಮಹಿಳಾ ಗ್ರ್ಯಾಂಡ್‌ಮಾಸ್ಟರ್ (India’s Grandmaster) ಮತ್ತು 7 ನೇ ಶ್ರೇಯಾಂಕದ ಪ್ರಿಯಾಂಕಾ ನುಟಕ್ಕಿ ಅವರನ್ನು ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ (World Championship) ಹೊರಹಾಕಲಾಗಿದೆ. ಪ್ರಿಯಾಂಕಾ ಧರಿಸಿದ್ದ ಜಾಕೆಟ್‌ನ ಜೇಬಿನಲ್ಲಿ ಇಯರ್‌ಬಡ್ಸ್ ಪತ್ತೆಯಾಗಿದ್ದು, ಈ ಕಾರಣದಿಂದಾಗಿ ಅವರನ್ನು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಿಂದ (World Junior Chess Championship) ಹೊರಗಿಟ್ಟಿರುವುದಾಗಿ ವಿಶ್ವ ಚೆಸ್ ಫೆಡರೇಶನ್ (FIDE) ಖಚಿತಪಡಿಸಿದೆ. ಪಂದ್ಯಾವಳಿಯಲ್ಲಿ ನಿಷೇಧಿತ ವಸ್ತುಗಳಲ್ಲಿ ಇಯರ್‌ಬಡ್ಸ್ ಕೂಡ ಒಂದಾಗಿದ್ದು, ಪ್ರಿಯಾಂಕಾ ಜಾಕೆಟ್​ನಲ್ಲಿ ಇದು ಪತ್ತೆಯಾದ ಬಳಿಕ ಅವರನ್ನು ಚಾಂಪಿಯನ್‌ಶಿಪ್‌ನಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ.

ಆದರೆ ಉದ್ದೇಶ ಪೂರಿತವಾಗಿಯೇ ಪ್ರಿಯಾಂಕ ಈ ಇಯರ್‌ಬಡ್ಸ್​ಗಳನ್ನು ತಮ್ಮ ಜಾಕೆಟ್​ನಲ್ಲಿ ಇರಿಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ವಿಶ್ವ ಚೆಸ್ ಫೆಡರೇಶನ್ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದೆ. ಹಾಗೆಯೇ ಪ್ರಿಯಾಂಕ ಅವರ ಅಜಾಗರೂಕತೆಯಿಂದ ಇಯರ್‌ಬಡ್ಸ್​ಗಳು ಜಾಕೆಟ್​ನಲ್ಲಿ ಉಳಿದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಫೇರ್‌ಪ್ಲೇ ನೀತಿಗಳ ಉಲ್ಲಂಘನೆ

ವಾಸ್ತವವಾಗಿ, ಪಂದ್ಯಾವಳಿಯ ಸಮಯದಲ್ಲಿ ಇಯರ್‌ಬಡ್ಸ್​ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆಯೇ ಆಟದ ಸಮಯದಲ್ಲಿ ಇಯರ್‌ಬಡ್ಸ್​ಗಳಂತಹ ಸಾಧನಗಳನ್ನು ಆಟಗಾರರು ತಮ್ಮ ಜೊತೆ ಒಯ್ಯುವುದು ಫೇರ್‌ಪ್ಲೇ ನೀತಿಗಳ ಉಲ್ಲಂಘನೆಯಾಗಿದೆ. ಯಾವುದೇ ಆಟಗಾರ ಈ ಕೆಲಸವನ್ನು ಮಾಡಿದರೆ, ಆತನನ್ನು ಕೂಡಲೇ ಆಟದಿಂದ ಹೊರಗಿಡಲಾಗುತ್ತದೆ ಅಥವಾ ಶಿಕ್ಷೆಯಾಗಿ ಆ ಆಟಗಾರ ಇಡೀ ಪಂದ್ಯಾವಳಿಯಿಂದಲೇ ಹೊರಗುಳಿಯಬೇಕಾಗುತ್ತದೆ.

ಎದುರಾಳಿಗೆ ಲಾಭ

ಈಗ ಈ ಚಾಂಪಿಯನ್‌ಶಿಪ್‌ನಿಂದ ಪ್ರಿಯಾಂಕಾ ನಿರ್ಗಮಿಸಿರುವುದು ಅವರ ಪ್ರತಿಸ್ಪರ್ಧಿಗೆ ಪ್ರಯೋಜನವಾಗಿದೆ. ವಾಸ್ತವವಾಗಿ, ಆರನೇ ಸುತ್ತಿನಲ್ಲಿ ಪ್ರಿಯಾಂಕ ಗಳಿಸಿದ ಅಂಕಗಳನ್ನು ಅವರ ಪ್ರತಿಸ್ಪರ್ಧಿ ಗೋವಾಹರ್ ಬೆದುಲೇವಾಗೆ ವರ್ಗಾಯಿಸಲಾಗಿದೆ. ವಿಶ್ವ ಚೆಸ್ ಫೆಡರೇಶನ್​ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತ ತಂಡ ಪಂದ್ಯಾವಳಿಯ ಮೇಲ್ಮನವಿ ಸಮಿತಿಯ ಮೊರೆ ಹೋಗಿತ್ತು. ಆದರೆ ಮೇಲ್ಮನವಿ ಸಮಿತಿ ಕೂಡ ವಿಶ್ವ ಚೆಸ್ ಫೆಡರೇಶನ್ ನಿರ್ಧಾರವನ್ನು ಎತ್ತಿಹಿಡಿದಿದೆ. ಈ ಟೂರ್ನಿಯಲ್ಲಿ ಆಡಿದ 5 ಸುತ್ತುಗಳಲ್ಲಿ ಪ್ರಿಯಾಂಕ 3 ಜಯ ಹಾಗೂ 2 ಡ್ರಾ ಸಾಧಿಸಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Wed, 19 October 22

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ